ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ಹೆಚ್ಚು ಸಿನಿಮಾಗಳು ರಿಲೀಸ್ ಆಗುವುದು ಅಂದ್ರೆ ಅವು ಶಿವರಾಜ್ ಕುಮಾರ್ ಅವ್ರ ಚಿತ್ರಗಳು. ಸದ್ಯ ಕೊರೊನಾ ಇರೋದ್ರಿಂದ ಈ ವರ್ಷ ದ್ರೋಣ ಸಿನಿಮಾ ಬಿಟ್ಟರೆ, ಶಿವಣ್ಣನ ಯಾವ ಚಿತ್ರವೂ ಬಿಡುಗಡೆ ಆಗಿಲ್ಲ.
ಆದರೂ ಭಜರಂಗಿ 2, ಆರ್ ಡಿ ಎಕ್ಸ್ ಹಾಗು ಭೈರತಿ ರಣಗಲ್ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಸೆಂಚುರಿ ಸ್ಟಾರ್ ಒಪ್ಪಿಕೊಂಡಿದ್ದಾರೆ. ಇದೀಗ ಹೆಸರಿಡದ ಚಿತ್ರವೊಂದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹಿ ಹಾಕಿದ್ದಾರೆ.
ಎ.ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚೌಧರಿ ಅವರು ನಿರ್ಮಿಸುತ್ತಿರುವ ನೂತನ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಅಭಿನಯಿಸೋಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಿರ್ದೇಶಕ ಎ ಹರ್ಷ ಹಾಗೂ ಯೋಗಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ, ಕೊಟ್ರೇಶ್ ಚಪ್ಪರದಹಳ್ಳಿ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ನಿರ್ದೇಶಕರು ಹೇಳುವ ಹಾಗೇ, ಇದೊಂದು ಸಾಮಾಜಿಕ ಕಾಳಜಿ ಇರುವ ಚಿತ್ರ ಕಥೆ. ಈ ಕಥೆಯನ್ನು ಶಿವರಾಜಕುಮಾರ್ ಬಳಿ ಹೇಳಿದಾಗ, ಕಥೆ ತುಂಬಾ ಚೆನ್ನಾಗಿದೆ, ಕೂಡಲೆ ಈ ಸಿನಿಮಾ ಮಾಡಲು ಒಪ್ಪಿಗೆ ಸೂಚಿಸಿದ್ರು ಅಂತಾರೆ ನಿರ್ದೇಶಕ ಕೋಟ್ರೆಶ್.
ಈ ಚಿತ್ರದಲ್ಲಿ ಶಿವಣ್ಣ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದ್ರ ಜೊತೆಗೆ ನನ್ನಂಥ ಹೊಸ ನಿರ್ದೇಶಕರಿಗೆ ಶಿವರಾಜ್ ಕುಮಾರ್ ಕೊಡುವ ಪೋತ್ರಾಹ ಮತ್ತಷ್ಟು ಸಿನಿಮಾ ಮಾಡಲು, ಸ್ಪೂರ್ತಿದಾಯಕವಾಗಿರುತ್ತೆ ಅಂತಾರೆ ನಿರ್ದೇಶಕ ಕೊಟ್ರೇಶ್ ಚಪ್ಪರದಹಳ್ಳಿ.
ಸದ್ಯ ಶಿವರಾಜ್ ಕುಮಾರ್ ಎ.ಆರ್.ಕೆ ಲಾಂಛನದಲ್ಲಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಸಿನಿಮಾದ ಟೈಟಲ್ ಏನು? ಉಳಿದ ತಾರಬಳಗ ಹಾಗು ತಾಂತ್ರಿಕ ವರ್ಗದ ಬಗ್ಗೆ ನಿರ್ದೇಶಕರು ಸದ್ಯದಲ್ಲೇ ಮಾಹಿತಿ ನೀಡಲಿದ್ದಾರೆ.