ETV Bharat / sports

ಪಿಚ್​ ಸರಿಯಾಗಿದೆ, ನಮ್ಮ ಬ್ಯಾಟ್ಸ್​ಮನ್​ಗಳ ತಪ್ಪಿನಿಂದ ವಿಕೆಟ್​ ಕೈಚೆಲ್ಲಿದೆವು: ಹನುಮ ವಿಹಾರಿ

author img

By

Published : Feb 29, 2020, 8:08 PM IST

ಭಾರತ ತಂಡ ಉತ್ತಮ ಆರಂಭ ಪಡೆಯಿತಾದರೂ ಕೊನೆಯ 48 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ನಿರಾಶೆ ಮೂಡಿಸಿತು. ಇದಕ್ಕೆ ಪ್ರತಿಕ್ರಿಯಿಸಿರುವ ವಿಹಾರಿ ನಮ್ಮ ತಂಡದ ಬ್ಯಾಟ್ಸ್​ಮನ್​ಗಳ ಕೆಲವು ತಪ್ಪುಗಳಿಂದಲೇ ಹೆಚ್ಚು ವಿಕೆಟ್​ ಕಳೆದುಕೊಂಡೆವು ಎಂದಿದ್ದಾರೆ.

New Zealand vs India
New Zealand vs India

ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡ್​ ವಿರುದ್ಧ ಮತ್ತೆ ಕಡಿಮೆ ಮೊತ್ತಕ್ಕೆ ಆಲೌಟ್​ ಆಗಿದ್ದು, ನಮ್ಮ ತಂಡದ ಬ್ಯಾಟ್ಸ್​ಮನ್​ಗಳ ಬೇಜವಾಬ್ದಾರಿಯಿಂದ ಎಂದು ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಹನುಮ ವಿಹಾರಿ ದೂರಿದ್ದಾರೆ.

ಭಾರತ ತಂಡ ಉತ್ತಮ ಆರಂಭ ಪಡೆಯಿತಾದರೂ ಕೊನೆಯ 48 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ನಿರಾಶೆ ಮೂಡಿಸಿತು. ಇದಕ್ಕೆ ಪ್ರತಿಕ್ರಿಯಿಸಿರುವ ವಿಹಾರಿ ನಮ್ಮ ತಂಡದ ಬ್ಯಾಟ್ಸ್​ಮನ್​ಗಳ ಕೆಲವು ತಪ್ಪುಗಳಿಂದಲೇ ಹೆಚ್ಚು ವಿಕೆಟ್​ ಕಳೆದುಕೊಂಡೆವು ಎಂದಿದ್ದಾರೆ.

New Zealand vs India
ಪೃಥ್ವಿ ಶಾ

"ಪೃಥ್ವಿ ಶಾ ಆರಂಭದಲ್ಲಿ ಉತ್ತಮವಾಗಿ ಬ್ಯಾಟಿಂಗ್​ ನಡೆಸಿ 100 ರನ್ ದಾಟಲು ನೆರವಾದರು. ಪೂಜಾರ ತಮ್ಮ ಅನುಭವದಿಂದ ಕ್ರೀಸ್​ನಲ್ಲಿ ಹೆಚ್ಚು ಸಮಯ ಕಳೆದರು. ಆದರೆ, ನಾವು ಮೂವರು ತಂಡಕ್ಕೆ ನಮ್ಮ ಅಗತ್ಯವಿದ್ದ ಸಂದರ್ಭದಲ್ಲಿ ವಿಕೆಟ್​ ಒಪ್ಪಿಸಿದೆವು. ಆದರೆ, ನಾವು ವಿಕೆಟ್​ ಕಳೆದುಕೊಳ್ಳಲು ಪಿಚ್​ ಕಾರಣ ಎನ್ನುವುದು ಸರಿಯಲ್ಲ. ಬ್ಯಾಟ್ಸ್​ಮನ್​ಗಳು ಮಾಡಿದ ತಪ್ಪಿನಿಂದ ವಿಕೆಟ್​ ಕಳೆದುಕೊಂಡೆವು" ಎಂದಿದ್ದಾರೆ.

New Zealand vs India
ಪೂಜಾರ

ನನ್ನ ಪ್ರಕಾರ ಈ ಮೈದಾನದಲ್ಲಿ 300 ರನ್​ ಗೌರವಯುತ ಮೊತ್ತವಾಗಿತ್ತು. ಕಡಿಮೆ ಮೊತ್ತಕೆ ಆಲೌಟ್​ ಆದರೂ ನಾವೂ ವೆಲ್ಲಿಂಗ್ಟನ್​ಗಿಂತ ಇಲ್ಲಿ ಉತ್ತಮವಾಗಿ ಆಡಿದ್ದೇವೆ ಎಂದು ಭಾವಿಸಿದ್ದೇನೆ. ಈ ಧನಾತ್ಮಕ ಅಂಶದಿಂದ ನಾವು ಎರಡನೇ ಇನ್ನಿಂಗ್ಸ್​ನಲ್ಲಿ ಉತ್ತಮವಾಗಿ ಆಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇನ್ನು ನ್ಯೂಜಿಲ್ಯಾಂಡ್​ ತಂಡ ಯಾವುದೇ ವಿಕೆಟ್​ ನಷ್ಟವಿಲ್ಲದೇ 63 ರನ್​ಗಳಿಸಿದೆ. ಆದರೆ, ಭಾರತದ ಬೌಲರ್​ಗಳ ಪರ ಮಾತನಾಡಿರುವ ವಿಹಾರಿ," ಸ್ಕೋರ್​ಬೋರ್ಡ್​ ನಾವು ಬೌಲಿಂಗ್​ ಮಾಡಿದ ವಿಧಾನವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಇಂದು ಉತ್ತಮ ಪ್ರದೇಶಗಳಲ್ಲಿ ಬೌಲಿಂಗ್​ ಮಾಡಿದ್ದೇವೆ. ನಾವು ಒಂದು ಉತ್ತಮ ಬೌಲಿಂಗ್ ಘಟಕ ಹೊಂದಿರುವ ತಂಡವಾಗಿದ್ದು, ನಾಳೆ ಪ್ರತಿ ಬ್ಯಾಟ್ಸ್​ಮನ್​ಗಳಿಗೆ ಪ್ರತ್ಯೇಕ ಯೋಜನೆಗಳನ್ನು ಹೊಂದಿದ್ದೇವೆ. ಆದಷ್ಟು ಬೇಗ ವಿಕೆಟ್​ ಪಡೆಯಲು ಪ್ರಯತ್ನಿಸಲಿದ್ದೇವೆ ಎಂದು ಎಂದು ವಿಹಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡ್​ ವಿರುದ್ಧ ಮತ್ತೆ ಕಡಿಮೆ ಮೊತ್ತಕ್ಕೆ ಆಲೌಟ್​ ಆಗಿದ್ದು, ನಮ್ಮ ತಂಡದ ಬ್ಯಾಟ್ಸ್​ಮನ್​ಗಳ ಬೇಜವಾಬ್ದಾರಿಯಿಂದ ಎಂದು ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಹನುಮ ವಿಹಾರಿ ದೂರಿದ್ದಾರೆ.

ಭಾರತ ತಂಡ ಉತ್ತಮ ಆರಂಭ ಪಡೆಯಿತಾದರೂ ಕೊನೆಯ 48 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡು ನಿರಾಶೆ ಮೂಡಿಸಿತು. ಇದಕ್ಕೆ ಪ್ರತಿಕ್ರಿಯಿಸಿರುವ ವಿಹಾರಿ ನಮ್ಮ ತಂಡದ ಬ್ಯಾಟ್ಸ್​ಮನ್​ಗಳ ಕೆಲವು ತಪ್ಪುಗಳಿಂದಲೇ ಹೆಚ್ಚು ವಿಕೆಟ್​ ಕಳೆದುಕೊಂಡೆವು ಎಂದಿದ್ದಾರೆ.

New Zealand vs India
ಪೃಥ್ವಿ ಶಾ

"ಪೃಥ್ವಿ ಶಾ ಆರಂಭದಲ್ಲಿ ಉತ್ತಮವಾಗಿ ಬ್ಯಾಟಿಂಗ್​ ನಡೆಸಿ 100 ರನ್ ದಾಟಲು ನೆರವಾದರು. ಪೂಜಾರ ತಮ್ಮ ಅನುಭವದಿಂದ ಕ್ರೀಸ್​ನಲ್ಲಿ ಹೆಚ್ಚು ಸಮಯ ಕಳೆದರು. ಆದರೆ, ನಾವು ಮೂವರು ತಂಡಕ್ಕೆ ನಮ್ಮ ಅಗತ್ಯವಿದ್ದ ಸಂದರ್ಭದಲ್ಲಿ ವಿಕೆಟ್​ ಒಪ್ಪಿಸಿದೆವು. ಆದರೆ, ನಾವು ವಿಕೆಟ್​ ಕಳೆದುಕೊಳ್ಳಲು ಪಿಚ್​ ಕಾರಣ ಎನ್ನುವುದು ಸರಿಯಲ್ಲ. ಬ್ಯಾಟ್ಸ್​ಮನ್​ಗಳು ಮಾಡಿದ ತಪ್ಪಿನಿಂದ ವಿಕೆಟ್​ ಕಳೆದುಕೊಂಡೆವು" ಎಂದಿದ್ದಾರೆ.

New Zealand vs India
ಪೂಜಾರ

ನನ್ನ ಪ್ರಕಾರ ಈ ಮೈದಾನದಲ್ಲಿ 300 ರನ್​ ಗೌರವಯುತ ಮೊತ್ತವಾಗಿತ್ತು. ಕಡಿಮೆ ಮೊತ್ತಕೆ ಆಲೌಟ್​ ಆದರೂ ನಾವೂ ವೆಲ್ಲಿಂಗ್ಟನ್​ಗಿಂತ ಇಲ್ಲಿ ಉತ್ತಮವಾಗಿ ಆಡಿದ್ದೇವೆ ಎಂದು ಭಾವಿಸಿದ್ದೇನೆ. ಈ ಧನಾತ್ಮಕ ಅಂಶದಿಂದ ನಾವು ಎರಡನೇ ಇನ್ನಿಂಗ್ಸ್​ನಲ್ಲಿ ಉತ್ತಮವಾಗಿ ಆಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇನ್ನು ನ್ಯೂಜಿಲ್ಯಾಂಡ್​ ತಂಡ ಯಾವುದೇ ವಿಕೆಟ್​ ನಷ್ಟವಿಲ್ಲದೇ 63 ರನ್​ಗಳಿಸಿದೆ. ಆದರೆ, ಭಾರತದ ಬೌಲರ್​ಗಳ ಪರ ಮಾತನಾಡಿರುವ ವಿಹಾರಿ," ಸ್ಕೋರ್​ಬೋರ್ಡ್​ ನಾವು ಬೌಲಿಂಗ್​ ಮಾಡಿದ ವಿಧಾನವನ್ನು ಪ್ರತಿಬಿಂಬಿಸುವುದಿಲ್ಲ. ನಾವು ಇಂದು ಉತ್ತಮ ಪ್ರದೇಶಗಳಲ್ಲಿ ಬೌಲಿಂಗ್​ ಮಾಡಿದ್ದೇವೆ. ನಾವು ಒಂದು ಉತ್ತಮ ಬೌಲಿಂಗ್ ಘಟಕ ಹೊಂದಿರುವ ತಂಡವಾಗಿದ್ದು, ನಾಳೆ ಪ್ರತಿ ಬ್ಯಾಟ್ಸ್​ಮನ್​ಗಳಿಗೆ ಪ್ರತ್ಯೇಕ ಯೋಜನೆಗಳನ್ನು ಹೊಂದಿದ್ದೇವೆ. ಆದಷ್ಟು ಬೇಗ ವಿಕೆಟ್​ ಪಡೆಯಲು ಪ್ರಯತ್ನಿಸಲಿದ್ದೇವೆ ಎಂದು ಎಂದು ವಿಹಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.