ETV Bharat / sports

ಕನ್ಫರ್ಮ್​ : ಠಾಕೂರ್ 2ನೇ ಟೆಸ್ಟ್​ಗೆ ಅಲಭ್ಯ, 3ನೇ ಪಂದ್ಯಕ್ಕೆ ಮರಳುವ ಸಾಧ್ಯತೆ

author img

By

Published : Aug 11, 2021, 7:37 PM IST

ಮೊದಲ ಪಂದ್ಯದಲ್ಲಿ 4-1 ಬೌಲಿಂಗ್ ಸಂಯೋಜನೆ ಯಶಸ್ವಿಯಾಗಿರುವುದರಿಂದ ಕೊಹ್ಲಿ, ವೇಗಿ ಬದಲಿಗೆ ಮತ್ತೊಬ್ಬ ವೇಗಿಯನ್ನು ಆಯ್ಕೆ ಮಾಡಲಿದ್ದಾರೋ ಅಥವಾ ಕೆಳ ಕ್ರಮಾಂಕದ ಬ್ಯಾಟಿಂಗ್​ ಲೈನ್‌ಅಪ್​ ಪರಿಗಣಿಸಿ ಅಶ್ವಿನ್​ಗೆ ಮಣೆ ಹಾಕಲಿದ್ದಾರೋ ಎಂಬುದು ಕುತೂಹಲಕಾರಿ ಸಂಗತಿ. ವೇಗಿಗಳಲ್ಲಿ ಇಶಾಂತ್ ಶರ್ಮಾ ಹೆಸರು ಮುಂಚೂಣಿಯಲ್ಲಿದೆ..

Shardul Thakur unavailable for selection due to injury
ಶಾರ್ದುಲ್ ಠಾಕೂರ್​ಗೆ ಗಾಯ

ಲಂಡನ್ : ಟೀಂ​ ಇಂಡಿಯಾದ ಉದಯೋನ್ಮುಖ ವೇಗಿ ಶಾರ್ದುಲ್ ಠಾಕೂರ್​ ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್​ ಬುಧವಾರ ಖಚಿತಪಡಿಸಿದೆ. ಮೂರನೇ ಪಂದ್ಯಕ್ಕೆ ವೇಗದ ಬೌಲರ್​ ಲಭ್ಯರಾಗಲಿದ್ದಾರೆ ಎಂದು ಭಾರತ ತಂಡದ ನಾಯಕ ವಿರಾಟ್​​ ಕೊಹ್ಲಿ ಹೇಳಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಟೆಸ್ಟ್​ ಕೂತೂಹಲ ಘಟಕ್ಕೆ ತೆರಳಿತ್ತಾದರೂ, ಕೊನೆಯ ದಿನ ಮಳೆರಾಯ ಆಟಕ್ಕೆ ಅವಕಾಶ ಕೊಡದ ಹಿನ್ನೆಲೆ ಡ್ರಾನಲ್ಲಿ ಅಂತ್ಯಗೊಂಡಿತ್ತು. ಆದರೆ, ಆ ಪಂದ್ಯಲ್ಲಿ ಪ್ರವಾಸಿ ಭಾರತ ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಇದೀಗ ಲಾರ್ಡ್ಸ್​ನಲ್ಲಿ ಗುರುವಾರದಿಂದ ಆರಂಭವಾಗಲಿರುವ ಪಂದ್ಯದತ್ತ ಎಲ್ಲರ ಗಮನ ತಿರುಗಿದೆ.

ಮೊದಲ ಪಂದ್ಯದಲ್ಲಿ ಭಾರತದ ನಾಲ್ಕು ವೇಗಿಗಳು(ಬುಮ್ರಾ, ಶಮಿ, ಶಾರ್ದೂಲ್, ಸಿರಾಜ್​) ಮತ್ತು ರವೀಂದ್ರ ಜಡೇಜಾ ಕಣಕ್ಕಿಳಿದಿದ್ದರು. ಹನ್ನೊಂದರ ಬಳಗದಿಂದ ಆರ್​ ಅಶ್ವಿನ್​ರನ್ನು ಕೈಬಿಟ್ಟಿದ್ದು, ಕ್ರಿಕೆಟ್ ತಜ್ಞರಿಗೆ ಮತ್ತು​ ಅಭಿಮಾನಿಗಳಿಗೆ ಆಶ್ಚರ್ಯ ತಂದಿತ್ತು. ಯಾಕೆಂದರೆ, ಅವರು ಟೆಸ್ಟ್​ ಪಂದ್ಯಕ್ಕೂ ಕೌಂಟಿ ಪಂದ್ಯದಲ್ಲಿ ಆಡಿ ಉತ್ತಮ ಪ್ರದರ್ಶನ ತೋರಿದ್ದರು.

ಇದೀಗ ವೇಗಿ ಶಾರ್ದೂಲ್ ಠಾಕೂರ್​ ಅಭ್ಯಾಸದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಹಾಗಾಗಿ, ಗುರುವಾರದಿಂದ ಆರಂಭವಾಗಲಿರುವ 2ನೇ ಟೆಸ್ಟ್​ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಮೊದಲ ಪಂದ್ಯದಲ್ಲಿ 4-1 ಬೌಲಿಂಗ್ ಸಂಯೋಜನೆ ಯಶಸ್ವಿಯಾಗಿರುವುದರಿಂದ ಕೊಹ್ಲಿ, ವೇಗಿ ಬದಲಿಗೆ ಮತ್ತೊಬ್ಬ ವೇಗಿಯನ್ನು ಆಯ್ಕೆ ಮಾಡಲಿದ್ದಾರೋ ಅಥವಾ ಕೆಳ ಕ್ರಮಾಂಕದ ಬ್ಯಾಟಿಂಗ್​ ಲೈನ್‌ಅಪ್​ ಪರಿಗಣಿಸಿ ಅಶ್ವಿನ್​ಗೆ ಮಣೆ ಹಾಕಲಿದ್ದಾರೋ ಎಂಬುದು ಕುತೂಹಲಕಾರಿ ಸಂಗತಿ. ವೇಗಿಗಳಲ್ಲಿ ಇಶಾಂತ್ ಶರ್ಮಾ ಹೆಸರು ಮುಂಚೂಣಿಯಲ್ಲಿದೆ.

ಇದನ್ನು ಓದಿ:ICC Test Rankings: ಕೊಹ್ಲಿ ಕುಸಿತ, ಬೌಲಿಂಗ್​ ರ‍್ಯಾಂಕಿಂಗ್​ನಲ್ಲಿ ಭಾರಿ ಏರಿಕೆ ಕಂಡ ಜಸ್ಪ್ರೀತ್ ಬುಮ್ರಾ

ಲಂಡನ್ : ಟೀಂ​ ಇಂಡಿಯಾದ ಉದಯೋನ್ಮುಖ ವೇಗಿ ಶಾರ್ದುಲ್ ಠಾಕೂರ್​ ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್​ ಬುಧವಾರ ಖಚಿತಪಡಿಸಿದೆ. ಮೂರನೇ ಪಂದ್ಯಕ್ಕೆ ವೇಗದ ಬೌಲರ್​ ಲಭ್ಯರಾಗಲಿದ್ದಾರೆ ಎಂದು ಭಾರತ ತಂಡದ ನಾಯಕ ವಿರಾಟ್​​ ಕೊಹ್ಲಿ ಹೇಳಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಟೆಸ್ಟ್​ ಕೂತೂಹಲ ಘಟಕ್ಕೆ ತೆರಳಿತ್ತಾದರೂ, ಕೊನೆಯ ದಿನ ಮಳೆರಾಯ ಆಟಕ್ಕೆ ಅವಕಾಶ ಕೊಡದ ಹಿನ್ನೆಲೆ ಡ್ರಾನಲ್ಲಿ ಅಂತ್ಯಗೊಂಡಿತ್ತು. ಆದರೆ, ಆ ಪಂದ್ಯಲ್ಲಿ ಪ್ರವಾಸಿ ಭಾರತ ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಇದೀಗ ಲಾರ್ಡ್ಸ್​ನಲ್ಲಿ ಗುರುವಾರದಿಂದ ಆರಂಭವಾಗಲಿರುವ ಪಂದ್ಯದತ್ತ ಎಲ್ಲರ ಗಮನ ತಿರುಗಿದೆ.

ಮೊದಲ ಪಂದ್ಯದಲ್ಲಿ ಭಾರತದ ನಾಲ್ಕು ವೇಗಿಗಳು(ಬುಮ್ರಾ, ಶಮಿ, ಶಾರ್ದೂಲ್, ಸಿರಾಜ್​) ಮತ್ತು ರವೀಂದ್ರ ಜಡೇಜಾ ಕಣಕ್ಕಿಳಿದಿದ್ದರು. ಹನ್ನೊಂದರ ಬಳಗದಿಂದ ಆರ್​ ಅಶ್ವಿನ್​ರನ್ನು ಕೈಬಿಟ್ಟಿದ್ದು, ಕ್ರಿಕೆಟ್ ತಜ್ಞರಿಗೆ ಮತ್ತು​ ಅಭಿಮಾನಿಗಳಿಗೆ ಆಶ್ಚರ್ಯ ತಂದಿತ್ತು. ಯಾಕೆಂದರೆ, ಅವರು ಟೆಸ್ಟ್​ ಪಂದ್ಯಕ್ಕೂ ಕೌಂಟಿ ಪಂದ್ಯದಲ್ಲಿ ಆಡಿ ಉತ್ತಮ ಪ್ರದರ್ಶನ ತೋರಿದ್ದರು.

ಇದೀಗ ವೇಗಿ ಶಾರ್ದೂಲ್ ಠಾಕೂರ್​ ಅಭ್ಯಾಸದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ಹಾಗಾಗಿ, ಗುರುವಾರದಿಂದ ಆರಂಭವಾಗಲಿರುವ 2ನೇ ಟೆಸ್ಟ್​ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಮೊದಲ ಪಂದ್ಯದಲ್ಲಿ 4-1 ಬೌಲಿಂಗ್ ಸಂಯೋಜನೆ ಯಶಸ್ವಿಯಾಗಿರುವುದರಿಂದ ಕೊಹ್ಲಿ, ವೇಗಿ ಬದಲಿಗೆ ಮತ್ತೊಬ್ಬ ವೇಗಿಯನ್ನು ಆಯ್ಕೆ ಮಾಡಲಿದ್ದಾರೋ ಅಥವಾ ಕೆಳ ಕ್ರಮಾಂಕದ ಬ್ಯಾಟಿಂಗ್​ ಲೈನ್‌ಅಪ್​ ಪರಿಗಣಿಸಿ ಅಶ್ವಿನ್​ಗೆ ಮಣೆ ಹಾಕಲಿದ್ದಾರೋ ಎಂಬುದು ಕುತೂಹಲಕಾರಿ ಸಂಗತಿ. ವೇಗಿಗಳಲ್ಲಿ ಇಶಾಂತ್ ಶರ್ಮಾ ಹೆಸರು ಮುಂಚೂಣಿಯಲ್ಲಿದೆ.

ಇದನ್ನು ಓದಿ:ICC Test Rankings: ಕೊಹ್ಲಿ ಕುಸಿತ, ಬೌಲಿಂಗ್​ ರ‍್ಯಾಂಕಿಂಗ್​ನಲ್ಲಿ ಭಾರಿ ಏರಿಕೆ ಕಂಡ ಜಸ್ಪ್ರೀತ್ ಬುಮ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.