ETV Bharat / sports

ಪಾಕಿಸ್ತಾನ ಕ್ರಿಕೆಟ್​ ತಂಡದಲ್ಲಿ ಗುಂಪುಗಾರಿಕೆ ಆರೋಪ: ಕ್ರಿಕೆಟ್​ ಮಂಡಳಿಯ ಸ್ಪಷ್ಟನೆ ಹೀಗಿದೆ.. - ಸ್ಪಷ್ಟನೆ ನೀಡಿದ ಪಾಕ್​ ಕ್ರಿಕೆಟ್​ ಮಂಡಳಿ

ಸತತ ಎರಡು ಸೋಲು ಕಂಡ ನಂತರ ಪಾಕಿಸ್ತಾನ ತಂಡದಲ್ಲಿ ಒಳಜಗಳ ಉಂಟಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಕುರಿತಾಗಿ ಪಿಸಿಬಿ ಸ್ಪಷ್ಟನೆ ನೀಡಿದೆ.

Etv Bharat
Etv Bharat
author img

By ETV Bharat Karnataka Team

Published : Oct 23, 2023, 9:44 PM IST

ಲಾಹೋರ್ (ಪಾಕಿಸ್ತಾನ): ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಮೊದಲೆರಡು ಪಂದ್ಯ ಗೆದ್ದು ಮತ್ತೆರಡರಲ್ಲಿ ಸೋತಿದೆ. ಹೀಗಿರುವಾಗ ತಂಡದಲ್ಲಿ ಆಂತರಿಕ ಜಗಳ ನಡೆಯುತ್ತಿದೆ ಎಂಬುದಾಗಿ ಪಾಕಿಸ್ತಾನಿ ಮಾಧ್ಯಮಗಳೇ ವರದಿ ಮಾಡಿದ್ದವು. ಆದರೆ ತಂಡದಲ್ಲಿ ಭಿನ್ನಾಭಿಪ್ರಾಯ ಇದೆ ಎಂಬ ವಾದವನ್ನು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ತಳ್ಳಿಹಾಕಿದೆ.

  • " class="align-text-top noRightClick twitterSection" data="">

ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಸಾಧಾರಣ ಪ್ರದರ್ಶನ ನೀಡಿ ಸೋಲನುಭವಿಸಿತು. ಇದಾದ ನಂತರ ತಂಡದ ಆಟಗಾರರ ನಡುವೆ ವಾದ-ವಿವಾದಗಳು ನಡೆದು ಮನಸ್ತಾಪ ಉಂಟಾಗಿದೆ. ತಂಡ ಎರಡು ಬಣವಾಗಿ ವಿಂಗಡಣೆಯಾಗಿದೆ ಎನ್ನಲಾಗಿತ್ತು. ಇದೀಗ, ಬಾಬರ್ ಆಜಂ​ ನೇತೃತ್ವದ ತಂಡದಲ್ಲಿನ ಭಿನ್ನಾಭಿಪ್ರಾಯದ ವದಂತಿಗಳನ್ನು ಬಲವಾಗಿ ನಿರಾಕರಿಸುವ ಹೇಳಿಕೆಯನ್ನು ಪಿಸಿಬಿ ನೀಡಿದೆ.

"ಪ್ರಸ್ತುತ ಐಸಿಸಿ ವಿಶ್ವಕಪ್ 2023ರಲ್ಲಿ ಭಾಗವಹಿಸುತ್ತಿರುವ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಇತ್ತೀಚಿನ ಊಹಾಪೋಹಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಲವಾಗಿ ನಿರಾಕರಿಸುತ್ತದೆ. ಮಾಧ್ಯಮದ ಒಂದು ನಿರ್ದಿಷ್ಟ ವಿಭಾಗವು ವದಂತಿ ಹರಡಿದೆ. ತಂಡವು ಒಗ್ಗಟ್ಟಾಗಿದೆ .ಆಧಾರರಹಿತ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ"- ಪಿಸಿಬಿ

" class="align-text-top noRightClick twitterSection" data=" ">

ಲಾಹೋರ್ (ಪಾಕಿಸ್ತಾನ): ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಮೊದಲೆರಡು ಪಂದ್ಯ ಗೆದ್ದು ಮತ್ತೆರಡರಲ್ಲಿ ಸೋತಿದೆ. ಹೀಗಿರುವಾಗ ತಂಡದಲ್ಲಿ ಆಂತರಿಕ ಜಗಳ ನಡೆಯುತ್ತಿದೆ ಎಂಬುದಾಗಿ ಪಾಕಿಸ್ತಾನಿ ಮಾಧ್ಯಮಗಳೇ ವರದಿ ಮಾಡಿದ್ದವು. ಆದರೆ ತಂಡದಲ್ಲಿ ಭಿನ್ನಾಭಿಪ್ರಾಯ ಇದೆ ಎಂಬ ವಾದವನ್ನು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ತಳ್ಳಿಹಾಕಿದೆ.

  • " class="align-text-top noRightClick twitterSection" data="">

ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಸಾಧಾರಣ ಪ್ರದರ್ಶನ ನೀಡಿ ಸೋಲನುಭವಿಸಿತು. ಇದಾದ ನಂತರ ತಂಡದ ಆಟಗಾರರ ನಡುವೆ ವಾದ-ವಿವಾದಗಳು ನಡೆದು ಮನಸ್ತಾಪ ಉಂಟಾಗಿದೆ. ತಂಡ ಎರಡು ಬಣವಾಗಿ ವಿಂಗಡಣೆಯಾಗಿದೆ ಎನ್ನಲಾಗಿತ್ತು. ಇದೀಗ, ಬಾಬರ್ ಆಜಂ​ ನೇತೃತ್ವದ ತಂಡದಲ್ಲಿನ ಭಿನ್ನಾಭಿಪ್ರಾಯದ ವದಂತಿಗಳನ್ನು ಬಲವಾಗಿ ನಿರಾಕರಿಸುವ ಹೇಳಿಕೆಯನ್ನು ಪಿಸಿಬಿ ನೀಡಿದೆ.

"ಪ್ರಸ್ತುತ ಐಸಿಸಿ ವಿಶ್ವಕಪ್ 2023ರಲ್ಲಿ ಭಾಗವಹಿಸುತ್ತಿರುವ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಇತ್ತೀಚಿನ ಊಹಾಪೋಹಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಲವಾಗಿ ನಿರಾಕರಿಸುತ್ತದೆ. ಮಾಧ್ಯಮದ ಒಂದು ನಿರ್ದಿಷ್ಟ ವಿಭಾಗವು ವದಂತಿ ಹರಡಿದೆ. ತಂಡವು ಒಗ್ಗಟ್ಟಾಗಿದೆ .ಆಧಾರರಹಿತ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ"- ಪಿಸಿಬಿ

" class="align-text-top noRightClick twitterSection" data=" ">

ವಿಶ್ವಕಪ್​ಗೂ ಮುನ್ನ ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಏಷ್ಯಾಕಪ್ ನಡೆಸಿದ್ದವು. ಟೂರ್ನಿಯಲ್ಲಿ ಪಾಕಿಸ್ತಾನ ಗೆಲ್ಲುವ ಫೆವರೆಟ್​ ತಂಡವಾಗಿತ್ತು. ಆದರೆ ಸಾಧಾರಣ ಪ್ರದರ್ಶನದ ಕಾರಣ ಪಾಕ್​ ಸೆಮಿಫೈನಲ್ ಹಂತದಲ್ಲಿ ಶ್ರೀಲಂಕಾ ವಿರುದ್ಧ ಸೋತು ಹೊರಬೀಳಬೇಕಾಯಿತು. ಇದಾದ ನಂತರ ಬಾಬರ್ ಆಜಂ ಮತ್ತು ಶಾಹೀನ್ ಶಾ ಅಫ್ರಿದಿ ನಡುವೆ ವಾದ-ವಿವಾದ ನಡೆದಿದೆ ಎಂದು ವರದಿಗಳು ವೈರಲ್ ಆಗಿದ್ದವು.

ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ನರಿಂದ ನೀರಸ ಪ್ರದರ್ಶನ! ಟೂರ್ನಿಯಿಂದ ಹೊರಬೀಳುತ್ತಾ ಇಂಗ್ಲೆಂಡ್‌?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.