ETV Bharat / sitara

ಲಾಕ್​​ಡೌನ್​ ಸಮಯದಲ್ಲಿ ನಿಮ್ಮ ಜ್ಞಾನ ಹೆಚ್ಚಿಸಲು ಮತ್ತೆ ಬರಲಿದ್ದಾರೆ ಪವರ್ ಸ್ಟಾರ್

author img

By

Published : Apr 27, 2020, 6:48 PM IST

ರಿಯಾಲಿಟಿ ಶೋ, ಧಾರಾವಾಹಿಗಳ ಫ್ರೆಷ್ ಎಪಿಸೋಡ್​​​​​​ಗಳು ಮುಗಿದಿರುವುದರಿಂದ ಹಳೆಯ ಕಾರ್ಯಕ್ರಮಗಳು ಮರುಪ್ರಸಾರವಾಗುತ್ತಿದೆ. ಇವುಗಳಲ್ಲಿ ಪುನೀತ್ ರಾಜ್​​ಕುಮಾರ್ ನಡೆಸಿಕೊಡುವ 'ಕನ್ನಡದ ಕೋಟ್ಯಧಿಪತಿ' ಕೂಡಾ ಒಂದು

Puneet 1
ಕನ್ನಡದ ಕೋಟ್ಯಧಿಪತಿ

ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ಪವರ್ ಸ್ಟಾರ್ ಪುನೀತ್ ರಾಜ್​​​​ಕುಮಾರ್​​​​​​​​​​​​​​​ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕೂಡಾ ಒಂದು. ಲಾಕ್​​ಡೌನ್​​​​​​​​​​​​​ನಿಂದಾಗಿ ಧಾರಾವಾಹಿಗಳ ಪ್ರಸಾರ ನಿಂತಿರುವ ಕಾರಣ ಹಳೆಯ ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳು ಕೂಡಾ ಮರು ಪ್ರಸಾರ ಆರಂಭಿಸಿದೆ. ವೀಕ್ಷಕರು ಕೂಡಾ ಹಳೆಯ ಧಾರಾವಾಹಿಗಳು ಪ್ರಸಾರವಾಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

Kannadada Kotyadhipathi
ಫೋಟೋ ಕೃಪೆ: ಕಲರ್ಸ್ ಕನ್ನಡ

ಮರುಪ್ರಸಾರ ಕಾಣಲಿರುವ ಕಾರ್ಯಕ್ರಮಗಳಲ್ಲಿ 'ಕನ್ನಡದ ಕೋಟ್ಯಧಿಪತಿ' ಕೂಡಾ ಒಂದು. ಪವರ್ ಸ್ಟಾರ್ ಪುನೀತ್​​ ರಾಜ್​​​​​​​​​​​​​​​​​​​​ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ಕನ್ನಡದ ಕೋಟ್ಯಧಿಪತಿಯನ್ನು ಕಿರುತೆರೆ ವೀಕ್ಷಕರು ಬಹಳ ಮೆಚ್ಚಿಕೊಂಡಿದ್ದರು. ಕಳೆದ ವರ್ಷವಷ್ಟೇ ಪ್ರಸಾರವಾಗಿದ್ದ 'ಕನ್ನಡದ ಕೋಟ್ಯಧಿಪತಿ' ಸೀಸನ್ 4 ಮತ್ತೆ ಪ್ರಸಾರವಾಗಲಿದೆ. ಈ ಮೂಲಕ ಲಾಕ್​​​​ಡೌನ್ ಸಮಯದಲ್ಲಿ ಪ್ರೇಕ್ಷಕರ ಜ್ಞಾನ ಹೆಚ್ಚಿಸಲಿದ್ದಾರೆ ಅಪ್ಪು. 'ಕನ್ನಡದ ಕೋಟ್ಯಧಿಪತಿ' ಯಶಸ್ವಿ 4 ಸೀಸನ್​​​​​​ಗಳನ್ನು ಪೂರೈಸಿದ್ದು ಪ್ರಸ್ತುತ ಸೀಸನ್‌ನಲ್ಲಿ ಸೆಲೆಬ್ರಿಟಿಗಳು ಕೂಡಾ ಸ್ಪರ್ಧಿಗಳಾಗಿ ಭಾಗವಹಿಸಿದ್ದರು.

ಜಯರಾಮ್‌ ಕಾರ್ತಿಕ್‌, ನಿವೇದಿತಾ ಗೌಡ, ಅಕುಲ್‌ ಬಾಲಾಜಿ ಮುಂತಾದವರು ಸೀಸನ್ 4 ರಲ್ಲಿ ಅಪ್ಪು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಅವರು ಕೂಡಾ ಈ ಸೀಸನ್​​​​​​ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ತಾವು ಕಾರ್ಯಕ್ರಮದಲ್ಲಿ ಗೆದ್ದ ಹಣವನ್ನು ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ದೇಣಿಗೆಯಾಗಿ ನೀಡಿದ್ದರು. ಮೊದಲೆರಡು ಸೀಸನ್​​​​​ಗಳನ್ನು ಕೂಡಾ ಪುನೀತ್ ರಾಜ್​​​​​​​ಕುಮಾರ್ ಅವರೇ ನಿರೂಪಿಸಿದ್ದರು. ಮೂರನೇ ಸೀಸನ್ ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿಬಂದಿತ್ತು. ಮತ್ತೆ 4ನೇ ಸೀಸನ್​​ನಲ್ಲಿ ಪುನೀತ್ ರಾಜ್​​​ಕುಮಾರ್​​​​​​​​​​​ ನಿರೂಪಣೆ ಮಾಡಿದ್ದರು.

ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ಪವರ್ ಸ್ಟಾರ್ ಪುನೀತ್ ರಾಜ್​​​​ಕುಮಾರ್​​​​​​​​​​​​​​​ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕೂಡಾ ಒಂದು. ಲಾಕ್​​ಡೌನ್​​​​​​​​​​​​​ನಿಂದಾಗಿ ಧಾರಾವಾಹಿಗಳ ಪ್ರಸಾರ ನಿಂತಿರುವ ಕಾರಣ ಹಳೆಯ ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳು ಕೂಡಾ ಮರು ಪ್ರಸಾರ ಆರಂಭಿಸಿದೆ. ವೀಕ್ಷಕರು ಕೂಡಾ ಹಳೆಯ ಧಾರಾವಾಹಿಗಳು ಪ್ರಸಾರವಾಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

Kannadada Kotyadhipathi
ಫೋಟೋ ಕೃಪೆ: ಕಲರ್ಸ್ ಕನ್ನಡ

ಮರುಪ್ರಸಾರ ಕಾಣಲಿರುವ ಕಾರ್ಯಕ್ರಮಗಳಲ್ಲಿ 'ಕನ್ನಡದ ಕೋಟ್ಯಧಿಪತಿ' ಕೂಡಾ ಒಂದು. ಪವರ್ ಸ್ಟಾರ್ ಪುನೀತ್​​ ರಾಜ್​​​​​​​​​​​​​​​​​​​​ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ಕನ್ನಡದ ಕೋಟ್ಯಧಿಪತಿಯನ್ನು ಕಿರುತೆರೆ ವೀಕ್ಷಕರು ಬಹಳ ಮೆಚ್ಚಿಕೊಂಡಿದ್ದರು. ಕಳೆದ ವರ್ಷವಷ್ಟೇ ಪ್ರಸಾರವಾಗಿದ್ದ 'ಕನ್ನಡದ ಕೋಟ್ಯಧಿಪತಿ' ಸೀಸನ್ 4 ಮತ್ತೆ ಪ್ರಸಾರವಾಗಲಿದೆ. ಈ ಮೂಲಕ ಲಾಕ್​​​​ಡೌನ್ ಸಮಯದಲ್ಲಿ ಪ್ರೇಕ್ಷಕರ ಜ್ಞಾನ ಹೆಚ್ಚಿಸಲಿದ್ದಾರೆ ಅಪ್ಪು. 'ಕನ್ನಡದ ಕೋಟ್ಯಧಿಪತಿ' ಯಶಸ್ವಿ 4 ಸೀಸನ್​​​​​​ಗಳನ್ನು ಪೂರೈಸಿದ್ದು ಪ್ರಸ್ತುತ ಸೀಸನ್‌ನಲ್ಲಿ ಸೆಲೆಬ್ರಿಟಿಗಳು ಕೂಡಾ ಸ್ಪರ್ಧಿಗಳಾಗಿ ಭಾಗವಹಿಸಿದ್ದರು.

ಜಯರಾಮ್‌ ಕಾರ್ತಿಕ್‌, ನಿವೇದಿತಾ ಗೌಡ, ಅಕುಲ್‌ ಬಾಲಾಜಿ ಮುಂತಾದವರು ಸೀಸನ್ 4 ರಲ್ಲಿ ಅಪ್ಪು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಅವರು ಕೂಡಾ ಈ ಸೀಸನ್​​​​​​ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ತಾವು ಕಾರ್ಯಕ್ರಮದಲ್ಲಿ ಗೆದ್ದ ಹಣವನ್ನು ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ದೇಣಿಗೆಯಾಗಿ ನೀಡಿದ್ದರು. ಮೊದಲೆರಡು ಸೀಸನ್​​​​​ಗಳನ್ನು ಕೂಡಾ ಪುನೀತ್ ರಾಜ್​​​​​​​ಕುಮಾರ್ ಅವರೇ ನಿರೂಪಿಸಿದ್ದರು. ಮೂರನೇ ಸೀಸನ್ ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿಬಂದಿತ್ತು. ಮತ್ತೆ 4ನೇ ಸೀಸನ್​​ನಲ್ಲಿ ಪುನೀತ್ ರಾಜ್​​​ಕುಮಾರ್​​​​​​​​​​​ ನಿರೂಪಣೆ ಮಾಡಿದ್ದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.