ETV Bharat / sports

ಕೊಹ್ಲಿ ಭಾರತವನ್ನು ಕಠಿಣವಾಗಿಸಿದ್ದಾರೆ, ಯಾರಿಂದಲೂ ಬೆದರಿಸಲಾಗುವುದಿಲ್ಲ: ನಾಸಿರ್ ಹುಸೇನ್​

ಅವರು(ಭಾರತ) ತುಂಬಾ ಪ್ರಬಲರು, ಆ ಮನೋಭಾವನೆಯನ್ನು ಕೊಹ್ಲಿ ಹುಟ್ಟು ಹಾಕಿದ್ದಾರೆಂದು ನಾನು ಭಾವಿಸುತ್ತೇನೆ. ನೀವು(ಇಂಗ್ಲೆಂಡ್) ಯಾವುದೇ ತಪ್ಪನ್ನು ಮಾಡಬೇಡಿ, ಅವರು ತವರಿನಲ್ಲಿ ಅಸಾಧಾರಣ ಸಾಮಾರ್ಥ್ಯವುಳ್ಳವರಾಗಿದ್ದಾರೆ..

author img

By

Published : Jan 26, 2021, 4:49 PM IST

ವಿರಾಟ್​ ಕೊಹ್ಲಿ ಟೀಮ್ ಇಂಡಿಯಾ
ವಿರಾಟ್​ ಕೊಹ್ಲಿ ಟೀಮ್ ಇಂಡಿಯಾ

ಲಂಡನ್ ​: ವಿರಾಟ್​ ಕೊಹ್ಲಿ ಪ್ರಸ್ತುತ ಭಾರತ ತಂಡದಲ್ಲಿ ಹೋರಾಟದ ಮನೋಭಾವನೆಯನ್ನು ಅಳವಡಿಸಿದ್ದಾರೆ. ಹಾಗಾಗಿ, ಭಾರತೀಯರನ್ನು ಮೈದಾನದ ಹೊರೆಗೆ ಅಥವಾ ಮೈದಾನದ ಒಳಗೆ ಎದುರಾಳಿಗಳು ಬೆದರಿಸಲು ಸಾಧ್ಯವಿಲ್ಲ ಎಂದು ಇಂಗ್ಲೆಂಡ್​ ತಂಡದ ಮಾಜಿ ನಾಯಕ ನಾಸಿರ್ ಹುಸೇನ್​ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ತಂಡದ ಪ್ರಮುಖ ಆಟಗಾರರನ್ನು ಹಾಗೂ ಪಿತೃತ್ವ ರಜೆಯಿಂದ ತಂಡದಿಂದ ಹೊರ ಬಂದಿದ್ದ ನಾಯಕ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿಯೂ ಅನಾನುಭವಿ ಭಾರತ ತಂಡ, ಅಜಿಂಕ್ಯ ರಹಾನೆಯ ನೇತೃತ್ವದಲ್ಲಿ ಆಸೀಸ್​ ನೆಲದಲ್ಲಿ ಧೈರ್ಯ ಮತ್ತು ದೃಢನಿಶ್ಚಯ ತೋರಿ ಅತಿಥೇಯ ತಂಡವನ್ನು 2-1ರಲ್ಲಿ ಮಣಿಸಿ ಟೆಸ್ಟ್​ ಸರಣಿ ವಶಪಡಿಸಿಕೊಂಡಿತ್ತು.

ಹಾಗಾಗಿ, ಮುಂದಿನ ವಾರದಿಂದ ಭಾರತದ ವಿರುದ್ಧ ನಡೆಯುವ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಕಠಿಣ ಸ್ಪರ್ಧೆಗೆ ಸಿದ್ಧರಾಗಿ ಎಂದು ಇಂಗ್ಲೆಂಡ್​ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಆಸ್ಟ್ರೇಲಿಯಾಕ್ಕೆ ಹೋಗಬಹುದಾದ ಯಾವುದೇ ತಂಡ, ಕೇವಲ 36ಕ್ಕೆ ಆಲೌಟ್​ ಆಗಿ, ಸರಣಿಯಲ್ಲಿ 1-0ಯಲ್ಲಿ ಹಿನ್ನಡೆಯನ್ನು ಅನುಭವಿಸಿತು.

ನಾಸಿರ್ ಹುಸೇನ್
ನಾಸಿರ್ ಹುಸೇನ್

ಕೊಹ್ಲಿಯಂತಹ ಸ್ಟಾರ್​ ಆಟಗಾರ ಮತ್ತ ತಂಡದ ಅನುಭವಿ ಬೌಲರ್​ಗಳ ಸೇವೆ ಕಳೆದುಕೊಂಡು, ಜೊತೆಗೆ ಮೈದಾನದಲ್ಲಿ ಹಲವಾರು ನೋವುಗಳನ್ನು ಅನುಭವಿಸಿಯೂ ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದಿದೆಯೆಂದರೆ, ಅವರು( ಭಾರತೀಯ ಆಟಗಾರರು) ಯಾವುದಕ್ಕೂ ಹೆದರುವುದಿಲ್ಲ ಅನ್ನೋದು ಸಾಬೀತಾಗಿದೆ ಎಂದು ಹುಸೇನ್​ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅವರು(ಭಾರತ) ತುಂಬಾ ಪ್ರಬಲರು, ಆ ಮನೋಭಾವನೆಯನ್ನು ಕೊಹ್ಲಿ ಹುಟ್ಟು ಹಾಕಿದ್ದಾರೆಂದು ನಾನು ಭಾವಿಸುತ್ತೇನೆ. ನೀವು(ಇಂಗ್ಲೆಂಡ್) ಯಾವುದೇ ತಪ್ಪನ್ನು ಮಾಡಬೇಡಿ, ಅವರು ತವರಿನಲ್ಲಿ ಅಸಾಧಾರಣ ಸಾಮಾರ್ಥ್ಯವುಳ್ಳವರಾಗಿದ್ದಾರೆ ಎಂದು ಆಂಗ್ಲರ​ ಮಾಜಿ ನಾಯಕ ತಿಳಿಸಿದ್ದಾರೆ.

ಆದರೂ ಶ್ರೀಲಂಕಾ ತಂಡವನ್ನು 2-0ಯಲ್ಲಿ ಮಣಿಸಿರುವ ಇಂಗ್ಲೆಂಡ್‌ ತಂಡಕ್ಕೆ ಭಾರತ ತಂಡ ಕಠಿಣ ಸ್ಪರ್ಧೆಯೊಡ್ಡುತ್ತದೆ ಎಂದು ತಿಳಿಸಿದ್ದಾರೆ. ಫೆಬ್ರವರಿ 5 ರಿಂದ ಚೆನ್ನೈನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ.

ಇದನ್ನು ಓದಿ:ತೆಂಡೂಲ್ಕರ್​ ಸಾರ್ವಕಾಲಿಕ ಟೆಸ್ಟ್ ರನ್​ ವಿಶ್ವದಾಖಲೆ ಮುರಿಯಲು ಈತನಿಂದ ಸಾಧ್ಯ: ಜೆಫ್ರಿ ಬಾಯ್ಕಾಟ್​​

ಲಂಡನ್ ​: ವಿರಾಟ್​ ಕೊಹ್ಲಿ ಪ್ರಸ್ತುತ ಭಾರತ ತಂಡದಲ್ಲಿ ಹೋರಾಟದ ಮನೋಭಾವನೆಯನ್ನು ಅಳವಡಿಸಿದ್ದಾರೆ. ಹಾಗಾಗಿ, ಭಾರತೀಯರನ್ನು ಮೈದಾನದ ಹೊರೆಗೆ ಅಥವಾ ಮೈದಾನದ ಒಳಗೆ ಎದುರಾಳಿಗಳು ಬೆದರಿಸಲು ಸಾಧ್ಯವಿಲ್ಲ ಎಂದು ಇಂಗ್ಲೆಂಡ್​ ತಂಡದ ಮಾಜಿ ನಾಯಕ ನಾಸಿರ್ ಹುಸೇನ್​ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ತಂಡದ ಪ್ರಮುಖ ಆಟಗಾರರನ್ನು ಹಾಗೂ ಪಿತೃತ್ವ ರಜೆಯಿಂದ ತಂಡದಿಂದ ಹೊರ ಬಂದಿದ್ದ ನಾಯಕ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿಯೂ ಅನಾನುಭವಿ ಭಾರತ ತಂಡ, ಅಜಿಂಕ್ಯ ರಹಾನೆಯ ನೇತೃತ್ವದಲ್ಲಿ ಆಸೀಸ್​ ನೆಲದಲ್ಲಿ ಧೈರ್ಯ ಮತ್ತು ದೃಢನಿಶ್ಚಯ ತೋರಿ ಅತಿಥೇಯ ತಂಡವನ್ನು 2-1ರಲ್ಲಿ ಮಣಿಸಿ ಟೆಸ್ಟ್​ ಸರಣಿ ವಶಪಡಿಸಿಕೊಂಡಿತ್ತು.

ಹಾಗಾಗಿ, ಮುಂದಿನ ವಾರದಿಂದ ಭಾರತದ ವಿರುದ್ಧ ನಡೆಯುವ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಕಠಿಣ ಸ್ಪರ್ಧೆಗೆ ಸಿದ್ಧರಾಗಿ ಎಂದು ಇಂಗ್ಲೆಂಡ್​ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಆಸ್ಟ್ರೇಲಿಯಾಕ್ಕೆ ಹೋಗಬಹುದಾದ ಯಾವುದೇ ತಂಡ, ಕೇವಲ 36ಕ್ಕೆ ಆಲೌಟ್​ ಆಗಿ, ಸರಣಿಯಲ್ಲಿ 1-0ಯಲ್ಲಿ ಹಿನ್ನಡೆಯನ್ನು ಅನುಭವಿಸಿತು.

ನಾಸಿರ್ ಹುಸೇನ್
ನಾಸಿರ್ ಹುಸೇನ್

ಕೊಹ್ಲಿಯಂತಹ ಸ್ಟಾರ್​ ಆಟಗಾರ ಮತ್ತ ತಂಡದ ಅನುಭವಿ ಬೌಲರ್​ಗಳ ಸೇವೆ ಕಳೆದುಕೊಂಡು, ಜೊತೆಗೆ ಮೈದಾನದಲ್ಲಿ ಹಲವಾರು ನೋವುಗಳನ್ನು ಅನುಭವಿಸಿಯೂ ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದಿದೆಯೆಂದರೆ, ಅವರು( ಭಾರತೀಯ ಆಟಗಾರರು) ಯಾವುದಕ್ಕೂ ಹೆದರುವುದಿಲ್ಲ ಅನ್ನೋದು ಸಾಬೀತಾಗಿದೆ ಎಂದು ಹುಸೇನ್​ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅವರು(ಭಾರತ) ತುಂಬಾ ಪ್ರಬಲರು, ಆ ಮನೋಭಾವನೆಯನ್ನು ಕೊಹ್ಲಿ ಹುಟ್ಟು ಹಾಕಿದ್ದಾರೆಂದು ನಾನು ಭಾವಿಸುತ್ತೇನೆ. ನೀವು(ಇಂಗ್ಲೆಂಡ್) ಯಾವುದೇ ತಪ್ಪನ್ನು ಮಾಡಬೇಡಿ, ಅವರು ತವರಿನಲ್ಲಿ ಅಸಾಧಾರಣ ಸಾಮಾರ್ಥ್ಯವುಳ್ಳವರಾಗಿದ್ದಾರೆ ಎಂದು ಆಂಗ್ಲರ​ ಮಾಜಿ ನಾಯಕ ತಿಳಿಸಿದ್ದಾರೆ.

ಆದರೂ ಶ್ರೀಲಂಕಾ ತಂಡವನ್ನು 2-0ಯಲ್ಲಿ ಮಣಿಸಿರುವ ಇಂಗ್ಲೆಂಡ್‌ ತಂಡಕ್ಕೆ ಭಾರತ ತಂಡ ಕಠಿಣ ಸ್ಪರ್ಧೆಯೊಡ್ಡುತ್ತದೆ ಎಂದು ತಿಳಿಸಿದ್ದಾರೆ. ಫೆಬ್ರವರಿ 5 ರಿಂದ ಚೆನ್ನೈನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ.

ಇದನ್ನು ಓದಿ:ತೆಂಡೂಲ್ಕರ್​ ಸಾರ್ವಕಾಲಿಕ ಟೆಸ್ಟ್ ರನ್​ ವಿಶ್ವದಾಖಲೆ ಮುರಿಯಲು ಈತನಿಂದ ಸಾಧ್ಯ: ಜೆಫ್ರಿ ಬಾಯ್ಕಾಟ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.