ETV Bharat / sitara

ಕಿರುಚಿತ್ರಕ್ಕಾಗಿ ಕಥೆ, ಸಂಭಾಷಣೆ ಬರೆದ ಗೀತಸಾಹಿತಿ ಕಿನಾಲ್ ರಾಜ್

author img

By

Published : Aug 24, 2020, 3:07 PM IST

ಅನೇಕ ಸಿನಿಮಾಗಳಿಗೆ ಸಾಹಿತ್ಯ ಬರೆದಿರುವ ಕಿನಾಲ್ ರಾಜ್ ಇದೀಗ ಕಿರುಚಿತ್ರವೊಂದಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. 'ಪಾಸಿಟಿವ್' ಎಂಬ ಕಿರುಚಿತ್ರ ಇದಾಗಿದ್ದು ನಾಗರಾಜ ಶಲ್ಯದ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Kinal raj Story and dialogue for Positive
ಕಿನಾಲ್ ರಾಜ್​​​​

ಸ್ಯಾಂಡಲ್​​ವುಡ್​​​ನಲ್ಲಿ ತಮ್ಮ ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿಗಳನ್ನು ಪಡೆದು ಖ್ಯಾತರಾಗಿರುವ ಕಿನಾಲ್ ರಾಜ್​ ಇದೀಗ 'ಪಾಸಿಟಿವ್' ಎಂಬ ಕಿರುಚಿತ್ರವೊಂದಕ್ಕೆ ಕಥೆ, ಚಿತ್ರಕಥೆ ಬರೆದು ಸಂಭಾಷಣೆ ಕೂಡಾ ಬರೆದಿದ್ದಾರೆ.

ಕಿನಾಲ್ ರಾಜ್​ 'ಕೆಜಿಎಫ್' ಚಿತ್ರದ ಮೂಲಕ ಬೆಳಕಿಗೆ ಬಂದವರು. 'ಗಿರ್ಮಿಟ್' ಚಿತ್ರದ ಸಾಹಿತ್ಯಕ್ಕೆ ಕಿನಾಲ್ ರಾಜ್ ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಲಭಿಸಿತ್ತು. ನಂತರ 'ದಮಯಂತಿ', ಕಾಲಾಂತಕ, ಈಗ ಶ್ರೀಮುರಳಿ ಅಭಿನಯದ 'ಮದಗಜ' ಸಿನಿಮಾಗಳಿಗೂ ಕಿನಾಲ್ ರಾಜ್​ ಗೀತರಚನೆ ಮಾಡಿದ್ದಾರೆ.

  • " class="align-text-top noRightClick twitterSection" data="">

ಬೆಂಗಳೂರಿನಿಂದ ತನ್ನ ಹಳ್ಳಿಗೆ ಹೋಗುವ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿರುತ್ತದೆ. ಸೋಂಕಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಬಂದರೂ ನೆರೆಹೊರೆಯವರು ಆತನನ್ನು ಹೇಗೆ ನೋಡುತ್ತಾರೆ ಇದರಿಂದ ಆ ವ್ಯಕ್ತಿ ಯಾವ ರೀತಿ ಮಾನಸಿಕ ಒತ್ತಡ ಅನುಭವಿಸುತ್ತಾನೆ ಎಂಬುದನ್ನು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ. ಈ ಕಿರುಚಿತ್ರವನ್ನು ನಾಗರಾಜ ಶಲ್ಯದ್ ನಿರ್ದೇಶಿಸಿ ಅವರೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಪ್ರಿಯಾಂಕ ಕಿನ್ನಾಲ್, ಬಸವರಾಜ್ ಕುರಿ, ಮಂಜುಳ ವಾಸುದೇವ್ ಹಾಗೂ ಇನ್ನಿತರರು ಅಭಿನಯಿಸಿದ್ದಾರೆ. ಈ ಕಿರುಚಿತ್ರಕ್ಕೆ ಆಕಾಶ್ ಪರ್ವ ಸಂಗೀತ, ಜಿ.ವಿ. ನಾಗರಾಜ್ ಛಾಯಾಗ್ರಹಣ, ಡಿ.ಐ. ಗಣೇಶ್ ತೋರಗಾಲ್ ಸಂಕಲನ ಮಾಡಿದ್ದಾರೆ.

ಕಳೆದ ವಾರ 'ಪಾಸಿಟಿವ್' ಕಿರುಚಿತ್ರದ ಟ್ರೇಲರ್​​​ ಬಿಡುಗಡೆ ಮಾಡಲಾಗಿತ್ತು. 12 ನಿಮಿಷದ ಈ ಕಿರುಚಿತ್ರವನ್ನು ಆಗಸ್ಟ್ 22 ಗಣೇಶ ಚತುರ್ಥಿಯಂದು ಸಿರಿ ಟಿವಿ ಯೂಟ್ಯೂಬ್​​​ ಚಾನೆಲ್​​​​ನಲ್ಲಿ ಬಿಡುಗಡೆ ಮಾಡಲಾಗಿದೆ.

ಸ್ಯಾಂಡಲ್​​ವುಡ್​​​ನಲ್ಲಿ ತಮ್ಮ ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿಗಳನ್ನು ಪಡೆದು ಖ್ಯಾತರಾಗಿರುವ ಕಿನಾಲ್ ರಾಜ್​ ಇದೀಗ 'ಪಾಸಿಟಿವ್' ಎಂಬ ಕಿರುಚಿತ್ರವೊಂದಕ್ಕೆ ಕಥೆ, ಚಿತ್ರಕಥೆ ಬರೆದು ಸಂಭಾಷಣೆ ಕೂಡಾ ಬರೆದಿದ್ದಾರೆ.

ಕಿನಾಲ್ ರಾಜ್​ 'ಕೆಜಿಎಫ್' ಚಿತ್ರದ ಮೂಲಕ ಬೆಳಕಿಗೆ ಬಂದವರು. 'ಗಿರ್ಮಿಟ್' ಚಿತ್ರದ ಸಾಹಿತ್ಯಕ್ಕೆ ಕಿನಾಲ್ ರಾಜ್ ಅವರಿಗೆ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಲಭಿಸಿತ್ತು. ನಂತರ 'ದಮಯಂತಿ', ಕಾಲಾಂತಕ, ಈಗ ಶ್ರೀಮುರಳಿ ಅಭಿನಯದ 'ಮದಗಜ' ಸಿನಿಮಾಗಳಿಗೂ ಕಿನಾಲ್ ರಾಜ್​ ಗೀತರಚನೆ ಮಾಡಿದ್ದಾರೆ.

  • " class="align-text-top noRightClick twitterSection" data="">

ಬೆಂಗಳೂರಿನಿಂದ ತನ್ನ ಹಳ್ಳಿಗೆ ಹೋಗುವ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿರುತ್ತದೆ. ಸೋಂಕಿಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಬಂದರೂ ನೆರೆಹೊರೆಯವರು ಆತನನ್ನು ಹೇಗೆ ನೋಡುತ್ತಾರೆ ಇದರಿಂದ ಆ ವ್ಯಕ್ತಿ ಯಾವ ರೀತಿ ಮಾನಸಿಕ ಒತ್ತಡ ಅನುಭವಿಸುತ್ತಾನೆ ಎಂಬುದನ್ನು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ. ಈ ಕಿರುಚಿತ್ರವನ್ನು ನಾಗರಾಜ ಶಲ್ಯದ್ ನಿರ್ದೇಶಿಸಿ ಅವರೇ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಪ್ರಿಯಾಂಕ ಕಿನ್ನಾಲ್, ಬಸವರಾಜ್ ಕುರಿ, ಮಂಜುಳ ವಾಸುದೇವ್ ಹಾಗೂ ಇನ್ನಿತರರು ಅಭಿನಯಿಸಿದ್ದಾರೆ. ಈ ಕಿರುಚಿತ್ರಕ್ಕೆ ಆಕಾಶ್ ಪರ್ವ ಸಂಗೀತ, ಜಿ.ವಿ. ನಾಗರಾಜ್ ಛಾಯಾಗ್ರಹಣ, ಡಿ.ಐ. ಗಣೇಶ್ ತೋರಗಾಲ್ ಸಂಕಲನ ಮಾಡಿದ್ದಾರೆ.

ಕಳೆದ ವಾರ 'ಪಾಸಿಟಿವ್' ಕಿರುಚಿತ್ರದ ಟ್ರೇಲರ್​​​ ಬಿಡುಗಡೆ ಮಾಡಲಾಗಿತ್ತು. 12 ನಿಮಿಷದ ಈ ಕಿರುಚಿತ್ರವನ್ನು ಆಗಸ್ಟ್ 22 ಗಣೇಶ ಚತುರ್ಥಿಯಂದು ಸಿರಿ ಟಿವಿ ಯೂಟ್ಯೂಬ್​​​ ಚಾನೆಲ್​​​​ನಲ್ಲಿ ಬಿಡುಗಡೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.