ETV Bharat / sports

ಅಂಪೈರ್​ ಔಟ್​ ನೀಡಿದ್ರೂ ಮೈದಾನ ತೊರೆಯದ ಗಿಲ್​​... ಗ್ರೌಂಡ್​​ನಿಂದಲೇ ಹೊರನಡೆದ ಡೆಲ್ಲಿ ಪ್ಲೇಯರ್ಸ್​! - ರಣಜಿ ಕ್ರಿಕೆಟ್​​ನಲ್ಲಿ ಶುಭಮನ್ ಗಿಲ್​

ದೆಹಲಿ ಹಾಗೂ ಪಂಜಾಬ್​ ತಂಡದ ನಡುವಿನ ರಣಜಿ ಕ್ರಿಕೆಟ್​ ಪಂದ್ಯದಲ್ಲಿ ಉದಯೋನ್ಮುಖ ಬ್ಯಾಟ್ಸ್​​ಮನ್​ ಶುಭಮನ್​ ಗಿಲ್​​ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿರುವ ಘಟನೆ ನಡೆದಿದೆ.

Shubhman Gill
ಶುಭಮನ್​ ಗಿಲ್
author img

By

Published : Jan 3, 2020, 4:13 PM IST

ಮೊಹಾಲಿ: ಇಲ್ಲಿನ ಎಎಸ್​ ಬಿಂದ್ರಾ ಮೈದಾನದಲ್ಲಿ ದೆಹಲಿ ಹಾಗೂ ಪಂಜಾಬ್​ ತಂಡದ ನಡುವೆ ರಣಜಿ ಕ್ರಿಕೆಟ್​ ಪಂದ್ಯ ನಡೆಯುತ್ತಿದ್ದು, ಪಂಜಾಬ್​ ತಂಡದ ಆರಂಭಿಕ ಆಟಗಾರ ಶುಭಮನ್​ ಗಿಲ್​ ಔಟ್​ ಎಂದು ಅಂಪೈರ್​ ತೀರ್ಪು ನೀಡಿದ್ರೂ ಮೈದಾನ ತೊರೆಯದ ಘಟನೆ ನಡೆದಿದೆ.

ಪಂದ್ಯ ನಡೆಯುತ್ತಿದ್ದ ವೇಳೆ ದೆಹಲಿ ತಂಡದ ಮಧ್ಯಮ ವೇಗಿ ಸಭೋತ್​ ಬಾಟಿ ಬೌಲಿಂಗ್​​ನಲ್ಲಿ ಶುಭಮನ್​ ಗಿಲ್​ ಔಟ್​ ಎಂದು ಅಂಪೈರ್​ ತೀರ್ಪು ನೀಡಿದ್ದಾರೆ. ಈ ವೇಳೆ ದೆಹಲಿ ತಂಡದ ಪ್ಲೇಯರ್ಸ್​ ಸಂಭ್ರಮಾಚರಣೆಯಲ್ಲಿ ಮಗ್ನರಾಗಿದ್ದರೆ, ಗಿಲ್​ ಮಾತ್ರ ಮೈದಾನ ಬಿಟ್ಟು ಹೊರಗಡೆ ನಡೆದಿಲ್ಲ. ಈ ವೇಳೆ ತಾವು ಔಟ್​ ಆಗಿಲ್ಲ ಎಂದಿದ್ದಾರೆ. ಈ ವೇಳೆ ಅಂಪೈರ್​ ರೆಫ್ರಿ ಜತೆ ಮಾತುಕತೆ ನಡೆಸಿ, ಔಟ್​ ಇಲ್ಲ ಎಂದು ಮರುತೀರ್ಪು ನೀಡಿದ್ದಾರೆ.

ಇದರಿಂದ ಅಸಮಾಧಾನಗೊಂಡ ದೆಹಲಿ ಪ್ಲೇಯರ್ಸ್​​​ ಪಂದ್ಯ ಆಡುವುದು ಬಿಟ್ಟು ಮೈದಾನದಿಂದ ಹೊರಗಡೆ ನಡೆದಿದ್ದಾರೆ. ಹೀಗಾಗಿ 10 ನಿಮಿಷಕ್ಕೂ ಹೆಚ್ಚು ಕಾಲ ಪಂದ್ಯ ಸ್ಥಗಿತಗೊಂಡಿದೆ. ಆದರೆ ಮ್ಯಾಚ್​ ರೆಫ್ರಿ ಮಧ್ಯಪ್ರವೇಶ ಮಾಡಿದ್ದರಿಂದ ಪುನಃ ಪಂದ್ಯ ಆರಂಭಗೊಂಡಿದೆ. ಈ ವೇಳೆ ಬ್ಯಾಟ್​ ಮಾಡಲು ಮೈದಾನಕ್ಕೆ ಇಳಿದ ಗಿಲ್​ 43 ಎಸೆತಗಳಲ್ಲಿ 23ರನ್​ಗಳಿಕೆ ಮಾಡಿ ಸಿಮಾರ್​​ಜೀತ್​ ಸಿಂಗ್​ ಬೌಲಿಂಗ್​​ನಲ್ಲಿ ವಿಕೆಟ್​ ಒಪ್ಪಿಸಿದ್ದಾರೆ.

ಇನ್ನು ಅಂಪೈರ್​ ತೀರ್ಪಿನ ವಿರುದ್ಧ ಶುಭಮನ್​ ಗಿಲ್​ ಆಕ್ರೋಶಗೊಂಡು ಅವರಿಗೆ ಅಸಭ್ಯ ಭಾಷೆ ಬಳಕೆ ಮಾಡಿ ಬೈದಿದ್ದಾರೆ ಎಂದು ದೆಹಲಿ ತಂಡದ ಪ್ಲೇಯರ್ಸ್​ ಆರೋಪ ಮಾಡಿದ್ದಾರೆ. ಗಿಲ್​ ಟೀಂ ಇಂಡಿಯಾ ಪರ ಎರಡು ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ.

ಮೊಹಾಲಿ: ಇಲ್ಲಿನ ಎಎಸ್​ ಬಿಂದ್ರಾ ಮೈದಾನದಲ್ಲಿ ದೆಹಲಿ ಹಾಗೂ ಪಂಜಾಬ್​ ತಂಡದ ನಡುವೆ ರಣಜಿ ಕ್ರಿಕೆಟ್​ ಪಂದ್ಯ ನಡೆಯುತ್ತಿದ್ದು, ಪಂಜಾಬ್​ ತಂಡದ ಆರಂಭಿಕ ಆಟಗಾರ ಶುಭಮನ್​ ಗಿಲ್​ ಔಟ್​ ಎಂದು ಅಂಪೈರ್​ ತೀರ್ಪು ನೀಡಿದ್ರೂ ಮೈದಾನ ತೊರೆಯದ ಘಟನೆ ನಡೆದಿದೆ.

ಪಂದ್ಯ ನಡೆಯುತ್ತಿದ್ದ ವೇಳೆ ದೆಹಲಿ ತಂಡದ ಮಧ್ಯಮ ವೇಗಿ ಸಭೋತ್​ ಬಾಟಿ ಬೌಲಿಂಗ್​​ನಲ್ಲಿ ಶುಭಮನ್​ ಗಿಲ್​ ಔಟ್​ ಎಂದು ಅಂಪೈರ್​ ತೀರ್ಪು ನೀಡಿದ್ದಾರೆ. ಈ ವೇಳೆ ದೆಹಲಿ ತಂಡದ ಪ್ಲೇಯರ್ಸ್​ ಸಂಭ್ರಮಾಚರಣೆಯಲ್ಲಿ ಮಗ್ನರಾಗಿದ್ದರೆ, ಗಿಲ್​ ಮಾತ್ರ ಮೈದಾನ ಬಿಟ್ಟು ಹೊರಗಡೆ ನಡೆದಿಲ್ಲ. ಈ ವೇಳೆ ತಾವು ಔಟ್​ ಆಗಿಲ್ಲ ಎಂದಿದ್ದಾರೆ. ಈ ವೇಳೆ ಅಂಪೈರ್​ ರೆಫ್ರಿ ಜತೆ ಮಾತುಕತೆ ನಡೆಸಿ, ಔಟ್​ ಇಲ್ಲ ಎಂದು ಮರುತೀರ್ಪು ನೀಡಿದ್ದಾರೆ.

ಇದರಿಂದ ಅಸಮಾಧಾನಗೊಂಡ ದೆಹಲಿ ಪ್ಲೇಯರ್ಸ್​​​ ಪಂದ್ಯ ಆಡುವುದು ಬಿಟ್ಟು ಮೈದಾನದಿಂದ ಹೊರಗಡೆ ನಡೆದಿದ್ದಾರೆ. ಹೀಗಾಗಿ 10 ನಿಮಿಷಕ್ಕೂ ಹೆಚ್ಚು ಕಾಲ ಪಂದ್ಯ ಸ್ಥಗಿತಗೊಂಡಿದೆ. ಆದರೆ ಮ್ಯಾಚ್​ ರೆಫ್ರಿ ಮಧ್ಯಪ್ರವೇಶ ಮಾಡಿದ್ದರಿಂದ ಪುನಃ ಪಂದ್ಯ ಆರಂಭಗೊಂಡಿದೆ. ಈ ವೇಳೆ ಬ್ಯಾಟ್​ ಮಾಡಲು ಮೈದಾನಕ್ಕೆ ಇಳಿದ ಗಿಲ್​ 43 ಎಸೆತಗಳಲ್ಲಿ 23ರನ್​ಗಳಿಕೆ ಮಾಡಿ ಸಿಮಾರ್​​ಜೀತ್​ ಸಿಂಗ್​ ಬೌಲಿಂಗ್​​ನಲ್ಲಿ ವಿಕೆಟ್​ ಒಪ್ಪಿಸಿದ್ದಾರೆ.

ಇನ್ನು ಅಂಪೈರ್​ ತೀರ್ಪಿನ ವಿರುದ್ಧ ಶುಭಮನ್​ ಗಿಲ್​ ಆಕ್ರೋಶಗೊಂಡು ಅವರಿಗೆ ಅಸಭ್ಯ ಭಾಷೆ ಬಳಕೆ ಮಾಡಿ ಬೈದಿದ್ದಾರೆ ಎಂದು ದೆಹಲಿ ತಂಡದ ಪ್ಲೇಯರ್ಸ್​ ಆರೋಪ ಮಾಡಿದ್ದಾರೆ. ಗಿಲ್​ ಟೀಂ ಇಂಡಿಯಾ ಪರ ಎರಡು ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ.

Intro:Body:

रणजी ट्रॉफी: आउट देने के बाद भी गिल ने नहीं छोड़ा मैदान, अंपायर को दीं 'गालियां'





मोहाली: यहां आईएस बिंद्रा स्टेडियम में खेले जा रहे दिल्ली और पंजाब के बीच रणजी ट्रॉफी मैच में उस समय विवाद खड़ा हो गया, जब पंजाब के बल्लेबाज शुभमन गिल ने अंपायर द्वारा आउट दिए जाने के बाद अंपायर से अपशब्द कहे.



इतना ही नहीं शुभमन के इस व्यवहार के बाद अंपायर ने अपना फैसला भी बदल दिया, जिससे दिल्ली टीम नाराज हो गई.



मीडिया रिपोर्ट के मुताबिक शुभमन पदार्पण कर रहे अंपायर पश्चिम पाठक के पास गए और उन्हें अपशब्द कहे जिसके बाद अंपायर ने फैसला बदल दिया.  



यह फैसला दिल्ली की टीम का रास नहीं आया और उसने मैदान से बाहर जाने का फैसला किया. इस दौरान मैच रुका रहा. मैच रेफरी को बीच में कूदना पड़ा और कुछ देर बाद मैच फिर शुरू हुआ।.



20 साल के युवा बल्लेबाज शुभमन को आखिरकार पवेलियन लौटना पड़ा. वे 41 गेंदों पर 23 रन बनाकर सिमरनजीत सिंह का शिकार हुए.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.