ETV Bharat / sports

ನೇಣು ಬಿಗಿದ ಸ್ಥಿತಿಯಲ್ಲಿ ನಿವೃತ್ತ ರಣಜಿ ಕ್ರಿಕೆಟರ್​ ಸುರೇಶ್​ ಕುಮಾರ್​ ಮೃತದೇಹ ಪತ್ತೆ - Ranji player Suresh Kumar News

ರಾಹುಲ್​ ದ್ರಾವಿಡ್​​ ಅಂಡರ್ ​​- 19 ಕ್ರಿಕೆಟ್​ ತಂಡದಲ್ಲಿದ್ದ ಕ್ರಿಕೆಟರ್​ ಎಂ. ಸುರೇಶ್​ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಅವರಿಗೆ 47 ವರ್ಷ ವಯಸ್ಸಾಗಿತ್ತು.

Ex Ranji Trophy player M Suresh Kumar
Ex Ranji Trophy player M Suresh Kumar
author img

By

Published : Oct 10, 2020, 3:11 PM IST

ಆಲಪ್ಪುಳ(ಕೇರಳ): ನೇಣು ಬಿಗಿದ ಸ್ಥಿತಿಯಲ್ಲಿ ಕೇರಳದ ಮಾಜಿ ರಣಜಿ ಕ್ರಿಕೆಟರ್​ ಎಂ. ಸುರೇಶ್​ ಕುಮಾರ್​ ಮೃತದೇಹ ಪತ್ತೆಯಾಗಿದೆ. ನಿನ್ನೆ ಸಂಜೆ 7:15ರ ಸುಮಾರಿಗೆ ಬೆಡ್​ರೂಂನಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಇದರ ಬಗ್ಗೆ ಅವರ ಮಗ ಮಾಹಿತಿ ನೀಡಿದ್ದಾರೆ.

ಈ ಹಿಂದೆ ದಿ ವಾಲ್​ ರಾಹುಲ್​ ದ್ರಾವಿಡ್​ ಅವರ ಅಂಡರ್​-19 ತಂಡದಲ್ಲಿದ್ದ ಎಂ ಸುರೇಶ್​​ ಕುಮಾರ್​​ 72 ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯಗಳನ್ನಾಡಿದ್ದು, 1,657 ರನ್​ ಹಾಗೂ 196 ವಿಕೆಟ್​​ ಗಳಿಸಿದ್ದಾರೆ.

52 ಪಂದ್ಯಗಳನ್ನ ಕೇರಳ ಹಾಗೂ 17 ಪಂದ್ಯಗಳನ್ನ ರೈಲ್ವೇಸ್​ ಪರ ಆಡಿದ್ದ ಇವರು ಸದ್ಯ ರೈಲ್ವೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದರು. ವಿಶೇಷ ಎಂದರೆ ದುಲೀಪ್​ ಟ್ರೋಫಿಯಲ್ಲಿ ಆಡಿರುವ ಕೀರ್ತಿ ಇವರದ್ದಾಗಿದೆ. ಇನ್ನು 1992ರಲ್ಲಿ ಅಂಡರ್​​-19 ತಂಡ ಹಾಗೂ ಏಕದಿನ ತಂಡದಲ್ಲೂ ಇವರು ಕಾಣಿಸಿಕೊಂಡಿದ್ದರು.

ಆಲಪ್ಪುಳ(ಕೇರಳ): ನೇಣು ಬಿಗಿದ ಸ್ಥಿತಿಯಲ್ಲಿ ಕೇರಳದ ಮಾಜಿ ರಣಜಿ ಕ್ರಿಕೆಟರ್​ ಎಂ. ಸುರೇಶ್​ ಕುಮಾರ್​ ಮೃತದೇಹ ಪತ್ತೆಯಾಗಿದೆ. ನಿನ್ನೆ ಸಂಜೆ 7:15ರ ಸುಮಾರಿಗೆ ಬೆಡ್​ರೂಂನಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಇದರ ಬಗ್ಗೆ ಅವರ ಮಗ ಮಾಹಿತಿ ನೀಡಿದ್ದಾರೆ.

ಈ ಹಿಂದೆ ದಿ ವಾಲ್​ ರಾಹುಲ್​ ದ್ರಾವಿಡ್​ ಅವರ ಅಂಡರ್​-19 ತಂಡದಲ್ಲಿದ್ದ ಎಂ ಸುರೇಶ್​​ ಕುಮಾರ್​​ 72 ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯಗಳನ್ನಾಡಿದ್ದು, 1,657 ರನ್​ ಹಾಗೂ 196 ವಿಕೆಟ್​​ ಗಳಿಸಿದ್ದಾರೆ.

52 ಪಂದ್ಯಗಳನ್ನ ಕೇರಳ ಹಾಗೂ 17 ಪಂದ್ಯಗಳನ್ನ ರೈಲ್ವೇಸ್​ ಪರ ಆಡಿದ್ದ ಇವರು ಸದ್ಯ ರೈಲ್ವೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದರು. ವಿಶೇಷ ಎಂದರೆ ದುಲೀಪ್​ ಟ್ರೋಫಿಯಲ್ಲಿ ಆಡಿರುವ ಕೀರ್ತಿ ಇವರದ್ದಾಗಿದೆ. ಇನ್ನು 1992ರಲ್ಲಿ ಅಂಡರ್​​-19 ತಂಡ ಹಾಗೂ ಏಕದಿನ ತಂಡದಲ್ಲೂ ಇವರು ಕಾಣಿಸಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.