ETV Bharat / sports

ಅರ್ಜುನ್ ತೆಂಡೂಲ್ಕರ್ ಸೇರಿದಂತೆ 20 ಯುವ ಆಟಗಾರರನ್ನು NCA ಶಿಬಿರಕ್ಕೆ ಕರೆದ ಬಿಸಿಸಿಐ

author img

By

Published : Jun 14, 2023, 10:33 PM IST

ಅರ್ಜುನ್ ತೆಂಡೂಲ್ಕರ್ ಸೇರಿದಂತೆ ಇಪ್ಪತ್ತು ಯುವ ಕ್ರಿಕೆಟ್​ ತಾರೆಗಳಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ತರಬೇತಿ ನೀಡಲಾಗುತ್ತದೆ.

bcci-summons-20-youngsters-including-arjun-tendulkar-for-20-day-camp-in-nca
ಅರ್ಜುನ್ ತೆಂಡೂಲ್ಕರ್ ಸೇರಿದಂತೆ 20 ಯುವ ಆಟಗಾರರನ್ನು ಎನ್‌ಸಿಎಯಲ್ಲಿ ಶಿಬಿರಕ್ಕೆ ಕರೆದ ಬಿಸಿಸಿಐ

ನವದೆಹಲಿ: ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯವುಳ್ಳ ಯುವ ಕ್ರಿಕೆಟ್​ ತಾರೆಗಳನ್ನು ಗುರುತಿಸಲು ಬಿಸಿಸಿಐ ಉತ್ಸುಕವಾಗಿದೆ. ಈ ಸಂಬಂಧ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ (ಎನ್‌ಸಿಎ) ಆಯ್ದ 20 ಆಲ್​ರೌಂಡರ್​ಗಳಿಗೆ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ. ಆಗಸ್ಟ್​ನಲ್ಲಿ ಪ್ರಾರಂಭವಾಗಿ ಮೂರು ವಾರಗಳ ಕಾಲ ನಡೆಯಲಿರುವ ಶಿಬಿರದಲ್ಲಿ ಆಯ್ದ ಸುಮಾರು 20 ಆಲ್​ರೌಂಡರ್​ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ನಡೆಯಲಿರುವ ತರಬೇತಿ ಶಿಬಿರದಲ್ಲಿ ಖ್ಯಾತ ಕ್ರಿಕೆಟ್​ ತಾರೆ ಮತ್ತು ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರ ಪುತ್ರ ಅರ್ಜುನ್​ ತೆಂಡೂಲ್ಕರ್​ ಕೂಡ ಇರಲಿದ್ದಾರೆ. ಅರ್ಜುನ್​ ತೆಂಡೂಲ್ಕರ್​​ ಗೋವಾ ಪರ ಕ್ರಿಕೆಟ್​ ಆಡುತ್ತಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​​ ಪರ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದರು.

ಈ ಆಟಗಾರರ ಪಟ್ಟಿಯಲ್ಲಿ ಸೌರಾಷ್ಟ್ರ ತಂಡದ ಆಲ್​ರೌಂಡರ್​ ಚೇತನ್​ ಸಕಾರಿಯಾ ಇದ್ದಾರೆ. ಇವರು ಈಗಾಗಲೇ 2021ರಲ್ಲಿ ಭಾರತದ ಪರ ಆಡಿದ್ದಾರೆ. ಅಲ್ಲದೇ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡುತ್ತಿದ್ದಾರೆ. ಪಂಜಾಬ್​ ಎಡಗೈ ಬ್ಯಾಟರ್ ​ಮತ್ತು ಸ್ಪಿನ್​ ಬೌಲರ್​​ ಅಭಿಷೇಕ್​ ಶರ್ಮ ಕೂಡ ಇದ್ದು, ಇವರು ಸನ್​​ರೈಸರ್ಸ್​​ ಪರ ಆಡಿದ್ದರು. ಗೋವಾದ ಆಟಗಾರ ಮೋಹಿತ್​ ರೆಡ್ಕರ್​, ರಾಜಸ್ಥಾನದ ಮನವ್​ ಸುತಾರ್​, ಜೊತೆಗೆ ದೆಹಲಿಯ ವೇಗಿ ಹರ್ಷಿತ್​ ರಾಣಾ, ಮಧ್ಯಮ ವೇಗಿ ದಿವಿಜ್ ಮೇಹ್ರಾ ಕೂಡ ಕ್ಯಾಂಪ್​ನಲ್ಲಿರಲಿದ್ದಾರೆ.

ಇದನ್ನೂ ಓದಿ : ಭಾರತದ ಟೆಸ್ಟ್ ಕ್ರಿಕೆಟ್‌ ತಂಡ ಬದಲಾಗುತ್ತಾ? ಪ್ರಥಮ ದರ್ಜೆ ಪಂದ್ಯಗಳಲ್ಲಿ ಗಮನ ಸೆಳೆದ ಪ್ರತಿಭೆಗಳಿಗೆ ಸಿಗುವುದೇ ಅವಕಾಶ?

ವರ್ಷದ ಕೊನೆಯಲ್ಲಿ 23 ವರ್ಷದೊಳಗಿನ (U-23) ಏಷ್ಯಾ ಕಪ್ ಪಂದ್ಯಾಟ ಪ್ರಾರಂಭವಾಗಲಿದೆ. ಈ ಸಂಬಂಧ ಎಲ್ಲ ರೀತಿಯಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲ ಪ್ರತಿಭೆಗಳಿಗಾಗಿ ಬಿಸಿಸಿಐ ಹುಡುಕಾಟ ನಡೆಸುತ್ತಿದೆ. ಈ ಮೂಲಕ ಉತ್ತಮ ಪ್ರದರ್ಶನ ನೀಡಬಲ್ಲ ಕ್ರಿಕೆಟ್​ ಯುವ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಲು ಬಿಸಿಸಿಐ ಮುಂದಾಗಿದೆ.

ಆಲ್-ರೌಂಡರ್ಸ್ ಶಿಬಿರ ಎನ್​ಸಿಎ ಮುಖ್ಯಸ್ಥ ವಿವಿಯಸ್​ ಲಕ್ಷ್ಮಣ್ ಅವರ ಕಲ್ಪನೆಯಾಗಿದ್ದು, ಈ ಶಿಬಿರವು ಎಲ್ಲ ಕ್ರಿಕೆಟ್​​ ಮಾದರಿಯಲ್ಲಿ ಉತ್ತಮ ಕೌಶಲ್ಯಗಳನ್ನು ಹೊಂದಿರುವ ಆಟಗಾರರನ್ನು ರೂಪಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ. ಶಿಬಿರಕ್ಕೆ ಶಿವಸುಂದರ್ ದಾಸ್ ನೇತೃತ್ವದ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯು ಪ್ರದರ್ಶನ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಿದೆ.

ಕ್ಯಾಂಪ್​ಗೆ ಆಯ್ಕೆಯಾಗಿರುವ ಆಟಗಾರರೆಲ್ಲರೂ ಉತ್ತಮ ಆಲ್​ರೌಂಡರ್​ಗಳಲ್ಲ. ಕೆಲವರು ಉತ್ತಮ ಬ್ಯಾಟಿಂಗ್​ ಪ್ರದರ್ಶನ ಮಾಡಿದರೆ, ಮತ್ತೆ ಕೆಲವರು ಉತ್ತಮ ಬೌಲಿಂಗ್​ ಪ್ರದರ್ಶನ ಮಾಡುವವರಾಗಿದ್ದಾರೆ. ಕ್ಯಾಂಪ್​ ಮೂಲಕ ಈ ಆಟಗಾರರನ್ನು ಉನ್ನತ ಮಟ್ಟದ ಪ್ರದರ್ಶನ, ಮತ್ತು ಆಟಗಾರರ ಕೌಶಲ್ಯಗಳನ್ನು ಹೆಚ್ಚು ಮಾಡುವುದು ಉದ್ದೇಶ ಎಂದು ಬಿಸಿಸಿಐ ಹೇಳಿದೆ.

ಇದನ್ನೂ ಓದಿ : ICC World Cup 2023: ನ್ಯೂಜಿಲೆಂಡ್​ ತಂಡಕ್ಕೆ ಎರಡನೇ ಆಘಾತ.. ವಿಶ್ವಕಪ್​ನಿಂದ ಮೈಕೆಲ್ ಬ್ರೇಸ್‌ವೆಲ್ ಔಟ್​

ನವದೆಹಲಿ: ಉತ್ತಮ ಪ್ರದರ್ಶನ ನೀಡಬಲ್ಲ ಸಾಮರ್ಥ್ಯವುಳ್ಳ ಯುವ ಕ್ರಿಕೆಟ್​ ತಾರೆಗಳನ್ನು ಗುರುತಿಸಲು ಬಿಸಿಸಿಐ ಉತ್ಸುಕವಾಗಿದೆ. ಈ ಸಂಬಂಧ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ (ಎನ್‌ಸಿಎ) ಆಯ್ದ 20 ಆಲ್​ರೌಂಡರ್​ಗಳಿಗೆ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ. ಆಗಸ್ಟ್​ನಲ್ಲಿ ಪ್ರಾರಂಭವಾಗಿ ಮೂರು ವಾರಗಳ ಕಾಲ ನಡೆಯಲಿರುವ ಶಿಬಿರದಲ್ಲಿ ಆಯ್ದ ಸುಮಾರು 20 ಆಲ್​ರೌಂಡರ್​ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ನಡೆಯಲಿರುವ ತರಬೇತಿ ಶಿಬಿರದಲ್ಲಿ ಖ್ಯಾತ ಕ್ರಿಕೆಟ್​ ತಾರೆ ಮತ್ತು ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರ ಪುತ್ರ ಅರ್ಜುನ್​ ತೆಂಡೂಲ್ಕರ್​ ಕೂಡ ಇರಲಿದ್ದಾರೆ. ಅರ್ಜುನ್​ ತೆಂಡೂಲ್ಕರ್​​ ಗೋವಾ ಪರ ಕ್ರಿಕೆಟ್​ ಆಡುತ್ತಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​​ ಪರ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದರು.

ಈ ಆಟಗಾರರ ಪಟ್ಟಿಯಲ್ಲಿ ಸೌರಾಷ್ಟ್ರ ತಂಡದ ಆಲ್​ರೌಂಡರ್​ ಚೇತನ್​ ಸಕಾರಿಯಾ ಇದ್ದಾರೆ. ಇವರು ಈಗಾಗಲೇ 2021ರಲ್ಲಿ ಭಾರತದ ಪರ ಆಡಿದ್ದಾರೆ. ಅಲ್ಲದೇ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡುತ್ತಿದ್ದಾರೆ. ಪಂಜಾಬ್​ ಎಡಗೈ ಬ್ಯಾಟರ್ ​ಮತ್ತು ಸ್ಪಿನ್​ ಬೌಲರ್​​ ಅಭಿಷೇಕ್​ ಶರ್ಮ ಕೂಡ ಇದ್ದು, ಇವರು ಸನ್​​ರೈಸರ್ಸ್​​ ಪರ ಆಡಿದ್ದರು. ಗೋವಾದ ಆಟಗಾರ ಮೋಹಿತ್​ ರೆಡ್ಕರ್​, ರಾಜಸ್ಥಾನದ ಮನವ್​ ಸುತಾರ್​, ಜೊತೆಗೆ ದೆಹಲಿಯ ವೇಗಿ ಹರ್ಷಿತ್​ ರಾಣಾ, ಮಧ್ಯಮ ವೇಗಿ ದಿವಿಜ್ ಮೇಹ್ರಾ ಕೂಡ ಕ್ಯಾಂಪ್​ನಲ್ಲಿರಲಿದ್ದಾರೆ.

ಇದನ್ನೂ ಓದಿ : ಭಾರತದ ಟೆಸ್ಟ್ ಕ್ರಿಕೆಟ್‌ ತಂಡ ಬದಲಾಗುತ್ತಾ? ಪ್ರಥಮ ದರ್ಜೆ ಪಂದ್ಯಗಳಲ್ಲಿ ಗಮನ ಸೆಳೆದ ಪ್ರತಿಭೆಗಳಿಗೆ ಸಿಗುವುದೇ ಅವಕಾಶ?

ವರ್ಷದ ಕೊನೆಯಲ್ಲಿ 23 ವರ್ಷದೊಳಗಿನ (U-23) ಏಷ್ಯಾ ಕಪ್ ಪಂದ್ಯಾಟ ಪ್ರಾರಂಭವಾಗಲಿದೆ. ಈ ಸಂಬಂಧ ಎಲ್ಲ ರೀತಿಯಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲ ಪ್ರತಿಭೆಗಳಿಗಾಗಿ ಬಿಸಿಸಿಐ ಹುಡುಕಾಟ ನಡೆಸುತ್ತಿದೆ. ಈ ಮೂಲಕ ಉತ್ತಮ ಪ್ರದರ್ಶನ ನೀಡಬಲ್ಲ ಕ್ರಿಕೆಟ್​ ಯುವ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಲು ಬಿಸಿಸಿಐ ಮುಂದಾಗಿದೆ.

ಆಲ್-ರೌಂಡರ್ಸ್ ಶಿಬಿರ ಎನ್​ಸಿಎ ಮುಖ್ಯಸ್ಥ ವಿವಿಯಸ್​ ಲಕ್ಷ್ಮಣ್ ಅವರ ಕಲ್ಪನೆಯಾಗಿದ್ದು, ಈ ಶಿಬಿರವು ಎಲ್ಲ ಕ್ರಿಕೆಟ್​​ ಮಾದರಿಯಲ್ಲಿ ಉತ್ತಮ ಕೌಶಲ್ಯಗಳನ್ನು ಹೊಂದಿರುವ ಆಟಗಾರರನ್ನು ರೂಪಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ. ಶಿಬಿರಕ್ಕೆ ಶಿವಸುಂದರ್ ದಾಸ್ ನೇತೃತ್ವದ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯು ಪ್ರದರ್ಶನ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಿದೆ.

ಕ್ಯಾಂಪ್​ಗೆ ಆಯ್ಕೆಯಾಗಿರುವ ಆಟಗಾರರೆಲ್ಲರೂ ಉತ್ತಮ ಆಲ್​ರೌಂಡರ್​ಗಳಲ್ಲ. ಕೆಲವರು ಉತ್ತಮ ಬ್ಯಾಟಿಂಗ್​ ಪ್ರದರ್ಶನ ಮಾಡಿದರೆ, ಮತ್ತೆ ಕೆಲವರು ಉತ್ತಮ ಬೌಲಿಂಗ್​ ಪ್ರದರ್ಶನ ಮಾಡುವವರಾಗಿದ್ದಾರೆ. ಕ್ಯಾಂಪ್​ ಮೂಲಕ ಈ ಆಟಗಾರರನ್ನು ಉನ್ನತ ಮಟ್ಟದ ಪ್ರದರ್ಶನ, ಮತ್ತು ಆಟಗಾರರ ಕೌಶಲ್ಯಗಳನ್ನು ಹೆಚ್ಚು ಮಾಡುವುದು ಉದ್ದೇಶ ಎಂದು ಬಿಸಿಸಿಐ ಹೇಳಿದೆ.

ಇದನ್ನೂ ಓದಿ : ICC World Cup 2023: ನ್ಯೂಜಿಲೆಂಡ್​ ತಂಡಕ್ಕೆ ಎರಡನೇ ಆಘಾತ.. ವಿಶ್ವಕಪ್​ನಿಂದ ಮೈಕೆಲ್ ಬ್ರೇಸ್‌ವೆಲ್ ಔಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.