ETV Bharat / sitara

ಅಪ್ಪನೆಂಬುವನು ಅಸ್ಪಷ್ಟ.. ತಾಯಿ ಮಾನ ಕಾಪಾಡುವುದು ಆಗ ನನಗೆ ಆದರ್ಶ.. ಬೆಳಗೆರೆ

author img

By

Published : Oct 18, 2019, 7:51 AM IST

ಬಿಗ್​ಬಾಸ್​ ನೀಡಿದ್ದ ಟಾಸ್ಕ್​ನಲ್ಲಿ ಅಲ್ಲಿದ್ದ ಎಲ್ಲಾ ಸ್ಪರ್ಧಿಗಳ ಭಾವನೆಗಳ ಕಟ್ಟೆ ಒಡೆದಿದೆ. ಹೆತ್ತವರ ಬಗ್ಗೆ ಮಾತನಾಡಿ ಎಂದು ಬಿಗ್​ಬಾಸ್​ ನೀಡಿದ್ದ ಟಾಸ್ಕ್‌​ಗೆ ಎಲ್ಲರೂ ಕಣ್ಣೀರ ಕೋಡಿಯಲ್ಲಿ ಮಿಂದು ಎದ್ದಿದ್ದಾರೆ.

ಬಿಗ್​ಬಾಸ್​ ಟಾಸ್ಕ್​ ಒಂದರಲ್ಲಿ ಅಳುತ್ತಿರುವ ಸ್ಪರ್ಧಿಗಳು

ಚಂದನಾ ಅಪ್ಪ ಮತ್ತು ಅಮ್ಮನ ಬಗ್ಗೆ ಹಾಡಿದ ಹಾಡು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತು. ಬಿಗ್ ಬಾಸ್ ಹಾಕಿದ್ದ ಟಾಸ್ಕ್ ಎಂಬ ಭಾವನಾತ್ಮಕ ವೇದಿಕೆ ಮೇಲೆ ಒಬ್ಬೊಬ್ಬರಾಗಿ ತಮ್ಮ ಕಥೆ ಹೇಳಿಕೊಂಡರು. ಹಿರಿಯ ಪತ್ರಕರ್ತ ರವಿ ಬೆಳಗೆರೆ ತಮ್ಮ ತಾಯಿಯೊಂದಿಗಿನ ಜೀವನ ಅನುಭವ ಬಿಚ್ಚಿಟ್ಟರು.

ನಾನು ತಾಯಿಯ ಮಗ, ತಂದೆ ಎಂಬುವನ್ನು ನಾನು ಒಂದು ಕಾನೂನು ಎಂದಷ್ಟೇ ಹೇಳಬಲ್ಲೆ. ಆಕೆ ನನ್ನನ್ನು ಎತ್ತಿ ತೆಗೆಸಿಕೊಂಡ ಪೋಟೋ ನನ್ನ ಕಚೇರಿಯಲ್ಲಿದೆ. ನನಗೆ ತಂದೆ ಯಾರೆಂದು ಗೊತ್ತಿಲ್ಲ. ಆದರೆ, ನನ್ನ ತಾಯಿ ಒಬ್ಬ ಲೇಖಕಿ, ನನ್ನ ತಾಯಿಯ ಹೆಸರು ಪಾರ್ವತಮ್ಮ ಬೆಳಗೆರೆ. ಹೀಗಾಗಿ ನಾನು ನನ್ನ ತಾಯಿ ಹೆಸರನ್ನು ನನ್ನ ಹೆಸರಿನೊಂದಿಗೆ ಸೇರಿಸಿಕೊಂಡೆ ಎಂದರು.

ನಾನು ಚಿಕ್ಕವನಾಗಿದ್ದಾಗ ಅವಳು ಸ್ನಾನಕ್ಕೆ ಹೋದಾಗ ಅಡ್ಡಲಾಗಿ ಸೀರೆಯನ್ನು ಹಿಡಿದುಕೊಂಡು ನಿಲ್ಲುತ್ತಿದ್ದೆ, ಮಾನ ಕಾಪಾಡುವುದು ನನ್ನ ಆದರ್ಶವಾಗಿತ್ತು. ನನ್ನ ಅಮ್ಮ ಪಾರ್ಶ್ವವಾಯುಗೆ ತುತ್ತಾಗಿದ್ದರು. ನಾನು, ನನ್ನ ತಾಯಿ ರಾಯಚೂರಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆವು. ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಳು. ಪಾರ್ಶ್ವವಾಯುಗೆ ತುತ್ತಾಗಿದ್ದ ಕೈ ಮುರಿದು ಹೋಯಿತು. ಇದಾದ ಮೇಲೆ ರವಿ ಬಾತ್ ರೂಂಗೆ ಹೋಗಬೇಕು ಎಂದಳು. ನಾನು ಆಕೆಯ ಕೈ ಹಿಡಿದು ಕರೆದುಕೊಂಡು ಹೋದೆ. ನೀನು ಹೊರಗೆ ಹೋಗು ಎಂದಳು. ಆದರೆ, ನಾನು ಹೊರಗೆ ಬರಲಿಲ್ಲ. ಆಕೆಯನ್ನು ಕಾಯಬೇಕು. ಆಕೆಗೆ ಏನೂ ಆಗಬಾರದು ಎಂದು ಕಾದೆ. ನನ್ನ ಜೀವನಕ್ಕೆ ಇದೊಂದು ಬಾಕಿ ಇತ್ತು ಎಂದು ತನ್ನನ್ನೇ ತಾನು ಶಪಿಸಿಕೊಂಡಳು.

ನಾನು 21ನೇ ವರ್ಷಕ್ಕೆ ಮದುವೆಯಾದೆ. ನನಗಾಗಿ ಅಲ್ಲ, ನನ್ನ ತಾಯಿಗಾಗಿ. ಆಕೆಗೆ ಒಂದು ಹೆಣ್ಣು ಜೀವ ನೆರವಾಗಲಿ ಎಂದು. ಇದೇ ಸಂದರ್ಭದಲ್ಲಿ ಕೆಲ ಕೆಟ್ಟ ಗುಣಗಳನ್ನು ಕಲಿತುಬಿಟ್ಟೆ. ಆದರೆ, ಈಗ ಕುಡಿಯುವುದನ್ನು ಸಂಪೂರ್ಣ ಬಿಟ್ಟುಬಿಟ್ಟಿದ್ದೇನೆ.

ಒಂದು ದಿನ ನಾನು ಕುಡಿದು ಬಂದು ಮಲಗಿದ್ದೆ. ಬೆಳಗ್ಗೆ ಹೆಂಡತಿ ಲಲಿತಾ ಬಂದು ತಟ್ಟಿ ತಟ್ಟಿ ಎಬ್ಬಿಸಿದಳು. ಏಳಿ ರವಿ, ಅಮ್ಮ ಬಿದ್ದು ಹೋಗಿದ್ದಾರೆ ಎಂದು. ಅದು ಏನು ಆಗಿತ್ತೋ ಗೊತ್ತಿಲ್ಲ. ನನ್ನ ಸ್ನೇಹಿತನಿಗೆ ಕರೆ ಮಾಡಿ ಕಾರು ತರಲು ಹೇಳಿದೆ. ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಡಾಕ್ಟರ್ ಹೇಗಾದರೂ ಮಾಡಿ ಅಮ್ಮನನ್ನು ಉಳಿಸಿ ಎಂದೆ. ಅಮ್ಮನ ಬೆನ್ನು ಮೂಳೆಗೆ ದಬ್ಬಣ ಚುಚ್ಚಿದರು. ಅಲ್ಲಿಂದ ಅಮ್ಮ ಕೋಮಾಕ್ಕೆ ಹೋದವರು ಹಿಂದೆ ಬಾರಲೇ ಇಲ್ಲ. ಪ್ರತಿದಿನ ರಾತ್ರಿ ಹಗಲು ಎನ್ನದೇ ಅಮ್ಮನ ಕಾದೆ. ಗಂಜಿ ಮಾಡಿಕೊಂಡು ಬರಲು ಮನೆಗೆ ಬಂದಾಗ ಅಮ್ಮ ತೀರಿಕೊಂಡಳು. ಇಂದು ನಾನು ಏನೆಲ್ಲಾ ಮಾಡಿದ್ದೇನೆ ಎಂಬುದನ್ನು ಅಮ್ಮ ಒಮ್ಮೆ ನೋಡಿ ಸಂತೋಷಪಡಬೇಕಿತ್ತು ಎಂದು ಕಣ್ಣೀರು ಹಾಕಿದರು.

ಚಂದನಾ ಅಪ್ಪ ಮತ್ತು ಅಮ್ಮನ ಬಗ್ಗೆ ಹಾಡಿದ ಹಾಡು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತು. ಬಿಗ್ ಬಾಸ್ ಹಾಕಿದ್ದ ಟಾಸ್ಕ್ ಎಂಬ ಭಾವನಾತ್ಮಕ ವೇದಿಕೆ ಮೇಲೆ ಒಬ್ಬೊಬ್ಬರಾಗಿ ತಮ್ಮ ಕಥೆ ಹೇಳಿಕೊಂಡರು. ಹಿರಿಯ ಪತ್ರಕರ್ತ ರವಿ ಬೆಳಗೆರೆ ತಮ್ಮ ತಾಯಿಯೊಂದಿಗಿನ ಜೀವನ ಅನುಭವ ಬಿಚ್ಚಿಟ್ಟರು.

ನಾನು ತಾಯಿಯ ಮಗ, ತಂದೆ ಎಂಬುವನ್ನು ನಾನು ಒಂದು ಕಾನೂನು ಎಂದಷ್ಟೇ ಹೇಳಬಲ್ಲೆ. ಆಕೆ ನನ್ನನ್ನು ಎತ್ತಿ ತೆಗೆಸಿಕೊಂಡ ಪೋಟೋ ನನ್ನ ಕಚೇರಿಯಲ್ಲಿದೆ. ನನಗೆ ತಂದೆ ಯಾರೆಂದು ಗೊತ್ತಿಲ್ಲ. ಆದರೆ, ನನ್ನ ತಾಯಿ ಒಬ್ಬ ಲೇಖಕಿ, ನನ್ನ ತಾಯಿಯ ಹೆಸರು ಪಾರ್ವತಮ್ಮ ಬೆಳಗೆರೆ. ಹೀಗಾಗಿ ನಾನು ನನ್ನ ತಾಯಿ ಹೆಸರನ್ನು ನನ್ನ ಹೆಸರಿನೊಂದಿಗೆ ಸೇರಿಸಿಕೊಂಡೆ ಎಂದರು.

ನಾನು ಚಿಕ್ಕವನಾಗಿದ್ದಾಗ ಅವಳು ಸ್ನಾನಕ್ಕೆ ಹೋದಾಗ ಅಡ್ಡಲಾಗಿ ಸೀರೆಯನ್ನು ಹಿಡಿದುಕೊಂಡು ನಿಲ್ಲುತ್ತಿದ್ದೆ, ಮಾನ ಕಾಪಾಡುವುದು ನನ್ನ ಆದರ್ಶವಾಗಿತ್ತು. ನನ್ನ ಅಮ್ಮ ಪಾರ್ಶ್ವವಾಯುಗೆ ತುತ್ತಾಗಿದ್ದರು. ನಾನು, ನನ್ನ ತಾಯಿ ರಾಯಚೂರಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆವು. ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಳು. ಪಾರ್ಶ್ವವಾಯುಗೆ ತುತ್ತಾಗಿದ್ದ ಕೈ ಮುರಿದು ಹೋಯಿತು. ಇದಾದ ಮೇಲೆ ರವಿ ಬಾತ್ ರೂಂಗೆ ಹೋಗಬೇಕು ಎಂದಳು. ನಾನು ಆಕೆಯ ಕೈ ಹಿಡಿದು ಕರೆದುಕೊಂಡು ಹೋದೆ. ನೀನು ಹೊರಗೆ ಹೋಗು ಎಂದಳು. ಆದರೆ, ನಾನು ಹೊರಗೆ ಬರಲಿಲ್ಲ. ಆಕೆಯನ್ನು ಕಾಯಬೇಕು. ಆಕೆಗೆ ಏನೂ ಆಗಬಾರದು ಎಂದು ಕಾದೆ. ನನ್ನ ಜೀವನಕ್ಕೆ ಇದೊಂದು ಬಾಕಿ ಇತ್ತು ಎಂದು ತನ್ನನ್ನೇ ತಾನು ಶಪಿಸಿಕೊಂಡಳು.

ನಾನು 21ನೇ ವರ್ಷಕ್ಕೆ ಮದುವೆಯಾದೆ. ನನಗಾಗಿ ಅಲ್ಲ, ನನ್ನ ತಾಯಿಗಾಗಿ. ಆಕೆಗೆ ಒಂದು ಹೆಣ್ಣು ಜೀವ ನೆರವಾಗಲಿ ಎಂದು. ಇದೇ ಸಂದರ್ಭದಲ್ಲಿ ಕೆಲ ಕೆಟ್ಟ ಗುಣಗಳನ್ನು ಕಲಿತುಬಿಟ್ಟೆ. ಆದರೆ, ಈಗ ಕುಡಿಯುವುದನ್ನು ಸಂಪೂರ್ಣ ಬಿಟ್ಟುಬಿಟ್ಟಿದ್ದೇನೆ.

ಒಂದು ದಿನ ನಾನು ಕುಡಿದು ಬಂದು ಮಲಗಿದ್ದೆ. ಬೆಳಗ್ಗೆ ಹೆಂಡತಿ ಲಲಿತಾ ಬಂದು ತಟ್ಟಿ ತಟ್ಟಿ ಎಬ್ಬಿಸಿದಳು. ಏಳಿ ರವಿ, ಅಮ್ಮ ಬಿದ್ದು ಹೋಗಿದ್ದಾರೆ ಎಂದು. ಅದು ಏನು ಆಗಿತ್ತೋ ಗೊತ್ತಿಲ್ಲ. ನನ್ನ ಸ್ನೇಹಿತನಿಗೆ ಕರೆ ಮಾಡಿ ಕಾರು ತರಲು ಹೇಳಿದೆ. ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಡಾಕ್ಟರ್ ಹೇಗಾದರೂ ಮಾಡಿ ಅಮ್ಮನನ್ನು ಉಳಿಸಿ ಎಂದೆ. ಅಮ್ಮನ ಬೆನ್ನು ಮೂಳೆಗೆ ದಬ್ಬಣ ಚುಚ್ಚಿದರು. ಅಲ್ಲಿಂದ ಅಮ್ಮ ಕೋಮಾಕ್ಕೆ ಹೋದವರು ಹಿಂದೆ ಬಾರಲೇ ಇಲ್ಲ. ಪ್ರತಿದಿನ ರಾತ್ರಿ ಹಗಲು ಎನ್ನದೇ ಅಮ್ಮನ ಕಾದೆ. ಗಂಜಿ ಮಾಡಿಕೊಂಡು ಬರಲು ಮನೆಗೆ ಬಂದಾಗ ಅಮ್ಮ ತೀರಿಕೊಂಡಳು. ಇಂದು ನಾನು ಏನೆಲ್ಲಾ ಮಾಡಿದ್ದೇನೆ ಎಂಬುದನ್ನು ಅಮ್ಮ ಒಮ್ಮೆ ನೋಡಿ ಸಂತೋಷಪಡಬೇಕಿತ್ತು ಎಂದು ಕಣ್ಣೀರು ಹಾಕಿದರು.

Intro:Body:ಬಿಗ್ ಬಾಸ್ ಮನೆಯಲ್ಲಿ ಇವತ್ತು ಕಣ್ಣೀರಿನ ಕೋಡಿ ಹರಿದಿತ್ತು. ಅಪ್ಪ ಅಮ್ಮನ ಬಗ್ಗೆ ಮಾತನಾಡುವಂತೆ ಬಾಸ್ ನೀಡಿದ್ದ ಟಾಸ್ಕ್ ಭಾವನಾತ್ಮಕ ವಾಗಿತ್ತು.

https://www.facebook.com/102459466602897/posts/1384985418350289/

ಚಂದನಾ ಅಪ್ಪ ಮತ್ತು ಅಮ್ಮನ ಬಗ್ಗೆ ಹಾಡಿದ ಹಾಡು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತು. ಬಿಗ್ ಬಾಸ್ ಹಾಕಿದ್ದ ವೇದಿಕೆ ಮೇಲೆ ಒಬ್ಬೊಬ್ಬರಾಗಿ ತನ್ನ ಕತೆಯನ್ನು ಹೇಳಿಕೊಂಡರು. ಹಿರಿಯ ಪತ್ರಕರ್ತ ರವಿ ಬೆಳಗೆರೆ ತಮ್ಮ ತಾಯಿಯೊಂದಿಗಿನ ಜೀವನ ಅನುಭವ ಬಿಚ್ಚಿಟ್ಟರು.

ನಾನು ತಾಯಿಯ ಮಗ, ತಂದೆ ಎಂಬುವನ್ನು ನಾನು ಒಂದು ಕಾನೂನು ಎಂದಷ್ಟೇ ಹೇಳಬಲ್ಲೆ. ನಾನು ತಾಯಿಯ ಮಗ, ಆಕೆ ನನ್ನನ್ನು ಎತ್ತಿಕೊಂಡು ತೆಗೆಸಿಕೊಂಡ ಪೋಟೋ ನನ್ನ ಕಚೇರಿಯಲ್ಲಿದೆ. ನನಗೆ ತಂದೆ ಯಾರೆಂದು ಗೊತ್ತಿಲ್ಲ ಆದರೆ ನನ್ನ ತಾಯಿ ಒಬ್ಬ ಲೇಖಕಿ ನಾನೊಬ್ಬನೇ ಮಗ ನನ್ನ ತಾಯಿಯ ಹೆಸರು ಪಾರ್ವತಮ್ಮ ಬೆಳಗೆರೆ ಹೀಗಾಗಿ ನಾನು ನನ್ನ ತಾಯಿ ಹೆಸರನ್ನು ಸೇರಿಸಿಕೊಂಡು ಎಂದರು.
ನನ್ ಚಿಕ್ಕವನಾಗಿದ್ದಾಗ ಅವಳ ಸ್ನಾನಕ್ಕೆ ಹೋದಾಗ ಅಡ್ಡಲಾಗಿ ಸೀರೆಯನ್ನು ಹಿಡಿದುಕೊಂಡು ನಿಲ್ಲುತ್ತಿದ್ದೆ ಮಾನ ಕಾಪಾಡುವುದು ನನ್ನ ಆದರ್ಶವಾಗಿತ್ತು.

ತಾಯಿ ಪಾರ್ಶ್ವವಾಯುಗೆ  ತುತ್ತಾಗಿದ್ದರು. ನಾನು ನನ್ನ ತಾಯಿ ರಾಯಚೂರಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದೇವು. ರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಳು. ಪಾರ್ಶ್ವವಾಯುಗೆ ತುತ್ತಾಗಿದ್ದ ಕೈ ಮುರಿದು ಹೋಯಿತು. ಇದಾದ ಮೇಲೆ ರವಿ ಬಾತ್ ರೂಂಗೆ ಹೋಗಬೇಕು ಎಂದಳು. ನಾನು ಆಕೆಯ ಕೈ ಹಿಡಿದು ಕರೆದುಕೊಂಡು ಹೋದೆ. ನೀನು ಹೊರಗೆ ಹೋಗು ಎಂದಳು ಆದರೆ ನಾನು ಹೊರಗೆ ಬರಲಿಲ್ಲ.. ಆಕೆಯನ್ನು ಕಾಯಬೇಕು. ಆಕೆಗೆ ಏನು ಆಗಬಾರದು ಎಂದು ಕಾದೆ. ನನ್ನ ಜೀವನಕ್ಕೆ ಇದೊಂದು ಬಾಕಿ ಇತ್ತು ಎಂದು ತನ್ನನ್ನೇ ತಾನು ಶಪಿಸಿಕೊಂಡಳು.

ನಾನು 21ನೇ ವರ್ಷಕ್ಕೆ ಮದುವೆಯಾದೆ. ನನಗಾಗಿ ಅಲ್ಲ.ನನ್ನ ತಾಯಿಗಾಗಿ. ಆಕೆಗೆ ಒಂದು ಹೆಣ್ಣು ಜೀವ ನೆರವಾಗಲಿ ಎಂದು. ಇದೇ ಸಂದರ್ಭದಲ್ಲಿ ಕೆಲ ಕೆಟ್ಟ ಗುಣಗಳನ್ನು ಕಲಿತುಬಿಟ್ಟೆ. ಆದರೆ ಈಗ ಕುಡಿಯುವುದನ್ನು ಸಂಪೂರ್ಣ ಬಿಟ್ಟುಬಿಟ್ಟಿದ್ದೇನೆ.

ಒಂದು ದಿನ ನಾನು ಕುಡಿದು ಬಂದು ಮಲಗಿದ್ದೆ. ಬೆಳಗ್ಗೆ ಹೆಂಡತಿ ಲಲಿತಾ ಬಂದು ತಟ್ಟಿ ತಟ್ಟಿ ಎಬ್ಬಿಸಿದಳು. ಏಳಿ ರವಿ. ಅಮ್ಮ ಬಿದ್ದು ಹೋಗಿದ್ದಾರೆ ಎಂದು. ಅದು ಏನು ಆಗಿತ್ತೋ ಗೊತ್ತಿಲ್ಲ. ನನ್ನ ಸ್ನೇಹಿತನಿಗೆ ಕರೆ ಮಾಡಿ ಕಾರು ತರಲು ಹೇಳಿದೆ. ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಡಾಕ್ಟರ್ ಹೇಗಾದರೂ ಮಾಡಿ ಅಮ್ಮನನ್ನು ಉಳಿಸಿ ಎಂದೆ. ಅಮ್ಮನ ಬೆನ್ನು ಮೂಳಗೆ ದಬ್ಬಣ ಚುಚ್ಚಿದರು. ಅಲ್ಲಿಂದ ಅಮ್ಮ ಕೋಮಾಕ್ಕೆ ಹೋದವರು ಹಿಂದೆ ಬಾರಲೇ ಇಲ್ಲ.  ಪ್ರತಿದಿನ ರಾತ್ರಿ ಹಗಲು ಎನ್ನದೇ ಅಮ್ಮನ ಕಾದೆ. ಗಂಜಿ ಮಾಡಿಕೊಂಡು ಬರಲು ಮನೆಗೆ ಬಂದಾಗ ಅಮ್ಮ ತೀರಿಕೊಂಡಳು. ಇಂದು ನಾನು ಏನೇಲ್ಲಾ ಮಾಡಿದ್ದೇನೆ ಎಂಬುದನ್ನು ಅಮ್ಮ ಒಮ್ಮೆ ನೋಡಿ ಸಂತೋಷಪಡಬೇಕಿತ್ತು ಎಂದು ಕಣ್ಣೀರು ಹಾಕಿದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.