ETV Bharat / sitara

ಕೊರೊನಾ ಕಷ್ಟದಿಂದ ಹೊರಬರಲು ಮೋದಿಗೆ ಈ ಐಡಿಯಾ ಕೊಡಲು ಸಜ್ಜಾದ್ರು ವಿನಯಾ ಪ್ರಸಾದ್​ - VINAYA PRASAD

ದೇಶ ಲಾಕ್​​ಡೌನ್​​ನಿಂದಾಗಿ ತೀವ್ರ ಸಂಕಷ್ಟದ ಸ್ಥಿತಿಗೆ ತಲುಪಿದೆ. ಈ ವೇಳೆ ನಟಿ ವಿನಯಾ ಪ್ರಸಾದ್ ಅವರು ಪ್ರಧಾನಿ ಮೋದಿಗೆ ಒಂದು ಐಡಿಯಾ ಕೊಡಲು ಮುಂದಾಗಿದ್ದಾರೆ.

VINAYA PRASAD NEW THOUGHT AT LOCK DOWN TIME
ವಿನಯಾ ಪ್ರಸಾದ್
author img

By

Published : Apr 22, 2020, 9:43 AM IST

ಸ್ಯಾಂಡಲ್​ವುಡ್​ ಹಿರಿಯ ನಟಿ ವಿನಯಾ​ ಪ್ರಸಾದ್​ ಆಗಿಂದಾಗ್ಗೆ ಒಂದಿಲ್ಲೊಂದು ಸೃಜನಾತ್ಮಕ ಯೋಚನೆಗಳನ್ನು ಮಾಡುತ್ತಾರೆ. ಇದೀಗ ಕೊರೊನಾ ಭೀತಿಯಿಂದ ದೇಶ ತತ್ತರಿಸಿದ್ದು, ಇದ್ರಿಂದ ಪಾರಾಗಲು ಮೋದಿಯವರಿಗೆ ಒಂದು ವಿಶೇಷ ಐಡಿಯಾ ಕೊಡಲು ಸಿದ್ಧರಾಗಿದ್ದಾರೆ.

VINAYA PRASAD NEW THOUGHT AT LOCK DOWN TIME
ವಿನಯಾ ಪ್ರಸಾದ್

ಹೌದು, ವಿನಯಾ​ ಪ್ರಸಾದ್​ ಮಾಡಿರುವ ಐಡಿಯಾ ಸ್ವಿಸ್​ ಬ್ಯಾಂಕ್​ನಲ್ಲಿರುವ ಭಾರತೀಯರ ಕಪ್ಪು ಹಣವನ್ನು ವಾಪಸ್ ದೇಶಕ್ಕೆ​ ತರುವುದು. ಈ ಬಗ್ಗೆ ಮೋದಿಯವರಿಗೆ ಪತ್ರ ಬರೆಯುವ ಯೋಚನೆ ಮಾಡಿದ್ದಾರಂತೆ.

ಸ್ವಿಸ್ ಬ್ಯಾಂಕ್ ಹಣವನ್ನು ತರುವುದು ಸುಲಭದ ಮಾತಲ್ಲ ಅಂತ ಗೊತ್ತಿದೆ. ಅದಕ್ಕೆ ರಾಜಕೀಯ, ಆರ್ಥಿಕ, ಸಾಮಾಜಿಕ, ಕಾನೂನಾತ್ಮಕ ಹಾಗೂ ಇನ್ನಿತರ ಅಡ್ಡಿ ಆತಂಕಗಳು ಬರಬಹುದು. ಆದ್ರೆ ಈ ಸಂಕಷ್ಟದ ಪರಿಸ್ಥಿತಿ ಬಿಟ್ಟರೆ ಇನ್ಯಾವಾಗ ಆ ಹಣವನ್ನು ನಮ್ಮ ದೇಶಕ್ಕೆ ತರುವುದು ಅನ್ನುತ್ತಾರೆ ವಿನಯಾ ಪ್ರಸಾದ್.

VINAYA PRASAD NEW THOUGHT AT LOCK DOWN TIME
ವಿನಯಾ ಪ್ರಸಾದ್

ಆದ್ರೆ ವಿನಯಾ ಪ್ರಸಾದ್ ಈ ಯೋಚನೆಯಲ್ಲಿ ಸಾಕಷ್ಟು ತಂತ್ರಗಳಿವೆಯಂತೆ. ಆ ಕಪ್ಪು ಹಣದಲ್ಲಿ ಶೇ 30ರಷ್ಟನ್ನು ಯಾರ ಹೆಸರಲ್ಲಿ ಇದೆಯೋ ಅವರಿಗೆ ನೀಡುವುದು. ಉಳಿದ 70ರಷ್ಟು ಹಣವನ್ನು ದೇಶಕ್ಕೆ ಉಪಯೋಗಿಸಿಕೊಳ್ಳುವುದು ಎಂದು ಹೇಳಿದ್ದಾರೆ.

ಹಾಗೆ ಆಗಬೇಕು ಎಂಬುದು ವಿನಯಾ ವಿನಂತಿ. ಆದರೆ ಆ ಹಣವನ್ನು ದೇಶದ ಮೂಲೆ ಮೂಲೆಯಲ್ಲಿ ಇರುವ ಬಡವರ ಹೆಸರಿನಲ್ಲಿ ಡೆಪಾಸಿಟ್ ಇಟ್ಟು ಎರಡು ಹೊತ್ತಿನ ಊಟಕ್ಕೆ ಕಷ್ಟ ಬರದ ಹಾಗೆ ನೋಡಿಕೊಳ್ಳಬೇಕು. ಇಂತಹ ಯೋಜನೆಗಳಿಗೆ ಅಡ್ಡಿ ಆತಂಕಗಳು ಇದ್ದದ್ದೇ. ಆದ್ರೆ ಈ ಕೊರೊನಾ ವೈರಸ್ ವಿಶ್ವಮಟ್ಟದಲ್ಲಿ ಅಟ್ಟಹಾಸ ಮೆರೆದಿರುವಾಗ ನಮ್ಮ ಭಾರತೀಯರನ್ನು ಕಾಪಾಡಿಕೊಳ್ಳುವುದರಲ್ಲಿ ಇದು ಒಂದು ಚಿಂತನೆ ಅಂತಾರೆ ವಿನಯಾ ಪ್ರಸಾದ್​.

ಸ್ಯಾಂಡಲ್​ವುಡ್​ ಹಿರಿಯ ನಟಿ ವಿನಯಾ​ ಪ್ರಸಾದ್​ ಆಗಿಂದಾಗ್ಗೆ ಒಂದಿಲ್ಲೊಂದು ಸೃಜನಾತ್ಮಕ ಯೋಚನೆಗಳನ್ನು ಮಾಡುತ್ತಾರೆ. ಇದೀಗ ಕೊರೊನಾ ಭೀತಿಯಿಂದ ದೇಶ ತತ್ತರಿಸಿದ್ದು, ಇದ್ರಿಂದ ಪಾರಾಗಲು ಮೋದಿಯವರಿಗೆ ಒಂದು ವಿಶೇಷ ಐಡಿಯಾ ಕೊಡಲು ಸಿದ್ಧರಾಗಿದ್ದಾರೆ.

VINAYA PRASAD NEW THOUGHT AT LOCK DOWN TIME
ವಿನಯಾ ಪ್ರಸಾದ್

ಹೌದು, ವಿನಯಾ​ ಪ್ರಸಾದ್​ ಮಾಡಿರುವ ಐಡಿಯಾ ಸ್ವಿಸ್​ ಬ್ಯಾಂಕ್​ನಲ್ಲಿರುವ ಭಾರತೀಯರ ಕಪ್ಪು ಹಣವನ್ನು ವಾಪಸ್ ದೇಶಕ್ಕೆ​ ತರುವುದು. ಈ ಬಗ್ಗೆ ಮೋದಿಯವರಿಗೆ ಪತ್ರ ಬರೆಯುವ ಯೋಚನೆ ಮಾಡಿದ್ದಾರಂತೆ.

ಸ್ವಿಸ್ ಬ್ಯಾಂಕ್ ಹಣವನ್ನು ತರುವುದು ಸುಲಭದ ಮಾತಲ್ಲ ಅಂತ ಗೊತ್ತಿದೆ. ಅದಕ್ಕೆ ರಾಜಕೀಯ, ಆರ್ಥಿಕ, ಸಾಮಾಜಿಕ, ಕಾನೂನಾತ್ಮಕ ಹಾಗೂ ಇನ್ನಿತರ ಅಡ್ಡಿ ಆತಂಕಗಳು ಬರಬಹುದು. ಆದ್ರೆ ಈ ಸಂಕಷ್ಟದ ಪರಿಸ್ಥಿತಿ ಬಿಟ್ಟರೆ ಇನ್ಯಾವಾಗ ಆ ಹಣವನ್ನು ನಮ್ಮ ದೇಶಕ್ಕೆ ತರುವುದು ಅನ್ನುತ್ತಾರೆ ವಿನಯಾ ಪ್ರಸಾದ್.

VINAYA PRASAD NEW THOUGHT AT LOCK DOWN TIME
ವಿನಯಾ ಪ್ರಸಾದ್

ಆದ್ರೆ ವಿನಯಾ ಪ್ರಸಾದ್ ಈ ಯೋಚನೆಯಲ್ಲಿ ಸಾಕಷ್ಟು ತಂತ್ರಗಳಿವೆಯಂತೆ. ಆ ಕಪ್ಪು ಹಣದಲ್ಲಿ ಶೇ 30ರಷ್ಟನ್ನು ಯಾರ ಹೆಸರಲ್ಲಿ ಇದೆಯೋ ಅವರಿಗೆ ನೀಡುವುದು. ಉಳಿದ 70ರಷ್ಟು ಹಣವನ್ನು ದೇಶಕ್ಕೆ ಉಪಯೋಗಿಸಿಕೊಳ್ಳುವುದು ಎಂದು ಹೇಳಿದ್ದಾರೆ.

ಹಾಗೆ ಆಗಬೇಕು ಎಂಬುದು ವಿನಯಾ ವಿನಂತಿ. ಆದರೆ ಆ ಹಣವನ್ನು ದೇಶದ ಮೂಲೆ ಮೂಲೆಯಲ್ಲಿ ಇರುವ ಬಡವರ ಹೆಸರಿನಲ್ಲಿ ಡೆಪಾಸಿಟ್ ಇಟ್ಟು ಎರಡು ಹೊತ್ತಿನ ಊಟಕ್ಕೆ ಕಷ್ಟ ಬರದ ಹಾಗೆ ನೋಡಿಕೊಳ್ಳಬೇಕು. ಇಂತಹ ಯೋಜನೆಗಳಿಗೆ ಅಡ್ಡಿ ಆತಂಕಗಳು ಇದ್ದದ್ದೇ. ಆದ್ರೆ ಈ ಕೊರೊನಾ ವೈರಸ್ ವಿಶ್ವಮಟ್ಟದಲ್ಲಿ ಅಟ್ಟಹಾಸ ಮೆರೆದಿರುವಾಗ ನಮ್ಮ ಭಾರತೀಯರನ್ನು ಕಾಪಾಡಿಕೊಳ್ಳುವುದರಲ್ಲಿ ಇದು ಒಂದು ಚಿಂತನೆ ಅಂತಾರೆ ವಿನಯಾ ಪ್ರಸಾದ್​.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.