ETV Bharat / sports

ಹೆಚ್ಚು ಪಂದ್ಯಗಳನ್ನಾಡಿದರೆ ಹೆಚ್ಚು ತಿಳಿದಿದೆ ಎಂಬುದು ತಪ್ಪುಕಲ್ಪನೆ: ಟೀಕಾಕಾರರನ್ನೇ ಕುಟುಕಿದ ಪ್ರಸಾದ್​

author img

By

Published : Jul 31, 2019, 11:57 AM IST

ತಮ್ಮ ನೇತೃತ್ವದ ತಂಡವನ್ನು ಅನನುಭವಿ ಎಂದವರಿಗೆ ಸಾಕ್ಷಿ ಹಾಗೂ ಸಾಧನೆ ಸಮೇತ ಉತ್ತರಿಸಿದ್ದಾರೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಸ್​ಕೆ ಪ್ರಸಾದ್​.

MSK

ಮುಂಬೈ: ಪ್ರತಿಯೊಂದು ಸರಣಿಗೆ ತಂಡದ ಆಯ್ಕೆ ನಡೆಯಯುವಾಗ ಹೆಚ್ಚಿನ ಟೀಕೆಗೆ ಗುರಿಯಾಗುತ್ತಿರುವುದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್. ಇಂತಹ ಟೀಕೆಗಳಿಗೆ ಪ್ರಸಾದ್​​​ ತಮ್ಮ ಟೀಕೆಗೆ ನಯವಾಗಿಯೇ ಉತ್ತರ ಕೊಟ್ಟಿದ್ದಾರೆ.

ಭಾರತ ತಂಡದ ಪರ ಕೇವಲ 17 ಏಕದಿನ ಪಂದ್ಯ ಹಾಗೂ 6 ಟೆಸ್ಟ್​ ಪಂದ್ಯಗಳನ್ನಾಡಿರುವ ಎಂಎಸ್​ಕೆ ಪ್ರಸಾದ್​, ಕಳೆದ ಮೂರು ವರ್ಷಗಳಿಂದ ಬಿಸಿಸಿಐನ ಆಯ್ಕೆ ಸಮಿತಿ ಅಧ್ಯರಾಗಿದ್ದಾರೆ. ಆದರೆ, ಮೂರು ವರ್ಷದ ಈ ಅವಧಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆಯಾದರೂ 4 ನೇ ಕ್ರಮಾಂಕದ ಸಮಸ್ಯೆ ಮಾತ್ರ ಬಗೆಹರಿಸಲಾಗಲಿಲ್ಲ.

ಪದೇ ಪದೇ ತಮ್ಮ ನೇತೃತ್ವದ ತಂಡವನ್ನು ಸುನಿಲ್​ ಗವಾಸ್ಕರ್​ರಂತಹ ಮಾಜಿ ಆಟಗಾರರು ಅನನುಭವಿ ತಂಡ ಎಂದು ಕಡೆಗಣಿಸುತ್ತಿದ್ದರು. ಅದಕ್ಕೆ ಉತ್ತರಿಸಿರುವ ಪ್ರಸಾದ್​ ಹೆಚ್ಚು ಪಂದ್ಯವನ್ನಾಡಿದವರು ಹೆಚ್ಚು ತಿಳಿದಿರುತ್ತಾರೆ ಎಂಬುವುದು ತಪ್ಪು ತಿಳಿವಳಿಕೆ ಎಂದು ತಮ್ಮ ಮೂರು ವರ್ಷದ ಸಾಧನೆಯನ್ನು ವಿವರಿಸಿದ್ದಾರೆ.

gavaskar vs MSK
ಸುನಿಲ್​ ಗವಾಸ್ಕರ್​

ನಾನು 15 ಪಂದ್ಯವನ್ನಾಡಿದರೂ ಆಡಿದ್ದೇನೆ, ಆದರೆ ಒಂದೂ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ರಾಜ್​ ಸಿಂಗ್​ ಡುಂಗಾರ್​​ಪುರ​ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸಚಿನ್​ರಂತ ಡೈಮಂಡ್​ ಉದಯಕ್ಕೆ ಕಾರಣರಾಗಿದ್ದರು. ಪ್ರಸ್ತುತ ಇಸಿಬಿ ಅಧ್ಯಕ್ಷ ಎಡ್​ ಸ್ಮಿತ್​ ಕೇವಲ ಒಂದು ಪಂದ್ಯವಾಡಿದ್ದರೆ, ಕಳೆದ 10 ವರ್ಷಗಳಿಂದ ಆಸ್ಟ್ರೇಲಿಯಾ ಸೆಲೆಕ್ಷನ್​ ಕಮಿಟಿಯ ಅಧ್ಯಕ್ಷರಾಗಿದ್ದಾರೆ. ಇವರ ಕೈಕೆಳಗೆ 128 ಟೆಸ್ಟ್ ಹಾಗೂ 244 ಏಕದಿನ​ ಪಂದ್ಯಗಳನ್ನಾಡಿರುವ ಮಾರ್ಕ್​ ವಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಭಾರತ ತಂಡದ ಕೋಚ್​ ಆಗಿದ್ದ ಗ್ರೇಗ್​ ಚಾಪೆಲ್​ ಕೂಡಾ ಟ್ರೆವರ್​ ಕೈಕೆಳಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಎಷ್ಟು ಪಂದ್ಯಗಳನ್ನಾಡಿದ್ದಾರೆ ಎಂಬುದರಿಂದ ಎಷ್ಟು ತಿಳಿದಿದ್ದಾರೆ ಎಂಬುದನ್ನು ಅಳೆಯಬಾರದು ಎಂದು ತಮ್ಮ ತಂಡದ ವಿರುದ್ಧದ ಟೀಕೆಗಳಿಗೆ ಉತ್ತರಿಸಿದ್ದಾರೆ.

ಅಲ್ಲದೇ ನಮ್ಮ ನೇತೃತ್ವದಲ್ಲಿ ರಚಿತವಾಗಿರುವ ತಂಡದಿಂದ ಟೆಸ್ಟ್​ನಲ್ಲಿ 13 ಪಂದ್ಯಗಳಲ್ಲಿ 11 ಪಂದ್ಯ ಗೆದ್ದಿದೆ. ಐಸಿಸಿ ಟೆಸ್ಟ್​ ಶ್ರೇಯಾಂಕದಲ್ಲಿ ಮೂರು ವರ್ಷದಿಂದ ನಂಬರ್​ ಒನ್​ ಸ್ಥಾನದಲ್ಲಿದ್ದೇವೆ. ಏಕದಿನ ಕ್ರಿಕೆಟ್​ನಲ್ಲೂ ನಂಬರ್​ 2 ಸ್ಥಾನ ಕಾಪಾಡಿಕೊಂಡಿದೆ. 2 ಏಷ್ಯಾಕಪ್ ಚಾಂಪಿಯನ್​​, ಚಾಂಪಿಯನ್​ ಟ್ರೋಫಿ ರನ್ನರ್​ ಆಪ್​ ಆಗಿದ್ದೇವೆ.

ಇನ್ನು ಭಾರತ ಎ ತಂಡ ನಮ್ಮ ಅವಧಿಯಲ್ಲಿ ಆಡಿರುವ 11 ಏಕದಿನ ಸರಣಿಯಲ್ಲೂ ಗೆಲುವು ಸಾಧಿಸಿದೆ. 9 ಟೆಸ್ಟ್​ ಸರಣಿಯಲ್ಲಿ 8 ರಲ್ಲಿ ಜಯ ಹಾಗೂ 1 ರಲ್ಲಿ ಮಾತ್ರ ಸೋಲುಕಂಡಿದೆ. ಒಟ್ಟಾರೆ 35 ಕ್ರಿಕೆಟಿಗರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಭಾರತ ತಂಡ ಹೆಚ್ಚು ಯಶಸ್ಸು ಕಂಡಿದೆ. ನಮ್ಮ ಕಾರ್ಯಕ್ಷಮತೆ ಬಗ್ಗೆ ನಮಗೆ ಸಂತೋಷವಿದೆ. ಮುಂಬರುವ ಆಯ್ಕೆ ಸಮಿತಿಗೆ ಖುಷಿಯಿಂದಲೇ ಅಧಿಕಾರ ವರ್ಗಾಯಿಸುತ್ತೇವೆ ಎಂದು ಪ್ರಸಾದ್​ ತಿಳಿಸಿದ್ದಾರೆ.

ಮುಂಬೈ: ಪ್ರತಿಯೊಂದು ಸರಣಿಗೆ ತಂಡದ ಆಯ್ಕೆ ನಡೆಯಯುವಾಗ ಹೆಚ್ಚಿನ ಟೀಕೆಗೆ ಗುರಿಯಾಗುತ್ತಿರುವುದು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್. ಇಂತಹ ಟೀಕೆಗಳಿಗೆ ಪ್ರಸಾದ್​​​ ತಮ್ಮ ಟೀಕೆಗೆ ನಯವಾಗಿಯೇ ಉತ್ತರ ಕೊಟ್ಟಿದ್ದಾರೆ.

ಭಾರತ ತಂಡದ ಪರ ಕೇವಲ 17 ಏಕದಿನ ಪಂದ್ಯ ಹಾಗೂ 6 ಟೆಸ್ಟ್​ ಪಂದ್ಯಗಳನ್ನಾಡಿರುವ ಎಂಎಸ್​ಕೆ ಪ್ರಸಾದ್​, ಕಳೆದ ಮೂರು ವರ್ಷಗಳಿಂದ ಬಿಸಿಸಿಐನ ಆಯ್ಕೆ ಸಮಿತಿ ಅಧ್ಯರಾಗಿದ್ದಾರೆ. ಆದರೆ, ಮೂರು ವರ್ಷದ ಈ ಅವಧಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆಯಾದರೂ 4 ನೇ ಕ್ರಮಾಂಕದ ಸಮಸ್ಯೆ ಮಾತ್ರ ಬಗೆಹರಿಸಲಾಗಲಿಲ್ಲ.

ಪದೇ ಪದೇ ತಮ್ಮ ನೇತೃತ್ವದ ತಂಡವನ್ನು ಸುನಿಲ್​ ಗವಾಸ್ಕರ್​ರಂತಹ ಮಾಜಿ ಆಟಗಾರರು ಅನನುಭವಿ ತಂಡ ಎಂದು ಕಡೆಗಣಿಸುತ್ತಿದ್ದರು. ಅದಕ್ಕೆ ಉತ್ತರಿಸಿರುವ ಪ್ರಸಾದ್​ ಹೆಚ್ಚು ಪಂದ್ಯವನ್ನಾಡಿದವರು ಹೆಚ್ಚು ತಿಳಿದಿರುತ್ತಾರೆ ಎಂಬುವುದು ತಪ್ಪು ತಿಳಿವಳಿಕೆ ಎಂದು ತಮ್ಮ ಮೂರು ವರ್ಷದ ಸಾಧನೆಯನ್ನು ವಿವರಿಸಿದ್ದಾರೆ.

gavaskar vs MSK
ಸುನಿಲ್​ ಗವಾಸ್ಕರ್​

ನಾನು 15 ಪಂದ್ಯವನ್ನಾಡಿದರೂ ಆಡಿದ್ದೇನೆ, ಆದರೆ ಒಂದೂ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ರಾಜ್​ ಸಿಂಗ್​ ಡುಂಗಾರ್​​ಪುರ​ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸಚಿನ್​ರಂತ ಡೈಮಂಡ್​ ಉದಯಕ್ಕೆ ಕಾರಣರಾಗಿದ್ದರು. ಪ್ರಸ್ತುತ ಇಸಿಬಿ ಅಧ್ಯಕ್ಷ ಎಡ್​ ಸ್ಮಿತ್​ ಕೇವಲ ಒಂದು ಪಂದ್ಯವಾಡಿದ್ದರೆ, ಕಳೆದ 10 ವರ್ಷಗಳಿಂದ ಆಸ್ಟ್ರೇಲಿಯಾ ಸೆಲೆಕ್ಷನ್​ ಕಮಿಟಿಯ ಅಧ್ಯಕ್ಷರಾಗಿದ್ದಾರೆ. ಇವರ ಕೈಕೆಳಗೆ 128 ಟೆಸ್ಟ್ ಹಾಗೂ 244 ಏಕದಿನ​ ಪಂದ್ಯಗಳನ್ನಾಡಿರುವ ಮಾರ್ಕ್​ ವಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಭಾರತ ತಂಡದ ಕೋಚ್​ ಆಗಿದ್ದ ಗ್ರೇಗ್​ ಚಾಪೆಲ್​ ಕೂಡಾ ಟ್ರೆವರ್​ ಕೈಕೆಳಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಎಷ್ಟು ಪಂದ್ಯಗಳನ್ನಾಡಿದ್ದಾರೆ ಎಂಬುದರಿಂದ ಎಷ್ಟು ತಿಳಿದಿದ್ದಾರೆ ಎಂಬುದನ್ನು ಅಳೆಯಬಾರದು ಎಂದು ತಮ್ಮ ತಂಡದ ವಿರುದ್ಧದ ಟೀಕೆಗಳಿಗೆ ಉತ್ತರಿಸಿದ್ದಾರೆ.

ಅಲ್ಲದೇ ನಮ್ಮ ನೇತೃತ್ವದಲ್ಲಿ ರಚಿತವಾಗಿರುವ ತಂಡದಿಂದ ಟೆಸ್ಟ್​ನಲ್ಲಿ 13 ಪಂದ್ಯಗಳಲ್ಲಿ 11 ಪಂದ್ಯ ಗೆದ್ದಿದೆ. ಐಸಿಸಿ ಟೆಸ್ಟ್​ ಶ್ರೇಯಾಂಕದಲ್ಲಿ ಮೂರು ವರ್ಷದಿಂದ ನಂಬರ್​ ಒನ್​ ಸ್ಥಾನದಲ್ಲಿದ್ದೇವೆ. ಏಕದಿನ ಕ್ರಿಕೆಟ್​ನಲ್ಲೂ ನಂಬರ್​ 2 ಸ್ಥಾನ ಕಾಪಾಡಿಕೊಂಡಿದೆ. 2 ಏಷ್ಯಾಕಪ್ ಚಾಂಪಿಯನ್​​, ಚಾಂಪಿಯನ್​ ಟ್ರೋಫಿ ರನ್ನರ್​ ಆಪ್​ ಆಗಿದ್ದೇವೆ.

ಇನ್ನು ಭಾರತ ಎ ತಂಡ ನಮ್ಮ ಅವಧಿಯಲ್ಲಿ ಆಡಿರುವ 11 ಏಕದಿನ ಸರಣಿಯಲ್ಲೂ ಗೆಲುವು ಸಾಧಿಸಿದೆ. 9 ಟೆಸ್ಟ್​ ಸರಣಿಯಲ್ಲಿ 8 ರಲ್ಲಿ ಜಯ ಹಾಗೂ 1 ರಲ್ಲಿ ಮಾತ್ರ ಸೋಲುಕಂಡಿದೆ. ಒಟ್ಟಾರೆ 35 ಕ್ರಿಕೆಟಿಗರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಭಾರತ ತಂಡ ಹೆಚ್ಚು ಯಶಸ್ಸು ಕಂಡಿದೆ. ನಮ್ಮ ಕಾರ್ಯಕ್ಷಮತೆ ಬಗ್ಗೆ ನಮಗೆ ಸಂತೋಷವಿದೆ. ಮುಂಬರುವ ಆಯ್ಕೆ ಸಮಿತಿಗೆ ಖುಷಿಯಿಂದಲೇ ಅಧಿಕಾರ ವರ್ಗಾಯಿಸುತ್ತೇವೆ ಎಂದು ಪ್ರಸಾದ್​ ತಿಳಿಸಿದ್ದಾರೆ.

Intro:Body:Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.