ETV Bharat / sports

ಧೋನಿ ಜೊತೆ ಬ್ಯಾಟಿಂಗ್ ಆಡಬೇಕು ಎಂಬ ನನ್ನ ಬಹುದಿನದ ಕನಸು ನನಸಾಯಿತು: ಗಾಯಕ್ವಾಡ್

author img

By

Published : Oct 26, 2020, 5:47 PM IST

ಐಪಿಎಲ್​ನ 45ನೇ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭಿವಿಸಿ ಕೇವಲ 145 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಸಿಎಸ್​ಕೆ ಗಾಯಕ್ವಾಡ್(65)​ ಅವರ ಅಜೇಯ ಅರ್ಧಶತಕದ ನೆರವಿನಿಂದ ಇನ್ನು 8 ಎಸೆತಗಳು ಬಾಕಿ ಇರುವಂತೆ ಗೆಲುವು ಸಾಧಿಸಿತ್ತು.

ಎಂಎಸ್ ಧೋನಿ- ರುತುರಾಜ್
ಎಂಎಸ್ ಧೋನಿ- ರುತುರಾಜ್

ದುಬೈ: ಭಾನುವಾರ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಸಿಡಿಸಿ ಸಿಎಸ್​ಗೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರುತುರಾಜ್ ಧೋನಿ ಜೊತೆ ಬ್ಯಾಟಿಂಗ್ ಆಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಐಪಿಎಲ್​ನ 45ನೇ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 145 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಸಿಎಸ್​ಕೆ ಗಾಯಕ್ವಾಡ್(65)​ ಅವರ ಅಜೇಯ ಅರ್ಧಶತಕದ ನೆರವಿನಿಂದ ಇನ್ನು 8 ಎಸೆತಗಳು ಬಾಕಿ ಇರುವಂತೆ ಗೆಲುವು ಸಾಧಿಸಿತ್ತು.

ಸತತ ಸೋಲು, ಹೀನಾಯ ಪ್ರದರ್ಶನದಿಂದ ಬೇಸತ್ತಿದ್ದ ಚೆನ್ನೈ ತಂಡ ಈ ಗೆಲುವಿನ ಮೂಲಕ ಸ್ವಲ್ಪ ನಗುಮುಖ ಕಾಣುವಂತಾಯಿತು. ಅದರಲ್ಲೂ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ್ದಕ್ಕೆ ಚೆನ್ನೈ ತಂಡ ಸೋಲಿನ ಕಹಿಗಳನ್ನು ಮರೆಯುವಂತೆ ಮಾಡಿತ್ತು. ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ದ ಗಾಯಕ್ವಾಡ್‌ ಕೂಡ ಗೆಲುವಿನ ಜೊತೆಗೆ ಧೋನಿ ಆಡಿದ್ದನ್ನು ಸಂಭ್ರಮ ವ್ಯಕ್ತಪಡಿಸಿದ್ದಾರೆ.

" ಅರ್ಧಶತಕ ಸಿಡಿಸಿಉದ ವೈಯಕ್ತಕ ಸಾಧನೆಗಿಂತ ತಂಡ ಗೆಲುವು ಸಾಧಿಸಿದ್ದಕ್ಕೆ ಹೆಚ್ಚು ಸಂತೋಷವಾಗಿದೆ. ಚೆನ್ನೈನಲ್ಲಿ ಕ್ಯಾಂಪ್​ ಆರಂಭವಾದಾಗ ನನಗೆ ತಂಡದಲ್ಲಿ ಆಡುವ ಅವಕಾಶ ಹಾಗೂ ಧೋನಿ ಭಾಯ್ ಜೊತೆ ಬ್ಯಾಟಿಂಗ್ ಆಡುತ್ತೇನೆಂಬ ಭರವಸೆಯಿತ್ತು. ಅದು ಈ ಪಂದ್ಯದಲ್ಲಿ ನನಸಾಗಿದೆ. ಮಹಿ ಭಾಯ್​ ಜೊತೆ ಬ್ಯಾಟಿಂಗ್ ನಡೆಸಿದ್ದು, ಮುಂದಿನ ಪಂದ್ಯದಲ್ಲಿ ಗಮನ ಹರಿಸಲು ನನಗೆ ತುಂಬಾ ಅನುಕೂಲವಾಗಲಿದೆ" ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಗಾಯಕ್ವಾಡ್​ ಹೇಳಿದ್ದಾರೆ.

ದುಬೈ: ಭಾನುವಾರ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಅದ್ಭುತ ಅರ್ಧಶತಕ ಸಿಡಿಸಿ ಸಿಎಸ್​ಗೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರುತುರಾಜ್ ಧೋನಿ ಜೊತೆ ಬ್ಯಾಟಿಂಗ್ ಆಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಐಪಿಎಲ್​ನ 45ನೇ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 145 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಸಿಎಸ್​ಕೆ ಗಾಯಕ್ವಾಡ್(65)​ ಅವರ ಅಜೇಯ ಅರ್ಧಶತಕದ ನೆರವಿನಿಂದ ಇನ್ನು 8 ಎಸೆತಗಳು ಬಾಕಿ ಇರುವಂತೆ ಗೆಲುವು ಸಾಧಿಸಿತ್ತು.

ಸತತ ಸೋಲು, ಹೀನಾಯ ಪ್ರದರ್ಶನದಿಂದ ಬೇಸತ್ತಿದ್ದ ಚೆನ್ನೈ ತಂಡ ಈ ಗೆಲುವಿನ ಮೂಲಕ ಸ್ವಲ್ಪ ನಗುಮುಖ ಕಾಣುವಂತಾಯಿತು. ಅದರಲ್ಲೂ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ್ದಕ್ಕೆ ಚೆನ್ನೈ ತಂಡ ಸೋಲಿನ ಕಹಿಗಳನ್ನು ಮರೆಯುವಂತೆ ಮಾಡಿತ್ತು. ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ದ ಗಾಯಕ್ವಾಡ್‌ ಕೂಡ ಗೆಲುವಿನ ಜೊತೆಗೆ ಧೋನಿ ಆಡಿದ್ದನ್ನು ಸಂಭ್ರಮ ವ್ಯಕ್ತಪಡಿಸಿದ್ದಾರೆ.

" ಅರ್ಧಶತಕ ಸಿಡಿಸಿಉದ ವೈಯಕ್ತಕ ಸಾಧನೆಗಿಂತ ತಂಡ ಗೆಲುವು ಸಾಧಿಸಿದ್ದಕ್ಕೆ ಹೆಚ್ಚು ಸಂತೋಷವಾಗಿದೆ. ಚೆನ್ನೈನಲ್ಲಿ ಕ್ಯಾಂಪ್​ ಆರಂಭವಾದಾಗ ನನಗೆ ತಂಡದಲ್ಲಿ ಆಡುವ ಅವಕಾಶ ಹಾಗೂ ಧೋನಿ ಭಾಯ್ ಜೊತೆ ಬ್ಯಾಟಿಂಗ್ ಆಡುತ್ತೇನೆಂಬ ಭರವಸೆಯಿತ್ತು. ಅದು ಈ ಪಂದ್ಯದಲ್ಲಿ ನನಸಾಗಿದೆ. ಮಹಿ ಭಾಯ್​ ಜೊತೆ ಬ್ಯಾಟಿಂಗ್ ನಡೆಸಿದ್ದು, ಮುಂದಿನ ಪಂದ್ಯದಲ್ಲಿ ಗಮನ ಹರಿಸಲು ನನಗೆ ತುಂಬಾ ಅನುಕೂಲವಾಗಲಿದೆ" ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಗಾಯಕ್ವಾಡ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.