ETV Bharat / sitara

‘ಡಾಟರ್ ಆಫ್ ಪಾರ್ವತಮ್ಮ’ ನೋಡಲು ಸ್ವಲ್ಪ ತಾಳ್ಮೆ ಬೇಕು

author img

By

Published : May 24, 2019, 7:30 PM IST

ಡಾಟರ್ ಆಫ್ ಪಾರ್ವತಮ್ಮ

ನಿನ್ನೆಯಷ್ಟೆ ಸುಮಲತಾ ಅಂಬರೀಶ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ವಿಜಯ ಸಿಕ್ಕಿದೆ. ಗೆಲುವಿನ ಸಂಭ್ರಮದಲ್ಲಿ ತೇಲುತ್ತಿರುವ ಮಂಡ್ಯದ ನೂತನ ಸಂಸದೆಗೆ ಈಗ ಮತ್ತೊಂದು ಸಂಭ್ರಮ. ಅದೇ, ಅವರು ನಟಿಸಿರುವ ಡಾಟರ್​ ಆಫ್​ ಪಾರ್ವತಮ್ಮ ಸಿನಿಮಾ ಇಂದು ತೆರೆಗೆ ಬಂದಿದೆ. ಬಹುನಿರೀಕ್ಷೆ ಮೂಡಿಸಿದ್ದ ಈ ಚಿತ್ರದಲ್ಲಿ ಹರಿಪ್ರಿಯಾ ವೈದೇಹಿ ಪಾತ್ರ, ಇವರ ತಾಯಿ ಪಾತ್ರದಲ್ಲಿ ಸುಮಲತಾ ಅಂಬರೀಶ್ (ಪಾರ್ವತಮ್ಮ ) ನಟಿಸಿದ್ದಾರೆ.

ಚಿತ್ರಕಥೆ ಏನು ?

ವೈದೇಹಿ ಮನೆಯ ಹಿರಿ ಮಗಳು. ಅವರಮ್ಮನಿಗೆ (ಸುಮಲತಾ ಅಂಬರೀಶ್) ಮಗಳ ಬೆಳವಣಿಗೆ ಬಗ್ಗೆ ಹೆಮ್ಮೆ. ಆದರೆ, ಬೇಗನೆ ಮಗಳ ಮದುವೆ ಆಗಲಿ ಎಂಬುದು ಅವರ ಬಯಕೆ. ವೈದೇಹಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿರುತ್ತಾಳೆ. ಆದರೆ, ಪರೀಕ್ಷೆಯಲ್ಲಿ ಫೇಲಾದೆ ಎಂದು ಆತ ಆತ್ಮಹತ್ಯೆಗೆ ಶರಣಾಗುತ್ತಾನೆ. ಆಮೇಲೆ ಪೊಲೀಸ್ ವೃತ್ತಿಗೆ ಸೇರಿದ ವೈದೇಹಿ, ತನ್ನ ಕೆಲಸದಲ್ಲಿ ಬ್ಯುಸಿಯಾಗುತ್ತಾಳೆ. ಅಮ್ಮನಿಗೆ ಮಾತ್ರ ಮಗಳ ಮದುವೆ ಚಿಂತೆ ಕೊರೆಯುತ್ತಲೇ ಇರುತ್ತದೆ.

DAUGHTER OF PARVATHAMMA
ಡಾಟರ್ ಆಫ್ ಪಾರ್ವತಮ್ಮ

ಈ ನಡುವೆಯೇ ಒಂದು ಕೊಲೆ ಪ್ರಕರಣದ ತನಿಖೆಯನ್ನು ವೈದೇಹಿಗೆ ಒಪ್ಪಿಸಲಾಗುತ್ತದೆ. ಅದು ನಿಗೂಢ ಪ್ರಕರಣ. ಕೊಲೆ ಮಾಡಿದ ಆಸಾಮಿ ಪೊಲೀಸರ ದಿಕ್ಕು ತಪ್ಪಿಸಲು ಹಲವಾರು ತಂತ್ರಗಳನ್ನು ಹೂಡಿರುತ್ತಾನೆ. ಅದೆನ್ನೆಲ್ಲ ಬೇಧಿಸುವ ಹೊತ್ತಿಗೆ ಒಂದು ಕಡೆ ವೈದೇಹಿ ಒಬ್ಬ ಸಾಮಾನ್ಯ ಡೆಲಿವರಿ ಹುಡುಗನನ್ನು ಇಷ್ಟ ಪಡುತ್ತಾಳೆ. ಆತನನ್ನೇ ಮದುವೆ ಆಗಲು ನಿರ್ಧರಿಸುತ್ತಾಳೆ. ಈತನೊಂದಿಗೆನೇ ವೈದೇಹಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆಯೇ ಎಂಬುದನ್ನು ಚಿತ್ರಮಂದಿರದಲ್ಲಿ ನೋಡಬೇಕು. ಇತ್ತ ವೈದೇಹಿ ಕೊಲೆ ಕೇಸ್ ಬಗೆಹರಿಸುವ ರೀತಿ ಕೊನೆಯ ಅರ್ಧ ಗಂಟೆಯಲ್ಲಿ ಕುತೂಹಲವಾಗಿದೆ.

ಸುಮಲತಾ ಅಂಬರೀಶ್ ಅವರು ನಿನ್ನೆ ತಾನೇ ಲೋಕಸಭಾ ಸದಸ್ಯೆಯಾಗಿದ್ದಾರೆ. ಇಂದು ಅವರ ಚಿತ್ರ ಬಿಡುಗಡೆ ಆಗಿದೆ. ಅಮ್ಮನಾಗಿ ಅವರ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹರಿಪ್ರಿಯಾ ಅವರಿಗೆ ವೃತ್ತಿ ಜೀವನದಲ್ಲಿ ಇದು ಹೊಸ ಬಗೆಯ ಪಾತ್ರ. ಹೆಚ್ಚು ಗದ್ದಲ ಇಲ್ಲದೆ ತನಿಖೆ ಮಾಡುವ ಅಧಿಕಾರಿ. ಸೂರಜ್ ಗೌಡ ಪೂಜಾರಿ ಆಗಿ, ಪ್ರಭು ಡೆಲಿವರಿ ಹುಡುಗನ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲಲ್ಲಿ ನಗಿಸಲು ತರಂಗ ವಿಶ್ವ ಇದ್ದಾರೆ.

DAUGHTER OF PARVATHAMMA
ಡಾಟರ್ ಆಫ್ ಪಾರ್ವತಮ್ಮ

ಡಾಲಿ ಧನಂಜಯ್ ಅವರ ರಚನೆಯ 'ಜೀವಾಕಿಂತ'....ಹಾಡು ಸರಿಯಾದ ಸಮಯಕ್ಕೆ ಬಳಸಲಾಗಿದೆ. ಮತ್ತೊಂದು ಗೀತೆಗೆ ಸುಗಮ ಸಂಗೀತ ಶೈಲಿಯಲ್ಲಿ ಮಿಥುನ್ ಮುಕುಂದನ್ ಮಾಧುರ್ಯದಿಂದ ರಾಗ ತುಂಬಿಸಿದ್ದಾರೆ. ಛಾಯಾಗ್ರಾಹಕ ಅರುಳ್ ಸೋಮಸುಂದರಂ ಅವರಲ್ಲಿ ಹೇಳಿಕೊಳ್ಳುವಂತಹ ಸ್ಪೆಷಲ್ ಛಾಯಾಗ್ರಹಣ ಮೂಡಿಬಂದಿಲ್ಲ.

‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರವನ್ನ ಮೊದಲರ್ಧ ತಾಳ್ಮೆಯಿಂದ ಕಾದು ಕುಳಿತು ನೋಡಿದರೆ ಆಮೇಲೆ ಪ್ರೇಕ್ಷಕರಿಗೆ ಕುತೂಹಲದ ಬುತ್ತಿ ಬಿಚ್ಚಿಕೊಳ್ಳುತ್ತದೆ.

ನಿನ್ನೆಯಷ್ಟೆ ಸುಮಲತಾ ಅಂಬರೀಶ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ವಿಜಯ ಸಿಕ್ಕಿದೆ. ಗೆಲುವಿನ ಸಂಭ್ರಮದಲ್ಲಿ ತೇಲುತ್ತಿರುವ ಮಂಡ್ಯದ ನೂತನ ಸಂಸದೆಗೆ ಈಗ ಮತ್ತೊಂದು ಸಂಭ್ರಮ. ಅದೇ, ಅವರು ನಟಿಸಿರುವ ಡಾಟರ್​ ಆಫ್​ ಪಾರ್ವತಮ್ಮ ಸಿನಿಮಾ ಇಂದು ತೆರೆಗೆ ಬಂದಿದೆ. ಬಹುನಿರೀಕ್ಷೆ ಮೂಡಿಸಿದ್ದ ಈ ಚಿತ್ರದಲ್ಲಿ ಹರಿಪ್ರಿಯಾ ವೈದೇಹಿ ಪಾತ್ರ, ಇವರ ತಾಯಿ ಪಾತ್ರದಲ್ಲಿ ಸುಮಲತಾ ಅಂಬರೀಶ್ (ಪಾರ್ವತಮ್ಮ ) ನಟಿಸಿದ್ದಾರೆ.

ಚಿತ್ರಕಥೆ ಏನು ?

ವೈದೇಹಿ ಮನೆಯ ಹಿರಿ ಮಗಳು. ಅವರಮ್ಮನಿಗೆ (ಸುಮಲತಾ ಅಂಬರೀಶ್) ಮಗಳ ಬೆಳವಣಿಗೆ ಬಗ್ಗೆ ಹೆಮ್ಮೆ. ಆದರೆ, ಬೇಗನೆ ಮಗಳ ಮದುವೆ ಆಗಲಿ ಎಂಬುದು ಅವರ ಬಯಕೆ. ವೈದೇಹಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿರುತ್ತಾಳೆ. ಆದರೆ, ಪರೀಕ್ಷೆಯಲ್ಲಿ ಫೇಲಾದೆ ಎಂದು ಆತ ಆತ್ಮಹತ್ಯೆಗೆ ಶರಣಾಗುತ್ತಾನೆ. ಆಮೇಲೆ ಪೊಲೀಸ್ ವೃತ್ತಿಗೆ ಸೇರಿದ ವೈದೇಹಿ, ತನ್ನ ಕೆಲಸದಲ್ಲಿ ಬ್ಯುಸಿಯಾಗುತ್ತಾಳೆ. ಅಮ್ಮನಿಗೆ ಮಾತ್ರ ಮಗಳ ಮದುವೆ ಚಿಂತೆ ಕೊರೆಯುತ್ತಲೇ ಇರುತ್ತದೆ.

DAUGHTER OF PARVATHAMMA
ಡಾಟರ್ ಆಫ್ ಪಾರ್ವತಮ್ಮ

ಈ ನಡುವೆಯೇ ಒಂದು ಕೊಲೆ ಪ್ರಕರಣದ ತನಿಖೆಯನ್ನು ವೈದೇಹಿಗೆ ಒಪ್ಪಿಸಲಾಗುತ್ತದೆ. ಅದು ನಿಗೂಢ ಪ್ರಕರಣ. ಕೊಲೆ ಮಾಡಿದ ಆಸಾಮಿ ಪೊಲೀಸರ ದಿಕ್ಕು ತಪ್ಪಿಸಲು ಹಲವಾರು ತಂತ್ರಗಳನ್ನು ಹೂಡಿರುತ್ತಾನೆ. ಅದೆನ್ನೆಲ್ಲ ಬೇಧಿಸುವ ಹೊತ್ತಿಗೆ ಒಂದು ಕಡೆ ವೈದೇಹಿ ಒಬ್ಬ ಸಾಮಾನ್ಯ ಡೆಲಿವರಿ ಹುಡುಗನನ್ನು ಇಷ್ಟ ಪಡುತ್ತಾಳೆ. ಆತನನ್ನೇ ಮದುವೆ ಆಗಲು ನಿರ್ಧರಿಸುತ್ತಾಳೆ. ಈತನೊಂದಿಗೆನೇ ವೈದೇಹಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆಯೇ ಎಂಬುದನ್ನು ಚಿತ್ರಮಂದಿರದಲ್ಲಿ ನೋಡಬೇಕು. ಇತ್ತ ವೈದೇಹಿ ಕೊಲೆ ಕೇಸ್ ಬಗೆಹರಿಸುವ ರೀತಿ ಕೊನೆಯ ಅರ್ಧ ಗಂಟೆಯಲ್ಲಿ ಕುತೂಹಲವಾಗಿದೆ.

ಸುಮಲತಾ ಅಂಬರೀಶ್ ಅವರು ನಿನ್ನೆ ತಾನೇ ಲೋಕಸಭಾ ಸದಸ್ಯೆಯಾಗಿದ್ದಾರೆ. ಇಂದು ಅವರ ಚಿತ್ರ ಬಿಡುಗಡೆ ಆಗಿದೆ. ಅಮ್ಮನಾಗಿ ಅವರ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹರಿಪ್ರಿಯಾ ಅವರಿಗೆ ವೃತ್ತಿ ಜೀವನದಲ್ಲಿ ಇದು ಹೊಸ ಬಗೆಯ ಪಾತ್ರ. ಹೆಚ್ಚು ಗದ್ದಲ ಇಲ್ಲದೆ ತನಿಖೆ ಮಾಡುವ ಅಧಿಕಾರಿ. ಸೂರಜ್ ಗೌಡ ಪೂಜಾರಿ ಆಗಿ, ಪ್ರಭು ಡೆಲಿವರಿ ಹುಡುಗನ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲಲ್ಲಿ ನಗಿಸಲು ತರಂಗ ವಿಶ್ವ ಇದ್ದಾರೆ.

DAUGHTER OF PARVATHAMMA
ಡಾಟರ್ ಆಫ್ ಪಾರ್ವತಮ್ಮ

ಡಾಲಿ ಧನಂಜಯ್ ಅವರ ರಚನೆಯ 'ಜೀವಾಕಿಂತ'....ಹಾಡು ಸರಿಯಾದ ಸಮಯಕ್ಕೆ ಬಳಸಲಾಗಿದೆ. ಮತ್ತೊಂದು ಗೀತೆಗೆ ಸುಗಮ ಸಂಗೀತ ಶೈಲಿಯಲ್ಲಿ ಮಿಥುನ್ ಮುಕುಂದನ್ ಮಾಧುರ್ಯದಿಂದ ರಾಗ ತುಂಬಿಸಿದ್ದಾರೆ. ಛಾಯಾಗ್ರಾಹಕ ಅರುಳ್ ಸೋಮಸುಂದರಂ ಅವರಲ್ಲಿ ಹೇಳಿಕೊಳ್ಳುವಂತಹ ಸ್ಪೆಷಲ್ ಛಾಯಾಗ್ರಹಣ ಮೂಡಿಬಂದಿಲ್ಲ.

‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರವನ್ನ ಮೊದಲರ್ಧ ತಾಳ್ಮೆಯಿಂದ ಕಾದು ಕುಳಿತು ನೋಡಿದರೆ ಆಮೇಲೆ ಪ್ರೇಕ್ಷಕರಿಗೆ ಕುತೂಹಲದ ಬುತ್ತಿ ಬಿಚ್ಚಿಕೊಳ್ಳುತ್ತದೆ.

ಕನ್ನಡ ಚಿತ್ರ ಡಾಟರ್ ಆಫ್ ಪಾರ್ವತಮ್ಮ ವಿಮರ್ಶೆ

ಅವದಿ – 110 ನಿಮಿಷ (1 ಘಂಟೆ 50 ನಿಮಿಷ), ಕ್ಯಾಟಗರಿ – ಥ್ರಿಲ್ಲರ್,  ರೇಟಿಂಗ್ – 3/5

ಅಮ್ಮನ ಅಕ್ಕರೆ ಮಗಳ ಕರ್ತವ್ಯದ ಕರೆ

ಚಿತ್ರ – ಡಾಟರ್ ಆಫ್ ಪಾರ್ವತಮ್ಮ, ನಿರ್ಮಾಪಕರು – ಕೆ ಎಂ ಶಶಿಧರ್, ಎಂ ವಿಜಯಲಕ್ಷ್ಮಿ,ಸಂದೀಪ್ ಶಿವಮೊಗ್ಗ, ಶ್ವೇತ ಮಾಡುಸೂದನ್, ಕೃಷ್ಣೆ ಗೌಡ ಕೆ, ನಿರ್ದೇಶಕ – ಜೆ ಶಂಕರ್, ಛಾಯಾಗ್ರಹಣ – ಅರುಳ್ ಸೋಮಸುಂದರನ್, ಸಂಗೀತ – ಮಿದುನ್ ಮುಕುಂದನ್, ತಾರಾಗಣ – ಹರಿಪ್ರಿಯಾ, ಸುಮಲತಾ ಅಂಬರೀಶ್, ಸೂರಜ್, ಪ್ರಭು, ತರಂಗ ವಿಶ್ವ ಹಾಗೂ ಇತರರು.

ಮಗಳಿಗೆ ಕರ್ತವ್ಯದ ಕರೆ, ಅಮ್ಮನಿಗೆ ಮಗಳು ಮದುವೆ ಆಗಬೇಕು ಎಂಬ ಅಕ್ಕರೆ. ಮಗಳು ಒಂದು ಕೈಯಲ್ಲಿ ಮದುವೆ ಆಮಂತ್ರಣ ಪತ್ರ ಮತ್ತೊಂದು ಕೈಯಲ್ಲಿ ಪೊಲೀಸ್ ಇಲಾಖೆಯ ಫೈಲ್ ಹಿಡಿದು ಹುಬ್ಬು ಏರುಸುವುದರೊಂದಿಗೆ ಚಿತ್ರಕ್ಕೆ ಅಂತ್ಯ ಹಾಡಿದ್ದಾರೆ ನಿರ್ದೇಶಕ ಜೆ ಶಂಕರ್. ತನಿಖಾದಿಕಾರಿ ಪಾತ್ರಕ್ಕೆ ಹರಿಪ್ರಿಯಾ ಅವರನ್ನು ಚನ್ನಾಗಿ ಓಡಾಡಿಸಿದ್ದಾರೆ, ಕುತೂಹಲದ ವಿಚಾರಕ್ಕೆ ಬಂದರೆ ಸಿನಿಮಾ ಅಷ್ಟಕಷ್ಟೆ. ಚಿತ್ರಕೊಂದು ವೇಗ ಸಿಕ್ಕುವುದು ಕೊನೆಯ 30 ನಿಮಿಷಗಳಲ್ಲಿ. ಮರ ಸುತ್ತಿ ಹಾಡು ಹೇಳುವ ನಾಯಕಿ ಹರಿಪ್ರಿಯಾ ಖಳನ ಬೆನ್ನಟ್ಟಿ ಹೋಗುತ್ತಾರೆ. ಆದರೆ ಅವರಿಗೆ ಸಿನಿಮಾಕ್ಕೆ ಬೇಕಾದ್ದ ಸ್ಟೈಲ್ ಸಿದ್ದಿಸಿದೆ. ಕೂಲಿಂಗ್ ಗ್ಲಾಸ್ ತೆಗೆದು ಹಾಕಿ, ನಡೆವ ಶೈಲಿ, ಉದುರಿಸುವ ಸಂಭಾಷಣೆ ಹಿತ ಮಿತವಾಗಿದೆ. ಹೆಚ್ಚು ಆರ್ಭಟ ಇಲ್ಲ. ಕೂಲ್ ಆಗಿ ಹರಿಪ್ರಿಯಾ ತಮಗೆ ಒಪ್ಪಿಸಿದ ಕೇಸ್ ಅನ್ನು ಬಗೆಹರಿಸಿದ್ದಾರೆ.

ಅವಳು ವೈದೇಹಿ (ಹರಿಪ್ರಿಯಾ). ಮನೆಯ ದೊಡ್ಡ ಮಗಳು. ಅಮ್ಮ ಪರ್ವತಮ್ಮನಿಗೆ (ಸುಮಲತಾ ಅಂಬರೀಶ್) ಮಗಳ ಬೆಳವಣಿಗೆ ಬಗ್ಗೆ ಹೆಮ್ಮೆ ಇದೆ. ಆದರೆ ಮಗಳು ಮದುವೆ ಆಗಲಿ ಎಂಬುದು ಮನೆಯಲ್ಲಿ ಒನ್ ಪಾಯಿಂಟ್ ಎಜೆಂಡಾ. ವೈದೇಹಿ ಒಬ್ಬ ಹುಡುಗನನ್ನು ಪ್ರೀತಿಸುತ್ತಾಳೆ ಆದರೆ ಅವನು ಪರೀಕ್ಷೆಯಲ್ಲಿ ಫೈಲ್ ಆದೆ ಎಂದು ಆತ್ಮಹತ್ಯೆಗೆ ಶರಣಾಗುವುದು ಆಘಾತ ವೈದೇಹಿಗೆ. ಆಮೇಲೆ ತನ್ನ ಪೊಲೀಸ್ ವೃತ್ತಿಗೆ ಸೇರಿದ ಮೇಲೆ ಕೆಲಸದಲ್ಲಿ ಬ್ಯುಸಿ. ಆದರೆ ಅಮ್ಮನಿಗೆ ಮಗಳ ಮದುವೆ ಚಿಂತೆ ಮಾತ್ರ ಹಾಗೆ ಇದೆ. ಸಧ್ಯಕ್ಕೆ ಒಂದು ಕೊಲೆ ಕೇಸ್ ಅನ್ನು ವೈದೇಹಿಗೆ ಒಪ್ಪಿಸಲಾಗಿದೆ. ಆ ಕೇಸ್ ಬಹಳ ನಿಗೂಡವಾಗಿದೆ. ಕಾರಣ ಕೊಲೆ ಮಾಡಿದ ಆಸಾಮಿ ಪೊಲೀಸರ ದಿಕ್ಕು ತಪ್ಪಿಸಲು ಹಲವಾರು ತಂತ್ರಗಳನ್ನು ಹೂಡಿರುತ್ತಾನೆ. ಅದೆನೆಲ್ಲ ಬೇದಿಸುವ ಹೊತ್ತಿಗೆ ಒಂದು ಕಡೆ ವೈದೇಹಿ ಒಬ್ಬ ಸಾಮಾನ್ಯ ಡೆಲಿವರಿ ಹುಡುಗನನ್ನು ಇಷ್ಟ ಪಟ್ಟು ಅದು ಮದುವೆ ಹಂತಕ್ಕ ಅವರ ಅಮ್ಮೆ ಮುಂದೆ ಸಾಗಿಸಿರುತ್ತಾರೆ. ವೈದೇಹಿ ಕೊಲೆ ಕೇಸ್ ಬಗೆಹರಿಸುವ ರೀತಿ ಕೊನೆಯ ಅರ್ಧ ಘಂಟೆಯಲ್ಲಿ ಕುತೂಹಲವಾಗಿದೆ. ಅದನ್ನು ಚಿತ್ರಮಂದಿರದಲ್ಲಿ ನೀವು ನೋಡಬೇಕು.

ಸುಮಲತಾ ಅಂಬರೀಶ್ ಅವರು ನಿನ್ನೆ ತಾನೇ ಲೋಕ ಸಭಾ ಸದಸ್ಯೆ ಆಗಿದ್ದಾರೆ. ಇಂದು ಅವರ ಚಿತ್ರ ಬಿಡುಗಡೆ ಆಗಿದೆ. ಸುಂದವರವಾದ ಅಮ್ಮ ಆಗಿ ಅವರ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹರಿಪ್ರಿಯಾ ಅವರಿಗೆ ವೃತ್ತಿ ಜೀವನದಲ್ಲಿ ಹೊಸ ಬಗೆಯ ಪಾತ್ರ. ಹೆಚ್ಚು ಗದ್ದಲ ಇಲ್ಲದೆ ತನಿಕೆ ಮಾಡುವ ಅಧಿಕಾರಿ. ಸದಾ ಬಾಬ್ ಕಟ್ ನಾಯಕಿ. ಇಂತಹ ಪಾತ್ರ ಇವರಿಗೆ ಒಪ್ಪುತ್ತದೆ.

ಸೂರಜ್ ಗೌಡ ಪೂಜಾರಿ ಆಗಿ, ಪ್ರಭು ಡೆಲಿವರಿ ಹುಡುಗನ ಪಾತ್ರದಲ್ಲಿ ಸಹನಿಯಾಗಿ ನಟಿಸಿದ್ದಾರೆ. ಅಲ್ಲಲ್ಲಿ ನಗಿಸಲು ತರಂಗ ವಿಶ್ವ ಇದ್ದಾರೆ.

ಡಾಲಿ ಧನಂಜಯ್ ಅವರ ರಚನೆಯ ಜೀವಾಕಿಂತ....ಹಾಡು ಸರಿಯಾದ ಸಮಯಕ್ಕೆ ಬಳಸಲಾಗಿದೆ. ಮತ್ತೊಂದು ಗೀತೆ ಸುಗಮ ಸಂಗೀತ ಶೈಲಿಯಲ್ಲಿ ಮಿದುನ್ ಮುಕುಂದನ್ ಮಾಧುರ್ಯದಿಂದ ರಾಗ ತುಂಬಿಸಿದ್ದಾರೆ. ಛಾಯಾಗ್ರಾಹಕ ಅರುಳ್ ಸೋಮಸುಂದರಂ ಅವರಲ್ಲಿ ಹೇಳಿಕೊಳ್ಳುವಂತಹ ಸ್ಪೆಷಲ್ ಛಾಯಾಗ್ರಹಣ ಮೂಡಿಬಂದಿಲ್ಲ.

ಡಾಟರ್ ಆಫ್ ಪಾರ್ವತಮ್ಮ ಚಿತ್ರವನ್ನ ಮೊದಲರ್ಧ ತಾಳ್ಮೆಯಿಂದ ಕಾದು ಕುಳಿತರೆ ಆಮೇಲೆ ಪ್ರೇಕ್ಷಕರಿಗೆ ಕುತೂಹಲದ ಬುತ್ತಿ ಬಿಚ್ಚಿಕೊಳ್ಳುತ್ತದೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.