ETV Bharat / sports

ಬಾರ್ಡರ್ ​ಗವಾಸ್ಕರ್​ ಟ್ರೋಫಿ: ಮೂರನೇ ಟೆಸ್ಟ್ ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರ

author img

By

Published : Feb 13, 2023, 5:53 PM IST

ಮೂರನೇ ಟೆಸ್ಟ್​ ಪಂದ್ಯ ಧರ್ಮಶಾಲಾದಿಂದ ಇಂದೋರ್​ಗೆ ಶಿಫ್ಟ್​ - ಔಟ್​ ಫೀಲ್ಡ್​ನ ಹುಲ್ಲು ಸರಿಯಾಗಿ ಬೆಳಯದ ಕಾರಣ ಪಂದ್ಯ ಸ್ಥಳಾಂತರ - ಇತ್ತೀಚೆಗೆ ಧರ್ಮಶಾಲಾ ಕ್ರೀಡಾಂಗಣದಲ್ಲಿ ಕಾಮಗಾರಿ ನಡೆದ ಹಿನ್ನೆಲೆ ಪಿಚ್​ನಲ್ಲಿ ಸಮಸ್ಯೆ - ಟ್ವಿಟ್​ ಮಾಡಿ ಮಾಹಿತಿ ನೀಡಿದ ಬಿಸಿಸಿಐ

dharamsala to indore
ಇಂದೋರ್‌ಗೆ ಸ್ಥಳಾಂತರ

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೂರನೇ ಪಂದ್ಯ ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಸ್ಥಳ ಬದಲಾವಣೆಯನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದ್ದು, ಸರಣಿಯ ಮೂರನೇ ಪಂದ್ಯ ಮಾರ್ಚ್ 1 ರಂದ 5ರ ವರೆಗೆ ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಕಳಪೆ ಔಟ್‌ಫೀಲ್ಡ್ ಪರಿಸ್ಥಿತಿಯಿಂದಾಗಿ ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಟ್ವಿಟ್​ನಲ್ಲಿ ಮಾಹಿತಿ ಹಂಚಿಕೊಂಡಿದೆ. ಬಿಸಿಸಿಐ ಕ್ಯುರೇಟರ್ ತಪೋಶ್ ಚಟರ್ಜಿ ಅವರ ವರದಿಯು ಔಟ್‌ಫೀಲ್ಡ್ ಅಂತಾರಾಷ್ಟ್ರೀಯ ಪಂದ್ಯಕ್ಕೆ ಅನರ್ಹವೆಂದು ಪರಿಗಣಿಸಿದ ಹಿನ್ನೆಲೆ ಪಂದ್ಯವನ್ನು ಇಂದೋರ್​ನಲ್ಲಿ ಮಾಡಲು ನಿರ್ಧರಿಸಲಾಗಿದೆ.

"ಮಾಸ್ಟರ್​ ಕಾರ್ಡ್​ ಪ್ರಯೋಜಕತ್ವದ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೂರನೇ ಪಂದ್ಯವನ್ನು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಆಡಲು ನಿರ್ಧರಿಸಲಾಗಿತ್ತು. ಆದರೆ, ಔಟ್‌ಫೀಲ್ಡ್ ಸಾಕಷ್ಟು ಹುಲ್ಲಿನ ಸಾಂದ್ರತೆಯನ್ನು ಹೊಂದಿಲ್ಲ ಮತ್ತು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲು ಹೆಚ್ಚಿನ ದಿನ ಬೇಕಾದ್ದರಿಂದ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ " ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

2017 ರಲ್ಲಿ ಧರ್ಮಶಾಲಾ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್​ ಆಯೋಜಿಸಲಾಗಿತ್ತು. ಅಂದೂ ಕೂಡ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯ ನಡೆದಿತ್ತು. ಉಭಯ ದೇಶಗಳ ನಡುವಿನ 2016/17 ಸರಣಿಯ ಅಂತಿಮ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು. ಆ ಗೆಲುವಿನೊಂದಿಗೆ ಭಾರತ 2-1 ಅಂತರದಲ್ಲಿ ಸರಣಿಯನ್ನು ಗೆದ್ದು ಮತ್ತೆ ಬಾರ್ಡರ್ ಗವಾಸ್ಕರ್ ಟ್ರೋಫಿ ತೆಕ್ಕೆಗೆ ತೆಗೆದುಕೊಂಡಿತ್ತು.

ಮೊದಲ ಪಂದ್ಯದಲ್ಲಿ ಗೆದ್ದ ಭಾರತ: 2023ರ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೊದಲ ಪಂದ್ಯದಲ್ಲಿ ಸ್ಪಿನ್ನರ್​ಗಳ ಪ್ರಾಬಲ್ಯದಿಂದ ಭಾರತ ಗೆದ್ದು ಕೊಂಡಿದೆ. ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ. ವಿದರ್ಭ ಕ್ರೀಡಾಂಗಣದಲ್ಲಿ ರವೀಂದ್ರ ಜಡೇಜ ಮತ್ತು ಆರ್​ ಅಶ್ವಿನ್​ ಅವರು ಆಸ್ಟ್ರೇಲಿಯಾ ಬ್ಯಾಟರ್​ಗಳನ್ನು ಕಾಡಿದ್ದು ಮೂರೇ ದಿನದಲ್ಲಿ ಪಂದ್ಯ ಮುಕ್ತಾಯವಾಗಿತ್ತು.

ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಸ್ಟ್ರೇಲಿಯಾವನ್ನು ಜಡೇಜಾ ಕಾಡಿದರು. ಮೊದಲ ಇನ್ನಿಂಗ್ಸ್​ನಲ್ಲಿ ಆಸಿಸ್​ 177ಕ್ಕೆ ಅಲ್​ ಔಟ್​ ಆಯಿತು. ಜಡೇಜಾ ಐದು ವಿಕೆಟ್​ಗಳ ಗುಚ್ಚವನ್ನು ತೆಗೆದುಕೊಂಡರು. ಅಶ್ವಿನ್​ ಮೂರು ವಿಕೆಟ್​ಗಳನ್ನು ಉರುಳಿಸಿದರು. ಕಾಂಗರೂ ಪಡೆ ಪರ ಲಬುಶೇನೆ 49 ರನ್​ ಗೆಳಿಸಿದ್ದೇ ಹೆಚ್ಚಿನ ರನ್​ ಗಳಿಕೆಯಾಗಿತ್ತು.

ಭಾರತದ ಮೊದಲ ಇನ್ನಿಂಗ್ಸ್​ನಲ್ಲಿ ಪ್ರಮುಖ ಬ್ಯಾಟರ್​ಗಳು ವಿಫಲರಾದರು. ನಾಯಕ ರೋಹಿತ್​ ಶರ್ಮಾ 120 ರನ್​ ಗಳಿಸಿದರು. ನಂತರ ಬೌಲಿಂಗ್​ ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ 70 ರನ್​ ಮತ್ತು ಅಕ್ಷರ್​ ಪಟೇಲ್​ ಗಳಿಸಿದ 84 ರನ್​ನಿಂದ ಭಾರತ 400 ರನ್​ ಕಲೆ ಹಾಕಿ 223 ರನ್​ನ ಮುನ್ನಡೆ ಸಾಧಿಸಿತು.

ಎರಡನೇ ಇನ್ನಿಂಗ್ಸ್​ನಲ್ಲಿ ಕಾಡಿದ ಆರ್​ ಅಶ್ವಿನ್​ ಕಾಂಗರೂ ಪಡೆಯ ಪ್ರಮುಖ 5 ವಿಕೆಟ್​ಗಳನ್ನು ಕಿತ್ತರು. ಇದರಿಂದ ಆಸ್ಟ್ರೇಲಿಯಾ ತಂಡ 91 ರನ್​ಗೆ ಆಲ್​ ಔಟ್​ ಆಯಿತು. ಭಾರತ ಇನ್ನಿಂಗ್ಸ್​ ಜೊತೆಗೆ 132 ರನ್​ಗಳ ಗೆಲುವು ದಾಖಲಿಸಿತು. ಎರಡನೇ ಟೆಸ್ಟ್ ಪಂದ್ಯ ದೆಹಲಿಯಲ್ಲಿ ಫೆಬ್ರವರಿ 17ರಿಂದ ಆರಂಭವಾಗಲಿದೆ.

ಇದನ್ನೂ ಓದಿ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಸನಿಹಕ್ಕೆ ಭಾರತ: ಫೈನಲ್ ಲೆಕ್ಕಾಚಾರವೇನು?

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೂರನೇ ಪಂದ್ಯ ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಸ್ಥಳ ಬದಲಾವಣೆಯನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದ್ದು, ಸರಣಿಯ ಮೂರನೇ ಪಂದ್ಯ ಮಾರ್ಚ್ 1 ರಂದ 5ರ ವರೆಗೆ ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಕಳಪೆ ಔಟ್‌ಫೀಲ್ಡ್ ಪರಿಸ್ಥಿತಿಯಿಂದಾಗಿ ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಟ್ವಿಟ್​ನಲ್ಲಿ ಮಾಹಿತಿ ಹಂಚಿಕೊಂಡಿದೆ. ಬಿಸಿಸಿಐ ಕ್ಯುರೇಟರ್ ತಪೋಶ್ ಚಟರ್ಜಿ ಅವರ ವರದಿಯು ಔಟ್‌ಫೀಲ್ಡ್ ಅಂತಾರಾಷ್ಟ್ರೀಯ ಪಂದ್ಯಕ್ಕೆ ಅನರ್ಹವೆಂದು ಪರಿಗಣಿಸಿದ ಹಿನ್ನೆಲೆ ಪಂದ್ಯವನ್ನು ಇಂದೋರ್​ನಲ್ಲಿ ಮಾಡಲು ನಿರ್ಧರಿಸಲಾಗಿದೆ.

"ಮಾಸ್ಟರ್​ ಕಾರ್ಡ್​ ಪ್ರಯೋಜಕತ್ವದ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೂರನೇ ಪಂದ್ಯವನ್ನು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಆಡಲು ನಿರ್ಧರಿಸಲಾಗಿತ್ತು. ಆದರೆ, ಔಟ್‌ಫೀಲ್ಡ್ ಸಾಕಷ್ಟು ಹುಲ್ಲಿನ ಸಾಂದ್ರತೆಯನ್ನು ಹೊಂದಿಲ್ಲ ಮತ್ತು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲು ಹೆಚ್ಚಿನ ದಿನ ಬೇಕಾದ್ದರಿಂದ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ " ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

2017 ರಲ್ಲಿ ಧರ್ಮಶಾಲಾ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್​ ಆಯೋಜಿಸಲಾಗಿತ್ತು. ಅಂದೂ ಕೂಡ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯ ನಡೆದಿತ್ತು. ಉಭಯ ದೇಶಗಳ ನಡುವಿನ 2016/17 ಸರಣಿಯ ಅಂತಿಮ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು. ಆ ಗೆಲುವಿನೊಂದಿಗೆ ಭಾರತ 2-1 ಅಂತರದಲ್ಲಿ ಸರಣಿಯನ್ನು ಗೆದ್ದು ಮತ್ತೆ ಬಾರ್ಡರ್ ಗವಾಸ್ಕರ್ ಟ್ರೋಫಿ ತೆಕ್ಕೆಗೆ ತೆಗೆದುಕೊಂಡಿತ್ತು.

ಮೊದಲ ಪಂದ್ಯದಲ್ಲಿ ಗೆದ್ದ ಭಾರತ: 2023ರ ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೊದಲ ಪಂದ್ಯದಲ್ಲಿ ಸ್ಪಿನ್ನರ್​ಗಳ ಪ್ರಾಬಲ್ಯದಿಂದ ಭಾರತ ಗೆದ್ದು ಕೊಂಡಿದೆ. ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ. ವಿದರ್ಭ ಕ್ರೀಡಾಂಗಣದಲ್ಲಿ ರವೀಂದ್ರ ಜಡೇಜ ಮತ್ತು ಆರ್​ ಅಶ್ವಿನ್​ ಅವರು ಆಸ್ಟ್ರೇಲಿಯಾ ಬ್ಯಾಟರ್​ಗಳನ್ನು ಕಾಡಿದ್ದು ಮೂರೇ ದಿನದಲ್ಲಿ ಪಂದ್ಯ ಮುಕ್ತಾಯವಾಗಿತ್ತು.

ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಆಸ್ಟ್ರೇಲಿಯಾವನ್ನು ಜಡೇಜಾ ಕಾಡಿದರು. ಮೊದಲ ಇನ್ನಿಂಗ್ಸ್​ನಲ್ಲಿ ಆಸಿಸ್​ 177ಕ್ಕೆ ಅಲ್​ ಔಟ್​ ಆಯಿತು. ಜಡೇಜಾ ಐದು ವಿಕೆಟ್​ಗಳ ಗುಚ್ಚವನ್ನು ತೆಗೆದುಕೊಂಡರು. ಅಶ್ವಿನ್​ ಮೂರು ವಿಕೆಟ್​ಗಳನ್ನು ಉರುಳಿಸಿದರು. ಕಾಂಗರೂ ಪಡೆ ಪರ ಲಬುಶೇನೆ 49 ರನ್​ ಗೆಳಿಸಿದ್ದೇ ಹೆಚ್ಚಿನ ರನ್​ ಗಳಿಕೆಯಾಗಿತ್ತು.

ಭಾರತದ ಮೊದಲ ಇನ್ನಿಂಗ್ಸ್​ನಲ್ಲಿ ಪ್ರಮುಖ ಬ್ಯಾಟರ್​ಗಳು ವಿಫಲರಾದರು. ನಾಯಕ ರೋಹಿತ್​ ಶರ್ಮಾ 120 ರನ್​ ಗಳಿಸಿದರು. ನಂತರ ಬೌಲಿಂಗ್​ ಆಲ್​ರೌಂಡರ್​ಗಳಾದ ರವೀಂದ್ರ ಜಡೇಜಾ 70 ರನ್​ ಮತ್ತು ಅಕ್ಷರ್​ ಪಟೇಲ್​ ಗಳಿಸಿದ 84 ರನ್​ನಿಂದ ಭಾರತ 400 ರನ್​ ಕಲೆ ಹಾಕಿ 223 ರನ್​ನ ಮುನ್ನಡೆ ಸಾಧಿಸಿತು.

ಎರಡನೇ ಇನ್ನಿಂಗ್ಸ್​ನಲ್ಲಿ ಕಾಡಿದ ಆರ್​ ಅಶ್ವಿನ್​ ಕಾಂಗರೂ ಪಡೆಯ ಪ್ರಮುಖ 5 ವಿಕೆಟ್​ಗಳನ್ನು ಕಿತ್ತರು. ಇದರಿಂದ ಆಸ್ಟ್ರೇಲಿಯಾ ತಂಡ 91 ರನ್​ಗೆ ಆಲ್​ ಔಟ್​ ಆಯಿತು. ಭಾರತ ಇನ್ನಿಂಗ್ಸ್​ ಜೊತೆಗೆ 132 ರನ್​ಗಳ ಗೆಲುವು ದಾಖಲಿಸಿತು. ಎರಡನೇ ಟೆಸ್ಟ್ ಪಂದ್ಯ ದೆಹಲಿಯಲ್ಲಿ ಫೆಬ್ರವರಿ 17ರಿಂದ ಆರಂಭವಾಗಲಿದೆ.

ಇದನ್ನೂ ಓದಿ: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಸನಿಹಕ್ಕೆ ಭಾರತ: ಫೈನಲ್ ಲೆಕ್ಕಾಚಾರವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.