ರಿಯಲ್ ಸ್ಟಾರ್ ಉಪೇಂದ್ರ ಅವರು ಕೆಲವು ಭಾರಿ ಕಟು ಸತ್ಯವನ್ನು ತೆರೆದಿಟ್ಟು ಸಂದರ್ಭಗಳು ಇದೆ. 'ಎ' ಸಿನಿಮಾದಿಂದಲೇ ಅವರು ತೆರೆಯ ಮೇಲೂ ಸಹ ಅಂತಹ ಕ್ರಮ ಅನುಸರಿಸಿದ್ದುಂಟು. ಈಗ ‘ಐ ಲವ್ ಯು’ ಸಿನಿಮಾ 25 ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಒಂದು ಸಿನಿಮಾ ಜಯ ಸಾಧಿಸುವುದು ಯಾವಾಗ ಎಂಬುದರ ಕುರಿತು ವಿಮರ್ಶೆ ಮಾಡಿದ್ದಾರೆ.
ಒಂದು ಸಿನಿಮಾ ಗೆಲ್ಲೋದು ಅಂದರೆ ಅದು ಕೇವಲ ನಿರ್ಮಾಪಕ ಮತ್ತು ವಿತರಕ ಗೆಲುವು ಅಷ್ಟೇ ಅಲ್ಲ. ಚಿತ್ರಮಂದಿರ, ಟಿವಿ ರೈಟ್ಸ್ಗೆ ಹಣ ಕೊಟ್ಟವರು, ಧ್ವನಿ ಸುರುಳಿ ಬಿಡುಗಡೆ ಮಾಡಿದ ಸಂಸ್ಥೆ, ಡಿಜಿಟಲ್ ಹಕ್ಕು ಪಡೆದವರು, ಚಿತ್ರಮಂದಿರದ ಕ್ಯಾಂಟೀನ್, ಸೈಕಲ್ ಸ್ಟಾಂಡ್, ಬ್ಲಾಕ್ ಅಲ್ಲಿ ಟಿಕೆಟ್ ಮಾರುವವರು ಹೀಗೆ ಯಾರು ಯಾರು ಸಿನಿಮಾಕ್ಕೆ ಕನೆಕ್ಟ್ ಆಗಿರುತ್ತಾರೋ ಅವರೆಲ್ಲರ ಗೆಲುವು ಒಂದು ಸಿನಿಮಾದ ನಿಜವಾದ ಗೆಲುವು ಸಾಧಿಸಿದಂತೆ ಎಂಬುದು ರಿಯಲ್ ಸ್ಟಾರ್ನ ಅಭಿಪ್ರಾಯ.
ಸೂಪರ್ ಹಿಟ್ ಆದ ಸಿನಿಮಾಗಳ ಗಳಿಕೆ ಬಗ್ಗೆ ಲೆಕ್ಕ ಹಾಕುವುದು ಕಷ್ಟ. ಕೆಲವು ಸಿನಿಮಾಗಳಂತೂ ಸಾರ್ವಕಾಲಿಕ. ಈಗೀನ ದಿನಗಳಲ್ಲಿ ಸಿನಿಮಾ ನಿರ್ಮಾಣ ಮಾಡಿ ಅದನ್ನು ಒಳ್ಳೆಯ ಮೊತ್ತಕ್ಕೆ ಸೇಲ್ ಮಾಡಿ ನಿರ್ಮಾಪಕ ಸುಮ್ಮನಾಗಿ ಬಿಡುತ್ತಾನೆ. ಅದು ಎಷ್ಟು ದಿವಸ ಓಡಿತು ಎಂಬುದನ್ನೂ ಸಹ ಲೆಕ್ಕ ಹಾಕ್ಕಕ್ಕೆ ಹೋಗಲ್ಲ. ನಾವು ಮಾಡುವಂತಹ ಸಿನಿಮಾ ಎಲ್ಲರಿಗೂ ಹಣ ತಂದುಕೊಡಬೇಕು. ಅದರಿಂದ ಪ್ರೇಕ್ಷಕರಿಗೆ ಮಜಾ ಸಿಗಬೇಕು. ಆಗ ಮಾತ್ರ ಸಿನಿಮಾದಿಂದ ನಿಜವಾದ ತೃಪ್ತಿ ಸಿಗುತ್ತದೆ ಎನ್ನತ್ತಾರೆ ಉಪ್ಪಿ.
ಐ ಲವ್ ಯು ಸಿನಿಮಾದ ಕಥೆ ಕೇಳಿದಾಗಿನಿಂದ ನಿರ್ದೇಶಕ ಹಾಗೂ ನಿರ್ಮಾಪಕ ಆರ್ .ಚಂದ್ರು ಚಿತ್ರವನ್ನು ಪ್ರೀತಿಸುತ್ತಾ ಬಂದರು. ಅವರ ಪ್ರೀತಿ ಯಾವತ್ತೂ ಮುಕ್ಕಾಗಲಿಲ್ಲ. 25 ದಿವಸ ಆದ ಮೇಲೂ ಅವರ ಪ್ರೀತಿ ‘ಐ ಲವ್ ಯು’ ಸಿನಿಮಾ ಮೇಲೆ ಹಾಗೆ ಇದೆ. ಇದು ಸರಿಯಾದ ಕ್ರಮ. ಇನ್ನೂ ಮುಂದೆ ಆರ್. ಚಂದ್ರು ಅವರು ಇದಕ್ಕಿಂತ ದೊಡ್ಡ ರೀತಿಯ ಸಿನಿಮಾ ಮಾಡುವಂತೆ ಆಗಬೇಕು ಎಂದರು.