ಚೆನ್ನೈ: ಮುಂಬೈ ವಿರುದ್ಧ ಬುಧವಾರ ನಡೆದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಪಂದ್ಯದಲ್ಲಿ ಕೇವಲ 54 ಎಸೆತಗಳಲ್ಲಿ 137 ರನ್ಗಳಿಸಿದ ಮೊಹಮ್ಮದ್ ಅಜರುದ್ದೀನ್ ಅವರಿಗೆ ಕೇರಳ ಕ್ರಿಕೆಟ್ ಬೋರ್ಡ್ ಒಂದು ರನ್ಗೆ ಒಂದು ಸಾವಿರ ರೂನಂತೆ ಬಹುಮಾನ ಘೋಷಿಸಿದೆ.
ಬಲಿಷ್ಠ ಮುಂಬೈ ವಿರುದ್ಧದ ಪಂದ್ಯದಲ್ಲಿ 26 ವರ್ಷದ ಮೊಹಮ್ಮದ್ ಅಜರುದ್ದೀನ್ ಕೇವಲ 37 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಸಯ್ಯದ್ ಮುಷ್ತಾಕ್ ಅಲಿ ಇತಿಹಾಸದಲ್ಲಿ 2ನೇ ವೇಗದ ಶತಕವಾಗಿತ್ತು.
(ಪಂತ್ 32 ಎಸೆತಗಳಲ್ಲಿ ಶತಕ ಸಿಡಿಸಿದ ಈ ದಾಖಲೆ ಹೊಂದಿದ್ದಾರೆ). ಅಜರುದ್ದೀನ್ ಇನ್ನಿಂಗ್ಸ್ನಲ್ಲಿ 11 ಭರ್ಜರಿ ಸಿಕ್ಸರ್ ಮತ್ತು 9 ಬೌಂಡರಿ ಸೇರಿದ್ದವು. ಇವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇರಳ ತಂಡ ಮುಂಬೈ ನೀಡಿದ್ದ 197ರನ್ಗಳ ಗುರಿಯನ್ನು 15.5 ಓವರ್ಗಳಲ್ಲಿ ತಲುಪಿತ್ತು.
ವಿಶೇಷವೆಂದರೆ, ಇದು ಕೇರಳ ಪರ ಚೊಚ್ಚಲ ಟಿ20 ಶತಕವಾಗಿದೆ. ಅದಕ್ಕಾಗಿ ಕೇರಳ ಕ್ರಿಕೆಟ್ ಬೋರ್ಡ್ ಮೊಹಮ್ಮದ್ ಅಜರುದ್ದೀನ್ಗೆ 137 ರನ್ಗಳಿಗೆ ತಲಾ ಒಂದು ಸಾವಿರದಂತೆ 1.37 ಲಕ್ಷ ರೂ.ಗಳನ್ನು ಬಹುಮಾನವಾಗಿ ಘೋಷಿಸಿದೆ.
ಮೂಲತಃ ತೆಲಂಗಾಣ ನಿವಾಸಿಯಾದ ಮೊಹಮ್ಮದ್ ಅಜರುದ್ದೀನ್ ತಮ್ಮ ಪೋಷಕರಿಗೆ 8 ಮಗುವಾಗಿ ಜನಿಸಿದ್ದರು. ಇವರ ಹಿರಿಯ ಸಹೋದರ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ದೊಡ್ಡ ಅಭಿಮಾನಿಯಾಗಿದ್ದರಿಂದ ಅವರ ಹೆಸರನ್ನೇ ಇವರಿಗೆ ಇಟ್ಟಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಮೊಹಮ್ಮದ್ ಅಜರುದ್ದೀನ್ 137 ನಾಟೌಟ್: ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಬಲಿಷ್ಠ ಮುಂಬೈಗೆ ಶಾಕ್ ನೀಡಿದ ಕೇರಳ