ETV Bharat / sitara

ಕನ್ನಡದ ಕೋಟ್ಯಧಿಪತಿಗೆ ಕೌಂಟ್​ಡೌನ್​​:ಈ ಸೀಸನ್​​​ನ ಮೊದಲ ಸ್ಪರ್ಧಿ ಇವರೇ ನೋಡಿ

author img

By

Published : Jun 21, 2019, 10:59 PM IST

ಕೋಟಿ ಗೆಲ್ಲುವ ಜನಪ್ರಿಯ ರಿಯಾಲಿಟಿ ಶೋ 'ಕನ್ನಡದ ಕೋಟ್ಯಧಿಪತಿ' ನಾಲ್ಕನೇ ಸೀಸನ್​​ಗೆ ಕೌಂಟ್​ಡೌನ್ ಶುರುವಾಗಿದೆ. ಈ ಸೀಸನ್​​ನ ಮೊದಲ ಎಪಿಸೋಡು ನಾಳೆಯಿಂದ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಚಿತ್ರಕೃಪೆ : ಕಲರ್ಸ್​ ಕನ್ನಡ ವಾಹಿನಿ

ಈಗಾಗಲೇ ಮೊದಲ ಎಪಿಸೋಡಿನ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪುನೀತ್ ಎದುರು ಹಾಟ್​ ಸೀಟ್​​ಲ್ಲಿ ಕುಳಿತು ಕೋಟಿ ಗೆಲ್ಲುವ ಆಟ ಆಡಿರುವ ಮೊದಲ ಸ್ಪರ್ಧಿ ಯಾರು ಎಂಬುದು ಸದ್ಯ ರಿವೀಲ್ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕುಗ್ರಾಮವಾದ ಸಂಡಳ್ಳಿಯ ಬಡ ಕುಟುಂಬದ ದೀಪಾ ಅಂಬಿಗ ಈ ಸೀಸನ್​​ನ ಮೊದಲ ಸ್ಪರ್ಧಿಯಾಗಿದ್ದಾರೆ.

kannadada kotyadhipati
ಪುನೀತ್ ಜತೆ ದೀಪಾ ಕುಟುಂಬ

ಹೊನ್ನಾವರ ತಾಲೂಕಿನ ಹಳದೀಪುರದ ಶ್ರೀನಿವಾಸರನ್ನು ಮದುವೆಯಾಗಿ ಪ್ರಸ್ತುತದಲ್ಲಿ ಕುಮಟಾದಲ್ಲಿ ವಾಸವಾಗಿದ್ದಾರೆ. ಮೀನುಗಾರಿಕೆ ಇವರ ಕುಟುಂಬದ ಕಸುಬು. ನಿತ್ಯ ಸಮುದ್ರಕ್ಕೆ ಇಳಿದು ಕಡಲ ತೆರೆಯ ವಿರುದ್ಧ ಸೆಣಸಿ ಜೀವನ ನಡೆಸುತ್ತಿದೆ ಈ ಕುಟುಂಬ.

kannadada kotyadhipati
ನಟ ರಾಘಣ್ಣನ ಜತೆ ದೀಪಾ ಕುಟುಂಬ

ದೀಪಾ ಅವರಿಗೆ ಈ ಕಾರ್ಯಕ್ರಮದಲ್ಲಿ ಗೆಲ್ಲುವ ಹಣದಲ್ಲಿ ಪುಟ್ಟ ಮನೆಯೊಂದನ್ನು ಕಟ್ಟುವ ಆಸೆಯಂತೆ. ಅದಕ್ಕಾಗಿಯೇ ಕಾರ್ಯಕ್ರಮದಲ್ಲಿ ಶ್ರದ್ಧೆಯಿಂದ ಭಾಗವಹಿಸಿದ್ದಾರೆ. ಇವರು ಎಷ್ಟು ಪ್ರಶ್ನೆಗೆ ಉತ್ತರಿಸಿದ್ದಾರೆ?ಎಷ್ಟು ಹಣ ಗೆದ್ದಿದ್ದಾರೆ ಎಂಬುದನ್ನು ತಿಳಿಯಲು ನಾಳೆ ರಾತ್ರಿ 8 ಗಂಟೆ ವರೆಗೆ ಕಾಯಲೆಬೇಕು.

ಇನ್ನು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ದೀಪಾ ಅವರಿಗೆ ಉತ್ತರ ಕನ್ನಡ ಜನತೆ ಶುಭ ಕೋರಿದೆ. ಒಳ್ಳೆಯ ರೀತಿಯಲ್ಲಿ ಆಟವಾಡಿ ನಿಮ್ಮ ಕನಸು ನನಸು ಮಾಡಿಕೊಳ್ಳಿ ಎಂದು ಆಶಿಸಿದೆ.

ಈಗಾಗಲೇ ಮೊದಲ ಎಪಿಸೋಡಿನ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪುನೀತ್ ಎದುರು ಹಾಟ್​ ಸೀಟ್​​ಲ್ಲಿ ಕುಳಿತು ಕೋಟಿ ಗೆಲ್ಲುವ ಆಟ ಆಡಿರುವ ಮೊದಲ ಸ್ಪರ್ಧಿ ಯಾರು ಎಂಬುದು ಸದ್ಯ ರಿವೀಲ್ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕುಗ್ರಾಮವಾದ ಸಂಡಳ್ಳಿಯ ಬಡ ಕುಟುಂಬದ ದೀಪಾ ಅಂಬಿಗ ಈ ಸೀಸನ್​​ನ ಮೊದಲ ಸ್ಪರ್ಧಿಯಾಗಿದ್ದಾರೆ.

kannadada kotyadhipati
ಪುನೀತ್ ಜತೆ ದೀಪಾ ಕುಟುಂಬ

ಹೊನ್ನಾವರ ತಾಲೂಕಿನ ಹಳದೀಪುರದ ಶ್ರೀನಿವಾಸರನ್ನು ಮದುವೆಯಾಗಿ ಪ್ರಸ್ತುತದಲ್ಲಿ ಕುಮಟಾದಲ್ಲಿ ವಾಸವಾಗಿದ್ದಾರೆ. ಮೀನುಗಾರಿಕೆ ಇವರ ಕುಟುಂಬದ ಕಸುಬು. ನಿತ್ಯ ಸಮುದ್ರಕ್ಕೆ ಇಳಿದು ಕಡಲ ತೆರೆಯ ವಿರುದ್ಧ ಸೆಣಸಿ ಜೀವನ ನಡೆಸುತ್ತಿದೆ ಈ ಕುಟುಂಬ.

kannadada kotyadhipati
ನಟ ರಾಘಣ್ಣನ ಜತೆ ದೀಪಾ ಕುಟುಂಬ

ದೀಪಾ ಅವರಿಗೆ ಈ ಕಾರ್ಯಕ್ರಮದಲ್ಲಿ ಗೆಲ್ಲುವ ಹಣದಲ್ಲಿ ಪುಟ್ಟ ಮನೆಯೊಂದನ್ನು ಕಟ್ಟುವ ಆಸೆಯಂತೆ. ಅದಕ್ಕಾಗಿಯೇ ಕಾರ್ಯಕ್ರಮದಲ್ಲಿ ಶ್ರದ್ಧೆಯಿಂದ ಭಾಗವಹಿಸಿದ್ದಾರೆ. ಇವರು ಎಷ್ಟು ಪ್ರಶ್ನೆಗೆ ಉತ್ತರಿಸಿದ್ದಾರೆ?ಎಷ್ಟು ಹಣ ಗೆದ್ದಿದ್ದಾರೆ ಎಂಬುದನ್ನು ತಿಳಿಯಲು ನಾಳೆ ರಾತ್ರಿ 8 ಗಂಟೆ ವರೆಗೆ ಕಾಯಲೆಬೇಕು.

ಇನ್ನು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ದೀಪಾ ಅವರಿಗೆ ಉತ್ತರ ಕನ್ನಡ ಜನತೆ ಶುಭ ಕೋರಿದೆ. ಒಳ್ಳೆಯ ರೀತಿಯಲ್ಲಿ ಆಟವಾಡಿ ನಿಮ್ಮ ಕನಸು ನನಸು ಮಾಡಿಕೊಳ್ಳಿ ಎಂದು ಆಶಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.