ETV Bharat / sports

ಸೋಲು ಮರೆತು, ನಮ್ಮ ಸಾಮರ್ಥ್ಯ ನಂಬಿ ಆಡುತ್ತೇವೆ: ಅಜಿಂಕ್ಯಾ ರಹಾನೆ ವಿಶ್ವಾಸ

author img

By

Published : Feb 27, 2020, 8:05 PM IST

ಈಗಾಗಲೇ ಭಾರತ ಎ ತಂಡ ಕ್ರೈಸ್ಟ್​ ಚರ್ಚ್​ನಲ್ಲಿ ಆಡಿದೆ. ಹನುಮ ವಿಹಾರಿ, ಶುಬ್ಮನ್​ ಗಿಲ್​ ಈ ಮೈದಾನದಲ್ಲಿ ಉತ್ತಮ ರನ್​ಗಳಿಸಿದ್ದಾರೆ. ಅವರ ಪ್ರಕಾರ ಇಲ್ಲಿ ರನ್​ಗಳಿಸುವುದು ಸುಲಭ. ಅಲ್ಲದೇ ಈ ಮೈದಾನದಲ್ಲಿ ಹೆಚ್ಚು ಸ್ವಿಂಗ್ ಆಗುವುದಿಲ್ಲ, ಬದಲಾಗಿ ಬೌನ್ಸ್​ ಹಾಗೂ ವೇಗ ಹೆಚ್ಚಿರುತ್ತದೆ ಎಂದು ರಹಾನೆ ಎರಡನೇ ಟೆಸ್ಟ್​ನಲ್ಲಿ ತಿರುಗಿ ಬೀಳುವ ಸೂಚನೆ ನೀಡಿದ್ದಾರೆ.

India vs New Zealand
ಅಜಿಂಕ್ಯಾ ರಹಾನೆ

ಕ್ರೈಸ್ಟ್​ ಚರ್ಚ್​: ಮೊದಲ ಟೆಸ್ಟ್​ ಪಂದ್ಯದ ಸೋಲು ಮರೆತು ಎರಡನೇ ಟೆಸ್ಟ್​ನಲ್ಲಿ ತಂಡದ ಎಲ್ಲ ಆಟಗಾರರು ನಮ್ಮ ಸಾಮರ್ಥ್ಯ ನಂಬಿ ಕಣಕ್ಕಿಳಿಯಲಿದ್ದೇವೆ ಎಂದು ಭಾರತ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಲ್ಲಿಂಗ್ಟನ್​ನಲ್ಲಿ ನ್ಯೂಜಿಲ್ಯಾಂಡ್​ ಬೌಲರ್​ಗಳು ಅತ್ಯುತ್ತಮವಾಗಿ ಬೌಲಿಂಗ್​ ಮಾಡಿದ್ದರು. ಅವರ ಬೌಲಿಂಗ್​ನಲ್ಲಿ​ ಹೆಚ್ಚು ಸ್ವಿಂಗ್​ ಹಾಗೂ ಸೀಮ್​ ಒಳಗೊಂಡಿತ್ತು. ಇದರಿಂದ ನಮ್ಮ ತಂಡದ ಬ್ಯಾಟ್ಸ್​ಮನ್​ಗಳಿಗೆ ರನ್​ಗಳಿಸಲು ಸಾಧ್ಯವಾಗಲಿಲ್ಲ. ಮೊದಲ ಪಂದ್ಯದ ಸೋಲಿನಿಂದ ಪಾಠ ಕಲಿತಿದ್ದೇವೆ. ಎರಡನೇ ಪಂದ್ಯದಲ್ಲಿ ನಾನು, ಕೊಹ್ಲಿ ಹಾಗೂ ಪೂಜಾರ ಎಲ್ಲರೂ ನಮ್ಮ ಸಾಮರ್ಥ್ಯವನ್ನು ನಂಬಿ ಬ್ಯಾಟಿಂಗ್​ ನಡೆಸಲಿದ್ದೇವೆ ಎಂದು ರಹಾನೆ ಹೇಳಿದ್ದಾರೆ.

India vs New Zealand
ಅಜಿಂಕ್ಯಾ ರಹಾನೆ

ಈಗಾಗಲೆ ಭಾರತ ಎ ತಂಡ ಕ್ರೈಸ್ಟ್​ ಚರ್ಚ್​ನಲ್ಲಿ ಆಡಿದೆ. ಹನುಮ ವಿಹಾರಿ, ಶುಬ್ಮನ್​ ಗಿಲ್​ ಈ ಮೈದಾನದಲ್ಲಿ ಉತ್ತಮ ರನ್​ಗಳಿಸಿದ್ದಾರೆ. ಅವರ ಪ್ರಕಾರ ಇಲ್ಲಿ ರನ್​ಗಳಿಸುವುದು ಸುಲಭ. ಅಲ್ಲದೇ ಈ ಮೈದಾನದಲ್ಲಿ ಹೆಚ್ಚು ಸ್ವಿಂಗ್ ಆಗುವುದಿಲ್ಲ, ಬದಲಾಗಿ ಬೌನ್ಸ್​ ಹಾಗೂ ವೇಗ ಹೆಚ್ಚಿರುತ್ತದೆ ಎಂದಿದ್ದಾರೆ.

ಅಜಿಂಕ್ಯಾ ರಹಾನೆ

ಇನ್ನು ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರ ವೈಫಲ್ಯದ ಬಗ್ಗೆ ಮಾತನಾಡಿದ ಅವರು, ಪೂಜಾರ ಉತ್ತಮವಾಗಿ ಬ್ಯಾಟ್​ ಬೀಸಿದರು. ಅವರು ರನ್​ಗಳಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಕಿವೀಸ್​ ಬೌಲರ್​ಗಳು ಸುಲಭವಾದ ಎಸೆತಗಳನ್ನು ಹಾಕುತ್ತಿರಲಿಲ್ಲ. ಒಮ್ಮೊಮ್ಮೆ ಎಲ್ಲ ಬ್ಯಾಟ್ಸ್​ಮನ್​ಗಳು ವೈಫಲ್ಯ ಅನುಭವಿಸುವುದು ಸಾಮಾನ್ಯ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ 60 ಅಂಕಗಳನ್ನು ಪಡೆಯಲು ಪ್ರಯತ್ನಿಸುತ್ತೇವೆ. ಸರಣಿ ಗೆಲ್ಲಲು ಸಾಧ್ಯವಾಗದಿದ್ದರೂ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಒಂದೊಂದು ಪಂದ್ಯದ ಫಲಿತಾಂಶವು ಪ್ರಮುಖವಾಗಿರುತ್ತದೆ ಎಂದು ರಹಾನೆ ತಿಳಿಸಿದ್ದಾರೆ.

India vs New Zealand
ವಿರಾಟ್​ ಕೊಹ್ಲಿ

ಭಾರತ ತಂಡ ಮೊದಲ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್​ಗಳಿಂದ ಸೋಲನುಭವಿಸಿತ್ತು. ಕೊಹ್ಲಿ ಪಡೆ ಎರಡೂ ಇನ್ನಿಂಗ್ಸ್​ನಲ್ಲೂ 200 ರನ್​ಗಳಿಸಲು ವಿಫಲರಾಗಿದ್ದರು.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಡಿರುವ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಕಿವೀಸ್ ವಿರುದ್ಧ ಮಾತ್ರ ಸೋಲುಕಂಡಿದೆ. ಭಾರತ ತಂಡ 360 ಅಂಕಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 10 ಪಂದ್ಯಗಳಲ್ಲಿ 7 ಗೆಲುವು, 2 ಸೋಲು, ಒಂದು ಡ್ರಾ ನೆರವಿನಿಂದ 296 ಅಂಕಗಳಿಸಿಕೊಂಡು 2ನೇ ಸ್ಥಾನದಲ್ಲಿದೆ.

ಕ್ರೈಸ್ಟ್​ ಚರ್ಚ್​: ಮೊದಲ ಟೆಸ್ಟ್​ ಪಂದ್ಯದ ಸೋಲು ಮರೆತು ಎರಡನೇ ಟೆಸ್ಟ್​ನಲ್ಲಿ ತಂಡದ ಎಲ್ಲ ಆಟಗಾರರು ನಮ್ಮ ಸಾಮರ್ಥ್ಯ ನಂಬಿ ಕಣಕ್ಕಿಳಿಯಲಿದ್ದೇವೆ ಎಂದು ಭಾರತ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಲ್ಲಿಂಗ್ಟನ್​ನಲ್ಲಿ ನ್ಯೂಜಿಲ್ಯಾಂಡ್​ ಬೌಲರ್​ಗಳು ಅತ್ಯುತ್ತಮವಾಗಿ ಬೌಲಿಂಗ್​ ಮಾಡಿದ್ದರು. ಅವರ ಬೌಲಿಂಗ್​ನಲ್ಲಿ​ ಹೆಚ್ಚು ಸ್ವಿಂಗ್​ ಹಾಗೂ ಸೀಮ್​ ಒಳಗೊಂಡಿತ್ತು. ಇದರಿಂದ ನಮ್ಮ ತಂಡದ ಬ್ಯಾಟ್ಸ್​ಮನ್​ಗಳಿಗೆ ರನ್​ಗಳಿಸಲು ಸಾಧ್ಯವಾಗಲಿಲ್ಲ. ಮೊದಲ ಪಂದ್ಯದ ಸೋಲಿನಿಂದ ಪಾಠ ಕಲಿತಿದ್ದೇವೆ. ಎರಡನೇ ಪಂದ್ಯದಲ್ಲಿ ನಾನು, ಕೊಹ್ಲಿ ಹಾಗೂ ಪೂಜಾರ ಎಲ್ಲರೂ ನಮ್ಮ ಸಾಮರ್ಥ್ಯವನ್ನು ನಂಬಿ ಬ್ಯಾಟಿಂಗ್​ ನಡೆಸಲಿದ್ದೇವೆ ಎಂದು ರಹಾನೆ ಹೇಳಿದ್ದಾರೆ.

India vs New Zealand
ಅಜಿಂಕ್ಯಾ ರಹಾನೆ

ಈಗಾಗಲೆ ಭಾರತ ಎ ತಂಡ ಕ್ರೈಸ್ಟ್​ ಚರ್ಚ್​ನಲ್ಲಿ ಆಡಿದೆ. ಹನುಮ ವಿಹಾರಿ, ಶುಬ್ಮನ್​ ಗಿಲ್​ ಈ ಮೈದಾನದಲ್ಲಿ ಉತ್ತಮ ರನ್​ಗಳಿಸಿದ್ದಾರೆ. ಅವರ ಪ್ರಕಾರ ಇಲ್ಲಿ ರನ್​ಗಳಿಸುವುದು ಸುಲಭ. ಅಲ್ಲದೇ ಈ ಮೈದಾನದಲ್ಲಿ ಹೆಚ್ಚು ಸ್ವಿಂಗ್ ಆಗುವುದಿಲ್ಲ, ಬದಲಾಗಿ ಬೌನ್ಸ್​ ಹಾಗೂ ವೇಗ ಹೆಚ್ಚಿರುತ್ತದೆ ಎಂದಿದ್ದಾರೆ.

ಅಜಿಂಕ್ಯಾ ರಹಾನೆ

ಇನ್ನು ಟೆಸ್ಟ್​ ಸ್ಪೆಷಲಿಸ್ಟ್​ ಪೂಜಾರ ವೈಫಲ್ಯದ ಬಗ್ಗೆ ಮಾತನಾಡಿದ ಅವರು, ಪೂಜಾರ ಉತ್ತಮವಾಗಿ ಬ್ಯಾಟ್​ ಬೀಸಿದರು. ಅವರು ರನ್​ಗಳಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಕಿವೀಸ್​ ಬೌಲರ್​ಗಳು ಸುಲಭವಾದ ಎಸೆತಗಳನ್ನು ಹಾಕುತ್ತಿರಲಿಲ್ಲ. ಒಮ್ಮೊಮ್ಮೆ ಎಲ್ಲ ಬ್ಯಾಟ್ಸ್​ಮನ್​ಗಳು ವೈಫಲ್ಯ ಅನುಭವಿಸುವುದು ಸಾಮಾನ್ಯ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ 60 ಅಂಕಗಳನ್ನು ಪಡೆಯಲು ಪ್ರಯತ್ನಿಸುತ್ತೇವೆ. ಸರಣಿ ಗೆಲ್ಲಲು ಸಾಧ್ಯವಾಗದಿದ್ದರೂ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಒಂದೊಂದು ಪಂದ್ಯದ ಫಲಿತಾಂಶವು ಪ್ರಮುಖವಾಗಿರುತ್ತದೆ ಎಂದು ರಹಾನೆ ತಿಳಿಸಿದ್ದಾರೆ.

India vs New Zealand
ವಿರಾಟ್​ ಕೊಹ್ಲಿ

ಭಾರತ ತಂಡ ಮೊದಲ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್​ಗಳಿಂದ ಸೋಲನುಭವಿಸಿತ್ತು. ಕೊಹ್ಲಿ ಪಡೆ ಎರಡೂ ಇನ್ನಿಂಗ್ಸ್​ನಲ್ಲೂ 200 ರನ್​ಗಳಿಸಲು ವಿಫಲರಾಗಿದ್ದರು.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಡಿರುವ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಕಿವೀಸ್ ವಿರುದ್ಧ ಮಾತ್ರ ಸೋಲುಕಂಡಿದೆ. ಭಾರತ ತಂಡ 360 ಅಂಕಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 10 ಪಂದ್ಯಗಳಲ್ಲಿ 7 ಗೆಲುವು, 2 ಸೋಲು, ಒಂದು ಡ್ರಾ ನೆರವಿನಿಂದ 296 ಅಂಕಗಳಿಸಿಕೊಂಡು 2ನೇ ಸ್ಥಾನದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.