ETV Bharat / sports

ವಿಂಡೀಸ್​ ಸರಣಿಗೆ ತಂಡ ಆಯ್ಕೆ ಹಿನ್ನೆಲೆ: NCAಯಲ್ಲಿ ಧವನ್​,ಶಂಕರ್ ದೈಹಿಕ​ ಪರೀಕ್ಷೆ - ಧವನ್​

ವಿಶ್ವಕಪ್ ಪಂದ್ಯದ​ ವೇಳೆ ಗಾಯಗೊಂಡಿದ್ದ ಶಿಖರ್​ ಧವನ್​ ಹಾಗೂ ವಿಜಯ್​ ಶಂಕರ್​ ಮುಂಬರುವ ವಿಂಡೀಸ್​ ಪ್ರವಾಸಕ್ಕೂ ಮುನ್ನ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ದೈಹಿಕ ಪರೀಕ್ಷೆಗೆ ಒಳಗಾಗಲಿದ್ದಾರೆ.

Dhawan
author img

By

Published : Jul 16, 2019, 2:06 PM IST

ಮುಂಬೈ: ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಿಖರ್​ ಧವನ್​ ಹಾಗೂ ವಿಜಯ್​ ಶಂಕರ್​ ಮುಂಬರುವ ವಿಂಡೀಸ್​ ಪ್ರವಾಸಕ್ಕೂ ಮುನ್ನ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ದೈಹಿಕ ಪರೀಕ್ಷೆಗೆ ಒಳಗಾಗಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಅಬ್ಬರದ ಶತಕ ಸಿಡಿಸಿದ್ದ ಧವನ್​ ಪಂದ್ಯದ ವೇಳೆ ಎಡಗೈ ಹೆಬ್ಬೆರಳು ಮುರಿತಕ್ಕೆೊಳಗಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಆಲ್​ರೌಂಡರ್​ ವಿಜಯ್​ ಶಂಕರ್​ ಕೂಡ ಅಭ್ಯಾಸದ ವೇಳೆ ಬುಮ್ರಾ ಬೌಲಿಂಗ್​ನಲ್ಲಿ ಗಾಯಗೊಂಡಿದ್ದರು. ಇವರಿಬ್ಬರ ಜಾಗಕ್ಕೆ ವಿಕೆಟ್​ ಕೀಪರ್​ ಪಂತ್​ ಹಾಗೂ ಮಯಾಂಕ್​ ಅಗರ್​ವಾಲ್​ ಸೇರ್ಪಡೆಯಾಗಿದ್ದರು.

ಇದೀಗ ಸೆಪ್ಟೆಂಬರ್​ 3 ರಿಂದ ವೆಸ್ಟ್​ ಇಂಡೀಸ್​ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗೆ ಜುಲೈ 19 ರಂದು ತಂಡದ ಆಯ್ಕೆ ಇರುವುದರಿಂದ ಗಾಯಾಳುಗಳಾಗಿರುವ ಧವನ್​ ಹಾಗೂ ವಿಜಯ್​ ಶಂಕರ್​ ಬೆಂಗಳೂರಿನಲ್ಲಿ ಫಿಟ್ಲೆಸ್ ಟೆಸ್ಟ್‌ಗೆ ಒಳಗಾಗಲಿದ್ದಾರೆ.

ವಿಕೆಟ್ ಕೀಪರ್ ಧೋನಿ ಆಯ್ಕೆಯ ಬಗ್ಗೆ ಇನ್ನೂ ಗೊಂದಲಗಳು ಹಾಗೆಯೇ ಮುಂದುವರಿದಿದ್ದು ಆಯ್ಕೆ ಸಮಿತಿಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ವಿಂಡೀಸ್​ ಪ್ರವಾಸದಲ್ಲಿ ಭಾರತ ತಂಡ 3 ಏಕದಿನ ಪಂದ್ಯ, 3 ಟಿ-20 ಹಾಗೂ 2 ಟೆಸ್ಟ್​ ಪಂದ್ಯಗಳನ್ನಾಡಲಿದೆ. ಸೀಮಿತ ಓವರ್​ಗಳ ಪಂದ್ಯಗಳಿಗೆ ಕೊಹ್ಲಿ ಹಾಗೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್​ ಶರ್ಮಾ ತಂಡದ ನೇತೃತ್ವವಹಿಸಲಿದ್ದಾರೆ. ಟೆಸ್ಟ್​ ಸರಣಿಗೆ ಕೊಹ್ಲಿ ತಂಡ ಸೇರಿಕೊಳ್ಳಲಿದ್ದು, ಅವರೇ ತಂಡ ಮುಂದುವರಿಸಲಿದ್ದಾರೆ.

ಮುಂಬೈ: ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಿಖರ್​ ಧವನ್​ ಹಾಗೂ ವಿಜಯ್​ ಶಂಕರ್​ ಮುಂಬರುವ ವಿಂಡೀಸ್​ ಪ್ರವಾಸಕ್ಕೂ ಮುನ್ನ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ದೈಹಿಕ ಪರೀಕ್ಷೆಗೆ ಒಳಗಾಗಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಅಬ್ಬರದ ಶತಕ ಸಿಡಿಸಿದ್ದ ಧವನ್​ ಪಂದ್ಯದ ವೇಳೆ ಎಡಗೈ ಹೆಬ್ಬೆರಳು ಮುರಿತಕ್ಕೆೊಳಗಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಆಲ್​ರೌಂಡರ್​ ವಿಜಯ್​ ಶಂಕರ್​ ಕೂಡ ಅಭ್ಯಾಸದ ವೇಳೆ ಬುಮ್ರಾ ಬೌಲಿಂಗ್​ನಲ್ಲಿ ಗಾಯಗೊಂಡಿದ್ದರು. ಇವರಿಬ್ಬರ ಜಾಗಕ್ಕೆ ವಿಕೆಟ್​ ಕೀಪರ್​ ಪಂತ್​ ಹಾಗೂ ಮಯಾಂಕ್​ ಅಗರ್​ವಾಲ್​ ಸೇರ್ಪಡೆಯಾಗಿದ್ದರು.

ಇದೀಗ ಸೆಪ್ಟೆಂಬರ್​ 3 ರಿಂದ ವೆಸ್ಟ್​ ಇಂಡೀಸ್​ ವಿರುದ್ಧ ಟಿ20 ಹಾಗೂ ಏಕದಿನ ಸರಣಿಗೆ ಜುಲೈ 19 ರಂದು ತಂಡದ ಆಯ್ಕೆ ಇರುವುದರಿಂದ ಗಾಯಾಳುಗಳಾಗಿರುವ ಧವನ್​ ಹಾಗೂ ವಿಜಯ್​ ಶಂಕರ್​ ಬೆಂಗಳೂರಿನಲ್ಲಿ ಫಿಟ್ಲೆಸ್ ಟೆಸ್ಟ್‌ಗೆ ಒಳಗಾಗಲಿದ್ದಾರೆ.

ವಿಕೆಟ್ ಕೀಪರ್ ಧೋನಿ ಆಯ್ಕೆಯ ಬಗ್ಗೆ ಇನ್ನೂ ಗೊಂದಲಗಳು ಹಾಗೆಯೇ ಮುಂದುವರಿದಿದ್ದು ಆಯ್ಕೆ ಸಮಿತಿಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ವಿಂಡೀಸ್​ ಪ್ರವಾಸದಲ್ಲಿ ಭಾರತ ತಂಡ 3 ಏಕದಿನ ಪಂದ್ಯ, 3 ಟಿ-20 ಹಾಗೂ 2 ಟೆಸ್ಟ್​ ಪಂದ್ಯಗಳನ್ನಾಡಲಿದೆ. ಸೀಮಿತ ಓವರ್​ಗಳ ಪಂದ್ಯಗಳಿಗೆ ಕೊಹ್ಲಿ ಹಾಗೂ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್​ ಶರ್ಮಾ ತಂಡದ ನೇತೃತ್ವವಹಿಸಲಿದ್ದಾರೆ. ಟೆಸ್ಟ್​ ಸರಣಿಗೆ ಕೊಹ್ಲಿ ತಂಡ ಸೇರಿಕೊಳ್ಳಲಿದ್ದು, ಅವರೇ ತಂಡ ಮುಂದುವರಿಸಲಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.