ETV Bharat / sitara

ರಾಜ್​​ ಕುಟುಂಬದ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ : ಅಪ್ಪು ಫೋಟೋ ಮುಂದೆ ಕ್ಷಮೆ ಕೇಳಿದ ವ್ಯಕ್ತಿ

author img

By

Published : Mar 27, 2022, 12:17 PM IST

ರಾಜ್ ಕುಮಾರ್​ ​ ಕುಟುಂಬದ ಬಗ್ಗೆ ಅವಾಚ್ಯ ಶಬ್ದ ಪದ ಬಳಸಿ ನಿಂದಿಸಿದ ವ್ಯಕ್ತಿಗೆ ಅಭಿಮಾನಿಗಳು ಬುದ್ದಿವಾದ ಹೇಳಿದ್ದಾರೆ. ಅಲ್ಲದೇ ಆತನಿಂದ ಪುನೀತ್ ರಾಜ್‍ಕುಮಾರ್ ಫೋಟೋ ಮುಂದೆ ಕ್ಷಮೆ ಕೇಳಿಸಿದ್ದಾರೆ..

man apologizing in front of Appu photo
ಅಪ್ಪು ಫೋಟೋ ಮುಂದೆ ಕ್ಷಮೆ ಕೇಳಿದ ವ್ಯಕ್ತಿ

ಸಿನಿಮಾ ರಂಗದಲ್ಲಿ ತಾರೆಯರಿಗೆ ಬೇರೆ ನಟರ ಅಭಿಮಾನಿಗಳು, ಅವಾಚ್ಯ ಶಬ್ದ ಬಳಸಿ ನಿಂದಿಸುವುದು ಸಾಮಾನ್ಯವಾಗಿದೆ. ಆಗಾಗ ಕನ್ನಡ ಚಿತ್ರರಂಗದಲ್ಲಿಯೂ ಕೂಡ ಸ್ಟಾರ್ ನಟರ ಅಭಿಮಾನಿಗಳ ಮಧ್ಯೆ ಬೇರೆ ನಟರ ಬಗ್ಗೆ ನಿಂದಿಸುವ ಘಟನೆಗಳು ನಡೆಯುತ್ತಲೇ ಇರುತ್ತವೆ‌. ಕೆಲವು ದಿನಗಳ ಹಿಂದೆ ಆನೇಕಲ್ ನಗರದ ನಿವಾಸಿ ರವಿಶಂಕರ್ ಎಂಬುವರು ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್​​ ಅವರಿಗೆ ಅವಾಚ್ಯ ಪದಗಳನ್ನ ಬಳಸಿ ನಿಂದಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ರಾಜ್​​ ಕುಟುಂಬದ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ : ಅಪ್ಪು ಫೋಟೋ ಮುಂದೆ ಕ್ಷಮೆ ಕೇಳಿದ ವ್ಯಕ್ತಿ

ಈ ವಿಡಿಯೋ ರಾಜ್​​ ಕುಟುಂಬದ ಅಭಿಮಾನಿಗಳ ಸಂಘದ ಗಮನಕ್ಕೆ ಬಂದು, ಈ ವ್ಯಕ್ತಿಯನ್ನ ಹುಡುಕಿ ಕ್ಷಮೆ ಕೇಳಿಸಿದ್ದಾರೆ. ಆನೇಕಲ್ ಜಿಲ್ಲೆಯ ನಿವಾಸಿಯಾಗಿರುವ ರವಿಶಂಕರ್, ಪ್ರಶಸ್ತಿ ಕೊಟ್ಟಿರುವ ವಿಚಾರವಾಗಿ, ಬಾಯಿಗೆ ಬಂದಂತೆ ಮಾತನಾಡಿದ್ದ. ಈಗ ಅಭಿಮಾನಿಗಳ ಕೈಗೆ ಸಿಕ್ಕಿ, ತಾನು ಮಾತನಾಡಿದ್ದು ತಪ್ಪು ಅಂತಾ ಪುನೀತ್ ರಾಜ್‍ಕುಮಾರ್ ಫೋಟೋ ಮುಂದೆ ಕ್ಷಮೆ ಕೇಳಿದ್ದಾನೆ.

ನಾನು ಆ ರೀತಿ ಮಾತನಾಡಿದ್ದು ತಪ್ಪು. ನಾನು ರಾಜ್​​ಕುಮಾರ್, ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಬಗ್ಗೆ ಮತ್ತೆ ಈ ರೀತಿ ಮಾತನಾಡಲ್ಲ ಎಂದು ರಾಜ್​​ ಕುಟುಂಬದ ಅಭಿಮಾನಿಗಳ ಮುಂದೆ ಕ್ಷಮೆಯಾಚಿದ್ದಾನೆ. ಇನ್ನು ರಾಜ್​​ಕುಮಾರ್​​ ಬಗ್ಗೆ ಈ ರೀತಿ ಕೆಟ್ಟ ಪದಗಳಿಂದ ಮಾತನಾಡಿದರೆ ಸುಮ್ನನಿರಲ್ಲ ಅಂತಾ ಅಭಿಮಾನಿಗಳ ಸಂಘದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಜೇಮ್ಸ್ ನೋಡಿ ಭಾವುಕರಾದ ಗೀತಾ ಶಿವರಾಜ್.. ಅಪ್ಪು ಬಗ್ಗೆ ಉಪೇಂದ್ರ ಹೇಳಿದ್ದೇನು?

ಸಿನಿಮಾ ರಂಗದಲ್ಲಿ ತಾರೆಯರಿಗೆ ಬೇರೆ ನಟರ ಅಭಿಮಾನಿಗಳು, ಅವಾಚ್ಯ ಶಬ್ದ ಬಳಸಿ ನಿಂದಿಸುವುದು ಸಾಮಾನ್ಯವಾಗಿದೆ. ಆಗಾಗ ಕನ್ನಡ ಚಿತ್ರರಂಗದಲ್ಲಿಯೂ ಕೂಡ ಸ್ಟಾರ್ ನಟರ ಅಭಿಮಾನಿಗಳ ಮಧ್ಯೆ ಬೇರೆ ನಟರ ಬಗ್ಗೆ ನಿಂದಿಸುವ ಘಟನೆಗಳು ನಡೆಯುತ್ತಲೇ ಇರುತ್ತವೆ‌. ಕೆಲವು ದಿನಗಳ ಹಿಂದೆ ಆನೇಕಲ್ ನಗರದ ನಿವಾಸಿ ರವಿಶಂಕರ್ ಎಂಬುವರು ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್​​ ಅವರಿಗೆ ಅವಾಚ್ಯ ಪದಗಳನ್ನ ಬಳಸಿ ನಿಂದಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ರಾಜ್​​ ಕುಟುಂಬದ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ : ಅಪ್ಪು ಫೋಟೋ ಮುಂದೆ ಕ್ಷಮೆ ಕೇಳಿದ ವ್ಯಕ್ತಿ

ಈ ವಿಡಿಯೋ ರಾಜ್​​ ಕುಟುಂಬದ ಅಭಿಮಾನಿಗಳ ಸಂಘದ ಗಮನಕ್ಕೆ ಬಂದು, ಈ ವ್ಯಕ್ತಿಯನ್ನ ಹುಡುಕಿ ಕ್ಷಮೆ ಕೇಳಿಸಿದ್ದಾರೆ. ಆನೇಕಲ್ ಜಿಲ್ಲೆಯ ನಿವಾಸಿಯಾಗಿರುವ ರವಿಶಂಕರ್, ಪ್ರಶಸ್ತಿ ಕೊಟ್ಟಿರುವ ವಿಚಾರವಾಗಿ, ಬಾಯಿಗೆ ಬಂದಂತೆ ಮಾತನಾಡಿದ್ದ. ಈಗ ಅಭಿಮಾನಿಗಳ ಕೈಗೆ ಸಿಕ್ಕಿ, ತಾನು ಮಾತನಾಡಿದ್ದು ತಪ್ಪು ಅಂತಾ ಪುನೀತ್ ರಾಜ್‍ಕುಮಾರ್ ಫೋಟೋ ಮುಂದೆ ಕ್ಷಮೆ ಕೇಳಿದ್ದಾನೆ.

ನಾನು ಆ ರೀತಿ ಮಾತನಾಡಿದ್ದು ತಪ್ಪು. ನಾನು ರಾಜ್​​ಕುಮಾರ್, ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಬಗ್ಗೆ ಮತ್ತೆ ಈ ರೀತಿ ಮಾತನಾಡಲ್ಲ ಎಂದು ರಾಜ್​​ ಕುಟುಂಬದ ಅಭಿಮಾನಿಗಳ ಮುಂದೆ ಕ್ಷಮೆಯಾಚಿದ್ದಾನೆ. ಇನ್ನು ರಾಜ್​​ಕುಮಾರ್​​ ಬಗ್ಗೆ ಈ ರೀತಿ ಕೆಟ್ಟ ಪದಗಳಿಂದ ಮಾತನಾಡಿದರೆ ಸುಮ್ನನಿರಲ್ಲ ಅಂತಾ ಅಭಿಮಾನಿಗಳ ಸಂಘದ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಜೇಮ್ಸ್ ನೋಡಿ ಭಾವುಕರಾದ ಗೀತಾ ಶಿವರಾಜ್.. ಅಪ್ಪು ಬಗ್ಗೆ ಉಪೇಂದ್ರ ಹೇಳಿದ್ದೇನು?

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.