ETV Bharat / sitara

ಕಿರುತೆರೆಯಲ್ಲೂ ಮಿಂಚುತ್ತಿರುವ ರೆಹಮಾನ್​​...ವಕೀಲನ ಪಾತ್ರದಲ್ಲಿ ಮಾಜಿ ಬಿಗ್​​ಬಾಸ್​ ಸ್ಫರ್ಧಿ - ರೆಹಮಾನ್ ಹಸೀಬ್

ಈ ಮುನ್ನ ಖಾಸಗಿ ನ್ಯೂಸ್ ಚಾನೆಲ್​​ನಲ್ಲಿ ವಾರ್ತಾ ವಾಚಕ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹಾಸನದ ರೆಹಮಾನ್, ಕೆಲಸ ಬಿಟ್ಟ ನಂತರ ಬಿಗ್​​​ಬಾಸ್​​​​​ ಸ್ಪರ್ಧಿ ಆಗಿ ಭಾಗವಹಿಸಿದ್ದರು. ನಂತರ ಸಿನಿಮಾದಲ್ಲೂ ನಟಿಸಿ ಇದೀಗ ವೀಕ್ಷಕರ ಮನ ಸೆಳೆಯಲು ಕಿರುತೆರೆಗೂ ಬಂದಿದ್ದಾರೆ.

ರೆಹಮಾನ್
author img

By

Published : Sep 20, 2019, 8:13 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಸರ್ಕಾರಿ ವಕೀಲನ ಪಾತ್ರಕ್ಕೆ ಮಾಜಿ ಬಿಗ್​​ಬಾಸ್​​​ ಸ್ಪರ್ಧಿ, ನಿರೂಪಕ ರೆಹಮಾನ್ ಹಸೀಬ್ ಜೀವ ತುಂಬಲು ಬಂದಿದ್ದಾರೆ. ಬಿಎಸ್ಸಿ ಎಲೆಕ್ಟ್ರಾನಿಕ್ಸ್ ಓದಿರುವ ರೆಹಮಾನ್​​​​ಗೆ ಎಂಬಿಎ ಓದುವ ಬಯಕೆ ಇತ್ತು. ಆದರೆ ಆಕಸ್ಮಿಕವಾಗಿ ವಾರ್ತಾ ವಾಚಕ ಹುದ್ದೆ ಅವರನ್ನು ಹುಡುಕಿ ಬಂತು. ಮುಂದೆ ಬಿಗ್​​​​​​​​​ಬಾಸ್​​​-3 ರ ಸ್ಪರ್ಧಿಯಾಗಿ ಭಾಗವಹಿಸುವ ಅವಕಾಶ ದೊರೆತಾಗ ಕೆಲಸಕ್ಕೆ ಗುಡ್​​​​​​​​ಬೈ ಹೇಳಿದರು. ಬಿಗ್​​​​​​​​​​​​​​ಬಾಸ್ ಮನೆಗೆ ಹೋಗುವ ಮುನ್ನ ಮೂರೇ ವಾರಗಳಲ್ಲಿ ನಾನು ವಾಪಸ್ ಬರುತ್ತೇನೆ ಅಂದುಕೊಂಡಿದ್ದ ರೆಹಮಾನ್ ಕೊನೆವರೆಗೂ ಉಳಿದಿದ್ದರು. ವಿಶೇಷ ಎಂದರೆ ಅಲ್ಲಿ ಅವರು ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು.

Rehman hasib
ರೆಹಮಾನ್ ಹಸೀಬ್

ಮುಂದೆ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ರೆಹಮಾನ್, ನಿಖಿಲ್ ಕುಮಾರಸ್ವಾಮಿ ಅಭಿನಯದ 'ಜಾಗ್ವಾರ್'​​​​​​​​​​​​​​​ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಗಮನ ಸೆಳೆದರು. ಅದಾದ ಮೇಲೆ 'ಗರ' ಸಿನಿಮಾದಲ್ಲೂ ನಟಿಸಿದರು. ನಂತರ ಕಿರುತೆರೆಯತ್ತ ಮುಖ ಮಾಡಿರುವ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ತುಳಸಿ' ಧಾರಾವಾಹಿಯಲ್ಲಿ ನಾಯಕಿಯ ಅಣ್ಣನಾಗಿ ನಟಿಸಿದರು. ರಿಯಾಲಿಟಿ ಶೋ ಒಂದರ ನಿರೂಪಕನಾಗಿ ಕೂಡಾ ಮಿಂಚಿದ್ದ ರೆಹಮಾನ್ ಇದೀಗ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಸರ್ಕಾರಿ ವಕೀಲನ ಪಾತ್ರಕ್ಕೆ ಮಾಜಿ ಬಿಗ್​​ಬಾಸ್​​​ ಸ್ಪರ್ಧಿ, ನಿರೂಪಕ ರೆಹಮಾನ್ ಹಸೀಬ್ ಜೀವ ತುಂಬಲು ಬಂದಿದ್ದಾರೆ. ಬಿಎಸ್ಸಿ ಎಲೆಕ್ಟ್ರಾನಿಕ್ಸ್ ಓದಿರುವ ರೆಹಮಾನ್​​​​ಗೆ ಎಂಬಿಎ ಓದುವ ಬಯಕೆ ಇತ್ತು. ಆದರೆ ಆಕಸ್ಮಿಕವಾಗಿ ವಾರ್ತಾ ವಾಚಕ ಹುದ್ದೆ ಅವರನ್ನು ಹುಡುಕಿ ಬಂತು. ಮುಂದೆ ಬಿಗ್​​​​​​​​​ಬಾಸ್​​​-3 ರ ಸ್ಪರ್ಧಿಯಾಗಿ ಭಾಗವಹಿಸುವ ಅವಕಾಶ ದೊರೆತಾಗ ಕೆಲಸಕ್ಕೆ ಗುಡ್​​​​​​​​ಬೈ ಹೇಳಿದರು. ಬಿಗ್​​​​​​​​​​​​​​ಬಾಸ್ ಮನೆಗೆ ಹೋಗುವ ಮುನ್ನ ಮೂರೇ ವಾರಗಳಲ್ಲಿ ನಾನು ವಾಪಸ್ ಬರುತ್ತೇನೆ ಅಂದುಕೊಂಡಿದ್ದ ರೆಹಮಾನ್ ಕೊನೆವರೆಗೂ ಉಳಿದಿದ್ದರು. ವಿಶೇಷ ಎಂದರೆ ಅಲ್ಲಿ ಅವರು ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು.

Rehman hasib
ರೆಹಮಾನ್ ಹಸೀಬ್

ಮುಂದೆ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ರೆಹಮಾನ್, ನಿಖಿಲ್ ಕುಮಾರಸ್ವಾಮಿ ಅಭಿನಯದ 'ಜಾಗ್ವಾರ್'​​​​​​​​​​​​​​​ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಗಮನ ಸೆಳೆದರು. ಅದಾದ ಮೇಲೆ 'ಗರ' ಸಿನಿಮಾದಲ್ಲೂ ನಟಿಸಿದರು. ನಂತರ ಕಿರುತೆರೆಯತ್ತ ಮುಖ ಮಾಡಿರುವ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ತುಳಸಿ' ಧಾರಾವಾಹಿಯಲ್ಲಿ ನಾಯಕಿಯ ಅಣ್ಣನಾಗಿ ನಟಿಸಿದರು. ರಿಯಾಲಿಟಿ ಶೋ ಒಂದರ ನಿರೂಪಕನಾಗಿ ಕೂಡಾ ಮಿಂಚಿದ್ದ ರೆಹಮಾನ್ ಇದೀಗ ಮಂಗಳ ಗೌರಿ ಮದುವೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

Intro:Body:ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆಯಲ್ಲಿ ಸರ್ಕಾರಿ ವಕೀಲ ನ ಪಾತ್ರಕ್ಕೆ ಜೀವ ತುಂಬುತ್ತಿರುವ ರೆಹಮಾನ್ ಮಗದೊಮ್ಮೆ ವೀಕ್ಷಕರ ಮನ ಸೆಳೆಯಲು ಬರುತ್ತಿದ್ದಾರೆ.

ಹತ್ತು ವರುಷಗಳ ಕಾಲ ವಾರ್ತಾವಾಚಕರಾಗಿ ಗಮನ ಸೆಳೆದ ಇವರು ಕನ್ನಡ ನಾಡಿನ ಜನತೆಗೆ ಪರಿಚಿತ. ತಮ್ಮ ಕಂಠದ ಮೂಲಕವೇ ವೀಕ್ಷಕರನ್ನು ಸೆಳೆಯುತ್ತಿದ್ದ ಇವರು ಬೇರಾರೂ ಅಲ್ಲ, ರೆಹಮಾನ್ ಹಸೀಬ್.

ಬಿಎಸ್ಸಿ ಎಲೆಕ್ಟ್ರಾನಿಕ್ಸ್ ಓದಿರುವ ರೆಹಮಾನ್ ಗೆ ಎಂಬಿಎ ಓದುವ ಬಯಕೆ. ಆದರೆ ಆಗಿದ್ದು ಸುದ್ದಿ ನಿರೂಪಕ. ಮುಂದೆ ಬಿಗ್ ಬಾಸ್ ಸೀಸನ್ 3 ರ ಸ್ಪರ್ಧಿಯಾಗಿ ಭಾಗಬಹಿಸುವ ಅವಕಾಶ ದೊರೆತಾಗ ಅಸ್ತು ಎಂದ ರೆಹಮಾನ್ ಕೆಲಸಕ್ಕೆ ಬಾಯ್ ಹೇಳಿದ್ದಾಯಿತು. ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಮೂರು ವಾರಗಳಲ್ಲಿ ನಾನು ವಾಪಸ್ ಬರಲಿದ್ದೇನೆ ಎಂದು ಅಂದುಕೊಂಡಿದ್ದ ರೆಹಮಾನ್ ಫೈನಲ್ ತನಕ ಬಿಗ್ ಬಾಸ್ ಮನೆಯಲ್ಲಿದ್ದರು! ವಿಶೇಷವೆಂದರೆ ಅಲ್ಲಿ ಅವರು ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು.

ಮುಂದೆ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವ ರೆಹಮಾನ್ ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ನಲ್ಲಿ ಪ್ರಮುಖ ಪಾತ್ರದಲ್ಲಿ ಗಮನಸೆಳೆದರು. ತದ ನಂತರ ಕಿರುತೆರೆಯತ್ತ ಮುಖ ಮಾಡಿರುವ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೃಷ್ಣ ತುಳಸಿ ಧಾರಾವಾಹಿಯಲ್ಲಿ ನಾಯಕಿಯ ಅಣ್ಣನಾಗಿ ಗಮನ ಸೆಳೆದರು.

ಮಾತ್ರವಲ್ಲ ರಿಯಾಲಿಟಿ ಶೋ ಒಂದರ ನಿರೂಪಕರಾಗಿ ಗಮನ ಸೆಳೆದಿರುವ ರೆಹಮಾನ್ ಗರ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಮಿಂಚಿದರು. ಇದರ ಜೊತೆಗೆ ಮತ್ತೊಮ್ಮೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ ರೆಹಮಾನ್.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.