ETV Bharat / sports

ದ್ರಾವಿಡ್ ಗರಡಿಗೆ ಪಾಂಡ್ಯ.. ಪುನಶ್ಚೇತನ ಕ್ರಮಕ್ಕಾಗಿ ಬೆಂಗಳೂರಿಗೆ ಬರಲಿದ್ದಾರೆ ಹಾರ್ದಿಕ್!

author img

By

Published : Jan 20, 2020, 3:31 PM IST

ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ಟೀಂ ಇಂಡಿಯಾ ಆಲ್​ರೌಂಡ್​ ಆಟಗಾರ ಹಾರ್ದಿಕ್ ಪಾಂಡ್ಯ ನಾಳೆಯಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕ್ರಮಕ್ಕೆ ಒಳಪಡಲಿದ್ದಾರೆ.

Hardik Pandya to train under Dravid,ಪುನಶ್ಚೇತನ ಕ್ರಮಕ್ಕಾಗಿ ಬೆಂಗಳೂರಿಗೆ ಬರಲಿದ್ದಾರೆ ಹಾರ್ದಿಕ್
ಪುನಶ್ಚೇತನ ಕ್ರಮಕ್ಕಾಗಿ ಬೆಂಗಳೂರಿಗೆ ಬರಲಿದ್ದಾರೆ ಹಾರ್ದಿಕ್

ಬೆಂಗಳೂರು: ಬೆನ್ನು ನೋವಿನ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯ ನಂತರ ಭಾರತ ತಂಡದಿಂದ ಹೊರಗುಳಿದಿದ್ದ ಹಾರ್ದಿಕ್, ಶಸ್ತ್ರಚಿಕಿತ್ಸೆ ಮುಗಿಸಿ ಫಿಟ್​ ಆಗಿದ್ದು, ನಾಳೆಯಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಆಕಾಡೆಮಿಯಲ್ಲಿ(ಏನ್​​ಸಿಎ) ಪುನಶ್ಚೇತನ ಕ್ರಮಕ್ಕೆ ಒಳಪಡಲಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಸಮಯದಲ್ಲಿ ಆಟಗಾರರೊಂದಿಗೆ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಟೀಂ ಇಂಡಿಯಾ ಮ್ಯಾನೇಜ್​ಮೆಂಟ್, ಎನ್​​ಸಿಎನಲ್ಲಿ ಪುನಶ್ಚೇತನ ಕ್ರಮಕ್ಕೆ ಒಳಪಡುವಂತೆ ತಿಳಿಸಿತ್ತು.

ಈ ಬಗ್ಗೆ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿರುವ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ನ ಸದಸ್ಯರೊಬ್ಬರು, 'ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ಆಟಗಾರರೊಂದಿಗೆ ತರಬೇತಿ ಪಡೆಯಲು ಬಂದಾಗ ಮಂಗಳವಾರದಿಂದ ಎನ್​ಸಿಎನಲ್ಲಿ ಪುನಶ್ಚೇತನ ಕ್ರಮಕ್ಕೆ ಒಳಪಡುವಂತೆ ಹೇಳಲಾಗಿತ್ತು. ಸುಮಾರು 2 ವಾರಗಳ ಪುನಶ್ಚೇತನಾ ಕ್ರಮ ಮುಗಿದ ನಂತರ ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಲು ಪಾಂಡ್ಯ ಫಿಟ್ ಆಗಲಿದ್ದಾರೆ' ಎಂದು ತಿಳಿಸಿದ್ದಾರೆ.

ಗಾಯಗೊಂಡಿದ್ದ ಪಾಂಡ್ಯ ಮತ್ತು ಬುಮ್ರಾ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಟ್ರೈನರ್ ರಜನಿಕಾಂತ್ ಶಿವಜ್ಞಾನಂ ಅವರ ಮೊರೆಹೋಗಿ ಚೇತರಿಕೆ ಕಂಡಿದ್ದರು, ಆದರೂ ಎನ್​ಸಿಎ ಅಡಿಯಲ್ಲಿ ಪುಶ್ಚೇತನಾ ಕ್ರಮಕ್ಕೆ ಒಳಪಡುವಂತೆ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ತಿಳಿಸಿದ್ದರು.

ಈ ಬಗ್ಗೆ ಮಾತನಾಡಿರುವ ಗಂಗೂಲಿ, ನಾನು ನಿನ್ನೆಯಷ್ಟೆ ಎನ್​ಸಿಎ ಮುಖ್ಯಸ್ಥ ರಾಹುಲ್​ ದ್ರಾವಿಡ್ ಜೊತೆ ಮಾತನಾಡಿದ್ದೇನೆ. ಬೌಲರ್​ಗಳು ಎನ್​ಸಿಎಗೆ ತೆರಳಬೇಕು, ಅಲ್ಲಿರುವವರು ಸೂಕ್ತ ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರು: ಬೆನ್ನು ನೋವಿನ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯ ನಂತರ ಭಾರತ ತಂಡದಿಂದ ಹೊರಗುಳಿದಿದ್ದ ಹಾರ್ದಿಕ್, ಶಸ್ತ್ರಚಿಕಿತ್ಸೆ ಮುಗಿಸಿ ಫಿಟ್​ ಆಗಿದ್ದು, ನಾಳೆಯಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಆಕಾಡೆಮಿಯಲ್ಲಿ(ಏನ್​​ಸಿಎ) ಪುನಶ್ಚೇತನ ಕ್ರಮಕ್ಕೆ ಒಳಪಡಲಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಸಮಯದಲ್ಲಿ ಆಟಗಾರರೊಂದಿಗೆ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಟೀಂ ಇಂಡಿಯಾ ಮ್ಯಾನೇಜ್​ಮೆಂಟ್, ಎನ್​​ಸಿಎನಲ್ಲಿ ಪುನಶ್ಚೇತನ ಕ್ರಮಕ್ಕೆ ಒಳಪಡುವಂತೆ ತಿಳಿಸಿತ್ತು.

ಈ ಬಗ್ಗೆ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿರುವ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ನ ಸದಸ್ಯರೊಬ್ಬರು, 'ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ಆಟಗಾರರೊಂದಿಗೆ ತರಬೇತಿ ಪಡೆಯಲು ಬಂದಾಗ ಮಂಗಳವಾರದಿಂದ ಎನ್​ಸಿಎನಲ್ಲಿ ಪುನಶ್ಚೇತನ ಕ್ರಮಕ್ಕೆ ಒಳಪಡುವಂತೆ ಹೇಳಲಾಗಿತ್ತು. ಸುಮಾರು 2 ವಾರಗಳ ಪುನಶ್ಚೇತನಾ ಕ್ರಮ ಮುಗಿದ ನಂತರ ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಲು ಪಾಂಡ್ಯ ಫಿಟ್ ಆಗಲಿದ್ದಾರೆ' ಎಂದು ತಿಳಿಸಿದ್ದಾರೆ.

ಗಾಯಗೊಂಡಿದ್ದ ಪಾಂಡ್ಯ ಮತ್ತು ಬುಮ್ರಾ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಟ್ರೈನರ್ ರಜನಿಕಾಂತ್ ಶಿವಜ್ಞಾನಂ ಅವರ ಮೊರೆಹೋಗಿ ಚೇತರಿಕೆ ಕಂಡಿದ್ದರು, ಆದರೂ ಎನ್​ಸಿಎ ಅಡಿಯಲ್ಲಿ ಪುಶ್ಚೇತನಾ ಕ್ರಮಕ್ಕೆ ಒಳಪಡುವಂತೆ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ತಿಳಿಸಿದ್ದರು.

ಈ ಬಗ್ಗೆ ಮಾತನಾಡಿರುವ ಗಂಗೂಲಿ, ನಾನು ನಿನ್ನೆಯಷ್ಟೆ ಎನ್​ಸಿಎ ಮುಖ್ಯಸ್ಥ ರಾಹುಲ್​ ದ್ರಾವಿಡ್ ಜೊತೆ ಮಾತನಾಡಿದ್ದೇನೆ. ಬೌಲರ್​ಗಳು ಎನ್​ಸಿಎಗೆ ತೆರಳಬೇಕು, ಅಲ್ಲಿರುವವರು ಸೂಕ್ತ ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

Intro:Body:

dd


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.