ETV Bharat / sports

ಭಾರತದ ವಿರುದ್ಧ ಗೆಲ್ಲಲು ಪರಿಸ್ಥಿತಿಗಳು ಅನುಕೂಲವಾಗಿದ್ದವು: ಜೋಫ್ರಾ ಆರ್ಚರ್ - ಇಂಗ್ಲೆಂಡ್​ ವೇಗಿ ಜೋಫ್ರಾ ಆರ್ಚರ್​ ಸುದ್ದಿ

ಭಾರತ ತಂಡದ ವಿರುದ್ಧ ಪಂದ್ಯ ಗೆಲ್ಲಲು ಪರಿಸ್ಥಿತಿಗಳು ಅನುಕೂಲವಾಗಿದ್ದವು ಎಂದು ಇಂಗ್ಲೆಂಡ್​ ವೇಗಿ ಹೇಳಿದ್ದಾರೆ.

author img

By

Published : Mar 13, 2021, 1:36 PM IST

ಅಹಮದಾಬಾದ್: ಶುಕ್ರವಾರ ನಡೆದ ಟಿ20 ಸರಣಿಯಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಲು ನಮಗೆ ಪರಿಸ್ಥಿತಿಗಳು ಅನುಕೂಲಕರವಾಗಿದ್ದವು ಎಂದು ವೇಗಿ ಜೋಫ್ರಾ ಆರ್ಚರ್ ಹೇಳಿದ್ದಾರೆ.

ಮೊಣಕೈ ಗಾಯದಿಂದ ಹಿಂತಿರುಗಿದ ಆರ್ಚರ್ ಇಂಗ್ಲೆಂಡ್‌ ಪರ 4 ಓವರ್​ಗಳಿಗೆ 23 ರನ್ ನೀಡಿ ಮೂರು ವಿಕೆಟ್​ ಪಡೆದು ಭಾರತ ತಂಡದ ಸೋಲಿಗೆ ಕಾರಣರಾದರು.

ನಾವು ಮೊದಲು ಬೌಲಿಂಗ್ ಮಾಡಲು ಉತ್ಸುಕರಾಗಿದ್ದೆವು. ಏಕೆಂದರೆ ನಾವು ಕೆಲ ದಿನಗಳಿಂದಲು ರಾತ್ರಿ ಅಭ್ಯಾಸ ನಡೆಸುವಾಗ ಸ್ವಲ್ಪ ಇಬ್ಬನಿ ಇತ್ತು. ಪರಿಸ್ಥಿತಿಗಳನ್ನು ಅರಿತು ಬೌಲಿಂಗ್​ ಮಾಡುವುದರಿಂದ ನಮಗೆ ಸ್ವಲ್ಪ ಅನುಕೂಲವಾಯಿತು. ನಿಧಾನವಾಗಿ ವಿಕೆಟ್‌ ಪಡೆಯುವುದರ ಮೂಲಕ ತಂಡದ ಉತ್ತಮ ಪ್ರದರ್ಶನಕ್ಕೆ ಕಾರಣವಾಯಿತು ಎಂದು ಆರ್ಚರ್ ಪಂದ್ಯದ ನಂತರದ ಸುದ್ದಿಗಾರರಿಗೆ ತಿಳಿಸಿದರು.

ಭಾರತ ತಂಡ ಕೇವಲ 20 ರನ್​ಗಳಿಗೆ ತನ್ನ ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ ಸೇರಿದಂತೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ವಿರಾಟ್​ ಕೊಹ್ಲಿ ಅಪಾಯಕಾರಿ ಬ್ಯಾಟ್ಸ್​ಮನ್​. ತಂಡದ ನಾಯಕ ಕೊಹ್ಲಿ ರನ್​ ಗಳಿಸುವ ನಿರೀಕ್ಷೆಯಲ್ಲಿದ್ದರು. ಹಿಂದಿನ ಇನಿಂಗ್ಸ್‌ನಲ್ಲಿ ಹಲವು ಬಾರಿ ಕೊಹ್ಲಿಯ ಆಟವನ್ನು ನಾವು ನೋಡಿದ್ದರಿಂದ ನಮಗೆ ಅವರ ವಿಕೆಟ್​ ಪಡೆಯಲು ಬೋನಸ್ ಆಯಿತು ಎಂದು ಆರ್ಚರ್​ ಹೇಳಿದರು.

ಇದು ಸರಣಿಯ ಮೊದಲ ಪಂದ್ಯವಾಗಿದೆ. ನಮಗೆ ಇನ್ನೂ ನಾಲ್ಕು ಪಂದ್ಯಗಳಿವೆ. ಅದು ಬೇರೆ ಭಾರತ ತಂಡ ವರ್ಲ್ಡ್​ ರ‍್ಯಾಂಕಿಂಗ್​ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಆರ್ಚರ್​ ಹೇಳಿದರು.

ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 124 ರನ್​ ಕಲೆ ಹಾಕಿತ್ತು. ಇದನ್ನು ಬೆನ್ನತ್ತಿದ್ದ ಇಂಗ್ಲೆಂಡ್​ ತಂಡ 15.3 ಓವರ್​ಗಳಿಗೆ ಎರಡು ವಿಕೆಟ್​ಗಳನ್ನು ಕಳೆದುಕೊಂಡು 130 ರನ್ ಕಲೆ ಹಾಕಿ ಜಯಗಳಿಸಿತ್ತು. ಭಾನುವಾರ ಎರಡನೇ ಟಿ20 ಪಂದ್ಯ ಮೊಟೇರಾ ಸ್ಟೇಡಿಯಂನಲ್ಲಿ ನಡೆಯಲಿದೆ.

ಅಹಮದಾಬಾದ್: ಶುಕ್ರವಾರ ನಡೆದ ಟಿ20 ಸರಣಿಯಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಲು ನಮಗೆ ಪರಿಸ್ಥಿತಿಗಳು ಅನುಕೂಲಕರವಾಗಿದ್ದವು ಎಂದು ವೇಗಿ ಜೋಫ್ರಾ ಆರ್ಚರ್ ಹೇಳಿದ್ದಾರೆ.

ಮೊಣಕೈ ಗಾಯದಿಂದ ಹಿಂತಿರುಗಿದ ಆರ್ಚರ್ ಇಂಗ್ಲೆಂಡ್‌ ಪರ 4 ಓವರ್​ಗಳಿಗೆ 23 ರನ್ ನೀಡಿ ಮೂರು ವಿಕೆಟ್​ ಪಡೆದು ಭಾರತ ತಂಡದ ಸೋಲಿಗೆ ಕಾರಣರಾದರು.

ನಾವು ಮೊದಲು ಬೌಲಿಂಗ್ ಮಾಡಲು ಉತ್ಸುಕರಾಗಿದ್ದೆವು. ಏಕೆಂದರೆ ನಾವು ಕೆಲ ದಿನಗಳಿಂದಲು ರಾತ್ರಿ ಅಭ್ಯಾಸ ನಡೆಸುವಾಗ ಸ್ವಲ್ಪ ಇಬ್ಬನಿ ಇತ್ತು. ಪರಿಸ್ಥಿತಿಗಳನ್ನು ಅರಿತು ಬೌಲಿಂಗ್​ ಮಾಡುವುದರಿಂದ ನಮಗೆ ಸ್ವಲ್ಪ ಅನುಕೂಲವಾಯಿತು. ನಿಧಾನವಾಗಿ ವಿಕೆಟ್‌ ಪಡೆಯುವುದರ ಮೂಲಕ ತಂಡದ ಉತ್ತಮ ಪ್ರದರ್ಶನಕ್ಕೆ ಕಾರಣವಾಯಿತು ಎಂದು ಆರ್ಚರ್ ಪಂದ್ಯದ ನಂತರದ ಸುದ್ದಿಗಾರರಿಗೆ ತಿಳಿಸಿದರು.

ಭಾರತ ತಂಡ ಕೇವಲ 20 ರನ್​ಗಳಿಗೆ ತನ್ನ ಆರಂಭಿಕ ಆಟಗಾರರಾದ ವಿರಾಟ್ ಕೊಹ್ಲಿ ಸೇರಿದಂತೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ವಿರಾಟ್​ ಕೊಹ್ಲಿ ಅಪಾಯಕಾರಿ ಬ್ಯಾಟ್ಸ್​ಮನ್​. ತಂಡದ ನಾಯಕ ಕೊಹ್ಲಿ ರನ್​ ಗಳಿಸುವ ನಿರೀಕ್ಷೆಯಲ್ಲಿದ್ದರು. ಹಿಂದಿನ ಇನಿಂಗ್ಸ್‌ನಲ್ಲಿ ಹಲವು ಬಾರಿ ಕೊಹ್ಲಿಯ ಆಟವನ್ನು ನಾವು ನೋಡಿದ್ದರಿಂದ ನಮಗೆ ಅವರ ವಿಕೆಟ್​ ಪಡೆಯಲು ಬೋನಸ್ ಆಯಿತು ಎಂದು ಆರ್ಚರ್​ ಹೇಳಿದರು.

ಇದು ಸರಣಿಯ ಮೊದಲ ಪಂದ್ಯವಾಗಿದೆ. ನಮಗೆ ಇನ್ನೂ ನಾಲ್ಕು ಪಂದ್ಯಗಳಿವೆ. ಅದು ಬೇರೆ ಭಾರತ ತಂಡ ವರ್ಲ್ಡ್​ ರ‍್ಯಾಂಕಿಂಗ್​ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಆರ್ಚರ್​ ಹೇಳಿದರು.

ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 124 ರನ್​ ಕಲೆ ಹಾಕಿತ್ತು. ಇದನ್ನು ಬೆನ್ನತ್ತಿದ್ದ ಇಂಗ್ಲೆಂಡ್​ ತಂಡ 15.3 ಓವರ್​ಗಳಿಗೆ ಎರಡು ವಿಕೆಟ್​ಗಳನ್ನು ಕಳೆದುಕೊಂಡು 130 ರನ್ ಕಲೆ ಹಾಕಿ ಜಯಗಳಿಸಿತ್ತು. ಭಾನುವಾರ ಎರಡನೇ ಟಿ20 ಪಂದ್ಯ ಮೊಟೇರಾ ಸ್ಟೇಡಿಯಂನಲ್ಲಿ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.