ETV Bharat / sitara

ಆರ್​​ಟಿಓ ಅಧಿಕಾರಿ ಮಂಜುನಾಥ್ ಕುರಿತು ತಯಾರಾದ ಕಿರುಚಿತ್ರ ‘ರೈಟ್ ಟು ಅಪ್ಪೋಸ್’ - ಆರ್​​​ಟಿಓ ಅಧಿಕಾರಿ ಮಂಜುನಾಥ್ ಸಾವಿನ ಪ್ರಕರಣ

ಆರ್​​ಟಿಓ ಅಧಿಕಾರಿ ಮಂಜುನಾಥ್ ಸಾವಿನ ಪ್ರಕರಣವನ್ನು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಬಿಂಬಿಸಲಾಗಿತ್ತು. ಈ ಕುರಿತು ‘ರೈಟ್ ಟು ಅಪ್ಪೋಸ್’ ಎಂಬ ಕಿರುಚಿತ್ರ ತಯಾರಾಗಿದ್ದು ಈ ಕಿರುಚಿತ್ರವನ್ನು ಮಂಜುನಾಥ್ ಪತ್ನಿ ಶೈಲಾ ಕೂಡಾ ವೀಕ್ಷಿಸಿದ್ದಾರೆ.

‘ರೈಟ್ ಟು ಅಪ್ಪೋಸ್’ ಕಿರುಚಿತ್ರತಂಡ
author img

By

Published : Oct 8, 2019, 11:08 AM IST

ಸಾಮಾಜಿಕ ಜಾಲತಾಣದಿಂದ ಎಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆಯೂ ಅಷ್ಟೇ ಅಭಾಸಗಳು ಕೂಡಾ ಉಂಟಾಗುತ್ತಿವೆ. ಇದರಿಂದ ಆಗುತ್ತಿರುವ ಅನಾಹುತಗಳು ಒಂದಲ್ಲಾ ಎರಡಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಬ್ಬುವ ವಿಚಾರಗಳನ್ನು ಎಷ್ಟೋ ಮಂದಿ ಪರಾಮರ್ಶಿಸದೆ ನಂಬಿಬಿಡುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಆರ್​​​ಟಿಓ ಅಧಿಕಾರಿ ಮಂಜುನಾಥ್ ಸಾವಿನ ಪ್ರಕರಣ.

short film producrs
ಕಿರುಚಿತ್ರದ ನಿರ್ಮಾಪಕರು

ಆರ್​ಟಿಓ ಅಧಿಕಾರಿ ಮಂಜುನಾಥ್ ತಮ್ಮ ಕಾರಿನಲ್ಲಿ ಚಲಿಸುತ್ತಿದ್ದಾಗ ಸಣ್ಣ ಅಪಘಾತ ಮಾಡಿ ಪ್ರಜ್ಞೆ ತಪ್ಪಿಬಿದ್ದಾಗ ಅವರು ಸಂಪೂರ್ಣ ಕುಡಿದಿದ್ದರು ಎಂದು ತಪ್ಪಾಗಿ, ಕೆಟ್ಟದಾಗಿ ಬಿಂಬಿಸಲಾಗಿತ್ತು. ಆದರೆ ನಿಜ ವಿಚಾರ ಎಂದರೆ ಆರ್​​ಟಿಓ ಅಧಿಕಾರಿ ಮಂಜುನಾಥ್ ಮದ್ಯ ವ್ಯಸನಿಯಲ್ಲ. ಅವರಿಗೆ ಲೋ ಬಿಪಿ ಆಗಿದ್ದರಿಂದ ಕುಸಿದುಬಿದ್ದಿದ್ದಾರೆ. ಅಲ್ಲದೆ ವೈಯಕ್ತಿವಾಗಿ ಕೂಡಾ ಅವರು ಬಹಳ ಒಳ್ಳೆ ವ್ಯಕ್ತಿ. ಅನೇಕರಿಗೆ ಹಣದ ಸಹಾಯ ಮಾಡಿದವರು ಮಂಜುನಾಥ್. ಆದರೆ ಅವರ ಸಾವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಳ ಕೆಟ್ಟದಾಗಿ ಬಿಂಬಿಸಲಾಗಿತ್ತು. ಇದರಿಂದ ಅವರ ಕುಟುಂಬಕ್ಕೆ ಬಹಳ ನೋವುಂಟಾಗಿತ್ತು. ಈ ಘಟನೆ ಸಂಬಂಧ ಇದೀಗ ಕಿರುಚಿತ್ರವೊಂದು ತಯಾರಾಗಿದೆ.

short movie
ಕಿರುಚಿತ್ರ ವೀಕ್ಷಿಸಿದ ಮಂಜುನಾಥ್ ಪತ್ನಿ ಶೈಲ

ಫಿಲ್ಮ್ ಅಕಾಡೆಮಿಯ ಯತಿರಾಜ್​​, ಅರವಿಂದ್ ರಾವ್, ಭಾಸ್ಕರ್, ಸುಧೀಂದ್ರ ವೆಂಕಟೇಶ್ ಹಾಗೂ ಆರ್​​​​​​. ಚಂದ್ರಶೇಖರ್ ಈ ಕಿರುಚಿತ್ರವನ್ನು ನಿರ್ಮಾಣ ಮಾಡಿ ಒಂದು ಸಾಮಾಜಿಕ ಜವಾಬ್ದಾರಿಯನ್ನು ತೋರಿದ್ದಾರೆ. ಆರ್​ಟಿಓ ಅಂದರೆ ‘ರೈಟ್ ಟು ಅಪ್ಪೋಸ್’ ಎಂದು ಅರ್ಥ. ಆರ್​ಟಿಓ ಅಧಿಕಾರಿ ಮಂಜುನಾಥ್ ಪಾತ್ರವನ್ನು ಯತಿರಾಜ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಕಿರುಚಿತ್ರಕ್ಕೆ ಅವರದ್ದೇ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಇದೆ. ನುರಿತ ನಟ ಅರವಿಂದ್ ರಾವ್ ಸಲಹೆ ಮೇರೆಗೆ ಫಿಲ್ಮ್ ಅಕಾಡೆಮಿ ವಿಧ್ಯಾರ್ಥಿಗಳು ಈ ಕಿರುಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಈ ಕಿರುಚಿತ್ರವನ್ನು ಮಂಜುನಾಥ್ ಪತ್ನಿ ಶೈಲ ಕೂಡಾ ವೀಕ್ಷಿಸಿದ್ದಾರೆ. ಕಳ್ಳರಿಗೆ ಶಿಕ್ಷೆ ಆಗದಿದ್ದರೂ ಪರವಾಗಿಲ್ಲ. ಆದರೆ ನನ್ನ ಪತಿಯಂತ ಅಮಾಯಕರಿಗೆ ಈ ರೀತಿಯ ಶಿಕ್ಷೆ ಆಗಬಾರದು. ಯಾವುದೇ ವಿಚಾರನ್ನು ಪರಾಮರ್ಶಿಸಿ ನಂತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಿಂದ ಎಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆಯೂ ಅಷ್ಟೇ ಅಭಾಸಗಳು ಕೂಡಾ ಉಂಟಾಗುತ್ತಿವೆ. ಇದರಿಂದ ಆಗುತ್ತಿರುವ ಅನಾಹುತಗಳು ಒಂದಲ್ಲಾ ಎರಡಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಬ್ಬುವ ವಿಚಾರಗಳನ್ನು ಎಷ್ಟೋ ಮಂದಿ ಪರಾಮರ್ಶಿಸದೆ ನಂಬಿಬಿಡುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಆರ್​​​ಟಿಓ ಅಧಿಕಾರಿ ಮಂಜುನಾಥ್ ಸಾವಿನ ಪ್ರಕರಣ.

short film producrs
ಕಿರುಚಿತ್ರದ ನಿರ್ಮಾಪಕರು

ಆರ್​ಟಿಓ ಅಧಿಕಾರಿ ಮಂಜುನಾಥ್ ತಮ್ಮ ಕಾರಿನಲ್ಲಿ ಚಲಿಸುತ್ತಿದ್ದಾಗ ಸಣ್ಣ ಅಪಘಾತ ಮಾಡಿ ಪ್ರಜ್ಞೆ ತಪ್ಪಿಬಿದ್ದಾಗ ಅವರು ಸಂಪೂರ್ಣ ಕುಡಿದಿದ್ದರು ಎಂದು ತಪ್ಪಾಗಿ, ಕೆಟ್ಟದಾಗಿ ಬಿಂಬಿಸಲಾಗಿತ್ತು. ಆದರೆ ನಿಜ ವಿಚಾರ ಎಂದರೆ ಆರ್​​ಟಿಓ ಅಧಿಕಾರಿ ಮಂಜುನಾಥ್ ಮದ್ಯ ವ್ಯಸನಿಯಲ್ಲ. ಅವರಿಗೆ ಲೋ ಬಿಪಿ ಆಗಿದ್ದರಿಂದ ಕುಸಿದುಬಿದ್ದಿದ್ದಾರೆ. ಅಲ್ಲದೆ ವೈಯಕ್ತಿವಾಗಿ ಕೂಡಾ ಅವರು ಬಹಳ ಒಳ್ಳೆ ವ್ಯಕ್ತಿ. ಅನೇಕರಿಗೆ ಹಣದ ಸಹಾಯ ಮಾಡಿದವರು ಮಂಜುನಾಥ್. ಆದರೆ ಅವರ ಸಾವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಳ ಕೆಟ್ಟದಾಗಿ ಬಿಂಬಿಸಲಾಗಿತ್ತು. ಇದರಿಂದ ಅವರ ಕುಟುಂಬಕ್ಕೆ ಬಹಳ ನೋವುಂಟಾಗಿತ್ತು. ಈ ಘಟನೆ ಸಂಬಂಧ ಇದೀಗ ಕಿರುಚಿತ್ರವೊಂದು ತಯಾರಾಗಿದೆ.

short movie
ಕಿರುಚಿತ್ರ ವೀಕ್ಷಿಸಿದ ಮಂಜುನಾಥ್ ಪತ್ನಿ ಶೈಲ

ಫಿಲ್ಮ್ ಅಕಾಡೆಮಿಯ ಯತಿರಾಜ್​​, ಅರವಿಂದ್ ರಾವ್, ಭಾಸ್ಕರ್, ಸುಧೀಂದ್ರ ವೆಂಕಟೇಶ್ ಹಾಗೂ ಆರ್​​​​​​. ಚಂದ್ರಶೇಖರ್ ಈ ಕಿರುಚಿತ್ರವನ್ನು ನಿರ್ಮಾಣ ಮಾಡಿ ಒಂದು ಸಾಮಾಜಿಕ ಜವಾಬ್ದಾರಿಯನ್ನು ತೋರಿದ್ದಾರೆ. ಆರ್​ಟಿಓ ಅಂದರೆ ‘ರೈಟ್ ಟು ಅಪ್ಪೋಸ್’ ಎಂದು ಅರ್ಥ. ಆರ್​ಟಿಓ ಅಧಿಕಾರಿ ಮಂಜುನಾಥ್ ಪಾತ್ರವನ್ನು ಯತಿರಾಜ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಕಿರುಚಿತ್ರಕ್ಕೆ ಅವರದ್ದೇ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಇದೆ. ನುರಿತ ನಟ ಅರವಿಂದ್ ರಾವ್ ಸಲಹೆ ಮೇರೆಗೆ ಫಿಲ್ಮ್ ಅಕಾಡೆಮಿ ವಿಧ್ಯಾರ್ಥಿಗಳು ಈ ಕಿರುಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಈ ಕಿರುಚಿತ್ರವನ್ನು ಮಂಜುನಾಥ್ ಪತ್ನಿ ಶೈಲ ಕೂಡಾ ವೀಕ್ಷಿಸಿದ್ದಾರೆ. ಕಳ್ಳರಿಗೆ ಶಿಕ್ಷೆ ಆಗದಿದ್ದರೂ ಪರವಾಗಿಲ್ಲ. ಆದರೆ ನನ್ನ ಪತಿಯಂತ ಅಮಾಯಕರಿಗೆ ಈ ರೀತಿಯ ಶಿಕ್ಷೆ ಆಗಬಾರದು. ಯಾವುದೇ ವಿಚಾರನ್ನು ಪರಾಮರ್ಶಿಸಿ ನಂತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಆರ್ ಟಿ ಓ – ಕಣ್ಣು ತೆರೆಸುವ ಕಿರು ಚಿತ್ರ  

ಸಾಮಾಜಿಕ ಜಾಲತಾನದಲ್ಲಿ ಆಗುತ್ತಿರುವ ಅಭಾಸಗಳು ಅನೇಕ. ವಿಚಾರವನ್ನು ಪರಾಮರ್ಶಿಸಿ ನೋಡುವ ಪ್ರಕ್ರಿಯೆ ಬೆಳೆದು ಬಂದಿಲ್ಲ. ಇದರಿಂದ ಆಗುವ ಅನಾಹುತಗಳು ಅನೇಕ. ಇತ್ತೀಚಿನ ಉದಾಹರಣ ಆರ್ ಟಿ ಓ ಅಧಿಕಾರಿ ಮಂಜುನಾಥ್ ತಮ್ಮ ಕಾರಿನಲ್ಲಿ ಚಲಿಸುತ್ತಾ ಇದ್ದಾಗ ಸಣ್ಣ ಅಪಘಾತ ಮಾಡಿ ಪ್ರಜ್ಞೆ ತಪ್ಪಿ ಬೀಳುವುದನ್ನು ಸಾಮಾಜಿಕ ಜಾಲತಾನದಲ್ಲಿ ಅವರು ಸಂಪೂರ್ಣವಾಗಿ ಕುಡಿದಿದ್ದರು ಎಂದು ತಪ್ಪಾಗಿ, ಕೆಟ್ಟದಾಗಿ ಬಿಂಬಿಸಲಾಗಿತ್ತು.

ಆರ್ ಟಿ ಓ ಅಧಿಕಾರಿ ಮಂಜುನಾಥ್ ಮಧ್ಯ ವ್ಯಸನಿಯಲ್ಲ. ಅವರಿಗೆ ಲೋ ಬಿ ಪಿ ಆಗಿದ್ದರಿಂದ ಅವರು ಕುಸಿದಿದ್ದಾರೆ. ಇವರ ವ್ಯಕ್ತಿತ್ವ ಹೇಗಪ್ಪಾ ಅಂದರೆ ಅಧಿಕಾರಿ ಆಗಿ ಒಂದು ಆರ್ ಟಿ ಓ ಲೈಸನ್ಸ್ ನೀಡಿದರೆ ಎರಡು ಗಿಡ ನೆಡುವ ಪ್ರವೃತ್ತಿಯನ್ನು ಬೆಳೆಸಿದವರು. ಅನೇಕರಿಗೆ ಹಣ ಸಹಾಯ ಮಾಡಿದವರು. ಆದರೆ ಅವರು ಸಾಯುವ ಕಾಲಕ್ಕೆ ಅವರಿಗೆ ಸಾಮಾಜಿಕ ಜಾಲತಾಣ ಸರಿಯಾಗಿ ತಿಳಿಯದೆ ದೊಡ್ಡ ತಪ್ಪನ್ನು ಮಾಡಿ ಅವರ ಕುಟುಂಬಕ್ಕೆ ನೋವು ಉಂಟು ಮಾಡಿದ್ದು ಆಮೇಲೆ ಹಲವರಿಗೆ ಹೃದಯಕ್ಕೆ ನಾಟಿದೆ.

ಆರ್ ಟಿ ಓ ಎಂಬ 8 ನಿಮಿಷದ ಕಿರು ಚಿತ್ರ ಕಲಾವಿಧಾ ಫಿಲ್ಮ್ ಅಕಾಡೆಮಿ – ಯೆತಿರಾಜ್, ಅರವಿಂದ್ ರಾವ್, ಭಾಸ್ಕರ್, ಸುಧೀಂದ್ರ ವೆಂಕಟೇಶ್ ಹಾಗೂ ಆರ್ ಚಂದ್ರಶೇಖರ್ ನಿರ್ಮಾಣ ಮಾಡಿ ಒಂದು ಸಾಮಾಜಿಕ ಜವಾಬ್ದಾರಿಯನ್ನು ತೋರಿದ್ದಾರೆ. ಆರ್ ಟಿ ಓ ಅಂದರೆ ಇಲ್ಲಿ ರೈಟ್ ಟು ಅಪ್ಪೋಸ್ ಎಂದು ಹೇಳಲಾಗಿದೆ. ಆರ್ ಟಿ ಓ ಅಧಿಕಾರಿ ಮಂಜುನಾಥ್ ಅವರ ಪಾತ್ರವನ್ನು ಯೆತಿರಾಜ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅವರದೇ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಇದೆ. ನುರಿತ ನಟ ಅರವಿಂದ್ ರಾವ್ ಅವರ ಸಲಹೆ ಸಹ ಈ ಕಿರು ಚಿತ್ರಕ್ಕೆ ಇದೆ. ಕಾಲವಿಧಾ ಫಿಲ್ಮ್ ಅಕಾಡೆಮಿ ವಿಧ್ಯಾರ್ಥಿಗಳು ಈ ಕಿರು ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ.

ಅನ್ಯಾಯವಾಗಿ ತಪ್ಪು ಹೊರಿಸಿದ್ದು ಸಾಮಾಜಿಕ ಜಾಲತಾನದಲ್ಲಿ ಎಂದು ನೊಂದು ಕೊಂಡಿರುವ ಆರ್ ಟಿ ಓ ಅಧಿಕಾರಿ ದಿವಂಗತ ಮಂಜುನಾಥ್ ಅವರ ಪತ್ನಿ ಶೈಲಾ ಅವರು ಸಹ ಈ ಕಿರು ಚಿತ್ರವನ್ನೂ ವೀಕ್ಷಿಸಿದರು. ಆನಂತರ ತಮ್ಮ ಪತಿಯ ಒಳ್ಳೆಯ ತನವನ್ನು ಹೇಳುತ್ತಾ ಅವರು ಎಂದಿಗೂ ಮಧ್ಯ ಸೇವಿಸಿಯೇ ಇರಲಿಲ್ಲ. ಕೆಲವು ದಿವಸಗಳಿಂದ ಅವರಿಗೆ ಕೆಲಸ ಒತ್ತಡ ಇತ್ತು. ಅವರ ಡಯಬೀಟಿಸ್ ಬಹಳ ವಿಕೋಪಕ್ಕೆ ಹೋಗಿತ್ತು. ಅಂದು ಅವರು ಕೆಲಸಕ್ಕೆ ಹೋಗ ಬೇಡಿ ಅಂದರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಹೋಗಿದ್ದರು. ಇದಕ್ಕೂ ಮುಂಚೆ ಅವರಿಗೆ ಐದು ಬಾರಿ ರಕ್ತ ಬೇದಿ ಆಗಿತ್ತು. ಆದರೆ ಕಾರಿನಲ್ಲಿ ಚಲಿಸುವಾಗ ಅವರು ತೀವ್ರ ತೊಂದರೆ ಅನುಭವಿಸಿದರು ಎಂದು ಹೇಳಿಕೊಳ್ಳುತ್ತ, ಎರಡು ಕಳ್ಳರಿಗೆ ಶಿಕ್ಷೆ ಆಗದಿದ್ದರು ಪರವಾಗಿಲ್ಲ, ಆದರೆ ನನ್ನ ಗಂಡನಂತ ಅಮಾಯಕರಿಗೆ ಈ ರೀತಿಯ ಶಿಕ್ಷೆ ಸಾಮಾಜಿಕ ಜಾಲತಾನದಲ್ಲಿ ಆಗುವುದು ತಪ್ಪಿಸಿ ಪ್ಲೀಸ್ ಎಂದು ಬೇಡಿಕೊಂಡಿದ್ದಾರೆ. ಒಂದು ವಿಚಾರವನ್ನು ಪರಾಮರ್ಶಿಸಿ ವಾಹಿನಿಯಲ್ಲಿ, ಸಾಮಾಜಿಕ ಜಾನತಾನದಲ್ಲಿ ಬರುವಂತೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.