ETV Bharat / sports

ಕೊಹ್ಲಿ, ವಿಲಿಯರ್ಸ್​ ದಾಖಲೆ ಸರಿಗಟ್ಟಿದ ಸಿಎಸ್​ಕೆ ತಂಡದ ರುತುರಾಜ್​ ಗಾಯಕ್ವಾಡ್!​

author img

By

Published : Nov 1, 2020, 8:40 PM IST

ಟೂರ್ನಿಯಲ್ಲಿ ಸಿಎಸ್​ಕೆ 14 ಪಂದ್ಯಗಲ್ಲಿ 8 ಸೋಲು ಹಾಗೂ 6 ಗೆಲುವುಗಳೊಂದಿಗೆ 12 ಅಂಕಪಡೆದು 7ನೇ ಸ್ಥಾನದೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಸತತ ಸೋಲುಗಳಿಂದ ವೈಫಲ್ಯ ಅನುಭವಿಸಿದ್ದ ಚೆನ್ನೈ ಕೊನೆಯ 3 ಪಂದ್ಯಗಳಲ್ಲಿ ಅದ್ಭುತವಾಗಿ ತಿರುಗಿ ಬಿದ್ದು ಆರ್​ಸಿಬಿ, ಕೆಕೆಆರ್ ಹಾಗೂ ಪಂಜಾಬ್ ತಂಡವನ್ನು ಮಣಿಸುವ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವುಗಳೊಂದಿಗೆ ತನ್ನ ಅಭಿಯಾನ ಮುಗಿಸಿದೆ.

ರುತುರಾಜ್​ ಗಾಯಕ್ವಾಡ್
ರುತುರಾಜ್​ ಗಾಯಕ್ವಾಡ್

ಅಬುಧಾಬಿ: ಸಿಎಸ್​ಕೆ ಐಪಿಎಲ್ ಇತಿಹಾಸದಲ್ಲೇ​ ಇದೇ ಮೊದಲ ಬಾರಿಗೆ ಗುಂಪು ಹಂತದಿಂದ ಹೊರಬಿದ್ದಿದೆ. ಆದರೆ ಕೊನೆಯ 3 ಪಂದ್ಯಗಳನ್ನು ಗೆಲ್ಲುವ ಮೂಲಕ ನಗುವಿನೊಂದಿಗೆ ಟೂರ್ನಿಯನ್ನು ಅಂತ್ಯಗೊಳಿಸಿದೆ. ಈ ಮೂರು ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸಿದ ರುತುರಾಜ್​ ತಮ್ಮ ಮೊದಲ ಆವೃತ್ತಿಯಲ್ಲೇ ಕೊಹ್ಲಿ, ವಿಲಿಯರ್ಸ್​ರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಟೂರ್ನಿಯಲ್ಲಿ ಸಿಎಸ್​ಕೆ 14 ಪಂದ್ಯಗಲ್ಲಿ 8 ಸೋಲು ಹಾಗೂ 6 ಗೆಲುವುಗಳೊಂದಿಗೆ 12 ಅಂಕಪಡೆದು 7ನೇ ಸ್ಥಾನದೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಸತತ ಸೋಲುಗಳಿಂದ ವೈಫಲ್ಯ ಅನುಭವಿಸಿದ್ದ ಚೆನ್ನೈ ಕೊನೆಯ 3 ಪಂದ್ಯಗಳಲ್ಲಿ ಅದ್ಭುತವಾಗಿ ತಿರುಗಿ ಬಿದ್ದು ಆರ್​ಸಿಬಿ, ಕೆಕೆಆರ್ ಹಾಗೂ ಪಂಜಾಬ್ ತಂಡವನ್ನು ಮಣಿಸುವ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವುಗಳೊಂದಿಗೆ ತನ್ನ ಅಭಿಯಾನ ಮುಗಿಸಿದೆ.

ಮೂರು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ 21 ವರ್ಷದ ರುತುರಾಜ್ ಗಾಯಕ್ವಾಡ್​, ಕ್ರಮವಾಗಿ 65 , 72 ಹಾಗೂ 62 ರನ್​ಗಳಿಸಿ ಮೂರು ಪಂದ್ಯಗಳಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಹಿಂದೆ ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್​ ಮಾತ್ರ ಐಪಿಎಲ್​ನಲ್ಲಿ ಸತತ 3 ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಇದಲ್ಲದೆ ಸತತ ಮೂರು ಪಂದ್ಯಗಳಲ್ಲಿ ಮೂರು ಅರ್ಧಶತಕ ಸಿಡಿಸಿದ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಮೊದಲ ಬ್ಯಾಟ್ಸ್​ಮನ್​ ಎಂಬ ಶ್ರೇಯಕ್ಕೆ ಪಾತ್ರರಾದರು. ಅದರಲ್ಲೂ ಚೇಸಿಂಗ್ ವೇಳೆ ಮೂರು ಅರ್ಧಶತಕ ಸಿಡಿಸುವ ಮೂಲಕ ಕ್ರಿಕೆಟ್​ ಪಂಡಿತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಬುಧಾಬಿ: ಸಿಎಸ್​ಕೆ ಐಪಿಎಲ್ ಇತಿಹಾಸದಲ್ಲೇ​ ಇದೇ ಮೊದಲ ಬಾರಿಗೆ ಗುಂಪು ಹಂತದಿಂದ ಹೊರಬಿದ್ದಿದೆ. ಆದರೆ ಕೊನೆಯ 3 ಪಂದ್ಯಗಳನ್ನು ಗೆಲ್ಲುವ ಮೂಲಕ ನಗುವಿನೊಂದಿಗೆ ಟೂರ್ನಿಯನ್ನು ಅಂತ್ಯಗೊಳಿಸಿದೆ. ಈ ಮೂರು ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸಿದ ರುತುರಾಜ್​ ತಮ್ಮ ಮೊದಲ ಆವೃತ್ತಿಯಲ್ಲೇ ಕೊಹ್ಲಿ, ವಿಲಿಯರ್ಸ್​ರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಟೂರ್ನಿಯಲ್ಲಿ ಸಿಎಸ್​ಕೆ 14 ಪಂದ್ಯಗಲ್ಲಿ 8 ಸೋಲು ಹಾಗೂ 6 ಗೆಲುವುಗಳೊಂದಿಗೆ 12 ಅಂಕಪಡೆದು 7ನೇ ಸ್ಥಾನದೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಸತತ ಸೋಲುಗಳಿಂದ ವೈಫಲ್ಯ ಅನುಭವಿಸಿದ್ದ ಚೆನ್ನೈ ಕೊನೆಯ 3 ಪಂದ್ಯಗಳಲ್ಲಿ ಅದ್ಭುತವಾಗಿ ತಿರುಗಿ ಬಿದ್ದು ಆರ್​ಸಿಬಿ, ಕೆಕೆಆರ್ ಹಾಗೂ ಪಂಜಾಬ್ ತಂಡವನ್ನು ಮಣಿಸುವ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವುಗಳೊಂದಿಗೆ ತನ್ನ ಅಭಿಯಾನ ಮುಗಿಸಿದೆ.

ಮೂರು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ 21 ವರ್ಷದ ರುತುರಾಜ್ ಗಾಯಕ್ವಾಡ್​, ಕ್ರಮವಾಗಿ 65 , 72 ಹಾಗೂ 62 ರನ್​ಗಳಿಸಿ ಮೂರು ಪಂದ್ಯಗಳಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಹಿಂದೆ ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್​ ಮಾತ್ರ ಐಪಿಎಲ್​ನಲ್ಲಿ ಸತತ 3 ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಇದಲ್ಲದೆ ಸತತ ಮೂರು ಪಂದ್ಯಗಳಲ್ಲಿ ಮೂರು ಅರ್ಧಶತಕ ಸಿಡಿಸಿದ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಮೊದಲ ಬ್ಯಾಟ್ಸ್​ಮನ್​ ಎಂಬ ಶ್ರೇಯಕ್ಕೆ ಪಾತ್ರರಾದರು. ಅದರಲ್ಲೂ ಚೇಸಿಂಗ್ ವೇಳೆ ಮೂರು ಅರ್ಧಶತಕ ಸಿಡಿಸುವ ಮೂಲಕ ಕ್ರಿಕೆಟ್​ ಪಂಡಿತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.