ETV Bharat / sitara

ಸೆಂಚುರಿ ಸ್ಟಾರ್ ಹೊಸ ಚಿತ್ರಕ್ಕೆ ತಮಿಳು ನಿರ್ದೇಶಕ ಆ್ಯಕ್ಷನ್ ಕಟ್...ಚಿತ್ರದ ಹೆಸರೇನು...?

author img

By

Published : Jan 9, 2020, 7:01 PM IST

ಶಿವರಾಜ್ ಕುಮಾರ್​​​​​​​​ ನಟಿಸಿರುವ ಮಫ್ತಿ, ಟಗರು ಸಿನಿಮಾಗಳನ್ನು ನೋಡಿರುವ ನಿರ್ದೇಶಕ ರವಿ ಅರಸು, ಶಿವಣ್ಣ ಮ್ಯಾನರಿಸಂಗೆ ತಕ್ಕಂತೆ, ಕಥೆ ಮಾಡಿದ್ದಾರಂತೆ. ಈ ಕಥೆಗೆ ಹ್ಯಾಟ್ರಿಕ್ ಹೀರೋ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.

Shivanna ravi arasu
ಶಿವಣ್ಣ, ರವಿ ಅರಸು

ಕನ್ನಡ ಚಿತ್ರರಂಗದಲ್ಲಿ ಎನರ್ಜಿಟಿಕ್​​​​​​​​​ ಹೀರೋ ಎಂದರೆ ಎಲ್ಲರ ಕಣ್ಣಮುಂದೆ ಬರುವುದು ಹ್ಯಾಟ್ರಿಕ್ ಹೀರೋ ಶಿವರಾಜ್​​​ಕುಮಾರ್. ಸದ್ಯ ಭಜರಂಗಿ - 2 ಸಿನಿಮಾ ಶೂಟಿಂಗ್​​​​​ನಲ್ಲಿರುವ ಸೆಂಚುರಿ ಸ್ಟಾರ್, ಪಕ್ಕಾ ಮಾಸ್ ಟೈಟಲ್ ಹೊಂದಿರುವ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.

Director Ravi urs
ನಿರ್ದೇಶಕ ರವಿ ಅರಸು

ಶಿವಣ್ಣ ಅವರ ಹೊಸ ಚಿತ್ರಕ್ಕೆ ಆರ್​​ಡಿಎಕ್ಸ್​​​​ ಎಂದು ಹೆಸರಿಟ್ಟಿದ್ದು, ರವಿ ಅರಸು ಎಂಬ ತಮಿಳು ನಿರ್ದೇಶಕ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತಮಿಳಿನಲ್ಲಿ 'ಈಟಿ' ಎನ್ನುವ ಹಿಟ್ ಸಿನಿಮಾವನ್ನು ಕೊಟ್ಟಿರುವ ರವಿ ಅರಸು ಆರ್​ಡಿಎಕ್ಸ್​​ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶಿವರಾಜ್ ಕುಮಾರ್​​​​​​​​ ನಟಿಸಿರುವ ಮಫ್ತಿ, ಟಗರು ಸಿನಿಮಾಗಳನ್ನು ನೋಡಿರುವ ನಿರ್ದೇಶಕ ರವಿ ಅರಸು, ಶಿವಣ್ಣ ಮ್ಯಾನರಿಸಂಗೆ ತಕ್ಕಂತೆ, ಕಥೆ ಮಾಡಿದ್ದಾರಂತೆ. ಈ ಕಥೆಗೆ ಹ್ಯಾಟ್ರಿಕ್ ಹೀರೋ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. 1986ರಲ್ಲಿ ತೆರೆಕಂಡಿದ್ದ ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಸುಮಲತಾ ಅಭಿನಯದ 'ಸತ್ಯಜ್ಯೋತಿ' ಚಿತ್ರವನ್ನು ನಿರ್ಮಿಸಿದ್ದ ತ್ಯಾಗರಾಜನ್ ಅವರ ಸತ್ಯಜ್ಯೋತಿ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.

Shivanna
ಶಿವರಾಜ್​ಕುಮಾರ್

ತಮಿಳಿನಲ್ಲಿ ಬಹುದೊಡ್ಡ ಹೆಸರು ಮಾಡಿರುವ ನಿರ್ಮಾಣ ಸಂಸ್ಥೆ 'ಸತ್ಯಜ್ಯೋತಿ' ಬ್ಯಾನರ್​​​​​​​​​​​​​​​​​​ನಲ್ಲಿ, ಇತ್ತೀಚೆಗೆ ಅಜಿತ್ ಅಭಿನಯದ ವಿವೇಗಂ, ವಿಶ್ವಾಸಂ ಮತ್ತು ಧನುಷ್ ಅಭಿನಯದ ಪಟಾಸ್ ಸಿನಿಮಾಗಳನ್ನು ನಿರ್ಮಿಸಲಾಗಿದೆ. ಇದೀಗ ಶಿವರಾಜ್ ಕುಮಾರ್ ಸಿನಿಮಾವನ್ನು ನಿರ್ಮಿಸುವ ಮೂಲಕ, ಈ ಸಂಸ್ಥೆ ಮತ್ತೆ ಕನ್ನಡದ ಕಡೆ ಮುಖ ಮಾಡಿದೆ . ಫೆಬ್ರವರಿ 19 ರಂದು ಆರ್​ಡಿಎಕ್ಸ್​​​​​​​​​​​​​​​​​​​​​​​​​​​​ ಸಿನಿಮಾ ಮುಹೂರ್ತಕ್ಕೆ ಚಿತ್ರತಂಡ ಪ್ಲ್ಯಾನ್​​​​​​​​​​​​​​ ಮಾಡಿದೆ. ಶಿವಣ್ಣನ ಮೊದಲ ಸಿನಿಮಾ 'ಆನಂದ್' ಕೂಡಾ ಫೆಬ್ರವರಿ 19 ರಂದೇ ಮುಹೂರ್ತ ಆಚರಿಸಿತ್ತು. ಕಾಕತಾಳೀಯ ಎನ್ನುವಂತೆ ಮತ್ತೆ ಅದೇ ದಿನ ಆರ್​​​​ಡಿಎಕ್ಸ್​​​​​​​​​​​​​​​​​​​​​​​​​​​​​​​​​​​​​​​​​​​​​ ಆರಂಭಗೊಳ್ಳುತ್ತಿರುವುದು ನಿರ್ಮಾಪಕರಿಗೆ ಮೊದಲ ಹೆಜ್ಜೆಯಲ್ಲೇ ಒಂದು ಬಗೆಯಲ್ಲಿ ಪಾಸಿಟೀವ್ ಫೀಲ್ ತಂದುಕೊಟ್ಟಿದೆ.

ಕನ್ನಡ ಚಿತ್ರರಂಗದಲ್ಲಿ ಎನರ್ಜಿಟಿಕ್​​​​​​​​​ ಹೀರೋ ಎಂದರೆ ಎಲ್ಲರ ಕಣ್ಣಮುಂದೆ ಬರುವುದು ಹ್ಯಾಟ್ರಿಕ್ ಹೀರೋ ಶಿವರಾಜ್​​​ಕುಮಾರ್. ಸದ್ಯ ಭಜರಂಗಿ - 2 ಸಿನಿಮಾ ಶೂಟಿಂಗ್​​​​​ನಲ್ಲಿರುವ ಸೆಂಚುರಿ ಸ್ಟಾರ್, ಪಕ್ಕಾ ಮಾಸ್ ಟೈಟಲ್ ಹೊಂದಿರುವ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.

Director Ravi urs
ನಿರ್ದೇಶಕ ರವಿ ಅರಸು

ಶಿವಣ್ಣ ಅವರ ಹೊಸ ಚಿತ್ರಕ್ಕೆ ಆರ್​​ಡಿಎಕ್ಸ್​​​​ ಎಂದು ಹೆಸರಿಟ್ಟಿದ್ದು, ರವಿ ಅರಸು ಎಂಬ ತಮಿಳು ನಿರ್ದೇಶಕ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತಮಿಳಿನಲ್ಲಿ 'ಈಟಿ' ಎನ್ನುವ ಹಿಟ್ ಸಿನಿಮಾವನ್ನು ಕೊಟ್ಟಿರುವ ರವಿ ಅರಸು ಆರ್​ಡಿಎಕ್ಸ್​​ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶಿವರಾಜ್ ಕುಮಾರ್​​​​​​​​ ನಟಿಸಿರುವ ಮಫ್ತಿ, ಟಗರು ಸಿನಿಮಾಗಳನ್ನು ನೋಡಿರುವ ನಿರ್ದೇಶಕ ರವಿ ಅರಸು, ಶಿವಣ್ಣ ಮ್ಯಾನರಿಸಂಗೆ ತಕ್ಕಂತೆ, ಕಥೆ ಮಾಡಿದ್ದಾರಂತೆ. ಈ ಕಥೆಗೆ ಹ್ಯಾಟ್ರಿಕ್ ಹೀರೋ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. 1986ರಲ್ಲಿ ತೆರೆಕಂಡಿದ್ದ ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಸುಮಲತಾ ಅಭಿನಯದ 'ಸತ್ಯಜ್ಯೋತಿ' ಚಿತ್ರವನ್ನು ನಿರ್ಮಿಸಿದ್ದ ತ್ಯಾಗರಾಜನ್ ಅವರ ಸತ್ಯಜ್ಯೋತಿ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.

Shivanna
ಶಿವರಾಜ್​ಕುಮಾರ್

ತಮಿಳಿನಲ್ಲಿ ಬಹುದೊಡ್ಡ ಹೆಸರು ಮಾಡಿರುವ ನಿರ್ಮಾಣ ಸಂಸ್ಥೆ 'ಸತ್ಯಜ್ಯೋತಿ' ಬ್ಯಾನರ್​​​​​​​​​​​​​​​​​​ನಲ್ಲಿ, ಇತ್ತೀಚೆಗೆ ಅಜಿತ್ ಅಭಿನಯದ ವಿವೇಗಂ, ವಿಶ್ವಾಸಂ ಮತ್ತು ಧನುಷ್ ಅಭಿನಯದ ಪಟಾಸ್ ಸಿನಿಮಾಗಳನ್ನು ನಿರ್ಮಿಸಲಾಗಿದೆ. ಇದೀಗ ಶಿವರಾಜ್ ಕುಮಾರ್ ಸಿನಿಮಾವನ್ನು ನಿರ್ಮಿಸುವ ಮೂಲಕ, ಈ ಸಂಸ್ಥೆ ಮತ್ತೆ ಕನ್ನಡದ ಕಡೆ ಮುಖ ಮಾಡಿದೆ . ಫೆಬ್ರವರಿ 19 ರಂದು ಆರ್​ಡಿಎಕ್ಸ್​​​​​​​​​​​​​​​​​​​​​​​​​​​​ ಸಿನಿಮಾ ಮುಹೂರ್ತಕ್ಕೆ ಚಿತ್ರತಂಡ ಪ್ಲ್ಯಾನ್​​​​​​​​​​​​​​ ಮಾಡಿದೆ. ಶಿವಣ್ಣನ ಮೊದಲ ಸಿನಿಮಾ 'ಆನಂದ್' ಕೂಡಾ ಫೆಬ್ರವರಿ 19 ರಂದೇ ಮುಹೂರ್ತ ಆಚರಿಸಿತ್ತು. ಕಾಕತಾಳೀಯ ಎನ್ನುವಂತೆ ಮತ್ತೆ ಅದೇ ದಿನ ಆರ್​​​​ಡಿಎಕ್ಸ್​​​​​​​​​​​​​​​​​​​​​​​​​​​​​​​​​​​​​​​​​​​​​ ಆರಂಭಗೊಳ್ಳುತ್ತಿರುವುದು ನಿರ್ಮಾಪಕರಿಗೆ ಮೊದಲ ಹೆಜ್ಜೆಯಲ್ಲೇ ಒಂದು ಬಗೆಯಲ್ಲಿ ಪಾಸಿಟೀವ್ ಫೀಲ್ ತಂದುಕೊಟ್ಟಿದೆ.

Intro:Body:ಸೆಂಚುರಿ ಸ್ಟಾರ್ ಹೊಸ ಚಿತ್ರ ಆರ್ ಡಿ ಎಕ್ಸ್ ಗೆ ತಮಿಳಿನ ನಿರ್ದೇಶಕ ಆಕ್ಷನ್ ಕಟ್ !!

ಕನ್ನಡ ಚಿತ್ರರಂಗದಲ್ಲಿ ಎನರ್ಜಿ ಹೀರೋ ಅಂತಾ ಅಂದಾಗ, ಎಲ್ಲಾರ ಕಣ್ಮುಂದೆ ಬರೋದು ಹ್ಯಾಟ್ರಿಕ್ ಹೀರೋ ಶಿವರಾಜ್..ಸದ್ಯ ಭಜರಂಗಿ 2 ಸಿನಿಮಾ ಶೂಟಿಂಗ್ ನಲ್ಲಿ ರೋ ಸೆಂಚುರಿ ಸ್ಟಾರ್, ಪಕ್ಕಾ ಮಾಸ್ ಟೈಟಲ್ ಹೊಂದಿರುವ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ..ಈ ಚಿತ್ರಕ್ಕೆ ಆರ್ ಡಿ ಎಕ್ಸ್ ಅಂತಾ ಟೈಟಲ್ ಇಟ್ಟಿದ್ದು, ರವಿ ಅರಸು ಎಂಬ ತಮಿಳು ನಿರ್ದೇಶಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.ತಮಿಳಿನಲ್ಲಿ ಈಟಿ ಎನ್ನುವ ಹಿಟ್ ಸಿನಿಮಾವನ್ನು ಕೊಟ್ಟಿರುವ ರವಿ ಅರಸು ಆರ್ ಡಿ ಎಕ್ಸ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.ಶಿವರಾಜ್ ಕುಮಾರ್ ರವ್ರ, ಮಫ್ತಿ, ಟಗರು ಸಿನಿಮಾಗಳನ್ನ ನೋಡಿರುವ ನಿರ್ದೇಶಕ, ಶಿವಣ್ಣ ಮ್ಯಾನರಿಸಂಗೆ ತಕ್ಕಂತೆ, ಕಥೆ ಮಾಡಿದ್ದಾರಂತೆ..ಈ ಕಥೆಯನ್ನ ಹ್ಯಾಟ್ರಿಕ್ ಹೀರೋ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ..೧೯೮೬ರಲ್ಲಿ ತೆರೆಕಂಡಿದ್ದ ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಸುಮಲತಾ ಅಭಿನಯದ ಸತ್ಯಜ್ಯೋತಿ ಚಿತ್ರವನ್ನು ನಿರ್ಮಾಣ ಮಾಡಿದ್ದ ತ್ಯಾಗರಾಜನ್ ಹುಟ್ಟು ಹಾಕಿರೋ ಸತ್ಯಜ್ಯೋತಿ ಬ್ಯಾನರ್ ಅಡಿಯಲ್ಲಿ ಈ ಸಿನಿನಾವನ್ನ ನಿರ್ಮಾಣ ಮಾಡಲಾಗುತ್ತಿದೆ..ತಮಿಳಿನಲ್ಲಿ ಬಹುದೊಡ್ಡ ಹೆಸರು ಮಾಡಿರುವ ನಿರ್ಮಾಣ ಸಂಸ್ಥೆಯಾಗಿರೋ, ಸತ್ಯಜ್ಯೋತಿ ಬ್ಯಾನರ್ ನಲ್ಲಿ, ಇತ್ತೀಚೆಗೆ ಅಜಿತ್ ಅಭಿನಯದ ವಿವೇಗಂ, ವಿಶ್ವಾಸಂ ಮತ್ತು ಧನುಷ್ ಅಭಿನಯದ ಪಟಾಸ್ ಸಿನಿಮಾಗಳನ್ನು ನಿರ್ಮಿಸಿದ್ದೂ ಇದೇ ಸಂಸ್ಥೆ. ಈಗ ಶಿವರಾಜ್ ಕುಮಾರ್ ಸಿನಿಮಾವನ್ನ ನಿರ್ಮಾಣ ಮಾಡುವ ಮೂಲಕ, ಮತ್ತೆ ಕನ್ನಡದ ಕಡೆ ಮುಖ ಮಾಡಿದ್ದಾರೆ ‌ಫೆಬ್ರವರಿ ೧೯ರಂದು ಆರ್ ಡಿ ಎಕ್ಸ್ ಸಿನಿಮಾಕ್ಕೆ ಮುಹೂರ್ತ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ..ಮತ್ತೊಂದು ವಿಷ್ಯ ಅಂದರೆ ಶಿವಣ್ಣನ ಮೊದಲ ಸಿನಿಮಾ ಆನಂದ್ ಕೂಡಾ ಫೆಬ್ರವರಿ ೧೯ರಂದೇ ಮುಹೂರ್ತ ಆಚರಿಸಿತ್ತು. ಕಾಕತಾಳೀಯವೆನ್ನುವಂತೆ ಮತ್ತೆ ಅದೇ ದಿನ ಆರ್ ಡಿ ಎಕ್ಸ್ ಆರಂಭಗೊಳ್ಳುತ್ತಿರುವುದು ನಿರ್ಮಾಪಕರಿಗೆ ಮೊದಲ ಹೆಜ್ಜೆಯಲ್ಲೇ ಒಂದು ಬಗೆಯಲ್ಲಿ ಪಾಸಿಟೀವ್ ಫೀಲ್ ತಂದುಕೊಟ್ಟಿದೆ.Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.