ETV Bharat / sports

ನಾ ಹೆಚ್ಚು ಪ್ರೀತಿಸುವ ಭಾರತದ ಪರಿಸ್ಥಿತಿ ನೋಡಿ ಹೃದಯ ಛಿದ್ರವಾಗುತ್ತಿದೆ : ಕೆವಿನ್ ಪೀಟರ್​ಸನ್

ಭಾರತದ ಜನತೆ ಕಣ್ಣೀರಿಡುತ್ತಿರುವ ಹಾಗೂ ಈ ರೀತಿ ನರಳಾಡುತ್ತಿರುವುದನ್ನು ನೋಡಿ ನನ್ನ ಹೃದಯ ಛಿದ್ರವಾಗಿದೆ. ನೀವು ಇದನ್ನು ದೂರ ಮಾಡಲಿದ್ದೀರಿ, ಇದರಿಂದ ಬಲಶಾಲಿಯಾಗಿ ಹೊರ ಬರಲಿದ್ದೀರಿ, ನಿಮ್ಮ ದಯೆ ಮತ್ತು ಔದಾರ್ಯ ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಗಮನಕ್ಕೆ ಬಾರದೇ ಇರದು..

author img

By

Published : May 4, 2021, 5:47 PM IST

ಕೆವಿನ್ ಪೀಟರ್​ಸನ್
ಕೆವಿನ್ ಪೀಟರ್​ಸನ್

ನವದೆಹಲಿ : ಭಾರತದಲ್ಲಿ ಕೊರೊನಾದಿಂದ ಜನರು ಎದುರಿಸುತ್ತಿರುವ ಸಾವು-ನೋವುಗಳನ್ನು ನೋಡಿ ನನ್ನ ಹೃದಯ ಒಡೆದಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್​ಸನ್​ ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ.

ಕಳೆದ ಎರಡು ವಾರಗಳಿಂದ ಭಾರತದಲ್ಲಿ 3 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣ ಕಂಡು ಬರುತ್ತಿವೆ. ಸಾವಿರಾರು ಮಂದಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಈ ಕಾರಣದಿಂದಲೇ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಮಂಗಳವಾರ ಸ್ಥಗಿತಗೊಂಡಿದೆ. ಪ್ರಸ್ತುತ ಭಾರತದ ಸ್ಥಿತಿ ನೋಡಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟ್​ಟೇಟರ್ ಕೆವಿನ ಪೀಟರ್ಸನ್​ ಮರುಕ ವ್ಯಕ್ತಪಡಿಸಿದ್ದಾರೆ.

  • India - it’s heartbreaking to see a country I love so much suffering! 😢

    You WILL get through this!
    You WILL be stronger coming out of this!
    Your kindness & generosity NEVER goes unnoticed even during this crisis! 🙏🏽#IncredibleIndia ❤️

    — Kevin Pietersen🦏 (@KP24) May 4, 2021 " class="align-text-top noRightClick twitterSection" data=" ">

ಭಾರತವು ನಾನು ತುಂಬಾ ಪ್ರೀತಿಸುವ ದೇಶದ ಜನತೆ ಕಣ್ಣೀರಿಡುತ್ತಿರುವ ಹಾಗೂ ಈ ರೀತಿ ನರಳಾಡುತ್ತಿರುವುದನ್ನು ನೋಡಿ ನನ್ನ ಹೃದಯ ಛಿದ್ರವಾಗಿದೆ. ನೀವು ಇದನ್ನು ದೂರ ಮಾಡಲಿದ್ದೀರಿ, ಇದರಿಂದ ಬಲಶಾಲಿಯಾಗಿ ಹೊರ ಬರಲಿದ್ದೀರಿ, ನಿಮ್ಮ ದಯೆ ಮತ್ತು ಔದಾರ್ಯ ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಗಮನಕ್ಕೆ ಬಾರದೇ ಇರದು" ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್​ನ ಮುಂದೂಡಿದ ನಂತರ ಪೀಟರ್​ಸನ್​ ಈ ಟ್ವೀಟ್ ಮಾಡಿದ್ದಾರೆ. ಕೆಕೆಆರ್​ ಮತ್ತು ಸಿಎಸ್​ಕೆ ಬಳಗದಲ್ಲಿ ಕೆಲವು ಕ್ರಿಕೆಟಿರು ಮತ್ತು ಸಹಾಯಕ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಬಿಸಿಸಿಐ ಟೂರ್ನಿಯನ್ನು ತಕ್ಷಣದಲ್ಲೇ ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಇದನ್ನು ಓದಿ:ಕೊರೊನಾ ಹೋರಾಟಕ್ಕೆ ದೇಣಿಗೆ ನೀಡಿದ ಆಸ್ಟ್ರೇಲಿಯಾ ವೇಗಿ ಜೇಸನ್ ಬೆಹ್ರೆನ್​ಡಾರ್ಫ್​​

ನವದೆಹಲಿ : ಭಾರತದಲ್ಲಿ ಕೊರೊನಾದಿಂದ ಜನರು ಎದುರಿಸುತ್ತಿರುವ ಸಾವು-ನೋವುಗಳನ್ನು ನೋಡಿ ನನ್ನ ಹೃದಯ ಒಡೆದಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್​ಸನ್​ ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ.

ಕಳೆದ ಎರಡು ವಾರಗಳಿಂದ ಭಾರತದಲ್ಲಿ 3 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣ ಕಂಡು ಬರುತ್ತಿವೆ. ಸಾವಿರಾರು ಮಂದಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಈ ಕಾರಣದಿಂದಲೇ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಮಂಗಳವಾರ ಸ್ಥಗಿತಗೊಂಡಿದೆ. ಪ್ರಸ್ತುತ ಭಾರತದ ಸ್ಥಿತಿ ನೋಡಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟ್​ಟೇಟರ್ ಕೆವಿನ ಪೀಟರ್ಸನ್​ ಮರುಕ ವ್ಯಕ್ತಪಡಿಸಿದ್ದಾರೆ.

  • India - it’s heartbreaking to see a country I love so much suffering! 😢

    You WILL get through this!
    You WILL be stronger coming out of this!
    Your kindness & generosity NEVER goes unnoticed even during this crisis! 🙏🏽#IncredibleIndia ❤️

    — Kevin Pietersen🦏 (@KP24) May 4, 2021 " class="align-text-top noRightClick twitterSection" data=" ">

ಭಾರತವು ನಾನು ತುಂಬಾ ಪ್ರೀತಿಸುವ ದೇಶದ ಜನತೆ ಕಣ್ಣೀರಿಡುತ್ತಿರುವ ಹಾಗೂ ಈ ರೀತಿ ನರಳಾಡುತ್ತಿರುವುದನ್ನು ನೋಡಿ ನನ್ನ ಹೃದಯ ಛಿದ್ರವಾಗಿದೆ. ನೀವು ಇದನ್ನು ದೂರ ಮಾಡಲಿದ್ದೀರಿ, ಇದರಿಂದ ಬಲಶಾಲಿಯಾಗಿ ಹೊರ ಬರಲಿದ್ದೀರಿ, ನಿಮ್ಮ ದಯೆ ಮತ್ತು ಔದಾರ್ಯ ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಗಮನಕ್ಕೆ ಬಾರದೇ ಇರದು" ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್​ನ ಮುಂದೂಡಿದ ನಂತರ ಪೀಟರ್​ಸನ್​ ಈ ಟ್ವೀಟ್ ಮಾಡಿದ್ದಾರೆ. ಕೆಕೆಆರ್​ ಮತ್ತು ಸಿಎಸ್​ಕೆ ಬಳಗದಲ್ಲಿ ಕೆಲವು ಕ್ರಿಕೆಟಿರು ಮತ್ತು ಸಹಾಯಕ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಬಿಸಿಸಿಐ ಟೂರ್ನಿಯನ್ನು ತಕ್ಷಣದಲ್ಲೇ ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಇದನ್ನು ಓದಿ:ಕೊರೊನಾ ಹೋರಾಟಕ್ಕೆ ದೇಣಿಗೆ ನೀಡಿದ ಆಸ್ಟ್ರೇಲಿಯಾ ವೇಗಿ ಜೇಸನ್ ಬೆಹ್ರೆನ್​ಡಾರ್ಫ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.