ETV Bharat / sitara

ಋತುಸ್ರಾವದ ವ್ಯತೆ ಹೇಳುವ ಭಾರತೀಯ ಸಾಕ್ಷ್ಯಚಿತ್ರಕ್ಕೆ ಆಸ್ಕರ್​ ಗೌರವ

ಭಾರತೀಯ ಸಾಕ್ಷ್ಯಚಿತ್ರ ಪಿರಿಯಡ್​-ಎಂಡ್​ ಆಫ್​ ಸೆಂಟೆನ್ಸ್​ ಆಸ್ಕರ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

author img

By

Published : Feb 25, 2019, 11:28 AM IST

Updated : Feb 25, 2019, 12:20 PM IST

ಆಸ್ಕರ್​ ಪ್ರಶಸ್ತಿ

ಲಾಸ್​ ಏಂಜಲೀಸ್​: ಋತುಸ್ರಾವದ ಕುರಿತು ಭಾರತೀಯರಿಗಿರುವ ತಪ್ಪು ಕಲ್ಪನೆಗಳು. ಕುರುಡು ನಂಬಿಕೆಗಳು ಹಾಗೂ ಆಚರಣೆಗಳ ಕುರಿತಾದ ಪಿರಿಯಡ್​-ಎಂಡ್​ ಆಫ್​ ಸೆಂಟೆನ್ಸ್​ ಸಾಕ್ಷ್ಯ ಚಿತ್ರಕ್ಕೆ ಈ ಬಾರಿಯ ಆಸ್ಕರ್​ ಪ್ರಶಸ್ತಿ ಲಭಿಸಿದೆ.

ಸಾಕ್ಷ್ಯಚಿತ್ರ ವಿಭಾಗದಿಂದ 91ನೇ ಆಸ್ಕರ್​ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದ ಚಿತ್ರಕ್ಕೆ ಉತ್ತಮ ಗೌರವ ಸಂದಿದೆ. ಇರಾನ್​ ಮೂಲದ ಅಮೆರಿಕನ್​ ನಿರ್ದೇಶಕಿ ರಯ್ಕಾ ಝೆತಬಿಚಿ ಅವರು ಈ ಸಾಕ್ಷ್ಯಚಿತ್ರವನ್ನು ನಿರ್ದೇಸಿದ್ದಾರೆ.

ಮಸಾಣ್​, ಲಂಚ್​ ಬಾಕ್ಸ್​ ಸಿನಿಮಾಗಳಿಗೆ ಹಣ ಹೂಡಿದ್ದ ನಿರ್ಮಾಪಕಿ ಗುನೀತ್​ ಮೊಂಗಾ ಅವರು ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಹಣ ಹೂಡಿದ್ದಾರೆ.

ಅಮೆರಿಕದ ಓಕ್​ವುಡ್​ ಶಾಲೆಯ 12-14 ವರ್ಷದ ಹುಡುಗಿಯರಿಗೆ ಈ ಸಿನಿಮಾ ನಿರ್ಮಾಣ ಮಾಡಲು ಕ್ರೌಡ್​ ಫಂಡಿಂಗ್​ ಮೂಲಕ ಹಣ ಸಂಗ್ರಹಿಸಿದ್ದರು. ಈ ಪೈಕಿ ನಿರ್ಮಾಪಕಿ ಗುನೀತ್​ ಮೊಂಗ ಅವರು ಪ್ರಧಾನ ಪಾತ್ರ ವಹಿಸಿದರು. ಚಿತ್ರವು ಸಂಪೂರ್ಣ ಉತ್ತರ ಭಾರತದ ಕತೆಯನ್ನು ಆಧರಿಸಿದೆ. ಹಿಂದುಳಿದ ಪ್ರದೇಶಗಳಲ್ಲಿ ಋತುಸ್ರಾವದ ಸಮಯದಲ್ಲಿ ಬಟ್ಟೆ ಬಳಸುವುದು ಇನ್ನೂ ಆಚರಣೆಯಲ್ಲುಂಟು. ಅಂತ ಜಾಗದಲ್ಲಿ ಪ್ಯಾಡ್​ ತಯಾರಿಸುವ ಮಷಿನ್​ಗಳನ್ನು ಬಳಸಿ ಮಹಿಳೆಯರು ಹೇಗೆ ಸ್ಯಾನಿಟರಿ ಪ್ಯಾಡ್​ಗಳನ್ನು ತಯಾರಿಸಿದರು. ಅದನ್ನು ಹೇಗೆ ಪ್ರಚಾರಕ್ಕೆ ತಂದರು ಎಂಬುದು ಈ ಸಿನಿಮಾದ ಕತೆ.

ಕೊಯಮತ್ತೂರು ಮೂಲದ ಅರುಣಾಚಲಂ ಮುರುಗನಂತಂ ಅವರು ಈ ಮಷಿನ್​ಗಳ ಸೃಷ್ಟಿಕರ್ತ. ಕಳೆದ ವರ್ಷವಷ್ಟೆ ಅವರ ಜೀವನಾಧಾರಿತ ಸಿನಿಮಾ ಪ್ಯಾಡ್​ ಮ್ಯಾನ್​ ತೆರೆಕಂಡಿತ್ತು.

ಲಾಸ್​ ಏಂಜಲೀಸ್​: ಋತುಸ್ರಾವದ ಕುರಿತು ಭಾರತೀಯರಿಗಿರುವ ತಪ್ಪು ಕಲ್ಪನೆಗಳು. ಕುರುಡು ನಂಬಿಕೆಗಳು ಹಾಗೂ ಆಚರಣೆಗಳ ಕುರಿತಾದ ಪಿರಿಯಡ್​-ಎಂಡ್​ ಆಫ್​ ಸೆಂಟೆನ್ಸ್​ ಸಾಕ್ಷ್ಯ ಚಿತ್ರಕ್ಕೆ ಈ ಬಾರಿಯ ಆಸ್ಕರ್​ ಪ್ರಶಸ್ತಿ ಲಭಿಸಿದೆ.

ಸಾಕ್ಷ್ಯಚಿತ್ರ ವಿಭಾಗದಿಂದ 91ನೇ ಆಸ್ಕರ್​ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದ ಚಿತ್ರಕ್ಕೆ ಉತ್ತಮ ಗೌರವ ಸಂದಿದೆ. ಇರಾನ್​ ಮೂಲದ ಅಮೆರಿಕನ್​ ನಿರ್ದೇಶಕಿ ರಯ್ಕಾ ಝೆತಬಿಚಿ ಅವರು ಈ ಸಾಕ್ಷ್ಯಚಿತ್ರವನ್ನು ನಿರ್ದೇಸಿದ್ದಾರೆ.

ಮಸಾಣ್​, ಲಂಚ್​ ಬಾಕ್ಸ್​ ಸಿನಿಮಾಗಳಿಗೆ ಹಣ ಹೂಡಿದ್ದ ನಿರ್ಮಾಪಕಿ ಗುನೀತ್​ ಮೊಂಗಾ ಅವರು ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಹಣ ಹೂಡಿದ್ದಾರೆ.

ಅಮೆರಿಕದ ಓಕ್​ವುಡ್​ ಶಾಲೆಯ 12-14 ವರ್ಷದ ಹುಡುಗಿಯರಿಗೆ ಈ ಸಿನಿಮಾ ನಿರ್ಮಾಣ ಮಾಡಲು ಕ್ರೌಡ್​ ಫಂಡಿಂಗ್​ ಮೂಲಕ ಹಣ ಸಂಗ್ರಹಿಸಿದ್ದರು. ಈ ಪೈಕಿ ನಿರ್ಮಾಪಕಿ ಗುನೀತ್​ ಮೊಂಗ ಅವರು ಪ್ರಧಾನ ಪಾತ್ರ ವಹಿಸಿದರು. ಚಿತ್ರವು ಸಂಪೂರ್ಣ ಉತ್ತರ ಭಾರತದ ಕತೆಯನ್ನು ಆಧರಿಸಿದೆ. ಹಿಂದುಳಿದ ಪ್ರದೇಶಗಳಲ್ಲಿ ಋತುಸ್ರಾವದ ಸಮಯದಲ್ಲಿ ಬಟ್ಟೆ ಬಳಸುವುದು ಇನ್ನೂ ಆಚರಣೆಯಲ್ಲುಂಟು. ಅಂತ ಜಾಗದಲ್ಲಿ ಪ್ಯಾಡ್​ ತಯಾರಿಸುವ ಮಷಿನ್​ಗಳನ್ನು ಬಳಸಿ ಮಹಿಳೆಯರು ಹೇಗೆ ಸ್ಯಾನಿಟರಿ ಪ್ಯಾಡ್​ಗಳನ್ನು ತಯಾರಿಸಿದರು. ಅದನ್ನು ಹೇಗೆ ಪ್ರಚಾರಕ್ಕೆ ತಂದರು ಎಂಬುದು ಈ ಸಿನಿಮಾದ ಕತೆ.

ಕೊಯಮತ್ತೂರು ಮೂಲದ ಅರುಣಾಚಲಂ ಮುರುಗನಂತಂ ಅವರು ಈ ಮಷಿನ್​ಗಳ ಸೃಷ್ಟಿಕರ್ತ. ಕಳೆದ ವರ್ಷವಷ್ಟೆ ಅವರ ಜೀವನಾಧಾರಿತ ಸಿನಿಮಾ ಪ್ಯಾಡ್​ ಮ್ಯಾನ್​ ತೆರೆಕಂಡಿತ್ತು.

Intro:Body:Conclusion:
Last Updated : Feb 25, 2019, 12:20 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.