ETV Bharat / sports

ಧೋನಿಗೆ ಬೌಲರ್‌ಗಳಿಂದ ಅತ್ಯುತ್ತಮ ಪ್ರದರ್ಶನ ಹೊರತೆಗೆಯುವ ಕಲೆ ತಿಳಿದಿದೆ: ಕೆ.ಗೌತಮ್

author img

By

Published : Mar 29, 2021, 8:24 PM IST

ಕಳೆದ ವರ್ಷ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದ ಕನ್ನಡಿಗ ಕೆ. ಗೌತಮ್​ರನ್ನು ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್​ ಬರೋಬ್ಬರಿ 9.75 ಕೋಟಿ ರೂ ನೀಡಿ ಖರೀದಿಸಿದೆ. ಈಗಾಗಲೆ ಐಪಿಎಲ್​ಗಾಗಿ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಸೇರಿಕೊಂಡಿರುವ ಗೌತಮ್,​ ಧೋನಿ ನಾಯಕತ್ವದಲ್ಲಿ ಆಡುವ ಕನಸು ಈ ವರ್ಷ ನನಸಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಎಂಎಸ್​ ಧೋನಿ, ಕೆ ಗೌತಮ್
ಎಂಎಸ್​ ಧೋನಿ, ಕೆ ಗೌತಮ್

ಮುಂಬೈ: ಬೌಲರ್​ಗಳು ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಆಡುವುದಕ್ಕೆ ಇಷ್ಟಪಡುತ್ತಾರೆ. ಏಕೆಂದರೆ ಅವರಿಗೆ ಬೌಲರ್​ಗಳ ಸಾಮರ್ಥ್ಯದ ಬಗ್ಗೆ ಅರಿವಿದ್ದು, ಅವರಿಂದ ಅತ್ಯುತ್ತಮ ಪ್ರದರ್ಶನವನ್ನು ಹೊರತೆಗೆಯುವ ಕಲೆ ತಿಳಿದಿದ್ದಾರೆ ಎಂದು ಕನ್ನಡಿಗ ಕೃಷ್ಣಪ್ಪ ಗೌತಮ್​ ತಿಳಿಸಿದ್ದಾರೆ.

ಕಳೆದ ವರ್ಷ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದ ಕನ್ನಡಿಗ ಗೌತಮ್​ರನ್ನು ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್​ ಬರೋಬ್ಬರಿ 9.75 ಕೋಟಿ ರೂ ನೀಡಿ ಖರೀದಿಸಿದೆ. ಈಗಾಗಲೆ ಐಪಿಎಲ್​ಗಾಗಿ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಸೇರಿಕೊಂಡಿರುವ ಗೌತಮ್,​ ಧೋನಿ ನಾಯಕತ್ವದಲ್ಲಿ ಆಡುವ ಕನಸು ಈ ವರ್ಷ ನನಸಾಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಸಿಎಸ್​ಕೆ ವೆಬ್​ಸೈಟ್​ಗೆ ತಿಳಿಸಿದ್ದಾರೆ.

"ಬೌಲರ್​ಗಳು ಮಹಿ ಭಾಯ್​ ನಾಯಕತ್ವದಲ್ಲಿ ಆಡುವುದಕ್ಕೆ ಇಷ್ಟಪಡುತ್ತಾರೆ. ಏಕೆಂದರೆ ಅವರು ಬೌಲರ್​ಗಳ ಬಲವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರಿಗೆ ಉತ್ತಮ ಸಾಧನೆಯನ್ನು ಹೊರತೆಗೆಯುವುದು ಹೇಗೆ ಎಂದು ತಿಳಿದಿದೆ. ಸಿಎಸ್​ಕೆ ಅಂತಹ ಚಾಂಪಿಯನ್ಸ್​ ತಂಡದಲ್ಲಿ ಆಡುವಲ್ಲಿ ನಾನು ಯಾವುದೇ ಒತ್ತಡ ಅನುಭವಿಸುವುದಿಲ್ಲ" ಎಂದು ಅವರು ಹೇಳುತ್ತಾರೆ.

ಸಿಎಸ್​ಕೆ ಆಟಗಾರರು ಪ್ರಸ್ತುತ ಮುಂಬೈನಲ್ಲಿ ತರಬೇತಿ ನಡೆಸುತ್ತಿದ್ದಾರೆ. ಅವರು ಮುಂಬೈನಲ್ಲೇ ಮೊದಲ 5 ಪಂದ್ಯಗಳನ್ನಾಡಲಿದ್ದಾರೆ. ಏಪ್ರಿಲ್ 10ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದೆ.

ಆಲ್​ರೌಂಡರ್​ ರವೀಂದ್ರ ಜಡೇಜಾ, ಚೇತೇಶ್ವರ್ ಪೂಜಾರ, ಸುರೇಶ್ ರೈನಾ, ರಾಬಿನ್ ಉತ್ತಪ್ಪ ಈಗಾಗಲೆ ಮುಂಬೈನಲ್ಲಿ ತರಬೇತಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಧೋನಿ ಬೌಲರ್​ಗಳಿಂದ ಅತ್ಯುತ್ತಮವಾದದ್ದನ್ನು ಹೊರತೆಗೆಯುವುದು ತಿಳಿದಿದ್ದಾರೆ: ಕೆ ಗೌತಮ್

ಮುಂಬೈ: ಬೌಲರ್​ಗಳು ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಆಡುವುದಕ್ಕೆ ಇಷ್ಟಪಡುತ್ತಾರೆ. ಏಕೆಂದರೆ ಅವರಿಗೆ ಬೌಲರ್​ಗಳ ಸಾಮರ್ಥ್ಯದ ಬಗ್ಗೆ ಅರಿವಿದ್ದು, ಅವರಿಂದ ಅತ್ಯುತ್ತಮ ಪ್ರದರ್ಶನವನ್ನು ಹೊರತೆಗೆಯುವ ಕಲೆ ತಿಳಿದಿದ್ದಾರೆ ಎಂದು ಕನ್ನಡಿಗ ಕೃಷ್ಣಪ್ಪ ಗೌತಮ್​ ತಿಳಿಸಿದ್ದಾರೆ.

ಕಳೆದ ವರ್ಷ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದ ಕನ್ನಡಿಗ ಗೌತಮ್​ರನ್ನು ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್​ ಬರೋಬ್ಬರಿ 9.75 ಕೋಟಿ ರೂ ನೀಡಿ ಖರೀದಿಸಿದೆ. ಈಗಾಗಲೆ ಐಪಿಎಲ್​ಗಾಗಿ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಸೇರಿಕೊಂಡಿರುವ ಗೌತಮ್,​ ಧೋನಿ ನಾಯಕತ್ವದಲ್ಲಿ ಆಡುವ ಕನಸು ಈ ವರ್ಷ ನನಸಾಗುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಸಿಎಸ್​ಕೆ ವೆಬ್​ಸೈಟ್​ಗೆ ತಿಳಿಸಿದ್ದಾರೆ.

"ಬೌಲರ್​ಗಳು ಮಹಿ ಭಾಯ್​ ನಾಯಕತ್ವದಲ್ಲಿ ಆಡುವುದಕ್ಕೆ ಇಷ್ಟಪಡುತ್ತಾರೆ. ಏಕೆಂದರೆ ಅವರು ಬೌಲರ್​ಗಳ ಬಲವನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರಿಗೆ ಉತ್ತಮ ಸಾಧನೆಯನ್ನು ಹೊರತೆಗೆಯುವುದು ಹೇಗೆ ಎಂದು ತಿಳಿದಿದೆ. ಸಿಎಸ್​ಕೆ ಅಂತಹ ಚಾಂಪಿಯನ್ಸ್​ ತಂಡದಲ್ಲಿ ಆಡುವಲ್ಲಿ ನಾನು ಯಾವುದೇ ಒತ್ತಡ ಅನುಭವಿಸುವುದಿಲ್ಲ" ಎಂದು ಅವರು ಹೇಳುತ್ತಾರೆ.

ಸಿಎಸ್​ಕೆ ಆಟಗಾರರು ಪ್ರಸ್ತುತ ಮುಂಬೈನಲ್ಲಿ ತರಬೇತಿ ನಡೆಸುತ್ತಿದ್ದಾರೆ. ಅವರು ಮುಂಬೈನಲ್ಲೇ ಮೊದಲ 5 ಪಂದ್ಯಗಳನ್ನಾಡಲಿದ್ದಾರೆ. ಏಪ್ರಿಲ್ 10ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದೆ.

ಆಲ್​ರೌಂಡರ್​ ರವೀಂದ್ರ ಜಡೇಜಾ, ಚೇತೇಶ್ವರ್ ಪೂಜಾರ, ಸುರೇಶ್ ರೈನಾ, ರಾಬಿನ್ ಉತ್ತಪ್ಪ ಈಗಾಗಲೆ ಮುಂಬೈನಲ್ಲಿ ತರಬೇತಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಧೋನಿ ಬೌಲರ್​ಗಳಿಂದ ಅತ್ಯುತ್ತಮವಾದದ್ದನ್ನು ಹೊರತೆಗೆಯುವುದು ತಿಳಿದಿದ್ದಾರೆ: ಕೆ ಗೌತಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.