ನಾಗ್ಪುರ: ಬಾಂಗ್ಲಾದೇಶದ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಭಾರತ ತಂಡ 30 ರನ್ಗಳಿಂದ ಗೆದ್ದು ಬೀಗಿದೆ. ನಾಯಕ ಈ ಪಂದ್ಯವನ್ನು ಟಿ-20 ಇತಿಹಾಸದಲ್ಲೇ ಅತ್ಯಂತ ಅಪರೂಪದ ಜಯ ಎಂದಿದ್ದಾರೆ.
ಹೌದು, ಬಾಂಗ್ಲಾದೇಶ ಗೆಲುವಿಗೆ 8 ಓವರ್ಗಳಲ್ಲಿ 69 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್ಮನ್ ಮೊಹಮ್ಮದ್ ನಯೀಮ್ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದರೆ ಅವರಿಗೆ ಸಾಥ್ ನೀಡಿದ್ದ ಮೊಹಮ್ಮದ್ ಮಿಥುನ್ 27 ರನ್ ಗಳಿಸಿ 3ನೇ ವಿಕೆಟ್ಗೆ 98 ರನ್ಗಳ ಜೊತೆಯಾಟ ನೀಡಿದ್ದರು.
ಕೈಯಲ್ಲಿ ಇನ್ನು 8 ವಿಕೆಟ್ ಇದ್ದ ಬಾಂಗ್ಲಾದೇಶ ನಿಜಕ್ಕೂ ಐತಿಹಾಸಿಕ ಗೆಲುವಿನ ಕನಸು ಕಾಣುತ್ತಿತ್ತು. ಇದರ ಮಧ್ಯೆ ತಮ್ಮ ಎರಡನೇ ಸ್ಪೆಲ್ ಎಸೆಯಲು ಬಂದ ಚಹಾರ್ ಮಿಥುನ್ ವಿಕೆಟ್ ಪಡೆದರು. ನಂತರದ ಓವರ್ನಲ್ಲಿ ಶಿವಂ ದುಬೆ 81 ರನ್ ಗಳಿಸಿದ್ದ ನಯೀಮ್ ವಿಕೆಟ್ ಪಡೆದರು. ಇಲ್ಲಿಂದ ಚೇತರಿಸಿಕೊಳ್ಳಲಾಗದ ಬಾಂಗ್ಲಾ, ಚಹಾರ್ ಹಾಗೂ ದುಬೆ ಬೌಲಿಂಗ್ ದಾಳಿಗೆ ಸಿಲುಕಿ 144 ರನ್ಗಳಿಗೆ ಆಲೌಟ್ ಆಗುವ ಮೂಲಕ 30 ರನ್ಗಳಿಂದ ಸೋಲೊಪ್ಪಿಕೊಂಡಿತು.
- ' class='align-text-top noRightClick twitterSection' data=''>
ಪಂದ್ಯದ ನಂತರ ಮಾತನಾಡಿದ ನಾಯಕ ರೋಹಿತ್ ಶರ್ಮಾ," ಈ ಪಂದ್ಯವನ್ನು ಬೌಲರ್ಗಳು ಗೆಲ್ಲಿಸಿಕೊಟ್ಟರು. ಹಿಮ ಬೀಳುವ ಸಂದರ್ಭದಲ್ಲಿ ಬೌಲಿಂಗ್ ಮಾಡುವುದು ಕಷ್ಟ ಎಂಬುದು ನನಗೆ ಗೊತ್ತಿದೆ. ಈ ದಿನ ಭಾರತ ಚರಿತ್ರೆಯಲ್ಲಿ ಸೋಲುವ ಪಂದ್ಯವನ್ನು ಬೌಲರ್ಗಳು ಗೆಲ್ಲುವ ಪಂದ್ಯವಾಗಿ ಮಾರ್ಪಡಿಸಿದರು. ಇದು ಬಾಂಗ್ಲಾಕ್ಕೆ ಸುಲಭದ ಜಯವಾಗಿತ್ತು. ಆದರೆ ನಮ್ಮ ಬೌಲರ್ಗಳು ಜವಾಬ್ದಾರಿ ತೆಗೆದುಕೊಂಡು ತಮ್ಮ ಚಾಣಾಕ್ಷತನ ಪ್ರದರ್ಶಿಸಿದರು. ಯುವ ಆಟಗಾರರ ಸಾಮರ್ಥ್ಯ ನೋಡಿ ಬಹಳ ಖುಷಿಯಾಗಿದೆ" ಎಂದು ತಿಳಿಸಿದ್ದಾರೆ.
ಆರಂಭದಲ್ಲಿ ಭಾರತ ತಂಡ ರೋಹಿತ್ ಹಾಗೂ ಧವನ್ ವಿಕೆಟ್ ಕಳೆದುಕೊಂಡರೂ ಯುವ ಆಟಗಾರರಾದ ರಾಹುಲ್(52), ಶ್ರೇಯಸ್ ಅಯ್ಯರ್(62) ತಂಡಕ್ಕೆ ಉತ್ತಮ ಜೊತೆಯಾಟ ನೀಡಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಇನ್ನು ಬೌಲಿಂಗ್ನಲ್ಲಿ ದೀಪಕ್ ಚಹಾರ್ ಚಮತ್ಕಾರ ಮಾಡಿ ಕೇವಲ 7 ರನ್ ನೀಡಿ ವಿಶ್ವದಾಖಲೆಯ 6 ವಿಕೆಟ್ ಪಡೆದು ಭಾರತಕ್ಕೆ ಸರಣಿ ಜಯ ತಂದುಕೊಟ್ಟರು.