ETV Bharat / sports

ಸಚಿನ್​, ಗಂಗೂಲಿ 2007ರ T-20 ವಿಶ್ವಕಪ್​ ಆಡದಿರಲು ಕಾರಣವಾಗಿದ್ದು ದ್ರಾವಿಡ್: ರಹಸ್ಯ ಹೊರಹಾಕಿದ ಲಾಲ್​ಚಂದ್​! - ಸಚಿನ್​ ತೆಂಡೂಲ್ಕರ್​

2007ರ ಚೊಚ್ಚಲ ಟಿ - 20 ವಿಶ್ವಕಪ್​​ನಲ್ಲಿ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ಹಾಗೂ ಸೌರವ್​ ಗಂಗೂಲಿ ಹೊರಗುಳಿಯಲು ಏನು ಕಾರಣ ಎಂಬುದಕ್ಕೆ ಸಂಬಂಧಿಸಿದಂತೆ ಲಾಲ್​ಚಂದ್​ ರಜಪೂತ್ ಇದೀಗ​ ಮಾಹಿತಿ ಹೊರಹಾಕಿದ್ದಾರೆ.

2007 world cup
2007 world cup
author img

By

Published : Jun 29, 2020, 3:06 PM IST

ನವದೆಹಲಿ: 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ - 20 ವಿಶ್ವಕಪ್​ನಲ್ಲಿ ಭಾಗಿಯಾಗಿದ್ದ ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಟೀಂ ಇಂಡಿಯಾ ಪ್ರಶಸ್ತಿಗೆ ಮುತ್ತಿಕ್ಕಿ. ಹೊಸ ದಾಖಲೆ ನಿರ್ಮಾಣ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಪಾಕ್​ ವಿರುದ್ಧದ ಫೈನಲ್​ ಪಂದ್ಯದಲ್ಲಿ ಸೂಪರ್​ ಓವರ್ ಮೂಲಕ ಜಯ ಸಾಧಿಸಿದ್ದ ಯಂಗ್​ ಇಂಡಿಯಾ, ಯಂಗ್​ ಪ್ಲೇಯರ್ಸ್​ಗೆ ಅವಕಾಶ ನೀಡಿತ್ತು. ಆದರೆ, ಕ್ರಿಕೆಟ್​ ದಿಗ್ಗಜರಾದ ಸಚಿನ್​ ತೆಂಡೂಲ್ಕರ್​ ಹಾಗೂ ಸೌರವ್​ ಗಂಗೂಲಿ ಈ ಟೂರ್ನಿಯಿಂದ ಹೊರ ಉಳಿದಿದ್ದರು.

Sachin & Ganguly
ಸಚಿನ್​, ಸೌರವ್​ ಗಂಗೂಲಿ

ಈ ಮಹತ್ವದ ಟೂರ್ನಿಯಿಂದ ಹೊರಗೆ ಉಳಿಯುವಂತೆ ದಿ ವಾಲ್​ ರಾಹುಲ್​ ದ್ರಾವಿಡ್​, ತೆಂಡೂಲ್ಕರ್​ ಹಾಗೂ ಗಂಗೂಲಿ ಅವರ ಮನವೊಲಿಸಿದ್ದರು ಎಂಬ ಮಾಹಿತಿಯನ್ನ ಅಂದಿನ ಟೀಂ ಇಂಡಿಯಾ ಮ್ಯಾನೇಜರ್​​ ಲಾಲ್​ಚಂದ್​ ರಜಪೂತ್​ ಹೇಳಿ ಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಇಂಗ್ಲೆಂಡ್​ನಲ್ಲಿ ನಡೆದಿದ್ದ ಕ್ರಿಕೆಟ್​ ಟೂರ್ನಿ ವೇಳೆ ರಾಹುಲ್​ ದ್ರಾವಿಡ್​ ಕ್ಯಾಪ್ಟನ್​ ಆಗಿದ್ದರು. ಈ ವೇಳೆ ದ್ರಾವಿಡ್​​ ತೆಂಡೂಲ್ಕರ್​ ಹಾಗೂ ಗಂಗೂಲಿ ಮನವೊಲಿಕೆ ಮಾಡಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಯಂಗ್​ ಪ್ಲೇಯರ್ಸ್​ಗೆ ಅವಕಾಶ ನೀಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದರು. ಹೀಗಾಗಿ ತಂಡದಲ್ಲಿ ರೋಹಿತ್​ ಶರ್ಮಾ, ರಾಬಿನ್​ ಉತ್ತಪ್ಪ, ಯೂಸೂಫ್​ ಪಠಾಣ್​, ಜೋಗಿಂದರ್​ ಶರ್ಮಾ ಅವಕಾಶ ಪಡೆದುಕೊಂಡಿದ್ದರು ಎಂದಿದ್ದಾರೆ. ಜತೆಗೆ 2007ರ ವಿಶ್ವಕಪ್​ ಟೂರ್ನಿಯಲ್ಲಿ ಭಾಗಿಯಾಗಲು ಕೆಲ ಪ್ಲೇಯರ್ಸ್​ ಇಂಗ್ಲೆಂಡ್​ನಿಂದ ಜೋಹಾನ್ಸ್​ಬರ್ಗ್​ಗೆ ಆಗಮಿಸಿದ್ದರು ಎಂಬ ಮಾಹಿತಿ ಹೊರಹಾಕಿದ್ದಾರೆ.

007 world cup
ಪ್ರಶಸ್ತಿಗೆ ಮುತ್ತಿಕ್ಕಿದ್ದ ಟೀಂ ಇಂಡಿಯಾ

2007ರ ವಿಶ್ವಕಪ್​ನಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾಗೆ ಎಲ್ಲವೂ ಹೊಸ ಚಾಲೇಂಜ್​ ಆಗಿತು. ಎಲ್ಲರೂ ಯಂಗ್​ ಪ್ಲೇಯರ್ಸ್​​​​​ಗಳಿದ್ದರು. ಕೇವಲ ಬೆರಳೆಣಿಕೆಯಷ್ಟು ಅನುಭವಿ ಆಟಗಾರರು ಇದ್ದರು. ಈ ಟೂರ್ನಿಯಲ್ಲಿ ಎಲ್ಲರೂ ಹೊಸ ಇತಿಹಾಸ ರಚನೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದರು ಎಂದು ಲಾಲ್​ಚಂದ್​ ರಜಪೂತ್​ ತಿಳಿಸಿದ್ದಾರೆ.

Lalchand Rajput
ಲಾಲ್​ ಚಂದ್​ ರಜಪೂತ್​

ಈ ಟೂರ್ನಿಯಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸ ಯಾರಲ್ಲೂ ಇರಲಿಲ್ಲ. ಈ ಹಿಂದೆ ಟಿ-20 ಕ್ರಿಕೆಟ್​ನಲ್ಲಿ ನಮ್ಮ ಪ್ಲೇಯರ್ಸ್​ಗೆ ಅಷ್ಟೊಂದು ಅನುಭವ ಕೂಡ ಇರಲಿಲ್ಲ. ಆದರೆ ನಮ್ಮ ಯುವ ಪಡೆ ಇತಿಹಾಸ ರಚನೆ ಮಾಡುವಲ್ಲಿ ಯಶಸ್ವಿಯಾಯಿತು ಎಂದು ತಿಳಿಸಿದ್ದಾರೆ.

ಇದರ ಜತೆಗೆ ಅನೇಕ ವರ್ಷಗಳಿಂದ ಕ್ರಿಕೆಟ್​ ಆಡುತ್ತಿದ್ದ ಸಚಿನ್​ಗೆ ವಿಶ್ವಕಪ್​ ಗೆದ್ದಿಲ್ಲ ಎಂಬ ಕೊರಗು ಕೂಡ ಇತ್ತು. ಅದು 2011ರ ಏಕದಿನ ವಿಶ್ವಕಪ್​ನಲ್ಲಿ ಈಡೇರಿತು ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ನವದೆಹಲಿ: 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ - 20 ವಿಶ್ವಕಪ್​ನಲ್ಲಿ ಭಾಗಿಯಾಗಿದ್ದ ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಟೀಂ ಇಂಡಿಯಾ ಪ್ರಶಸ್ತಿಗೆ ಮುತ್ತಿಕ್ಕಿ. ಹೊಸ ದಾಖಲೆ ನಿರ್ಮಾಣ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಪಾಕ್​ ವಿರುದ್ಧದ ಫೈನಲ್​ ಪಂದ್ಯದಲ್ಲಿ ಸೂಪರ್​ ಓವರ್ ಮೂಲಕ ಜಯ ಸಾಧಿಸಿದ್ದ ಯಂಗ್​ ಇಂಡಿಯಾ, ಯಂಗ್​ ಪ್ಲೇಯರ್ಸ್​ಗೆ ಅವಕಾಶ ನೀಡಿತ್ತು. ಆದರೆ, ಕ್ರಿಕೆಟ್​ ದಿಗ್ಗಜರಾದ ಸಚಿನ್​ ತೆಂಡೂಲ್ಕರ್​ ಹಾಗೂ ಸೌರವ್​ ಗಂಗೂಲಿ ಈ ಟೂರ್ನಿಯಿಂದ ಹೊರ ಉಳಿದಿದ್ದರು.

Sachin & Ganguly
ಸಚಿನ್​, ಸೌರವ್​ ಗಂಗೂಲಿ

ಈ ಮಹತ್ವದ ಟೂರ್ನಿಯಿಂದ ಹೊರಗೆ ಉಳಿಯುವಂತೆ ದಿ ವಾಲ್​ ರಾಹುಲ್​ ದ್ರಾವಿಡ್​, ತೆಂಡೂಲ್ಕರ್​ ಹಾಗೂ ಗಂಗೂಲಿ ಅವರ ಮನವೊಲಿಸಿದ್ದರು ಎಂಬ ಮಾಹಿತಿಯನ್ನ ಅಂದಿನ ಟೀಂ ಇಂಡಿಯಾ ಮ್ಯಾನೇಜರ್​​ ಲಾಲ್​ಚಂದ್​ ರಜಪೂತ್​ ಹೇಳಿ ಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಇಂಗ್ಲೆಂಡ್​ನಲ್ಲಿ ನಡೆದಿದ್ದ ಕ್ರಿಕೆಟ್​ ಟೂರ್ನಿ ವೇಳೆ ರಾಹುಲ್​ ದ್ರಾವಿಡ್​ ಕ್ಯಾಪ್ಟನ್​ ಆಗಿದ್ದರು. ಈ ವೇಳೆ ದ್ರಾವಿಡ್​​ ತೆಂಡೂಲ್ಕರ್​ ಹಾಗೂ ಗಂಗೂಲಿ ಮನವೊಲಿಕೆ ಮಾಡಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಯಂಗ್​ ಪ್ಲೇಯರ್ಸ್​ಗೆ ಅವಕಾಶ ನೀಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದರು. ಹೀಗಾಗಿ ತಂಡದಲ್ಲಿ ರೋಹಿತ್​ ಶರ್ಮಾ, ರಾಬಿನ್​ ಉತ್ತಪ್ಪ, ಯೂಸೂಫ್​ ಪಠಾಣ್​, ಜೋಗಿಂದರ್​ ಶರ್ಮಾ ಅವಕಾಶ ಪಡೆದುಕೊಂಡಿದ್ದರು ಎಂದಿದ್ದಾರೆ. ಜತೆಗೆ 2007ರ ವಿಶ್ವಕಪ್​ ಟೂರ್ನಿಯಲ್ಲಿ ಭಾಗಿಯಾಗಲು ಕೆಲ ಪ್ಲೇಯರ್ಸ್​ ಇಂಗ್ಲೆಂಡ್​ನಿಂದ ಜೋಹಾನ್ಸ್​ಬರ್ಗ್​ಗೆ ಆಗಮಿಸಿದ್ದರು ಎಂಬ ಮಾಹಿತಿ ಹೊರಹಾಕಿದ್ದಾರೆ.

007 world cup
ಪ್ರಶಸ್ತಿಗೆ ಮುತ್ತಿಕ್ಕಿದ್ದ ಟೀಂ ಇಂಡಿಯಾ

2007ರ ವಿಶ್ವಕಪ್​ನಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾಗೆ ಎಲ್ಲವೂ ಹೊಸ ಚಾಲೇಂಜ್​ ಆಗಿತು. ಎಲ್ಲರೂ ಯಂಗ್​ ಪ್ಲೇಯರ್ಸ್​​​​​ಗಳಿದ್ದರು. ಕೇವಲ ಬೆರಳೆಣಿಕೆಯಷ್ಟು ಅನುಭವಿ ಆಟಗಾರರು ಇದ್ದರು. ಈ ಟೂರ್ನಿಯಲ್ಲಿ ಎಲ್ಲರೂ ಹೊಸ ಇತಿಹಾಸ ರಚನೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದರು ಎಂದು ಲಾಲ್​ಚಂದ್​ ರಜಪೂತ್​ ತಿಳಿಸಿದ್ದಾರೆ.

Lalchand Rajput
ಲಾಲ್​ ಚಂದ್​ ರಜಪೂತ್​

ಈ ಟೂರ್ನಿಯಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸ ಯಾರಲ್ಲೂ ಇರಲಿಲ್ಲ. ಈ ಹಿಂದೆ ಟಿ-20 ಕ್ರಿಕೆಟ್​ನಲ್ಲಿ ನಮ್ಮ ಪ್ಲೇಯರ್ಸ್​ಗೆ ಅಷ್ಟೊಂದು ಅನುಭವ ಕೂಡ ಇರಲಿಲ್ಲ. ಆದರೆ ನಮ್ಮ ಯುವ ಪಡೆ ಇತಿಹಾಸ ರಚನೆ ಮಾಡುವಲ್ಲಿ ಯಶಸ್ವಿಯಾಯಿತು ಎಂದು ತಿಳಿಸಿದ್ದಾರೆ.

ಇದರ ಜತೆಗೆ ಅನೇಕ ವರ್ಷಗಳಿಂದ ಕ್ರಿಕೆಟ್​ ಆಡುತ್ತಿದ್ದ ಸಚಿನ್​ಗೆ ವಿಶ್ವಕಪ್​ ಗೆದ್ದಿಲ್ಲ ಎಂಬ ಕೊರಗು ಕೂಡ ಇತ್ತು. ಅದು 2011ರ ಏಕದಿನ ವಿಶ್ವಕಪ್​ನಲ್ಲಿ ಈಡೇರಿತು ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.