ETV Bharat / sports

4ನೇ ಕ್ರಮಾಂಕದ ಸಮಸ್ಯೆ:ಈತನಿಂದಲೇ ಪರಿಹಾರ; ಆಯ್ಕೆ ಸಮಿತಿ ಒಲವು ಯಾರ ಮೇಲೆ ಗೊತ್ತಾ!

author img

By

Published : Jul 21, 2019, 7:38 PM IST

ಭಾರತ ತಂಡದಲ್ಲಿ ಕಳೆದ 4 ವರ್ಷಗಳಿಂದ ಬಗೆಹರಿಯದ ಸಮಸ್ಯೆ ಎಂದರೆ ನಾಲ್ಕನೇ ಬ್ಯಾಟಿಂಗ್‌ ಕ್ರಮಾಂಕ. ಈ ಜಾಗಕ್ಕೆ ಸುಮಾರು 8ರಿಂದ 10 ಆಟಗಾರರನ್ನು ಬದಲಾಯಿಸಲಾಯ್ತು. ಆದ್ರೆ, ಯಾರೂ ಶಾಶ್ವತವಾಗಿ ಉಳಿಯಲಿಲ್ಲ. ಇದೀಗ ಆಯ್ಕೆ ಸಮಿತಿ ಶ್ರೇಯಸ್​ ಹೆಗಲಿಗೆ ಆ ಸ್ಥಾನದ ಜವಾಬ್ದಾರಿ ಹೊರಿಸಲು ಸಿದ್ದವಾಗಿದೆ.

ಅಯ್ಯರ್​

ಮುಂಬೈ: ಭಾರತ ತಂಡದ ಉದಯೋನ್ಮುಖ ಬ್ಯಾಟ್ಸ್​ಮನ್ ಶ್ರೇಯಸ್​ ಅಯ್ಯರ್​ರಿಂದ ತಂಡದ ನಾಲ್ಕನೇ ಕ್ರಮಾಂಕದ ಸಮಸ್ಯೆ ಬಗೆಹರಿಯಲಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.​

ಭಾರತ ತಂಡದಲ್ಲಿ ಕಳೆದ 4 ವರ್ಷಗಳಿಂದ ಬಗೆಹರಿಯದ ಸಮಸ್ಯೆ ಎಂದರೆ ನಾಲ್ಕನೇ ಬ್ಯಾಟಿಂಗ್‌ ಕ್ರಮಾಂಕ. ಈ ಜಾಗಕ್ಕೆ ಸುಮಾರು 8ರಿಂದ 10 ಆಟಗಾರರನ್ನು ಬದಲಾಯಿಸಲಾಗಿದೆ. ಆದ್ರೆ, ಯಾರೂ ಶಾಶ್ವತವಾಗಲಿಲ್ಲ. ಈ ಸಮಸ್ಯೆ ವಿಶ್ವಕಪ್​ನಲ್ಲೂ ಮುಂದುವರಿದಿದ್ದು, ಕೆಲವು ಹಿರಿಯ ಆಟಗಾರರ ಮೇಲೆ ಆಯ್ಕೆ ಸಮಿತಿ ಕೆಂಗಣ್ಣು ಬೀರಿತ್ತು.

ಇದೀಗ ಆಯ್ಕೆ ಸಮಿತಿ ಮುಂಬೈನ ಶ್ರೇಯಸ್​ ಅಯ್ಯರ್​ರನ್ನು 4 ನೇ ಕ್ರಮಾಂಕಕ್ಕೆ ಅರ್ಹನಾದ ಆಟಗಾರ ಎಂದು ನಿರ್ಧರಿಸಿದ್ದು, 2023 ರ ವಿಶ್ವಕಪ್​ಗೆ ತಂಡವನ್ನು ಕಟ್ಟಬೇಕಿದೆ. ಹೀಗಾಗಿ ಸಮಿತಿ ಶ್ರೇಯಸ್​ ಅಯ್ಯರ್​ ಮೇಲೆ ವಿಶ್ವಾಸ ಇಟ್ಟಿದೆ. ಇವರಿಗೆ ಯುವ ಆಟಗಾರ ಶುಬಮನ್‌​ ಗಿಲ್​ ಕೂಡ ಪ್ರತಿಸ್ಪರ್ಧಿಯಾಗಿದ್ದಾರೆ. ಆದರೆ ಅವರಿಗೆ ನ್ಯೂಜಿಲ್ಯಾಂಡ್​ ವಿರುದ್ಧ ಸರಣಿಯಲ್ಲಿ ಅವಕಾಶ ನೀಡಲಾಗಿತ್ತು. ಅವರು ಟೀಂ​ ಇಂಡಿಯಾ ತಲುಪಲು ಇನ್ನಷ್ಟು ಸಮಯ ಕಾಯಬೇಕಿದೆ ಎಂದಿದ್ದಾರೆ.

Shreyas Iyer
ಶ್ರೇಯಸ್ ಅಯ್ಯರ್​

ಅಯ್ಯರ್​ ಹಾಗೂ ಗಿಲ್​ ಇಬ್ಬರೂ ಮನೀಷ್​ ಪಾಂಡೆ ನೇತೃತ್ವದಲ್ಲಿ ಇಂಡಿಯಾ ಎ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇವರ ಜೊತೆ ನಾಲ್ಕನೇ ಕ್ರಮಾಂಕಕ್ಕೆ ಪಾಂಡೆಯೂ ಪ್ರತಿಸ್ಪರ್ಧಿಯಾಗಬಹುದೇ ಎಂಬ ಪ್ರಶ್ನೆಗೆ ಪ್ರಸಾದ್​ ಪ್ರತಿಕ್ರಿಯಿಸಿದ್ದು, ಪಾಂಡೆಯನ್ನು 5ನೇ ಕ್ರಮಾಂಕ ಅಥವಾ 6ನೇ ಕ್ರಮಾಂಕದಲ್ಲಿ ಆಡಿಸುವ ಯೋಜನೆಯಿದೆ ಎಂದು ಉತ್ತರಿಸಿದ್ದಾರೆ.

ಶ್ರೇಯಸ್​ ಅಯ್ಯರ್​ 6 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 2 ಅರ್ಧಶತಕ ಸಹಿತ 210 ರನ್​ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಸೇರಿವೆ.

ಮುಂಬೈ: ಭಾರತ ತಂಡದ ಉದಯೋನ್ಮುಖ ಬ್ಯಾಟ್ಸ್​ಮನ್ ಶ್ರೇಯಸ್​ ಅಯ್ಯರ್​ರಿಂದ ತಂಡದ ನಾಲ್ಕನೇ ಕ್ರಮಾಂಕದ ಸಮಸ್ಯೆ ಬಗೆಹರಿಯಲಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.​

ಭಾರತ ತಂಡದಲ್ಲಿ ಕಳೆದ 4 ವರ್ಷಗಳಿಂದ ಬಗೆಹರಿಯದ ಸಮಸ್ಯೆ ಎಂದರೆ ನಾಲ್ಕನೇ ಬ್ಯಾಟಿಂಗ್‌ ಕ್ರಮಾಂಕ. ಈ ಜಾಗಕ್ಕೆ ಸುಮಾರು 8ರಿಂದ 10 ಆಟಗಾರರನ್ನು ಬದಲಾಯಿಸಲಾಗಿದೆ. ಆದ್ರೆ, ಯಾರೂ ಶಾಶ್ವತವಾಗಲಿಲ್ಲ. ಈ ಸಮಸ್ಯೆ ವಿಶ್ವಕಪ್​ನಲ್ಲೂ ಮುಂದುವರಿದಿದ್ದು, ಕೆಲವು ಹಿರಿಯ ಆಟಗಾರರ ಮೇಲೆ ಆಯ್ಕೆ ಸಮಿತಿ ಕೆಂಗಣ್ಣು ಬೀರಿತ್ತು.

ಇದೀಗ ಆಯ್ಕೆ ಸಮಿತಿ ಮುಂಬೈನ ಶ್ರೇಯಸ್​ ಅಯ್ಯರ್​ರನ್ನು 4 ನೇ ಕ್ರಮಾಂಕಕ್ಕೆ ಅರ್ಹನಾದ ಆಟಗಾರ ಎಂದು ನಿರ್ಧರಿಸಿದ್ದು, 2023 ರ ವಿಶ್ವಕಪ್​ಗೆ ತಂಡವನ್ನು ಕಟ್ಟಬೇಕಿದೆ. ಹೀಗಾಗಿ ಸಮಿತಿ ಶ್ರೇಯಸ್​ ಅಯ್ಯರ್​ ಮೇಲೆ ವಿಶ್ವಾಸ ಇಟ್ಟಿದೆ. ಇವರಿಗೆ ಯುವ ಆಟಗಾರ ಶುಬಮನ್‌​ ಗಿಲ್​ ಕೂಡ ಪ್ರತಿಸ್ಪರ್ಧಿಯಾಗಿದ್ದಾರೆ. ಆದರೆ ಅವರಿಗೆ ನ್ಯೂಜಿಲ್ಯಾಂಡ್​ ವಿರುದ್ಧ ಸರಣಿಯಲ್ಲಿ ಅವಕಾಶ ನೀಡಲಾಗಿತ್ತು. ಅವರು ಟೀಂ​ ಇಂಡಿಯಾ ತಲುಪಲು ಇನ್ನಷ್ಟು ಸಮಯ ಕಾಯಬೇಕಿದೆ ಎಂದಿದ್ದಾರೆ.

Shreyas Iyer
ಶ್ರೇಯಸ್ ಅಯ್ಯರ್​

ಅಯ್ಯರ್​ ಹಾಗೂ ಗಿಲ್​ ಇಬ್ಬರೂ ಮನೀಷ್​ ಪಾಂಡೆ ನೇತೃತ್ವದಲ್ಲಿ ಇಂಡಿಯಾ ಎ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇವರ ಜೊತೆ ನಾಲ್ಕನೇ ಕ್ರಮಾಂಕಕ್ಕೆ ಪಾಂಡೆಯೂ ಪ್ರತಿಸ್ಪರ್ಧಿಯಾಗಬಹುದೇ ಎಂಬ ಪ್ರಶ್ನೆಗೆ ಪ್ರಸಾದ್​ ಪ್ರತಿಕ್ರಿಯಿಸಿದ್ದು, ಪಾಂಡೆಯನ್ನು 5ನೇ ಕ್ರಮಾಂಕ ಅಥವಾ 6ನೇ ಕ್ರಮಾಂಕದಲ್ಲಿ ಆಡಿಸುವ ಯೋಜನೆಯಿದೆ ಎಂದು ಉತ್ತರಿಸಿದ್ದಾರೆ.

ಶ್ರೇಯಸ್​ ಅಯ್ಯರ್​ 6 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 2 ಅರ್ಧಶತಕ ಸಹಿತ 210 ರನ್​ ಗಳಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಸೇರಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.