ETV Bharat / sitara

ಜ್ಯೂನಿಯರ್ ದರ್ಶನ್ ಎಂದೇ ಫೇಮಸ್ ಆದ್ರು ಪ್ರಮೋದ್ ಮಂಜು - ಜ್ಯೂನಿಯರ್ ದರ್ಶನ್ ಎಂದು ಫೇಮಸ್ ಆದ್ರು ಪ್ರಮೋದ್

'ಗೀತಾ ಬ್ಯಾಂಗಲ್​​​​​​ ಸ್ಟೋರ್​​​' ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿ ತೆರೆಗೂ ಹೆಜ್ಜೆ ಇಟ್ಟ ಪ್ರಮೋದ್​ ಈಗ ಜ್ಯೂನಿಯರ್ ದರ್ಶನ್ ಎಂದೇ ಫೇಮಸ್. ಇನ್ನು 'ಮತ್ತೆ ಉದ್ಭವ' ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಮೋದ್ ಅವರನ್ನು ಜ್ಯೂನಿಯರ್ ದರ್ಶನ್ ಎಂದು ಕರೆದದ್ದು ನಾಯಕಿ ಮಿಲನ ನಾಗರಾಜ್.

Pramod manju
ಪ್ರಮೋದ್ ಮಂಜು
author img

By

Published : Jan 24, 2020, 9:50 AM IST

Updated : Jan 24, 2020, 10:11 AM IST

'ಪ್ರೀಮಿಯರ್ ಪದ್ಮಿನಿ' ಚಿತ್ರದಲ್ಲಿ ಜಗ್ಗೇಶ್ ಕಾರ್ ಡ್ರೈವರ್ ಪಾತ್ರದಲ್ಲಿ ನಟಿಸಿದ್ದ ಯುವಕ ನಿಮಗೆಲ್ಲಾ ನೆನಪಿರಬಹುದು. ಧಾರಾವಾಹಿಗಳಲ್ಲಿ ನಟಿಸುತ್ತಾ ' ಗೀತಾ ಬ್ಯಾಂಗಲ್​​​​​​ ಸ್ಟೋರ್​​​' ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿ ತೆರೆಗೂ ಹೆಜ್ಜೆ ಇಟ್ಟ ಪ್ರಮೋದ್​ ಈಗ ಜ್ಯೂನಿಯರ್ ದರ್ಶನ್ ಎಂದೇ ಫೇಮಸ್.

Pramod manju
'ಗೀತಾ ಬ್ಯಾಂಗಲ್​​​​​​ ಸ್ಟೋರ್​​​' ಚಿತ್ರದ ಮೂಲಕ ಸ್ಯಾಂಡಲ್​ವುಡ್ ಎಂಟ್ರಿ

ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಮೋದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ' ಮತ್ತೆ ಉದ್ಭವ' ಚಿತ್ರದ ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಮೂಲತ: ಮಂಡ್ಯದವರಾದ ಪ್ರಮೋದ್​​ ದರ್ಶನ್ ಅವರ ಅಭಿಮಾನಿಯಂತೆ. ಶಾಲೆಗೆ ಹೋಗುವ ದಿನಗಳಲ್ಲಿ ಒಮ್ಮೆ ತಮ್ಮ ಊರಿನಲ್ಲಿ ದರ್ಶನ್ ಅವರ 'ಕರಿಯ' ಸಿನಿಮಾದ ಕಾರ್ಯಕ್ರಮ ನಡೆಯುತ್ತಿತ್ತಂತೆ. ಆಗ ದರ್ಶನ್ ಅವರನ್ನು ನೋಡಿ ನಾನು ಕೂಡಾ ಈ ರೀತಿ ಆಗಬೇಕು ಎಂದು ಕನಸು ಕಂಡಿದ್ದಂತೆ ಪ್ರಮೋದ್. ಇದೀಗ ಪ್ರಮೋದ್ ಅಭಿನಯಿಸಿರುವ ಸಿನಿಮಾ ಟ್ರೇಲರನ್ನು ಸ್ವತ: ದರ್ಶನ್ ಅವರೇ ಬಂದು ಬಿಡುಗಡೆ ಮಾಡಿ ಗುಡ್​​​ಲಕ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಶ್ರುತಿ ನಾಯ್ಡು ಆಹ್ವಾನದ ಮೇರೆಗೆ ದರ್ಶನ್ 'ಪ್ರೀಮಿಯರ್​ ಪದ್ಮಿನಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕೂಡಾ ಆಗಮಿಸಿದ್ದರು.

Pramod manju
ನೋಡಲು ದರ್ಶನ್ ಅವರಂತೆ ಕಾಣುವ ಪ್ರಮೋದ್

ಇನ್ನು 'ಮತ್ತೆ ಉದ್ಭವ' ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಮೋದ್ ಅವರನ್ನು ಜ್ಯೂನಿಯರ್ ದರ್ಶನ್ ಎಂದು ಕರೆದದ್ದು ನಾಯಕಿ ಮಿಲನ ನಾಗರಾಜ್. ಒಮ್ಮೆ ಚಿತ್ರದ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರೊಂದಿಗೆ ಪ್ರಮೋದ್ ಮಾತನಾಡುವಾಗ ದೂರದಿಂದ ಅವರನ್ನು ನೋಡಿದ ಮಿಲನ ನಾಗರಾಜ್​ ದರ್ಶನ್ ಅವರೊಂದಿಗೆ ಕೋಡ್ಲು ರಾಮಕೃಷ್ಣ ಮಾತನಾಡುತ್ತಿದ್ದಾರೆ ಎನ್ನಿಸಿತ್ತಂತೆ. ಆ ದಿನವನ್ನು ನೆನಪಿಸಿಕೊಂಡ ಮಿಲನ ನಾಗರಾಜ್, ಪ್ರಮೋದ್ ಕೂಡಾ ದರ್ಶನ್ ಅವರಂತೆ ಹೈಟ್ ಇದ್ದಾರೆ. ನೋಡಲು ಅವರಂತೆ ಕಾಣುತ್ತಾರೆ. ಒಂದು ರೀತಿ ಪ್ರಮೋದ್ ಅವರನ್ನು ಜ್ಯೂನಿಯರ್ ದರ್ಶನ್ ಎನ್ನಬಹುದು ಎಂದಾಗ ವೇದಿಕೆಯಲ್ಲಿದ್ದ ದರ್ಶನ್ ಕೂಡಾ ಸ್ಮೈಲ್ ನೀಡಿದ್ದಾರೆ. ಇನ್ನು 'ಗೀತಾ ಬ್ಯಾಂಗಲ್ ಸ್ಟೋರ್​' ಚಿತ್ರದಲ್ಲಿ ನಟಿಸಿದ ನಂತರ ಪ್ರಮೋದ್ ಡಾ. ವಿಷ್ಣುವರ್ಧನ್ ಅವರಂತೆ ಕಂಡಿದ್ದರು ಎಂದು ಬಹಳಷ್ಟು ಮಂದಿ ಹೇಳಿದ್ದರು. ‘ಗೀತಾ ಬ್ಯಾಂಗಲ್ ಸ್ಟೋರ್’ ಉತ್ತಮ ಪ್ರತಿಕ್ರಿಯೆ ಪಡೆದರೂ ಅದು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ. 'ಮತ್ತೆ ಉದ್ಭವ' ಪ್ರಮೋದ್​​ಗೆ ಬ್ರೇಕ್ ನೀಡಲಿ ಎಂದು ಹಾರೈಸೋಣ.

  • " class="align-text-top noRightClick twitterSection" data="">

'ಪ್ರೀಮಿಯರ್ ಪದ್ಮಿನಿ' ಚಿತ್ರದಲ್ಲಿ ಜಗ್ಗೇಶ್ ಕಾರ್ ಡ್ರೈವರ್ ಪಾತ್ರದಲ್ಲಿ ನಟಿಸಿದ್ದ ಯುವಕ ನಿಮಗೆಲ್ಲಾ ನೆನಪಿರಬಹುದು. ಧಾರಾವಾಹಿಗಳಲ್ಲಿ ನಟಿಸುತ್ತಾ ' ಗೀತಾ ಬ್ಯಾಂಗಲ್​​​​​​ ಸ್ಟೋರ್​​​' ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿ ತೆರೆಗೂ ಹೆಜ್ಜೆ ಇಟ್ಟ ಪ್ರಮೋದ್​ ಈಗ ಜ್ಯೂನಿಯರ್ ದರ್ಶನ್ ಎಂದೇ ಫೇಮಸ್.

Pramod manju
'ಗೀತಾ ಬ್ಯಾಂಗಲ್​​​​​​ ಸ್ಟೋರ್​​​' ಚಿತ್ರದ ಮೂಲಕ ಸ್ಯಾಂಡಲ್​ವುಡ್ ಎಂಟ್ರಿ

ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಮೋದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ' ಮತ್ತೆ ಉದ್ಭವ' ಚಿತ್ರದ ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಮೂಲತ: ಮಂಡ್ಯದವರಾದ ಪ್ರಮೋದ್​​ ದರ್ಶನ್ ಅವರ ಅಭಿಮಾನಿಯಂತೆ. ಶಾಲೆಗೆ ಹೋಗುವ ದಿನಗಳಲ್ಲಿ ಒಮ್ಮೆ ತಮ್ಮ ಊರಿನಲ್ಲಿ ದರ್ಶನ್ ಅವರ 'ಕರಿಯ' ಸಿನಿಮಾದ ಕಾರ್ಯಕ್ರಮ ನಡೆಯುತ್ತಿತ್ತಂತೆ. ಆಗ ದರ್ಶನ್ ಅವರನ್ನು ನೋಡಿ ನಾನು ಕೂಡಾ ಈ ರೀತಿ ಆಗಬೇಕು ಎಂದು ಕನಸು ಕಂಡಿದ್ದಂತೆ ಪ್ರಮೋದ್. ಇದೀಗ ಪ್ರಮೋದ್ ಅಭಿನಯಿಸಿರುವ ಸಿನಿಮಾ ಟ್ರೇಲರನ್ನು ಸ್ವತ: ದರ್ಶನ್ ಅವರೇ ಬಂದು ಬಿಡುಗಡೆ ಮಾಡಿ ಗುಡ್​​​ಲಕ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಶ್ರುತಿ ನಾಯ್ಡು ಆಹ್ವಾನದ ಮೇರೆಗೆ ದರ್ಶನ್ 'ಪ್ರೀಮಿಯರ್​ ಪದ್ಮಿನಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕೂಡಾ ಆಗಮಿಸಿದ್ದರು.

Pramod manju
ನೋಡಲು ದರ್ಶನ್ ಅವರಂತೆ ಕಾಣುವ ಪ್ರಮೋದ್

ಇನ್ನು 'ಮತ್ತೆ ಉದ್ಭವ' ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಮೋದ್ ಅವರನ್ನು ಜ್ಯೂನಿಯರ್ ದರ್ಶನ್ ಎಂದು ಕರೆದದ್ದು ನಾಯಕಿ ಮಿಲನ ನಾಗರಾಜ್. ಒಮ್ಮೆ ಚಿತ್ರದ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರೊಂದಿಗೆ ಪ್ರಮೋದ್ ಮಾತನಾಡುವಾಗ ದೂರದಿಂದ ಅವರನ್ನು ನೋಡಿದ ಮಿಲನ ನಾಗರಾಜ್​ ದರ್ಶನ್ ಅವರೊಂದಿಗೆ ಕೋಡ್ಲು ರಾಮಕೃಷ್ಣ ಮಾತನಾಡುತ್ತಿದ್ದಾರೆ ಎನ್ನಿಸಿತ್ತಂತೆ. ಆ ದಿನವನ್ನು ನೆನಪಿಸಿಕೊಂಡ ಮಿಲನ ನಾಗರಾಜ್, ಪ್ರಮೋದ್ ಕೂಡಾ ದರ್ಶನ್ ಅವರಂತೆ ಹೈಟ್ ಇದ್ದಾರೆ. ನೋಡಲು ಅವರಂತೆ ಕಾಣುತ್ತಾರೆ. ಒಂದು ರೀತಿ ಪ್ರಮೋದ್ ಅವರನ್ನು ಜ್ಯೂನಿಯರ್ ದರ್ಶನ್ ಎನ್ನಬಹುದು ಎಂದಾಗ ವೇದಿಕೆಯಲ್ಲಿದ್ದ ದರ್ಶನ್ ಕೂಡಾ ಸ್ಮೈಲ್ ನೀಡಿದ್ದಾರೆ. ಇನ್ನು 'ಗೀತಾ ಬ್ಯಾಂಗಲ್ ಸ್ಟೋರ್​' ಚಿತ್ರದಲ್ಲಿ ನಟಿಸಿದ ನಂತರ ಪ್ರಮೋದ್ ಡಾ. ವಿಷ್ಣುವರ್ಧನ್ ಅವರಂತೆ ಕಂಡಿದ್ದರು ಎಂದು ಬಹಳಷ್ಟು ಮಂದಿ ಹೇಳಿದ್ದರು. ‘ಗೀತಾ ಬ್ಯಾಂಗಲ್ ಸ್ಟೋರ್’ ಉತ್ತಮ ಪ್ರತಿಕ್ರಿಯೆ ಪಡೆದರೂ ಅದು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ. 'ಮತ್ತೆ ಉದ್ಭವ' ಪ್ರಮೋದ್​​ಗೆ ಬ್ರೇಕ್ ನೀಡಲಿ ಎಂದು ಹಾರೈಸೋಣ.

  • " class="align-text-top noRightClick twitterSection" data="">

ಪ್ರಮೋದ್ ಜೂನಿಯರ್ ದರ್ಶನ್ ಎಂದು ಪಟ್ಟ

ಕನ್ನಡ ಚಿತ್ರ ರಂಗದ ಉದಯೋನ್ಮುಖ ನಟ ಪ್ರಮೋದ್ ಅವರಿಗೆ ಜೂನಿಯರ್ ದರ್ಶನ್ ಎಂದು ಹೇಳಲಾಗುತ್ತಿದೆ. ಅದಕ್ಕೆ ಸ್ವತಃ ದರ್ಶನ್ ಸಹ ಒಂದು ಸುಂದರವಾದ ಸ್ಮೈಲ್ ಕೊಟ್ಟಿದ್ದು ಆಗಿದೆ ಮತ್ತೆ ಉದ್ಭವ ಟೀಸರ್ ಬಿಡುಗಡೆ ಸಮಾರಂಭದಲ್ಲಿ.

ಮಂಡ್ಯದ ಹೈದ ಪ್ರಮೋದ್ ಚಿಕ್ಕ ಹುಡುಗ ಆಗಿದ್ದಾಗ ಅವರ ಊರಿನಲ್ಲಿ ದರ್ಶನ್ ಅವರ ಕರಿಯ ಚಿತ್ರದ ಸಮಾರಂಭ ನಡೆಯುತ್ತಿದಾಗ ನಾನು ಇವರ ರೀತಿ ಆಗಬೇಕು ಎಂದು ಕನಸು ಕಂಡವರು. ಇಂದು ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಪ್ರಮೋದ್ ಅಭಿನಯದ ಎರಡನೇ ಸಿನಿಮಾ ಪ್ರಚಾರದ ವಿಷ್ಯಕ್ಕೆ ಆಗಮಿಸಿ ಶುಭ ಕೋರಿದ್ದಾರೆ. ಮೊದಲು ದರ್ಶನ್ ಆಗಮನ ಪ್ರಮೋದ್ ಅಭಿನಯದ ಪ್ರಿಮಿಯರ್ ಪದ್ಮಿನಿ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ. ಆದರೆ ಅಂದು ದರ್ಶನ್ ಬಂದಿದ್ದು ಶ್ರುತಿ ನಾಯ್ಡು ಅವರು ನೀಡಿದ ಆಹ್ವಾನಕ್ಕೆ.

ಕೆಲವು ದಿವಸಗಳ ಹಿಂದೆ ಮತ್ತೆ ಉದ್ಭವ ಸಿನಿಮಾ ಟೀಸರ್ ಬಿಡುಗಡೆ ಮಾಡಲು ದರ್ಶನ್ ಅವರು ಪ್ರಮೋದ್ ಅವರ ಪ್ರೀತಿಯ ಆಹ್ವಾನಕ್ಕೆ ಬಂದಿದ್ದರು. ಪ್ರಮೋದ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಸಹ ಆಡಿದರು.

ಆದರೆ ಅಂದು ಪ್ರಮೋದ್ ಜೂನಿಯರ್ ದರ್ಶನ್ ಎಂದು ವಿವರಿಸಿದ್ದು ದರ್ಶನ್ ಅಭಿನಯದ ಬೃಂದಾವನ ಚಿತ್ರದ ನಾಯಕಿ ಮಿಲನ ನಾಗರಾಜ್. ಮಿಲನ ನಾಗರಾಜ್ ಮತ್ತೆ ಉದ್ಭವ ಚಿತ್ರಕ್ಕೆ ಆಹ್ವಾನ ಬಂದಾಗೆ ಕೊಡ್ಲು ರಾಮಕೃಷ್ಣ ಅವರನ್ನು, ನಿರ್ಮಾಪಕರನ್ನು ಬೇಟಿ ಮಾಡಲು ಬಂದಿದ್ದಾರೆ. ಪಕ್ಕದ ಕೊನೆಯಲ್ಲಿ ಅವರಿಗೆ ದರ್ಶನ್ ಅವರು ಮತ್ತನಾಡುತ್ತಾ ಇದ್ದ ಹಾಗೆ ಅನ್ನಿಸಿದೆ. ಆದರೆ ಅಲ್ಲಿ ಮಾತನಾಡುತ್ತಾ ಇದ್ದದ್ದು ನಟ ಪ್ರಮೋದ್. ದರ್ಶನ್ ಅವರಂತೆ ಪ್ರಮೋದ್ ಸಹ ಎತ್ತರವಾಗಿದ್ದಾರೆ ಅವರು ನನ್ನ ಪ್ರಕಾರ ಜೂನಿಯರ್ ದರ್ಶನ್ ಎಂದು ಮಿಲನ ನಾಗರಾಜ್ ಹೇಳಿಕೊಂಡರು.

ಈ ಪ್ರಮೋದ್ ಕಿರು ತೆರೆ ಇಂದ ಹಿರಿ ತೆರೆಗೆ ಗೀತಾ ಬ್ಯಾಂಗಲ್ ಸ್ಟೋರ್ ಸಿನಿಮಾ ಇಂದ ಆಗಮಿಸಿದವರು. ಆ ಚಿತ್ರದಲ್ಲಿ ಪ್ರಮೋದ್ ಹಲವು ಕೊನಗಳಲ್ಲಿ ಡಾ ವಿಷ್ಣುವರ್ಧನ ಅವರನ್ನು ನೆನಪಿಸುವ ಹಾಗೆ ಕಂಡಿದ್ದರು ಎಂದು ಕೆಲವು ಕಡೆ ಉಲ್ಲೇಖ ಆಗಿತ್ತು. ಗೀತಾ ಬ್ಯಾಂಗಲ್ ಸ್ಟೋರ್ ಉತ್ತಮ ಪ್ರತಿಕ್ರಿಯೆ ಪಡೆದರು ಅದು ಗಲ್ಲ ಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ.

Last Updated : Jan 24, 2020, 10:11 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.