ETV Bharat / sports

ಶ್ರೀಲಂಕಾ ಆಟಗಾರರಿಗೆ ಪ್ರಧಾನಿ ಸರಿಸಮಾನ ಭದ್ರತೆ... ಅಪಹಾಸ್ಯ ಮಾಡಿದ ಗಂಭೀರ್​

2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಕರಾಚಿಯಲ್ಲಿ ಉಗ್ರರು ದಾಳಿ ಮಾಡಿದ ನಂತರ ಯಾವುದೇ ದೇಶಗಳು ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದವು. ಆದರೆ 10 ವರ್ಷಗಳ ನಂತರ ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದು, ಲಂಕಾ ಆಟಗಾರರಿಗೆ ಪಾಕ್​ ಸರ್ಕಾರ ಪ್ರಧಾನಿಗೆ ನೀಡುವಂತಹ ಭದ್ರತೆ ನೀಡುತ್ತಿರುವುದಕ್ಕೆ ಗಂಭೀರ್​ ಲೇವಡಿ ಮಾಡಿದ್ದಾರೆ.

author img

By

Published : Oct 1, 2019, 12:53 PM IST

Gautam Gambhir

ಕರಾಚಿ: 10 ವರ್ಷಗಳ ನಂತರ ಕರಾಚಿಯಲ್ಲಿ ಮೊದಲ ಬಾರಿಗೆ ಕ್ರಿಕೆಟ್​ ನಡೆಯುತ್ತಿದ್ದು, ಶ್ರೀಲಂಕಾ ರಕ್ಷಣೆಗಾಗಿ ಪಾಕಿಸ್ತಾನ ಸರ್ಕಾರ ಆಯೋಜಿಸಿರುವ ರಕ್ಷಣಾ ವ್ಯವಸ್ಥೆಯನ್ನು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಬಿಜೆಪಿ ಸಂಸದ ಗಂಭೀರ್​ ಅಪಹಾಸ್ಯ ಮಾಡಿದ್ದಾರೆ.

2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಕರಾಚಿಯಲ್ಲಿ ಉಗ್ರರು ದಾಳಿ ಮಾಡಿದ ನಂತರ ಯಾವುದೇ ದೇಶಗಳು ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದವು. ಆದರೆ 10 ವರ್ಷಗಳ ನಂತರ ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದು, ಲಂಕಾ ಆಟಗಾರರಿಗೆ ಪಾಕ್​ ಸರ್ಕಾರ ಪ್ರಧಾನಿಗೆ ನೀಡುವಂತಹ ಭದ್ರತೆ ನೀಡುತ್ತಿರುವುದಕ್ಕೆ ಗಂಭೀರ್​ ಲೇವಡಿ ಮಾಡಿದ್ದಾರೆ.

ಭಾರತದ ಗಡಿ ವ್ಯವಸ್ಥೆ ಹಾಗೂ ಕಾಶ್ಮೀರ ವಿಚಾರವಾಗಿ ಕ್ಯಾತೆ ತೆಗೆಯುವವರಿಗೆ ಟ್ವಿಟ್ಟರ್​ನಲ್ಲಿ ತಕ್ಕ ಉತ್ತರ ನೀಡುವ ಗಂಭೀರ್​ ಇದೀಗ ಪಾಕಿಸ್ತಾನದಲ್ಲಿ ನಡೆಯುವ ಕ್ರಿಕೆಟ್​ ಪಂದ್ಯಕ್ಕಾಗಿ ಅಲ್ಲಿನ​ ಸರ್ಕಾರ ನೀಡುತ್ತಿರುವ ಭದ್ರತೆ ಕುರಿತು "ಕಾಶ್ಮೀರಕ್ಕಾಗಿ ಸಾಕಷ್ಟು ಹೋರಾಟ ಮಾಡುತ್ತಾ ಕರಾಚಿಯನ್ನು ಮೆರೆತಿದೆ" ಎಂದು ಪಾಕಿಸ್ತಾನದ ಕಾಲೆಳೆದಿದ್ದಾರೆ. ಆಫ್ರಿದಿ ಸೇರಿದಂತೆ ಹಲವು ಕ್ರಿಕೆಟಿಗರು ಕಾಶ್ಮೀರದಲ್ಲಿ ಜನಸಾಮಾನ್ಯರು ಸಹ ಭಾರತೀಯ ಸೈನಿಕರಿಂದ ಹಲ್ಲೆಗೊಳಗಾಗುತ್ತಿದ್ದಾರೆ, ಅವರಿಗೆ ರಕ್ಷಣೆ ದೊರೆಯುತ್ತಿಲ್ಲ ಎಂದು ಆಗಾಗ್ಗೆ ಟ್ವೀಟ್​ ಮಾಡುತ್ತಿದ್ದರು. ಅದಕ್ಕಾಗಿ ಗಂಭೀರ್​ ದೇಶದ ಒಳಗೆ ಈ ರೀತಿ ಭದ್ರತೆ ಅವಶ್ಯಕತೆ ಇದೆ ಎಂದರೆ ಎಂತಹ ಸ್ಥಿತಿಯಲ್ಲಿ ಪಾಕಿಸ್ತಾನ ಇದೆ ಎಂಬುದರ ಕುರಿತು ಟ್ವೀಟ್​ ಮೂಲಕ ವಿಡಿಯೋ ಹಾಕಿ ಕಾಲೆಳೆದಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ತಂಡವನ್ನು 67 ರನ್​ಗಳಿಂದ ಮಣಿಸಿದೆ. ಪಾಕ್​ ತಂಡದ ರನ್​ ಮಷಿನ್​ ಬಾಬರ್​ ಅಜಂ ಆಕರ್ಷಕ ಶತಕ ಸಿಡಿಸಿ ದಾಖಲೆಯ ಜಯಕ್ಕೆ ಕಾರಣರಾಗಿದ್ದರು.

ಕರಾಚಿ: 10 ವರ್ಷಗಳ ನಂತರ ಕರಾಚಿಯಲ್ಲಿ ಮೊದಲ ಬಾರಿಗೆ ಕ್ರಿಕೆಟ್​ ನಡೆಯುತ್ತಿದ್ದು, ಶ್ರೀಲಂಕಾ ರಕ್ಷಣೆಗಾಗಿ ಪಾಕಿಸ್ತಾನ ಸರ್ಕಾರ ಆಯೋಜಿಸಿರುವ ರಕ್ಷಣಾ ವ್ಯವಸ್ಥೆಯನ್ನು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಬಿಜೆಪಿ ಸಂಸದ ಗಂಭೀರ್​ ಅಪಹಾಸ್ಯ ಮಾಡಿದ್ದಾರೆ.

2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಕರಾಚಿಯಲ್ಲಿ ಉಗ್ರರು ದಾಳಿ ಮಾಡಿದ ನಂತರ ಯಾವುದೇ ದೇಶಗಳು ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದವು. ಆದರೆ 10 ವರ್ಷಗಳ ನಂತರ ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದು, ಲಂಕಾ ಆಟಗಾರರಿಗೆ ಪಾಕ್​ ಸರ್ಕಾರ ಪ್ರಧಾನಿಗೆ ನೀಡುವಂತಹ ಭದ್ರತೆ ನೀಡುತ್ತಿರುವುದಕ್ಕೆ ಗಂಭೀರ್​ ಲೇವಡಿ ಮಾಡಿದ್ದಾರೆ.

ಭಾರತದ ಗಡಿ ವ್ಯವಸ್ಥೆ ಹಾಗೂ ಕಾಶ್ಮೀರ ವಿಚಾರವಾಗಿ ಕ್ಯಾತೆ ತೆಗೆಯುವವರಿಗೆ ಟ್ವಿಟ್ಟರ್​ನಲ್ಲಿ ತಕ್ಕ ಉತ್ತರ ನೀಡುವ ಗಂಭೀರ್​ ಇದೀಗ ಪಾಕಿಸ್ತಾನದಲ್ಲಿ ನಡೆಯುವ ಕ್ರಿಕೆಟ್​ ಪಂದ್ಯಕ್ಕಾಗಿ ಅಲ್ಲಿನ​ ಸರ್ಕಾರ ನೀಡುತ್ತಿರುವ ಭದ್ರತೆ ಕುರಿತು "ಕಾಶ್ಮೀರಕ್ಕಾಗಿ ಸಾಕಷ್ಟು ಹೋರಾಟ ಮಾಡುತ್ತಾ ಕರಾಚಿಯನ್ನು ಮೆರೆತಿದೆ" ಎಂದು ಪಾಕಿಸ್ತಾನದ ಕಾಲೆಳೆದಿದ್ದಾರೆ. ಆಫ್ರಿದಿ ಸೇರಿದಂತೆ ಹಲವು ಕ್ರಿಕೆಟಿಗರು ಕಾಶ್ಮೀರದಲ್ಲಿ ಜನಸಾಮಾನ್ಯರು ಸಹ ಭಾರತೀಯ ಸೈನಿಕರಿಂದ ಹಲ್ಲೆಗೊಳಗಾಗುತ್ತಿದ್ದಾರೆ, ಅವರಿಗೆ ರಕ್ಷಣೆ ದೊರೆಯುತ್ತಿಲ್ಲ ಎಂದು ಆಗಾಗ್ಗೆ ಟ್ವೀಟ್​ ಮಾಡುತ್ತಿದ್ದರು. ಅದಕ್ಕಾಗಿ ಗಂಭೀರ್​ ದೇಶದ ಒಳಗೆ ಈ ರೀತಿ ಭದ್ರತೆ ಅವಶ್ಯಕತೆ ಇದೆ ಎಂದರೆ ಎಂತಹ ಸ್ಥಿತಿಯಲ್ಲಿ ಪಾಕಿಸ್ತಾನ ಇದೆ ಎಂಬುದರ ಕುರಿತು ಟ್ವೀಟ್​ ಮೂಲಕ ವಿಡಿಯೋ ಹಾಕಿ ಕಾಲೆಳೆದಿದ್ದಾರೆ.

ಸೋಮವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ತಂಡವನ್ನು 67 ರನ್​ಗಳಿಂದ ಮಣಿಸಿದೆ. ಪಾಕ್​ ತಂಡದ ರನ್​ ಮಷಿನ್​ ಬಾಬರ್​ ಅಜಂ ಆಕರ್ಷಕ ಶತಕ ಸಿಡಿಸಿ ದಾಖಲೆಯ ಜಯಕ್ಕೆ ಕಾರಣರಾಗಿದ್ದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.