ಹೈದರಾಬಾದ್: ನಿಯಮದ ಪ್ರಕಾರ ಯಾವುದೇ ಕ್ರೀಡಾಕೂಟ ಯಾವ ಸ್ಥಳದಲ್ಲಿ ನಡೆದರೂ ಭಾರತ ಭಾಗವಹಿಸಲು ಸಿದ್ಧವಿದೆ ಎಂದು ಕೇಂದ್ರ ಕೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

2020ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಭಾಗವಹಿಸುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಜಿಜು, 'ಯಾವುದೇ ಕ್ರೀಡಾಕೂಟ ಎಲ್ಲಿ ನಡೆದರೂ ಭಾರತ ಭಾಗವಸಿಸಲು ಸಿದ್ಧ. ನಿಯಮದ ಪ್ರಕಾರ ಕ್ರೀಡಾಕೂಟ ನಡೆದರೆ ಭಾರತ ಖಂಡಿತವಾಗಿಯೂ ಭಾಗವಹಿಸುತ್ತದೆ' ಎಂದು ಹೇಳಿದ್ದಾರೆ.

ಏಷ್ಯಾಕಪ್ ಕ್ರಿಕೆಟ್ ಟೂರ್ನಿ ದುಬೈನಲ್ಲಿ ನಡೆಯಲಿದ್ದು ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಭಾಗವಹಿಸಲಿವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು.
2020ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಪಾಕಿಸ್ತಾನ ಆಯೋಜನೆ ಮಾಡಲಿದೆ. ಆದರೆ ಉಭಯ ದೇಶಗಳ ನುಡುವೆ ಉತ್ತಮ ಸಂಬಂಧ ಇಲ್ಲದ ಕಾರಣ ಆಟಗಾರರ ಭದ್ರತೆಯ ದೃಷ್ಟಿಯಿಂದ ಭಾರತ ಪಾಕಿಸ್ತಾನಕ್ಕೆ ತೆರಳುವುದು ಸೂಕ್ತವಲ್ಲ ಎಂದು ಹೇಳಲಾಗಿತ್ತು. ಆದರೆ ಕ್ರೀಡಾ ಸಚಿವರು ಮಾತ್ರ ಎಲ್ಲೇ ಟೂರ್ನಿ ನಡೆದರೂ ಭಾರತ ಭಾಗವಹಿಸುತ್ತದೆ ಎಂದಿದ್ದಾರೆ.