ETV Bharat / sports

ಧ್ಯಾನ್ ಚಂದ್​ಗೆ​ 'ಭಾರತ ರತ್ನ' ನೀಡುವಂತೆ ಗೌತಮ್​ ಗಂಭೀರ್​, ಸೆಹ್ವಾಗ್​ ಮನವಿ

author img

By

Published : Aug 29, 2020, 6:51 PM IST

ಹಾಕಿ ಕ್ರೀಡೆಯ ಮೂಲಕ ಭಾರತದ ಗೌರವವನ್ನು ವಿಶ್ವಕ್ಕೆಲ್ಲಾ ಪಸರಿಸಿದ ಹಾಕಿ ಮಾಂತ್ರಿಕ ಮೇಜರ್‌ ಧ್ಯಾನ್‌ಚಂದ್‌ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡುವಂತೆ ಇದೀಗ ಖ್ಯಾತ ಕ್ರಿಕೆಟಿಗರು ಮನವಿ ಮಾಡಿದ್ದಾರೆ.

ಧ್ಯಾನ್ ಚಂದ್​ ಭಾರತ ರತ್ನ
ಧ್ಯಾನ್ ಚಂದ್​ ಭಾರತ ರತ್ನ

ನವದೆಹಲಿ: ದೇಶದ ಹಾಕಿ ದಂತಕತೆ ಮೇಜರ್ ಧ್ಯಾನ್​ ಚಂದ್​ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ನೀಡುವಂತೆ ಕ್ರಿಕೆಟಿಗರಾದ ಗೌತಮ್ ಗಂಭೀರ್‌ ಹಾಗು ವೀರೇಂದ್ರ ಸೆಹ್ವಾಗ್ ಮನವಿ ಮಾಡಿದ್ದಾರೆ.

ಧ್ಯಾನ್‌ಚಂದ್ ಸ್ಮರಿಸಿ ಟ್ವೀಟ್ ಮಾಡಿರುವ ಸೆಹ್ವಾಗ್‌, ಧ್ಯಾನ್‌ಚಂದ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ಬರೆದುಕೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಧ್ಯಾನ್‌ಚಂದ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಒತ್ತಾಯ ಕ್ರೀಡಾಲೋಕದಿಂದ ಜೋರಾಗಿ ಕೇಳಿಬರುತ್ತಿದೆ.

ಭಾರತದ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಈ ಅತ್ಯುನ್ನತ ನಾಗರಿಕ ಗೌರವ ಸ್ವೀಕರಿಸಿರುವ ದೇಶದ ಏಕೈಕ ಕ್ರೀಡಾಪಟುವಾಗಿದ್ದಾರೆ.

ನವದೆಹಲಿ: ದೇಶದ ಹಾಕಿ ದಂತಕತೆ ಮೇಜರ್ ಧ್ಯಾನ್​ ಚಂದ್​ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ನೀಡುವಂತೆ ಕ್ರಿಕೆಟಿಗರಾದ ಗೌತಮ್ ಗಂಭೀರ್‌ ಹಾಗು ವೀರೇಂದ್ರ ಸೆಹ್ವಾಗ್ ಮನವಿ ಮಾಡಿದ್ದಾರೆ.

ಧ್ಯಾನ್‌ಚಂದ್ ಸ್ಮರಿಸಿ ಟ್ವೀಟ್ ಮಾಡಿರುವ ಸೆಹ್ವಾಗ್‌, ಧ್ಯಾನ್‌ಚಂದ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ಬರೆದುಕೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಧ್ಯಾನ್‌ಚಂದ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಒತ್ತಾಯ ಕ್ರೀಡಾಲೋಕದಿಂದ ಜೋರಾಗಿ ಕೇಳಿಬರುತ್ತಿದೆ.

ಭಾರತದ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಈ ಅತ್ಯುನ್ನತ ನಾಗರಿಕ ಗೌರವ ಸ್ವೀಕರಿಸಿರುವ ದೇಶದ ಏಕೈಕ ಕ್ರೀಡಾಪಟುವಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.