ETV Bharat / sports

ನಮ್ಮ ಬ್ಯಾಟ್ಸ್​ಮನ್​ಗಳ ಜೊತೆಯಾಟ ಕಟ್ಟುವ ಸಾಮರ್ಥ್ಯದಿಂದ ತಂಡಕ್ಕೆ ನೆರವು: ಗಿಲ್​​

author img

By

Published : Dec 27, 2020, 6:38 PM IST

"ಮೊದಲ ವಿಕೆಟ್ ​ಅನ್ನು ಬೇಗ ಕಳೆದುಕೊಂಡಾಗ ನಾನು ಮತ್ತು ಪೂಜಾರ ಭಾಯ್​, ಈ ಜೊತೆಯಾಟವನ್ನು ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೆ ಕೊಂಡೊಯ್ಯಲು ಚರ್ಚಿಸಿದ್ದೆವು. ಆದರೆ ನಾನು ಆಡಿದ ಆಟ (45) ನನಗೆ ತೃಪ್ತಿದಾಯಕವೆನಿಸಲಿಲ್ಲ. ಆದರೆ ಕೊನೆಯ ಜೊತೆಯಾಟ (ರಹಾನೆ ಮತ್ತು ಜಡೇಜಾ) ಉತ್ತಮವಾಗಿ ಸಾಗಿದ್ದು, ಇದು 150 ಮತ್ತು ಅದಕ್ಕಿಂತ ಹೆಚ್ಚು ರನ್​ಗಳಿಸುವ ಸಾಧ್ಯತೆಯಿದೆ" ಎಂದು ಗಿಲ್​ ಹೇಳಿದ್ದಾರೆ.

ಶುಬ್ಮನ್​ ಗಿಲ್​
ಶುಬ್ಮನ್​ ಗಿಲ್​

ಮೆಲ್ಬೋರ್ನ್​: ಭಾರತೀಯ ಬ್ಯಾಟ್ಸ್​ಮನ್​ಗಳಲ್ಲಿ ಜೊತೆಯಾಟಗಳನ್ನು ನಿರ್ಮಿಸುವ ಸಾಮರ್ಥ್ಯವಿದ್ದು, ಇನ್ನಿಂಗ್ಸ್​ನಲ್ಲಿ ಲೀಡ್ ಪಡೆದು, ಉತ್ತಮ ಸ್ಥಾನದಲ್ಲಿರಲು ನೆರವಾಗಿದೆ ಎಂದು ಯುವ ಬ್ಯಾಟ್ಸ್​ಮನ್​ ಶುಬ್ಮನ್​ ಗಿಲ್​ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಪಂದ್ಯ ಗೆಲ್ಲುವ ಮುನ್ನ ಪಾರ್ಟ್ನರ್​ಶಿಪ್​ ಬೆಳೆಸುವುದಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಮಾತನಾಡಿಕೊಂಡಿದ್ದೆವು ಎಂದು ಅವರು​ ಹೇಳಿದ್ದಾರೆ.

ರಹಾನೆ ಕೂಡ ಇದೇ ಮಾತನ್ನು ಪಂದ್ಯದ ಆರಂಭದಿಂದಲೂ ಹೇಳುತ್ತಿದ್ದರು.

ಕ್ರಿಕೆಟಿಗ ಶುಬ್ಮನ್ ಗಿಲ್​

"ಮೊದಲ ವಿಕೆಟ್ ​ಅನ್ನು ಬೇಗ ಕಳೆದುಕೊಂಡಾಗ ನಾನು ಮತ್ತು ಪೂಜಾರ ಭಾಯ್​, ಈ ಜೊತೆಯಾಟವನ್ನು ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೆ ಕೊಂಡೊಯ್ಯಲು ಚರ್ಚಿಸಿದ್ದೆವು. ಆದರೆ ನಾನು ಆಡಿದ ಆಟ (45) ನನಗೆ ತೃಪ್ತಿದಾಯಕವೆನಿಸಲಿಲ್ಲ. ಆದರೆ ಕೊನೆಯ ಜೊತೆಯಾಟ (ರಹಾನೆ ಮತ್ತು ಜಡೇಜಾ) ಉತ್ತಮವಾಗಿ ಸಾಗಿದ್ದು, ಇದು 150 ಮತ್ತು ಅದಕ್ಕಿಂತ ಹೆಚ್ಚು ರನ್​ಗಳಿಸುವ ಸಾಧ್ಯತೆಯಿದೆ" ಎಂದು ಗಿಲ್​ ಹೇಳಿದ್ದಾರೆ.

ಇನ್ನು ಜಡೇಜಾ ಕೊಡುಗೆಯನ್ನು ಕೂಡ 21 ವರ್ಷದ ಆಟಗಾರ ಶ್ಲಾಘಿಸಿದ್ದಾರೆ. ನನ್ನ ಪ್ರಕಾರ, "ಅದೊಂದು ಅಮೂಲ್ಯವಾದ ಆಟ. ಅವರು 170 ಆಸುಪಾಸಿನಲ್ಲಿ 5 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್​ಗಿಳಿದರು. ಆ ಸಂದರ್ಭದಲ್ಲಿ ನಾವು ವಿಕೆಟ್​ ಕಳೆದುಕೊಳ್ಳುವುದು ಸುಲಭವಾದರೆ ಮತ್ತು ಎದುರಾಳಿ ಮೇಲುಗೈ ಸಾಧಿಸುವ ಕ್ಷಣವಾಗಿತ್ತು. ಆದರೆ ಜಡ್ಡು ಭಾಯ್​ ಮತ್ತು ಅಜ್ಜು ಭಾಯ್ ಅವರ ಜೊತೆಯಾಟ ನಮಗೆ ಮಹತ್ವದ್ದಾಯಿತು" ಎಂದು ಗಿಲ್ ತಿಳಿಸಿದ್ದಾರೆ.

ಮೊದಲ ದಿನ 1 ವಿಕೆಟ್​ ನಷ್ಟಕ್ಕೆ 31ರನ್ ​ಗಳಿಸಿದ್ದ ಭಾರತ ತಂಡ, 2ನೇ ದಿನ ಆರಂಭದಲ್ಲೇ 64 ರನ್​ಗಳಾಗುವಷ್ಟರಲ್ಲಿ ಗಿಲ್ ಮತ್ತು ಪೂಜಾರ ವಿಕೆಟ್ ಕಳೆದುಕೊಂಡಿತು. ಆದರೆ ರಹಾನೆ (104) ಮತ್ತು ಜಡೇಜಾ (40) 6ನೇ ವಿಕೆಟ್​ಗೆ 104 ರನ್​ಗಳ ಜೊತೆಯಾಟ ನೀಡಿ ಆಸ್ಟ್ರೇಲಿಯಾ ವಿರುದ್ಧ 82 ರನ್​ಗಳ ಮಹತ್ವದ ಮುನ್ನಡೆಗೆ ನೆರವಾದರು. ಇನ್ನು 5 ವಿಕೆಟ್​ ಕೈಯಲ್ಲಿದ್ದು, ಭಾರತ ತಂಡ ಈ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುವ ಆಲೋಚನೆಯಲ್ಲಿದೆ.

ಮೆಲ್ಬೋರ್ನ್​: ಭಾರತೀಯ ಬ್ಯಾಟ್ಸ್​ಮನ್​ಗಳಲ್ಲಿ ಜೊತೆಯಾಟಗಳನ್ನು ನಿರ್ಮಿಸುವ ಸಾಮರ್ಥ್ಯವಿದ್ದು, ಇನ್ನಿಂಗ್ಸ್​ನಲ್ಲಿ ಲೀಡ್ ಪಡೆದು, ಉತ್ತಮ ಸ್ಥಾನದಲ್ಲಿರಲು ನೆರವಾಗಿದೆ ಎಂದು ಯುವ ಬ್ಯಾಟ್ಸ್​ಮನ್​ ಶುಬ್ಮನ್​ ಗಿಲ್​ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಪಂದ್ಯ ಗೆಲ್ಲುವ ಮುನ್ನ ಪಾರ್ಟ್ನರ್​ಶಿಪ್​ ಬೆಳೆಸುವುದಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಮಾತನಾಡಿಕೊಂಡಿದ್ದೆವು ಎಂದು ಅವರು​ ಹೇಳಿದ್ದಾರೆ.

ರಹಾನೆ ಕೂಡ ಇದೇ ಮಾತನ್ನು ಪಂದ್ಯದ ಆರಂಭದಿಂದಲೂ ಹೇಳುತ್ತಿದ್ದರು.

ಕ್ರಿಕೆಟಿಗ ಶುಬ್ಮನ್ ಗಿಲ್​

"ಮೊದಲ ವಿಕೆಟ್ ​ಅನ್ನು ಬೇಗ ಕಳೆದುಕೊಂಡಾಗ ನಾನು ಮತ್ತು ಪೂಜಾರ ಭಾಯ್​, ಈ ಜೊತೆಯಾಟವನ್ನು ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೆ ಕೊಂಡೊಯ್ಯಲು ಚರ್ಚಿಸಿದ್ದೆವು. ಆದರೆ ನಾನು ಆಡಿದ ಆಟ (45) ನನಗೆ ತೃಪ್ತಿದಾಯಕವೆನಿಸಲಿಲ್ಲ. ಆದರೆ ಕೊನೆಯ ಜೊತೆಯಾಟ (ರಹಾನೆ ಮತ್ತು ಜಡೇಜಾ) ಉತ್ತಮವಾಗಿ ಸಾಗಿದ್ದು, ಇದು 150 ಮತ್ತು ಅದಕ್ಕಿಂತ ಹೆಚ್ಚು ರನ್​ಗಳಿಸುವ ಸಾಧ್ಯತೆಯಿದೆ" ಎಂದು ಗಿಲ್​ ಹೇಳಿದ್ದಾರೆ.

ಇನ್ನು ಜಡೇಜಾ ಕೊಡುಗೆಯನ್ನು ಕೂಡ 21 ವರ್ಷದ ಆಟಗಾರ ಶ್ಲಾಘಿಸಿದ್ದಾರೆ. ನನ್ನ ಪ್ರಕಾರ, "ಅದೊಂದು ಅಮೂಲ್ಯವಾದ ಆಟ. ಅವರು 170 ಆಸುಪಾಸಿನಲ್ಲಿ 5 ವಿಕೆಟ್​ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್​ಗಿಳಿದರು. ಆ ಸಂದರ್ಭದಲ್ಲಿ ನಾವು ವಿಕೆಟ್​ ಕಳೆದುಕೊಳ್ಳುವುದು ಸುಲಭವಾದರೆ ಮತ್ತು ಎದುರಾಳಿ ಮೇಲುಗೈ ಸಾಧಿಸುವ ಕ್ಷಣವಾಗಿತ್ತು. ಆದರೆ ಜಡ್ಡು ಭಾಯ್​ ಮತ್ತು ಅಜ್ಜು ಭಾಯ್ ಅವರ ಜೊತೆಯಾಟ ನಮಗೆ ಮಹತ್ವದ್ದಾಯಿತು" ಎಂದು ಗಿಲ್ ತಿಳಿಸಿದ್ದಾರೆ.

ಮೊದಲ ದಿನ 1 ವಿಕೆಟ್​ ನಷ್ಟಕ್ಕೆ 31ರನ್ ​ಗಳಿಸಿದ್ದ ಭಾರತ ತಂಡ, 2ನೇ ದಿನ ಆರಂಭದಲ್ಲೇ 64 ರನ್​ಗಳಾಗುವಷ್ಟರಲ್ಲಿ ಗಿಲ್ ಮತ್ತು ಪೂಜಾರ ವಿಕೆಟ್ ಕಳೆದುಕೊಂಡಿತು. ಆದರೆ ರಹಾನೆ (104) ಮತ್ತು ಜಡೇಜಾ (40) 6ನೇ ವಿಕೆಟ್​ಗೆ 104 ರನ್​ಗಳ ಜೊತೆಯಾಟ ನೀಡಿ ಆಸ್ಟ್ರೇಲಿಯಾ ವಿರುದ್ಧ 82 ರನ್​ಗಳ ಮಹತ್ವದ ಮುನ್ನಡೆಗೆ ನೆರವಾದರು. ಇನ್ನು 5 ವಿಕೆಟ್​ ಕೈಯಲ್ಲಿದ್ದು, ಭಾರತ ತಂಡ ಈ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುವ ಆಲೋಚನೆಯಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.