ETV Bharat / sports

2019ರ ವಿಶ್ವಕಪ್​ನ ಮರೆಯಲಾಗದ ಕ್ಷಣ​ ನನೆಪಿಸಿಕೊಂಡ ಜಿಮ್ಮಿ ನಿಶಾಮ್​​​!

author img

By

Published : Jun 3, 2020, 9:44 PM IST

2019ರ ವಿಶ್ವಕಪ್​ ಸೆಮಿಫೈನಲ್​ನ ಭಾರತದ ವಿರುದ್ಧದ ಪಂದ್ಯದಲ್ಲಿ ತಂಡದ ಜೊತೆ ಡ್ರೆಸ್ಸಿಂಗ್​ ರೂಂ ಹಂಚಿಕೊಂಡಿದ್ದು ಮರೆಯಲಾಗದ ಕ್ಷಣವಾಗಿತ್ತು ಎಂದು ಕಿವೀಸ್​ ಆಲ್​ರೌಂಡರ್​ ಜಿಮ್ಮಿ ನಿಶಾಮ್ ಹೇಳಿದ್ದಾರೆ.

Jimmy Neesham 2019 World Cup memory
2019 ರ ವಿಶ್ವಕಪ್​ನ ಮರೆಯಲಾಗದ ಕ್ಷಣ​ ಬಿಚ್ಚಿಟ್ಟ ಜಿಮ್ಮಿ ನಿಶಾಮ್..!

ನವದೆಹಲಿ: ಸೆಮಿಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ನಂತರ ತನ್ನ ಟೀಂ ಮೇಟ್​ಗಳ​ ಜೊತೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದು 2019ರ ವಿಶ್ವಕಪ್‌ ನನ್ನ ನೆಚ್ಚಿನ ನೆನಪುಗಳಲ್ಲಿ ಒಂದು ಎಂದು ಕಿವೀಸ್​ ಆಲ್‌ರೌಂಡರ್ ಜಿಮ್ಮಿ ನಿಶಾಮ್ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಿಂಗ್ಸ್ ಇಲೆವೆನ್ ಪಂಜಾಬ್​ನ ಅಧಿಕೃತ ಟ್ವಿಟರ್​ ಹ್ಯಾಂಡಲ್​​ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ನಿಶಾಮ್ ಈ ರೀತಿ ಉತ್ತರಿಸಿದ್ದಾರೆ. ಓಲ್ಡ್ ಟ್ರ್ಯಾಫೋರ್ಡ್​ನಲ್ಲಿ ನಡೆದ​ ಪಂದ್ಯ ಮೊದಲ ದಿನ ಮಳೆಯಿಂದ ರದ್ದಾದ ಹಿನ್ನೆಲೆ ಪಂದ್ಯವನ್ನು ಮಾರನೇ ದಿನಕ್ಕೆ ಮುಂದೂಡಲಾಗಿತ್ತು.

  • Sitting in the changing room with the guys after the semifinal against India https://t.co/uP5lp5ygLp

    — Kings XI Punjab (@lionsdenkxip) June 2, 2020 " class="align-text-top noRightClick twitterSection" data="

Sitting in the changing room with the guys after the semifinal against India https://t.co/uP5lp5ygLp

— Kings XI Punjab (@lionsdenkxip) June 2, 2020 ">

ಮೊದಲು ಬ್ಯಾಟ್ ಮಾಡಿದ ಕಿವೀಸ್​ 8 ವಿಕೆಟ್​ ನಷ್ಟಕ್ಕೆ ಕೇವಲ 239 ರನ್​ ಗಳಿಸಲಷ್ಟೆ ಶಕ್ತವಾಗಿತ್ತು. ಸುಲಭದ ಗುರಿ ಬೆನ್ನಟ್ಟಿದ ಭಾರತ ತಂಡ ಮ್ಯಾಟ್​ ಹೆನ್ರಿ ಮತ್ತು ಟ್ರೆಂಟ್​ ಬೋಲ್ಟ್​​ ದಾಳಿಯನ್ನು ಎದುರಿಸಲಾಗದೆ 96 ರನ್​ ಗಳಿವಷ್ಟರಲ್ಲಿ ಪ್ರಮುಖ 6 ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾದ ಬಳಿಕ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಆಲ್​ರೌಂಡರ್​ ರವೀಂದ್ರ ಜಡೇಜ 116 ರನ್​ ಜೊತೆಯಾಟವಾಡುವ ಮೂಲಕ ತಂಡದ ಗೆಲುವಿನ ಆಸೆಯನ್ನು ಚಿಗುರಿಸಿದರು. ಆದರೆ, ಬಳಿಕ 59 ಎಸೆತಕ್ಕೆ 77 ರನ್ ಗಳಿಸಿದ ರವೀಂದ್ರ ಜಡೇಜ ಪೆವಿಲಯನ್​ನತ್ತ ಹೆಜ್ಜೆ ಹಾಕಿದ್ದರು. ನಂತರ 49 ಓವರ್​ನಲ್ಲಿ ಧೋನಿ ರನೌಟ್​ ಆಗುವ ಮೂಲಕ ಕಿವೀಸ್​ ಜಯ ಖಚಿತವಾಗಿತ್ತು.

ನವದೆಹಲಿ: ಸೆಮಿಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ನಂತರ ತನ್ನ ಟೀಂ ಮೇಟ್​ಗಳ​ ಜೊತೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದು 2019ರ ವಿಶ್ವಕಪ್‌ ನನ್ನ ನೆಚ್ಚಿನ ನೆನಪುಗಳಲ್ಲಿ ಒಂದು ಎಂದು ಕಿವೀಸ್​ ಆಲ್‌ರೌಂಡರ್ ಜಿಮ್ಮಿ ನಿಶಾಮ್ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಿಂಗ್ಸ್ ಇಲೆವೆನ್ ಪಂಜಾಬ್​ನ ಅಧಿಕೃತ ಟ್ವಿಟರ್​ ಹ್ಯಾಂಡಲ್​​ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ನಿಶಾಮ್ ಈ ರೀತಿ ಉತ್ತರಿಸಿದ್ದಾರೆ. ಓಲ್ಡ್ ಟ್ರ್ಯಾಫೋರ್ಡ್​ನಲ್ಲಿ ನಡೆದ​ ಪಂದ್ಯ ಮೊದಲ ದಿನ ಮಳೆಯಿಂದ ರದ್ದಾದ ಹಿನ್ನೆಲೆ ಪಂದ್ಯವನ್ನು ಮಾರನೇ ದಿನಕ್ಕೆ ಮುಂದೂಡಲಾಗಿತ್ತು.

ಮೊದಲು ಬ್ಯಾಟ್ ಮಾಡಿದ ಕಿವೀಸ್​ 8 ವಿಕೆಟ್​ ನಷ್ಟಕ್ಕೆ ಕೇವಲ 239 ರನ್​ ಗಳಿಸಲಷ್ಟೆ ಶಕ್ತವಾಗಿತ್ತು. ಸುಲಭದ ಗುರಿ ಬೆನ್ನಟ್ಟಿದ ಭಾರತ ತಂಡ ಮ್ಯಾಟ್​ ಹೆನ್ರಿ ಮತ್ತು ಟ್ರೆಂಟ್​ ಬೋಲ್ಟ್​​ ದಾಳಿಯನ್ನು ಎದುರಿಸಲಾಗದೆ 96 ರನ್​ ಗಳಿವಷ್ಟರಲ್ಲಿ ಪ್ರಮುಖ 6 ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾದ ಬಳಿಕ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಆಲ್​ರೌಂಡರ್​ ರವೀಂದ್ರ ಜಡೇಜ 116 ರನ್​ ಜೊತೆಯಾಟವಾಡುವ ಮೂಲಕ ತಂಡದ ಗೆಲುವಿನ ಆಸೆಯನ್ನು ಚಿಗುರಿಸಿದರು. ಆದರೆ, ಬಳಿಕ 59 ಎಸೆತಕ್ಕೆ 77 ರನ್ ಗಳಿಸಿದ ರವೀಂದ್ರ ಜಡೇಜ ಪೆವಿಲಯನ್​ನತ್ತ ಹೆಜ್ಜೆ ಹಾಕಿದ್ದರು. ನಂತರ 49 ಓವರ್​ನಲ್ಲಿ ಧೋನಿ ರನೌಟ್​ ಆಗುವ ಮೂಲಕ ಕಿವೀಸ್​ ಜಯ ಖಚಿತವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.