ETV Bharat / sports

'ಭಾರತದಲ್ಲಿ 1.5 ಬಿಲಿಯನ್‌ ಜನರಿದ್ದಾರೆ, ಅಲ್ಲಿಂದ ಬಂದಿರುವ 11 ಮಂದಿಯೆದುರು ಆಡುವುದು ಕಠಿಣ'

author img

By

Published : Jan 19, 2021, 8:40 PM IST

ಅಡಿಲೇಡ್​ನಲ್ಲಿ ಟೀಂ ಇಂಡಿಯಾ 36 ರನ್​ಗಳಿಗೆ ಆಲೌಟ್​ ಆಗಿ ಅಡಿಮೇಲಾಗಿತ್ತು. ಆದರೆ ನಂತರ ಗಾಯಕ್ಕೊಳಗಾಗಿ ಎರಡನೇ ದರ್ಜೆಯ ತಂಡ ಸರಣಿಯ ಮುಂದಿನ ಪಂದ್ಯಗಳಲ್ಲಿ ದೈರ್ಯ ಮತ್ತು ದೃಢ ಸಂಕಲ್ಪದಿಂದ ಹೋರಾಡಿ 2-1ರಲ್ಲಿ ಬಾರ್ಡರ್-ಗಾವಸ್ಕರ್ ಟೆಸ್ಟ್​ ಸರಣಿಯನ್ನು ಗೆದ್ದಿರುವುದಕ್ಕೆ ಆಸ್ಟ್ರೇಲಿಯಾ ಕೋಚ್‌ ಲ್ಯಾಂಗರ್​ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಭಾರತ ಆಸ್ಟ್ರೇಲಿಯಾ ಟೆಸ್ಟ್​ ಸರಣಿ
ಜಸ್ಟಿನ್ ಲ್ಯಾಂಗರ್​

ಬ್ರಿಸ್ಬೇನ್​: ಗಾಯದಿಂದ ತೀವ್ರ ತೊಂದರೆ ಅನುಭವಿಸಿದ್ದ ಹಾಗೂ ಅನನುಭವಿ ಆಟಗಾರರನ್ನು ಒಳಗೊಂಡ ಭಾರತ ತಂಡದ ವಿರೋಚಿತ ಪ್ರದರ್ಶನ ಆಸ್ಟ್ರೇಲಿಯಾ ಕೋಚ್​ ನಿದ್ದೆಗೆಡಿಸಿದೆ. ಈ ಸರಣಿಯ ಸೋಲು ನಮಗೆ ದೊಡ್ಡ ಪಾಠ ಕಲಿಸಿದ್ದು, ಎಂದೆಂದಿಗೂ ಭಾರತ ತಂಡವನ್ನು ಕಡೆಗಣಿಸಬಾರದು ಎಂದು ಅವರು ಹೇಳಿದ್ದಾರೆ.

ಇದು ನಂಬಲಾಗದ ಟೆಸ್ಟ್ ಸರಣಿ. ಕೊನೆಯಲ್ಲಿ ಸೋಲು, ಗೆಲುವು ಸಹಜ. ಆದರೆ, ಈ ದಿನ ಟೆಸ್ಟ್‌ ಕ್ರಿಕೆಟ್‌ ಗೆದ್ದಿದೆ. ಈ ಸೋಲಿನ ನೋವು ನಮ್ಮನ್ನು ದೀರ್ಘಕಾಲ ಕಾಡಲಿದೆ. ಭಾರತ ಖಂಡಿತ ಗೆಲುವಿನ ಶ್ರೇಯಕ್ಕೆ ಅರ್ಹವಾಗಿದೆ. ಅವರು ಅದ್ಭುತ ಪ್ರದರ್ಶನ ತೋರಿದ್ದಾರೆ. ಆದರೆ ನಾವು ಇದರಿಂದ ದೊಡ್ದ ಪಾಠ ಕಲಿತಿದ್ದೇವೆ ಎಂದು ಲ್ಯಾಂಗರ್​ ಚಾನೆಲ್​ 7 ಜೊತೆ ಮಾತನಾಡುವ ವೇಳೆ ತಿಳಿಸಿದ್ದಾರೆ.

ರಿಷಭ್ ಪಂತ್
ರಿಷಭ್ ಪಂತ್ ಆಟದ ವೈಖರಿ

ಮೊದಲನೆಯದಾಗಿ ಎಂದಿಗೂ ನಾವು ಏನನ್ನೂ ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎರಡನೆಯದು ಎಂದೆಂದಿಗೂ, ಭಾರತೀಯರನ್ನು ಕಡೆಗಣಿಸಿ ನೋಡಬಾರದು. ಅಲ್ಲಿ 1.5 ಬಿಲಿಯನ್​ ಭಾರತೀಯರಿದ್ದಾರೆ. ಅಷ್ಟು ಜನರಲ್ಲಿ ಆಯ್ಕೆಯಾಗಿ ಬಂದ 11 ಮಂದಿ ವಿರುದ್ಧ ಆಡುವುದಾದರೆ ನಿಜವಾಗಿಯೂ ಕಠಿಣವಾಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ

ನಾನು ಭಾರತವನ್ನು ಎಷ್ಟು ಅಭಿನಂದಿಸಿದರೂ ಸಾಲದು. ಮೊದಲನೇ ಪಂದ್ಯದಲ್ಲಿ 36 ರನ್​ಗಳಿಗೆ ಆಲೌಟ್ ಮಾಡಿ ನಾವು ಮೂರು ದಿನಗಳಲ್ಲಿ ಪಂದ್ಯ ಗೆದ್ದುಕೊಂಡರೂ ಅವರೂ ಕುಗ್ಗಲಿಲ್ಲ. ನಂತರ ಅವರು ಪುಟಿದೆದ್ದ ಹೋರಾಟ ನಡೆಸಿದ ಹಾದಿ ರೋಚಕವಾಗಿತ್ತು. ಆ ಶ್ರೇಯ ಅವರಿಗೇ ಸಲ್ಲಬೇಕು. ಯಾವುದನ್ನೂ ಹಗುರವಾಗಿ ಪರಿಗಣಿಸಬಾರದೆಂಬ ದೊಡ್ಡ ಪಾಠವನ್ನು ನಾವು ಕಲಿತಿದ್ದೇವೆ ಅವರು ಹೇಳಿದ್ದಾರೆ.

89 ರನ್​ಗಳಿಸಿ ಪಂದ್ಯ ಗೆಲ್ಲಲು ನೆರವಾದ ರಿಷಭ್ ಪಂತ್​ರ ಆಟ ನಮಗೆ 2019ರಲ್ಲಿ​ ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್‌ನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್ ಸಿಡಿಸಿದ ಅಜೇಯ ಶತಕದಾಟವನ್ನು ನೆನಪಿಸಿತು ಎಂದು ಲ್ಯಾಂಗರ್​ ತಿಳಿಸಿದರು.

ಇದನ್ನೂ ಓದಿ:ಅಂತಿಮ ಘಟ್ಟದಲ್ಲಿ ಪಂತ್​ ಗಳಿಸಿದ ಒಂದೊಂದು ರನ್ ಚಿನ್ನಕ್ಕೆ ಸಮ: ಟಿಮ್ ಪೇನ್

ಬ್ರಿಸ್ಬೇನ್​: ಗಾಯದಿಂದ ತೀವ್ರ ತೊಂದರೆ ಅನುಭವಿಸಿದ್ದ ಹಾಗೂ ಅನನುಭವಿ ಆಟಗಾರರನ್ನು ಒಳಗೊಂಡ ಭಾರತ ತಂಡದ ವಿರೋಚಿತ ಪ್ರದರ್ಶನ ಆಸ್ಟ್ರೇಲಿಯಾ ಕೋಚ್​ ನಿದ್ದೆಗೆಡಿಸಿದೆ. ಈ ಸರಣಿಯ ಸೋಲು ನಮಗೆ ದೊಡ್ಡ ಪಾಠ ಕಲಿಸಿದ್ದು, ಎಂದೆಂದಿಗೂ ಭಾರತ ತಂಡವನ್ನು ಕಡೆಗಣಿಸಬಾರದು ಎಂದು ಅವರು ಹೇಳಿದ್ದಾರೆ.

ಇದು ನಂಬಲಾಗದ ಟೆಸ್ಟ್ ಸರಣಿ. ಕೊನೆಯಲ್ಲಿ ಸೋಲು, ಗೆಲುವು ಸಹಜ. ಆದರೆ, ಈ ದಿನ ಟೆಸ್ಟ್‌ ಕ್ರಿಕೆಟ್‌ ಗೆದ್ದಿದೆ. ಈ ಸೋಲಿನ ನೋವು ನಮ್ಮನ್ನು ದೀರ್ಘಕಾಲ ಕಾಡಲಿದೆ. ಭಾರತ ಖಂಡಿತ ಗೆಲುವಿನ ಶ್ರೇಯಕ್ಕೆ ಅರ್ಹವಾಗಿದೆ. ಅವರು ಅದ್ಭುತ ಪ್ರದರ್ಶನ ತೋರಿದ್ದಾರೆ. ಆದರೆ ನಾವು ಇದರಿಂದ ದೊಡ್ದ ಪಾಠ ಕಲಿತಿದ್ದೇವೆ ಎಂದು ಲ್ಯಾಂಗರ್​ ಚಾನೆಲ್​ 7 ಜೊತೆ ಮಾತನಾಡುವ ವೇಳೆ ತಿಳಿಸಿದ್ದಾರೆ.

ರಿಷಭ್ ಪಂತ್
ರಿಷಭ್ ಪಂತ್ ಆಟದ ವೈಖರಿ

ಮೊದಲನೆಯದಾಗಿ ಎಂದಿಗೂ ನಾವು ಏನನ್ನೂ ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎರಡನೆಯದು ಎಂದೆಂದಿಗೂ, ಭಾರತೀಯರನ್ನು ಕಡೆಗಣಿಸಿ ನೋಡಬಾರದು. ಅಲ್ಲಿ 1.5 ಬಿಲಿಯನ್​ ಭಾರತೀಯರಿದ್ದಾರೆ. ಅಷ್ಟು ಜನರಲ್ಲಿ ಆಯ್ಕೆಯಾಗಿ ಬಂದ 11 ಮಂದಿ ವಿರುದ್ಧ ಆಡುವುದಾದರೆ ನಿಜವಾಗಿಯೂ ಕಠಿಣವಾಗಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ

ನಾನು ಭಾರತವನ್ನು ಎಷ್ಟು ಅಭಿನಂದಿಸಿದರೂ ಸಾಲದು. ಮೊದಲನೇ ಪಂದ್ಯದಲ್ಲಿ 36 ರನ್​ಗಳಿಗೆ ಆಲೌಟ್ ಮಾಡಿ ನಾವು ಮೂರು ದಿನಗಳಲ್ಲಿ ಪಂದ್ಯ ಗೆದ್ದುಕೊಂಡರೂ ಅವರೂ ಕುಗ್ಗಲಿಲ್ಲ. ನಂತರ ಅವರು ಪುಟಿದೆದ್ದ ಹೋರಾಟ ನಡೆಸಿದ ಹಾದಿ ರೋಚಕವಾಗಿತ್ತು. ಆ ಶ್ರೇಯ ಅವರಿಗೇ ಸಲ್ಲಬೇಕು. ಯಾವುದನ್ನೂ ಹಗುರವಾಗಿ ಪರಿಗಣಿಸಬಾರದೆಂಬ ದೊಡ್ಡ ಪಾಠವನ್ನು ನಾವು ಕಲಿತಿದ್ದೇವೆ ಅವರು ಹೇಳಿದ್ದಾರೆ.

89 ರನ್​ಗಳಿಸಿ ಪಂದ್ಯ ಗೆಲ್ಲಲು ನೆರವಾದ ರಿಷಭ್ ಪಂತ್​ರ ಆಟ ನಮಗೆ 2019ರಲ್ಲಿ​ ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್‌ನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್ ಸಿಡಿಸಿದ ಅಜೇಯ ಶತಕದಾಟವನ್ನು ನೆನಪಿಸಿತು ಎಂದು ಲ್ಯಾಂಗರ್​ ತಿಳಿಸಿದರು.

ಇದನ್ನೂ ಓದಿ:ಅಂತಿಮ ಘಟ್ಟದಲ್ಲಿ ಪಂತ್​ ಗಳಿಸಿದ ಒಂದೊಂದು ರನ್ ಚಿನ್ನಕ್ಕೆ ಸಮ: ಟಿಮ್ ಪೇನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.