ETV Bharat / sports

ಅಂಡರ್​-19 ವಿಶ್ವಕಪ್​ನಲ್ಲಿ ಸೋಲು: ಪಿಸಿಬಿ ವಿರುದ್ಧ ಅಖ್ತರ್ ಕಿಡಿನುಡಿ

author img

By

Published : Feb 6, 2020, 9:38 PM IST

ಪಿಸಿಬಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪಾಕ್ ಮಾಜಿ ವೇಗಿ​ ಶೊಯೆಬ್ ಅಖ್ತರ್, ನಾವು ಅಂಡರ್​-19 ತಂಡದ ಬೆನ್ನಿಗೆ ನಿಂತಿದ್ದರೆ ಅವರು ಇಂತಾ ಪ್ರದರ್ಶನ ನೀಡುತಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ.

Shoaib Akhtar critical of PCB ,ಪಿಸಿಬಿ ವಿರುದ್ಧ ಅಖ್ತರ್ ಫುಲ್ ಗರಂ
ಸಿಬಿ ವಿರುದ್ಧ ಅಖ್ತರ್ ಫುಲ್ ಗರಂ

ಇಸ್ಲಮಾಬಾದ್: ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ 10 ವಿಕೆಟ್​ಗಳ ಸೋಲು ಅನುಭವಿಸಿದೆ. ಈ ಸೋಲಿನಿಂದ ಬೇಸರಗೊಂಡಿರುವ ಪಾಕ್ ಮಾಜಿ ಕ್ರಿಕೆಟರ್​ ಶೊಯೆಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • " class="align-text-top noRightClick twitterSection" data="">

ಪಿಸಿಬಿ ನಡೆಯನ್ನ ಟೀಕಿಸಿರುವ ಅಖ್ತರ್, ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ರಾಹುಲ್ ದ್ರಾವಿಡ್ ಅಂಡರ್​-19 ತಂಡಕ್ಕೆ ಕೋಚ್ ಆಗಿದ್ದರು. ಒಬ್ಬ ಉತ್ತಮ ಆಟಗಾರರನ್ನ ನೀವು ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿದಾಗ ಅದಕ್ಕೆ ತಕ್ಕ ಸಂಭಾವನೆ ನೀಡಬೇಕು ಎಂದು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

'ಪಿಸಿಬಿ, ಯೂನಿಸ್ ಖಾನ್​ರನ್ನ ಉನ್ನತ ಸ್ಥಾನಕ್ಕೆ ಆಯ್ಕೆಮಾಡಿದ್ದು, 15 ಲಕ್ಷ ರೂ ಕೊಡೋಕೆ ಆಗೋದಿಲ್ಲ, 13 ಲಕ್ಷ ರೂ ತೆಗೆದುಕೊಳ್ಳಿ ಎಂದು ಚೌಕಾಸಿ ಮಾಡುತ್ತಿದೆ. ಒಬ್ಬ ಸ್ಟಾರ್​ ಆಟಗಾರರನ್ನ ನಡೆಸಿಕೊಳ್ಳುವ ರೀತಿ ಸರೀನಾ? ಎಂದು ಪಿಸಿಬಿಯನ್ನ ಪ್ರಶ್ನೆ ಮಾಡಿದ್ದಾರೆ.

ನನ್ನನ್ನೂ ಸೇರಿದಂತೆ ಮೊಹಮ್ಮದ್ ಯೂಸುಫ್, ಯೂನಿಸ್ ಖಾನ್​ರಂತ ಹಲವು ಆಟಗಾರರಿದ್ದಾರೆ. ನಾವು ತಂಡಕ್ಕೆ ಸಹಾಯ ಮಾಡುತ್ತೇವೆ. ಒಂದು ವೇಳೆ ನಾವು ಅಂಡರ್​-19 ತಂಡದ ಬೆನ್ನಿಗೆ ನಿಂತಿದ್ದರೆ ಅವರು ಇಂತಾ ಪ್ರದರ್ಶನ ನೀಡುತಿದ್ರಾ? ಎಂದು ಅವರು ಕಿಡಿ ಕಾರಿದ್ದಾರೆ.

ಇಸ್ಲಮಾಬಾದ್: ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ 10 ವಿಕೆಟ್​ಗಳ ಸೋಲು ಅನುಭವಿಸಿದೆ. ಈ ಸೋಲಿನಿಂದ ಬೇಸರಗೊಂಡಿರುವ ಪಾಕ್ ಮಾಜಿ ಕ್ರಿಕೆಟರ್​ ಶೊಯೆಬ್ ಅಖ್ತರ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • " class="align-text-top noRightClick twitterSection" data="">

ಪಿಸಿಬಿ ನಡೆಯನ್ನ ಟೀಕಿಸಿರುವ ಅಖ್ತರ್, ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ರಾಹುಲ್ ದ್ರಾವಿಡ್ ಅಂಡರ್​-19 ತಂಡಕ್ಕೆ ಕೋಚ್ ಆಗಿದ್ದರು. ಒಬ್ಬ ಉತ್ತಮ ಆಟಗಾರರನ್ನ ನೀವು ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಿದಾಗ ಅದಕ್ಕೆ ತಕ್ಕ ಸಂಭಾವನೆ ನೀಡಬೇಕು ಎಂದು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

'ಪಿಸಿಬಿ, ಯೂನಿಸ್ ಖಾನ್​ರನ್ನ ಉನ್ನತ ಸ್ಥಾನಕ್ಕೆ ಆಯ್ಕೆಮಾಡಿದ್ದು, 15 ಲಕ್ಷ ರೂ ಕೊಡೋಕೆ ಆಗೋದಿಲ್ಲ, 13 ಲಕ್ಷ ರೂ ತೆಗೆದುಕೊಳ್ಳಿ ಎಂದು ಚೌಕಾಸಿ ಮಾಡುತ್ತಿದೆ. ಒಬ್ಬ ಸ್ಟಾರ್​ ಆಟಗಾರರನ್ನ ನಡೆಸಿಕೊಳ್ಳುವ ರೀತಿ ಸರೀನಾ? ಎಂದು ಪಿಸಿಬಿಯನ್ನ ಪ್ರಶ್ನೆ ಮಾಡಿದ್ದಾರೆ.

ನನ್ನನ್ನೂ ಸೇರಿದಂತೆ ಮೊಹಮ್ಮದ್ ಯೂಸುಫ್, ಯೂನಿಸ್ ಖಾನ್​ರಂತ ಹಲವು ಆಟಗಾರರಿದ್ದಾರೆ. ನಾವು ತಂಡಕ್ಕೆ ಸಹಾಯ ಮಾಡುತ್ತೇವೆ. ಒಂದು ವೇಳೆ ನಾವು ಅಂಡರ್​-19 ತಂಡದ ಬೆನ್ನಿಗೆ ನಿಂತಿದ್ದರೆ ಅವರು ಇಂತಾ ಪ್ರದರ್ಶನ ನೀಡುತಿದ್ರಾ? ಎಂದು ಅವರು ಕಿಡಿ ಕಾರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.