ETV Bharat / sitara

ಬೆಳ್ಳಿತೆರೆಯಲ್ಲಿ ಮಿಂಚಲು ಸಿದ್ಧರಾಗಿರುವ 'ಮುಕ್ತ' ನಂಜುಂಡ

author img

By

Published : Sep 24, 2019, 10:05 AM IST

ಟಿ.ಎನ್​​​​​​. ಸೀತಾರಾಂ ನಿರ್ದೇಶನದ 'ಮುಕ್ತ' ಧಾರಾವಾಹಿಯಲ್ಲಿ ನಂಜುಂಡನಾಗಿ ನಟಿಸಿ ಖ್ಯಾತರಾಗಿದ್ದ ಅಜಯ್ ರಾಜ್ ಇದೀಗ ಮತ್ತೆ ಬೆಳ್ಳಿತೆರೆ ಮೇಲೆ ಮಿಂಚಲು ರೆಡಿ ಇದ್ದಾರೆ. ಬಾಲನಟನಾಗಿ ಸ್ಯಾಂಡಲ್​​​ವುಡ್​​​ಗೆ ಕಾಲಿಟ್ಟ ಅಜಯ್ ರಾಜ್​ ಸದ್ಯಕ್ಕೆ ‘ಮುಂದಿನ ನಿಲ್ದಾಣ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ನಂಜುಂಡ

ಕನ್ನಡದ ಹಲವಾರು ಸಿನಿಮಾ, ಕಿರುತೆರೆ, ರಂಗಭೂಮಿಯಲ್ಲಿ ಅಭಿನಯಿಸಿರುವ ಅಜಯ್ ರಾಜ್ ಈಗ ಏಕ ಎಂಬ ಪಾತ್ರದಲ್ಲಿ (ಏಕಲವ್ಯ ಪೂರ್ಣ ಹೆಸರು) ‘ಮುಂದಿನ ನಿಲ್ದಾಣ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರು ನಾಯಕ ಪ್ರವೀಣ್ ತೇಜ್ ಸ್ನೇಹಿತನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

mundina nildana
ಅಜಯ್ ರಾಜ್, ಪ್ರವೀಣ್ ತೇಜ್

ಚಿತ್ರದ ಪೋಸ್ಟರ್ ಒಂದರಲ್ಲಿ ಅಜಯ್ ರಾಜ್, ಪ್ರವೀಣ್ ತೇಜ್ ಹಾಗೂ ರಾಧಿಕಾ ನಾರಾಯಣ್ ಮೂವರೂ ಕಾಫಿಶಾಪ್‌ನಲ್ಲಿ ಒಟ್ಟಾಗಿ ಕುಳಿತು ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ. ನಾಯಕ ನಟನ ಪ್ರಾಣ ಸ್ನೇಹಿತ ಅಂದ ಮೇಲೆ, ಈ ಚಿತ್ರದಲ್ಲಿ ಆ ಪಾತ್ರಕ್ಕಿರುವ ಪ್ರಾಮುಖ್ಯತೆಯನ್ನು ಬಿಡಿಸಿ ಹೇಳಬೇಕಾಗಿಲ್ಲ. ಅಂತಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅಜಯ್ ರಾಜ್​​​​, ತಮ್ಮ 5ನೇ ವರ್ಷದಲ್ಲೇ ಬಾಲ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಗಿರೀಶ್ ಕಾಸರವಳ್ಳಿ ಅವರ ಕ್ರೌರ್ಯ, ಕೂರ್ಮಾವತಾರ ಮೊದಲಾದ ಚಿತ್ರಗಳಿಂದ ರಾಜ್ಯ, ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡ ಹಲವಾರು ಚಿತ್ರಗಳಲ್ಲಿ ಅವರು ಬಾಲನಟರಾಗಿದ್ದು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

mundina nildana
‘ಮುಂದಿನ ನಿಲ್ದಾಣ’ ಚಿತ್ರದ ದೃಶ್ಯ

ಟಿ.ಎನ್​​​​​​. ಸೀತಾರಾಂ ನಿರ್ದೇಶನದ ಮುಕ್ತ ಧಾರಾವಾಹಿಯಲ್ಲಿ ನಂಜುಂಡನಾಗಿ ನಟಿಸಿದ್ದ ಅವರು ಮನೆ ಮಾತಾದದ್ದು ಮಾತ್ರವಲ್ಲದೇ ಆ ಹೆಸರಿನಲ್ಲೇ ಕನ್ನಡಿಗರೆಲ್ಲರಿಗೂ ಚಿರಪರಿಚಿತರು. ನಟ ರಮೇಶ್ ಅರವಿಂದ್ ಅವರು ತಮಿಳು ಭಾಷೆಯಲ್ಲಿ ನಿರ್ದೇಶಿಸಿರುವ 'ಉತ್ತಮ ವಿಲನ್'​ ಸಿನಿಮಾದಲ್ಲಿ ಅವರು ಮೇರು ನಟ ಕಮಲ್ ಹಾಸನ್ ಜೊತೆಯಲ್ಲೂ ತೆರೆ ಮೇಲೆ ಕಾಣಿಸಿಕೊಂಡರು. ಅದರ ಜೊತೆಗೆ ಮತ್ತಷ್ಟು ತಮಿಳು ಚಿತ್ರಗಳಲ್ಲಿ ನಟಿಸಿ ಅಲ್ಲಿ ಕನ್ನಡದ ಸೊಗಡನ್ನು ತೋರಿಸಿಕೊಟ್ಟರು. ಸದ್ಯಕ್ಕೆ ‘ಮುಂದಿನ ನಿಲ್ದಾಣ’ ಸಿನಿಮಾ ಬಿಡುಗಡೆಗೆ ಅಜಯ್ ಕಾಯುತ್ತಿದ್ದಾರೆ. ಕೋಸ್ಟಲ್ ಬ್ರಿಡ್ಜ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ವಿನಯ್ ಭಾರದ್ವಾಜ್ ನಿರ್ದೇಶಿಸಿದ್ದಾರೆ. ಲಕ್ಷ ಲಕ್ಷ ಕೇಳುಗರ ಮನಸೂರೆಗೊಂಡ 'ಮನಸೇ ಮಾಯ' ಎಂಬ ಹಾಡು, ಹಾಗೂ ವಿಭಿನ್ನ ಮಾದರಿಯ ಪೋಸ್ಟರ್‌ಗಳಿಂದ ತೀವ್ರ ಕುತೂಹಲ ಕೆರಳಿಸುತ್ತಿರುವ ಸಿನಿಮಾ ನವೆಂಬರ್ ಮೊದಲ ವಾರ ತೆರೆ ಕಾಣಲಿದೆ.

ಕನ್ನಡದ ಹಲವಾರು ಸಿನಿಮಾ, ಕಿರುತೆರೆ, ರಂಗಭೂಮಿಯಲ್ಲಿ ಅಭಿನಯಿಸಿರುವ ಅಜಯ್ ರಾಜ್ ಈಗ ಏಕ ಎಂಬ ಪಾತ್ರದಲ್ಲಿ (ಏಕಲವ್ಯ ಪೂರ್ಣ ಹೆಸರು) ‘ಮುಂದಿನ ನಿಲ್ದಾಣ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರು ನಾಯಕ ಪ್ರವೀಣ್ ತೇಜ್ ಸ್ನೇಹಿತನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

mundina nildana
ಅಜಯ್ ರಾಜ್, ಪ್ರವೀಣ್ ತೇಜ್

ಚಿತ್ರದ ಪೋಸ್ಟರ್ ಒಂದರಲ್ಲಿ ಅಜಯ್ ರಾಜ್, ಪ್ರವೀಣ್ ತೇಜ್ ಹಾಗೂ ರಾಧಿಕಾ ನಾರಾಯಣ್ ಮೂವರೂ ಕಾಫಿಶಾಪ್‌ನಲ್ಲಿ ಒಟ್ಟಾಗಿ ಕುಳಿತು ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ. ನಾಯಕ ನಟನ ಪ್ರಾಣ ಸ್ನೇಹಿತ ಅಂದ ಮೇಲೆ, ಈ ಚಿತ್ರದಲ್ಲಿ ಆ ಪಾತ್ರಕ್ಕಿರುವ ಪ್ರಾಮುಖ್ಯತೆಯನ್ನು ಬಿಡಿಸಿ ಹೇಳಬೇಕಾಗಿಲ್ಲ. ಅಂತಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅಜಯ್ ರಾಜ್​​​​, ತಮ್ಮ 5ನೇ ವರ್ಷದಲ್ಲೇ ಬಾಲ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಗಿರೀಶ್ ಕಾಸರವಳ್ಳಿ ಅವರ ಕ್ರೌರ್ಯ, ಕೂರ್ಮಾವತಾರ ಮೊದಲಾದ ಚಿತ್ರಗಳಿಂದ ರಾಜ್ಯ, ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡ ಹಲವಾರು ಚಿತ್ರಗಳಲ್ಲಿ ಅವರು ಬಾಲನಟರಾಗಿದ್ದು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

mundina nildana
‘ಮುಂದಿನ ನಿಲ್ದಾಣ’ ಚಿತ್ರದ ದೃಶ್ಯ

ಟಿ.ಎನ್​​​​​​. ಸೀತಾರಾಂ ನಿರ್ದೇಶನದ ಮುಕ್ತ ಧಾರಾವಾಹಿಯಲ್ಲಿ ನಂಜುಂಡನಾಗಿ ನಟಿಸಿದ್ದ ಅವರು ಮನೆ ಮಾತಾದದ್ದು ಮಾತ್ರವಲ್ಲದೇ ಆ ಹೆಸರಿನಲ್ಲೇ ಕನ್ನಡಿಗರೆಲ್ಲರಿಗೂ ಚಿರಪರಿಚಿತರು. ನಟ ರಮೇಶ್ ಅರವಿಂದ್ ಅವರು ತಮಿಳು ಭಾಷೆಯಲ್ಲಿ ನಿರ್ದೇಶಿಸಿರುವ 'ಉತ್ತಮ ವಿಲನ್'​ ಸಿನಿಮಾದಲ್ಲಿ ಅವರು ಮೇರು ನಟ ಕಮಲ್ ಹಾಸನ್ ಜೊತೆಯಲ್ಲೂ ತೆರೆ ಮೇಲೆ ಕಾಣಿಸಿಕೊಂಡರು. ಅದರ ಜೊತೆಗೆ ಮತ್ತಷ್ಟು ತಮಿಳು ಚಿತ್ರಗಳಲ್ಲಿ ನಟಿಸಿ ಅಲ್ಲಿ ಕನ್ನಡದ ಸೊಗಡನ್ನು ತೋರಿಸಿಕೊಟ್ಟರು. ಸದ್ಯಕ್ಕೆ ‘ಮುಂದಿನ ನಿಲ್ದಾಣ’ ಸಿನಿಮಾ ಬಿಡುಗಡೆಗೆ ಅಜಯ್ ಕಾಯುತ್ತಿದ್ದಾರೆ. ಕೋಸ್ಟಲ್ ಬ್ರಿಡ್ಜ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ವಿನಯ್ ಭಾರದ್ವಾಜ್ ನಿರ್ದೇಶಿಸಿದ್ದಾರೆ. ಲಕ್ಷ ಲಕ್ಷ ಕೇಳುಗರ ಮನಸೂರೆಗೊಂಡ 'ಮನಸೇ ಮಾಯ' ಎಂಬ ಹಾಡು, ಹಾಗೂ ವಿಭಿನ್ನ ಮಾದರಿಯ ಪೋಸ್ಟರ್‌ಗಳಿಂದ ತೀವ್ರ ಕುತೂಹಲ ಕೆರಳಿಸುತ್ತಿರುವ ಸಿನಿಮಾ ನವೆಂಬರ್ ಮೊದಲ ವಾರ ತೆರೆ ಕಾಣಲಿದೆ.

ಅಜಯ್ ರಾಜ್ ಸ್ನೇಹಿತನಾಗಿ ಮುಂದಿನ ನಿಲ್ದಾಣ ಚಿತ್ರಕ್ಕೆ ಸೇರಿಕೊಂಡರು

 

ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ, ಕಿರು ತೆರೆಯಲ್ಲಿ, ರಂಗಭೂಮಿಯಲ್ಲಿ ಅಭಿನಯ ಮಾಡಿರುವ ಅಜಯ್ ರಾಜ್ ಈಗ ಏಕ ಎಂಬ ಪಾತ್ರದಲ್ಲಿ (ಏಕಲವ್ಯ ಪೂರ್ಣ ಹೆಸರು) ಮುಂದಿನ ನಿಲ್ದಾಣ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರು ನಾಯಕ ಪ್ರವೀಣ್ ತೇಜ್ ಆಪ್ತ ಮಿತ್ರ ಆಗಿ ಪ್ರಾಣ ಸ್ನೇಹಿತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

 

ನಾಯಕ ನಟ ಪ್ರವೀಣ್ ತೇಜ್ ಅವರು ನಟಿಸುತ್ತಿರುವ ಪಾರ್ಥ ಎಂಬ ಕಥಾ ಚಿತ್ರದ ಪೋಸ್ಟರ್ ಒಂದರಲ್ಲಿ ಅಜಯ್ ರಾಜ್, ಪ್ರವೀಣ್ ತೇಜ್ ಹಾಗೂ ರಾಧಿಕಾ ನಾರಾಯಣ್ ಅವರು ಕಾಫೀ ಶಾಪ್ ಒಂದರಲ್ಲಿ ಒಟ್ಟಾಗಿ ಕುಳಿತು ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವ ಚಿತ್ರವೊಂದು ಗಮನ ಸೆಳೆಯುತ್ತಿದೆ.

 

ನಾಯಕ ನಟನ ಪ್ರಾಣ ಸ್ನೇಹಿತ ಅಂದ ಮೇಲೆ, ಈ ಚಿತ್ರದಲ್ಲಿ ಆ ಪಾತ್ರಕ್ಕಿರುವ ಪ್ರಾಮುಖ್ಯತೆಯನ್ನು ಬಿಡಿಸಿ ಹೇಳಬೇಕಾಗಿಯೇ ಇಲ್ಲ. ಅಂತಹಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅಜಯ್ ರಾಜ್ ಅವರು ತಮ್ಮ ಐದನೇಯ ವರ್ಷದಲ್ಲಿಯೇ ಬಾಲ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು..ಅದೂ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆ ಹಳ್ಳಿ ಮೇಷ್ಟ್ರು ಚಿತ್ರದಲ್ಲಿ! ಗಿರೀಶ್ ಕಾಸರವಳ್ಳಿ ಅವರ ಕ್ರೌರ್ಯ, ಕೂರ್ಮಾವತಾರ ಮೊದಲಾದ ಚಿತ್ರಗಳ ಸಹಿತ ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡ ಹಲವಾರು ಚಿತ್ರಗಳಲ್ಲಿ ಅವರು ಬಾಲನಟರಾಗಿದ್ದು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

 

ಟಿ. ಎನ್ ಸೀತಾರಾಂ ನಿರ್ದೇಶನದ ಮುಕ್ತ ಧಾರಾವಾಹಿಯಲ್ಲಿ ನಂಜುಂಡನಾಗಿ ನಟಿಸಿದ ಅವರು ಮನೆ ಮಾತಾಗಿ ಹೋಗಿದ್ದು ಮಾತ್ರವಲ್ಲದೇ ಆ ಹೆಸರಿನಲ್ಲಿಯೇ ಕನ್ನಡಿಗರೆಲ್ಲರಿಗೂ ಚಿರಪರಿಚಿತರು.

 

ಕನ್ನಡಿಗರೇ ಆದ ರಮೇಶ್ ಅರವಿಂದ್ ಅವರು ತಮಿಳು ಭಾಷೆಯಲ್ಲಿ ನಿರ್ದೇಶಿಸಿರುವ ಉತ್ತಮ ವಿಲ್ಲನ್ ಸಿನಿಮಾದಲ್ಲಿ ಅವರು ಮೇರು ನಟ ಕಮಲ್ ಹಾಸನ್ ಜೊತೆಯಲ್ಲಿಯೂ ತೆರೆಯ ಮೇಲೆ ಕಾಣಿಸಿಕೊಂಡರು. ಅದರ ಜೊತೆಗೇ ಇನ್ನಷ್ಟು ತಮಿಳು ಚಿತ್ರಗಳಲ್ಲಿ ನಟಿಸಿ ಅಲ್ಲಿ ಕನ್ನಡದ ಸೊಗಡನ್ನು ತೋರಿಸಿಕೊಟ್ಟರು.

 

ಕೋಸ್ಟಲ್ ಬ್ರಿಡ್ಜ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ವಿನಯ್ ಭಾರದ್ವಾಜ್ ನಿರ್ದೇಶಿಸಿರುತ್ತಾರೆ. ಲಕ್ಷ ಲಕ್ಷ ಕೇಳುಗರ ಮನವನ್ನು ಸೂರೆಗೊಂಡ 'ಮನಸೇ ಮಾಯ' ಎಂಬ ಹಾಡು, ಹಾಗೂ ವಿಭಿನ್ನ ಮಾದರಿಯ ಪೋಸ್ಟರ್ ಗಳಿಂದ ತೀವ್ರ ಕುತೂಹಲ ಕೆರಳಿಸುತ್ತಿರುವ ಈ ಚಿತ್ರವು ನವೆಂಬರ್ ಮೊದಲವಾರದಲ್ಲಿ ತೆರೆ ಕಾಣಲಿದೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.