ETV Bharat / sports

ಭಾರತದ ಪರ ಆಡಿದ್ದು ಕನಸಿನಂತಿದೆ, ನಿಜಕ್ಕೂ ನಾನು ಇದನ್ನು ನಿರೀಕ್ಷಿಸಿರಲಿಲ್ಲ: ನಟರಾಜನ್​ - ನಟರಾಜನ್ ಪದಾರ್ಪಣೆ

29 ವರ್ಷದ ನಟರಾಜನ್​ ಒಂದೇ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮೊದಲ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಡಿಸೆಂಬರ್​ 2ರಂದು ಅವರು ಕ್ಯಾನ್ಬೆರಾದಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ನಂತರ ಟಿ-20 ಹಾಗೂ ಅನುಭವಿ ವೇಗಿಗಳ ಅನುಪಸ್ಥಿತಿಯಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ನಟರಾಜನ್
ನಟರಾಜನ್
author img

By

Published : Jan 24, 2021, 10:49 PM IST

Updated : Jan 25, 2021, 3:09 PM IST

ಚೆನ್ನೈ: ನೆಟ್​ ಬೌಲರ್​ ಆಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ವೇಗಿ ತಂಗರಸು ನಟರಾಜನ್​ ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಇತಿಹಾಸ ನಿರ್ಮಿಸಿದ್ದರು. ಆದರೆ ಸ್ವತಃ ನಟರಾಜನ್​ ತಾವು ಭಾರತದ ಪರ ಆಡುತ್ತೇನೆಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

29 ವರ್ಷದ ನಟರಾಜನ್​ ಒಂದೇ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮೊದಲ ಹಾಗೂ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಡಿಸೆಂಬರ್​ 2ರಂದು ಅವರು ಕ್ಯಾನ್ಬೆರಾದಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ನಂತರ ಟಿ-20 ಹಾಗೂ ಅನುಭವಿ ವೇಗಿಗಳ ಅನುಪಸ್ಥಿತಿಯಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ನಾನು ನನ್ನ ಕೆಲಸ ಮಾಡಲು ಉತ್ಸುಕನಾಗಿದ್ದೆ. ಆದರೆ ಏಕದಿನ ಕ್ರಿಕೆಟ್​ನಲ್ಲಿ ಅವಕಾಶ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಏಕದಿನ ಪಂದ್ಯದಲ್ಲಿ ಆಡುತ್ತಿದ್ದೇನೆ ಎಂದು ತಂಡದ ಆಡಳಿತ ಮಂಡಳಿ ಹೇಳಿದಾಗ ಸ್ವಲ್ಪ ಒತ್ತಡವಿತ್ತು. ನಾನು ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಬಯಸಿದೆ. ಮೊದಲ ಬಾರಿ ಆಡುವುದು ಮತ್ತು ವಿಕೆಟ್​ ಪಡೆದದ್ದು ಒಂದು ಕನಸಿನಂತಿತ್ತು ಎಂದು ನಟರಾಜನ್​ ಸೇಲಂ ಜಿಲ್ಲೆಯ ತಮ್ಮ ಊರಾದ ಚಿನ್ನಪ್ಪಂಪಟ್ಟಿಯಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

ನಾನು ಭಾರತ ತಂಡಕ್ಕೆ ಆಡಬೇಕೆಂಬ ಕನಸು ನನಸಾಗಿದ್ದನ್ನು ಮತ್ತು ಆ ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಇದು ಕನಸಿನಂತೆ ಇತ್ತು. ನನಗೆ ಕೋಚ್​ಗಳು, ಆಟಗಾರರಿಂದ ಸಾಕಷ್ಟು ಬೆಂಬಲ ಸಿಕ್ಕಿತು. ಎಲ್ಲರೂ ನನ್ನನ್ನು ಬೆಂಬಲಿಸಿದರು ಮತ್ತು ಪ್ರೇರೇಪಿಸಿದರು. ಅವರು ನನ್ನ ಬೆನ್ನಿಗೆ ನಿಂತಿದ್ದರಿಂದಲೇ ನಾನು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು ಎಂದಿದ್ದಾರೆ.

ಇದನ್ನು ಓದಿ:ಭಾರತದ ವಿರುದ್ಧ ಇಂಗ್ಲೆಂಡ್ ಬಲಿಷ್ಠ ತಂಡವನ್ನು ಕಣಕ್ಕಿಳಿಸಬೇಕಿದೆ: ಪೀಟರ್ಸನ್​​

ಚೆನ್ನೈ: ನೆಟ್​ ಬೌಲರ್​ ಆಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ವೇಗಿ ತಂಗರಸು ನಟರಾಜನ್​ ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಇತಿಹಾಸ ನಿರ್ಮಿಸಿದ್ದರು. ಆದರೆ ಸ್ವತಃ ನಟರಾಜನ್​ ತಾವು ಭಾರತದ ಪರ ಆಡುತ್ತೇನೆಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

29 ವರ್ಷದ ನಟರಾಜನ್​ ಒಂದೇ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮೊದಲ ಹಾಗೂ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಡಿಸೆಂಬರ್​ 2ರಂದು ಅವರು ಕ್ಯಾನ್ಬೆರಾದಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ನಂತರ ಟಿ-20 ಹಾಗೂ ಅನುಭವಿ ವೇಗಿಗಳ ಅನುಪಸ್ಥಿತಿಯಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ನಾನು ನನ್ನ ಕೆಲಸ ಮಾಡಲು ಉತ್ಸುಕನಾಗಿದ್ದೆ. ಆದರೆ ಏಕದಿನ ಕ್ರಿಕೆಟ್​ನಲ್ಲಿ ಅವಕಾಶ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಏಕದಿನ ಪಂದ್ಯದಲ್ಲಿ ಆಡುತ್ತಿದ್ದೇನೆ ಎಂದು ತಂಡದ ಆಡಳಿತ ಮಂಡಳಿ ಹೇಳಿದಾಗ ಸ್ವಲ್ಪ ಒತ್ತಡವಿತ್ತು. ನಾನು ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಬಯಸಿದೆ. ಮೊದಲ ಬಾರಿ ಆಡುವುದು ಮತ್ತು ವಿಕೆಟ್​ ಪಡೆದದ್ದು ಒಂದು ಕನಸಿನಂತಿತ್ತು ಎಂದು ನಟರಾಜನ್​ ಸೇಲಂ ಜಿಲ್ಲೆಯ ತಮ್ಮ ಊರಾದ ಚಿನ್ನಪ್ಪಂಪಟ್ಟಿಯಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

ನಾನು ಭಾರತ ತಂಡಕ್ಕೆ ಆಡಬೇಕೆಂಬ ಕನಸು ನನಸಾಗಿದ್ದನ್ನು ಮತ್ತು ಆ ಸಂತೋಷವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಇದು ಕನಸಿನಂತೆ ಇತ್ತು. ನನಗೆ ಕೋಚ್​ಗಳು, ಆಟಗಾರರಿಂದ ಸಾಕಷ್ಟು ಬೆಂಬಲ ಸಿಕ್ಕಿತು. ಎಲ್ಲರೂ ನನ್ನನ್ನು ಬೆಂಬಲಿಸಿದರು ಮತ್ತು ಪ್ರೇರೇಪಿಸಿದರು. ಅವರು ನನ್ನ ಬೆನ್ನಿಗೆ ನಿಂತಿದ್ದರಿಂದಲೇ ನಾನು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು ಎಂದಿದ್ದಾರೆ.

ಇದನ್ನು ಓದಿ:ಭಾರತದ ವಿರುದ್ಧ ಇಂಗ್ಲೆಂಡ್ ಬಲಿಷ್ಠ ತಂಡವನ್ನು ಕಣಕ್ಕಿಳಿಸಬೇಕಿದೆ: ಪೀಟರ್ಸನ್​​

Last Updated : Jan 25, 2021, 3:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.