ETV Bharat / sitara

'ನವಾಬ' ಹೆಸರಿನಲ್ಲಿ ತ್ರಿಕೋನ ಪ್ರೇಮಕಥೆಯನ್ನು ಹೊತ್ತು ತರುತ್ತಿರುವ ತಂಡ - Triangle love story Nawaba

ನಕ್ಷತ್ರ ಆನಂದ್ ನಿರ್ದೇಶನದಲ್ಲಿ 'ನವಾಬ' ಎಂಬ ಸಿನಿಮಾ ತಯಾರಾಗುತ್ತಿದ್ದು ಚಿತ್ರ ಪ್ರೇಮಕಥೆಯನ್ನೊಳಗೊಂಡಿದೆ. ನೂತನ್ ಪ್ರೊಡಕ್ಷನ್ಸ್​​​​​​​​ ಹೌಸ್ ಬ್ಯಾನರ್ ಅಡಿಯಲ್ಲಿ ಪಾಲಾಕ್ಷ ಬಿ.ಎನ್​. ಬಿದರಕೋಟೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Triangle love story Nawaba
ನವಾಬ
author img

By

Published : Aug 21, 2020, 5:10 PM IST

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಇತ್ತೀಚೆಗೆ ಹೊಸಬರ ತಂಡ ಭಾರೀ ಸದ್ದು ಮಾಡುತ್ತಿದೆ. ಲಾಕ್​ ಡೌನ್​ ವೇಳೆ ಎಷ್ಟೊ ಯುವಪ್ರತಿಭೆಗಳು ತಮ್ಮ ಪರಿಕಲ್ಪನೆ ಹಾಗೂ ಚಿಂತನೆಗಳನ್ನು ಕಿರುಚಿತ್ರದ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

ಇದೀಗ ಮತ್ತೊಂದು ಹೊಸ ತಂಡ ತ್ರಿಕೋನ ಪ್ರೇಮಕಥೆಯನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದೆ. ಈ ಚಿತ್ರಕ್ಕೆ 'ನವಾಬ' ಎಂದು ಹೆಸರಿಡಲಾಗಿದೆ. 'ನಾವು ಇಷ್ಟ ಪಡುವವರಿಗಿಂತ ನಮ್ಮನ್ನು ಇಷ್ಟಪಡುವರ ಪ್ರೀತಿ ಬಹಳ ದೊಡ್ಡದು' ಎಂಬ ಸಂದೇಶವನ್ನು ಈ ಚಿತ್ರದಲ್ಲಿ ನೀಡಲಾಗಿದೆ. ಪ್ರೀತಿಯಲ್ಲಿರುವ ಒಬ್ಬ ಯುವಕನ ಜೀವನದಲ್ಲಿ ಏನೆಲ್ಲಾ ತಿರುವುಗಳು ಪಡೆದುಕೊಳ್ಳುತ್ತದೆ ಎಂಬುದನ್ನು ನಕ್ಷತ್ರ ಆನಂದ್ ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಚಿತ್ರದಲ್ಲಿ ನಕ್ಷತ್ರ ಆನಂದ್ ಜೊತೆಗೆ ಮಹಾದೇವ ಹಾಗೂ ಶರವಣ ಎನ್ನುವವರು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕ್ಯಾಮರಾ ಯೂನಿಟ್, ಸಂಕಲನ, ಡಬ್ಬಿಂಗ್, ರೀ ರೆಕಾರ್ಡಿಂಗ್​​​ನಲ್ಲಿ ಪರಿಣಿತಿ ಹೊಂದಿರುವ ಸಂಗೀತ ನಿರ್ದೇಶಕ ಕಾರ್ತಿಕ್ ವೆಂಕಟೇಶ್ ಈ ಹೊಸಬರ ತಂಡಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಕಾರ್ತಿಕ್ ವೆಂಕಟೇಶ್ ಗೀತ ರಚನೆ ಜೊತೆಗೆ ಇದುವರೆಗೂ ಸುಮಾರು 15 ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

ಈ ಚಿತ್ರದ ಮೂಲಕ ವಿವೇಕ್ ಸ್ಯಾಂಡಲ್​​ವುಡ್​​​ಗೆ ಪರಿಚಯವಾಗುತ್ತಿದ್ದಾರೆ. ಇವರೊಂದಿಗೆ ಅಣ್ಣೇಶ್, ಮೋನಿಷ ಎನ್​​. ರಾಜ್, ಕಾವ್ಯ, ಪವಿತ್ರ ನೀಲಕಂಠ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ನೂತನ್ ಪ್ರೊಡಕ್ಷನ್ಸ್​​​​​​​​ ಹೌಸ್ ಬ್ಯಾನರ್ ಅಡಿಯಲ್ಲಿ ಪಾಲಾಕ್ಷ ಬಿ.ಎನ್​. ಬಿದರಕೋಟೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸೂಚಿತ್ ಎಸ್​​​.ಕೆ. ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ.

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಇತ್ತೀಚೆಗೆ ಹೊಸಬರ ತಂಡ ಭಾರೀ ಸದ್ದು ಮಾಡುತ್ತಿದೆ. ಲಾಕ್​ ಡೌನ್​ ವೇಳೆ ಎಷ್ಟೊ ಯುವಪ್ರತಿಭೆಗಳು ತಮ್ಮ ಪರಿಕಲ್ಪನೆ ಹಾಗೂ ಚಿಂತನೆಗಳನ್ನು ಕಿರುಚಿತ್ರದ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.

ಇದೀಗ ಮತ್ತೊಂದು ಹೊಸ ತಂಡ ತ್ರಿಕೋನ ಪ್ರೇಮಕಥೆಯನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದೆ. ಈ ಚಿತ್ರಕ್ಕೆ 'ನವಾಬ' ಎಂದು ಹೆಸರಿಡಲಾಗಿದೆ. 'ನಾವು ಇಷ್ಟ ಪಡುವವರಿಗಿಂತ ನಮ್ಮನ್ನು ಇಷ್ಟಪಡುವರ ಪ್ರೀತಿ ಬಹಳ ದೊಡ್ಡದು' ಎಂಬ ಸಂದೇಶವನ್ನು ಈ ಚಿತ್ರದಲ್ಲಿ ನೀಡಲಾಗಿದೆ. ಪ್ರೀತಿಯಲ್ಲಿರುವ ಒಬ್ಬ ಯುವಕನ ಜೀವನದಲ್ಲಿ ಏನೆಲ್ಲಾ ತಿರುವುಗಳು ಪಡೆದುಕೊಳ್ಳುತ್ತದೆ ಎಂಬುದನ್ನು ನಕ್ಷತ್ರ ಆನಂದ್ ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಚಿತ್ರದಲ್ಲಿ ನಕ್ಷತ್ರ ಆನಂದ್ ಜೊತೆಗೆ ಮಹಾದೇವ ಹಾಗೂ ಶರವಣ ಎನ್ನುವವರು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕ್ಯಾಮರಾ ಯೂನಿಟ್, ಸಂಕಲನ, ಡಬ್ಬಿಂಗ್, ರೀ ರೆಕಾರ್ಡಿಂಗ್​​​ನಲ್ಲಿ ಪರಿಣಿತಿ ಹೊಂದಿರುವ ಸಂಗೀತ ನಿರ್ದೇಶಕ ಕಾರ್ತಿಕ್ ವೆಂಕಟೇಶ್ ಈ ಹೊಸಬರ ತಂಡಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಕಾರ್ತಿಕ್ ವೆಂಕಟೇಶ್ ಗೀತ ರಚನೆ ಜೊತೆಗೆ ಇದುವರೆಗೂ ಸುಮಾರು 15 ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

ಈ ಚಿತ್ರದ ಮೂಲಕ ವಿವೇಕ್ ಸ್ಯಾಂಡಲ್​​ವುಡ್​​​ಗೆ ಪರಿಚಯವಾಗುತ್ತಿದ್ದಾರೆ. ಇವರೊಂದಿಗೆ ಅಣ್ಣೇಶ್, ಮೋನಿಷ ಎನ್​​. ರಾಜ್, ಕಾವ್ಯ, ಪವಿತ್ರ ನೀಲಕಂಠ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ನೂತನ್ ಪ್ರೊಡಕ್ಷನ್ಸ್​​​​​​​​ ಹೌಸ್ ಬ್ಯಾನರ್ ಅಡಿಯಲ್ಲಿ ಪಾಲಾಕ್ಷ ಬಿ.ಎನ್​. ಬಿದರಕೋಟೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸೂಚಿತ್ ಎಸ್​​​.ಕೆ. ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.