ETV Bharat / sitara

ಕೇವಲ 8 ದಿನದಲ್ಲಿ ಚಿತ್ರೀಕರಣವಾದ 'ಮೃತ್ಯುಂಜಯ' ಸಿನಿಮಾ

author img

By

Published : Apr 6, 2021, 6:32 AM IST

Updated : Apr 6, 2021, 2:27 PM IST

ಯುವ ನಿರ್ದೇಶಕ ಎಸ್.ಎಸ್ ಸಜ್ಜನ್ ಅವರ ರಚನೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಜೊತೆಗೆ ನಿರ್ದೇಶನ ಮಾಡಿರುವ ಮೃತ್ಯುಂಜಯ ಎಂಬ ಸಿನಿಮಾ ಆತ್ಮಹತ್ಯೆ ಮಾಡಿಕೊಳ್ಳುವವರ ಕಥೆಯನ್ನು ಒಳಗೊಂಡಿದೆ.

mruthyunjaya
ಮೃತ್ಯುಂಜಯ ಸಿನಿಮಾ

ಸಿನಿಮಾ‌ ಎಂಬ ಮಾಯಾಲೋಕಕ್ಕೆ ಸ್ಟಾರ್ ನಟರು ಹಾಗು ಸಕ್ಸಸ್‌ಫುಲ್ ನಿರ್ದೇಶಕರ ಮಧ್ಯೆ, ಸಿನಿಮಾವನ್ನೇ ಉಸಿರಾಗಿಸಿಕೊಂಡಿರುವ ಹೊಸ ಪ್ರತಿಭೆಗಳು ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಿದ್ದಾರೆ. 1991ರಲ್ಲಿ ಶಿವರಾಜ್ ಕುಮಾರ್ ಅಭಿನಯದ ಮೃತ್ಯುಂಜಯ ಎಂಬ ಸಿನಿಮಾ ಬಂದು, ಸೂಪರ್ ಹಿಟ್ ಆಗಿತ್ತು. ಈಗ ಇದೇ ಟೈಟಲ್ ಇಟ್ಟುಕೊಂಡು, ಹೊಸ ಕಾನ್ಸೆಪ್ಟ್​ನೊಂದಿಗೆ ಹೊಸಬರ ಚಿತ್ರತಂಡ ಚಂದನವನ ಪ್ರವೇಶಿಸಿದೆ.

ಯುವ ನಿರ್ದೇಶಕ ಎಸ್.ಎಸ್ ಸಜ್ಜನ್ ಅವರ ರಚನೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಜೊತೆಗೆ ನಿರ್ದೇಶನ ಮಾಡಿರುವ, ಈ ಚಿತ್ರದಲ್ಲಿ ಯುವ ನಟ ಹಿತೇಶ್ ಹಾಗೂ ಯುವ ನಟಿ ಶ್ರೇಯ ಶೆಟ್ಟಿ ಅಭಿನಯಿಸಿದ್ದಾರೆ. ಈ ಮೃತ್ಯುಂಜಯ ಚಿತ್ರದಲ್ಲಿ ಹೂಮಳೆ ಖ್ಯಾತಿಯ ಸುಮನ್‌ ನಗರ್​ಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಟೀಸರನ್ನು ನಟ ಯಶಸ್ ಅನಾವರಣ ಮಾಡಿ ಈ ಹೊಸಬರ ತಂಡಕ್ಕೆ ಶುಭ ಹಾರೈಯಿಸಿದರು.

ಮೃತ್ಯುಂಜಯ ಸಿನಿಮಾ

ಸಸ್ಪೆನ್ಸ್ ಕಮ್ ಥ್ರಿಲ್ಲರ್ ಅಂಶ ಹೊಂದಿರುವ ಮೃತ್ಯುಂಜಯ ಸಿನಿಮಾ ಆತ್ಮಹತ್ಯೆ ಮಾಡಿಕೊಳ್ಳುವವರ ಕಥೆಯನ್ನ ಒಳಗೊಂಡಿದೆ. ಸುಮನ್‌ ನಗರ್​ಕರ್ ಸೈಕ್ಯಾಟ್ರಿಸ್ಟ್ ಪಾತ್ರ ಮಾಡಿದ್ದು, ಹಿತೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮಾನಸಿಕ ಅಸ್ವಸ್ಥನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೇಯ ಶೆಟ್ಟಿ ಸುಮನ್‌ ನಗರ್​ಕರ್ ಅಸಿಸ್ಟೆಂಟ್ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಹುಚ್ಚ ವೆಂಕಟ್ ಅವ​ರನ್ನು ಹೋಲುವ ದುರ್ಗಾ ಪ್ರಸಾದ್ ಎಂಬ ಯುವ ಕಲಾವಿದ ಹುಚ್ಚ ವೆಂಕಟ್ ಅವರಂತೆ ಅಭಿನಯಿಸಿದ್ದಾ‌ರೆ. ಇದರ ಜೊತೆಗೆ ಆಟೋ ರಾಜ, ಚೇತನ್ ದುರ್ಗಾ, ಮಜಾಭಾರತ ಶಿವು, ಚೈತ್ರಾ, ಪವಿತ್ರಾ, ಜಲಜ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ಗೋಪಾಲಸ್ವಾಮಿ ಬೆಟ್ಟದ ಕಾಡಿನಲ್ಲಿ ಚೆಕ್ ಡ್ಯಾಂ ಉದ್ಘಾಟಿಸಿದ ನಟ ದರ್ಶನ್

ಪತ್ರಕರ್ತರಾಗಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ನಿರ್ದೇಶಕ ಎಸ್.ಎಸ್ ಸಜ್ಜನ್, ಈ ಹಿಂದೆ ಮಂತ್ರಂ‌ ಎಂಬ ಸಾಮಾಜಿಕ ಕಳಕಳಿ ಚಿತ್ರವನ್ನ ಮಾಡಿದ್ದರು. ಸಜ್ಜನ್‌ ಈ ಬಾರಿ ಆತ್ಮಹತ್ಯೆಯ ಬಗ್ಗೆ ಮೃತ್ಯುಂಜಯ ಸಿನಿಮಾದಲ್ಲಿ ಹೇಳೋದಿಕ್ಕೆ ಹೊರಟ್ಟಿದ್ದಾರೆ. ಕೇವಲ ಎಂಟು ದಿನಗಳಲ್ಲಿ ಚಿತ್ರೀಕರಣವಾಗಿರುವ ಮೃತ್ಯುಂಜಯ ಸಿನಿಮಾ, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ.

ಬೆಂಗಳೂರು, ಡಾಬಸ್​ಪೇಟೆ ಹಾಗು ಶಿವಗಂಗೆಯ ಸುಂದರ ತಾಣಗಳಲ್ಲಿ ಛಾಯಾಗ್ರಹಕ ದೇವೇಂದ್ರ ರೆಡ್ಡಿ ಚಿತ್ರೀಕರಿಸಿದ್ದು, ಆನಂದ್ ರಾಜ್ ವಿಕ್ರಂ ಸಂಗೀತ ನೀಡಿದ್ದಾರೆ.‌ ಸಸ್ಪೆನ್ಸ್ ಜೊತೆಗೆ ಸಾಮಾಜಿಕ‌‌ ಸಂದೇಶವಿರುವ ಮೃತ್ಯುಂಜಯ ಸಿನಿಮಾವನ್ನ, ಎಸ್.ಪಿ ಪಿಕ್ಚರ್ಸ್ ಅಡಿ ಶೈಲಜಾ‌ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಸದ್ಯ ಟೀಸರ್​ನಿಂದ ಗಮನ‌ ಸೆಳೆಯುತ್ತಿರೋ ಮೃತ್ಯುಂಜಯ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

ಸಿನಿಮಾ‌ ಎಂಬ ಮಾಯಾಲೋಕಕ್ಕೆ ಸ್ಟಾರ್ ನಟರು ಹಾಗು ಸಕ್ಸಸ್‌ಫುಲ್ ನಿರ್ದೇಶಕರ ಮಧ್ಯೆ, ಸಿನಿಮಾವನ್ನೇ ಉಸಿರಾಗಿಸಿಕೊಂಡಿರುವ ಹೊಸ ಪ್ರತಿಭೆಗಳು ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಿದ್ದಾರೆ. 1991ರಲ್ಲಿ ಶಿವರಾಜ್ ಕುಮಾರ್ ಅಭಿನಯದ ಮೃತ್ಯುಂಜಯ ಎಂಬ ಸಿನಿಮಾ ಬಂದು, ಸೂಪರ್ ಹಿಟ್ ಆಗಿತ್ತು. ಈಗ ಇದೇ ಟೈಟಲ್ ಇಟ್ಟುಕೊಂಡು, ಹೊಸ ಕಾನ್ಸೆಪ್ಟ್​ನೊಂದಿಗೆ ಹೊಸಬರ ಚಿತ್ರತಂಡ ಚಂದನವನ ಪ್ರವೇಶಿಸಿದೆ.

ಯುವ ನಿರ್ದೇಶಕ ಎಸ್.ಎಸ್ ಸಜ್ಜನ್ ಅವರ ರಚನೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಜೊತೆಗೆ ನಿರ್ದೇಶನ ಮಾಡಿರುವ, ಈ ಚಿತ್ರದಲ್ಲಿ ಯುವ ನಟ ಹಿತೇಶ್ ಹಾಗೂ ಯುವ ನಟಿ ಶ್ರೇಯ ಶೆಟ್ಟಿ ಅಭಿನಯಿಸಿದ್ದಾರೆ. ಈ ಮೃತ್ಯುಂಜಯ ಚಿತ್ರದಲ್ಲಿ ಹೂಮಳೆ ಖ್ಯಾತಿಯ ಸುಮನ್‌ ನಗರ್​ಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾದ ಟೀಸರನ್ನು ನಟ ಯಶಸ್ ಅನಾವರಣ ಮಾಡಿ ಈ ಹೊಸಬರ ತಂಡಕ್ಕೆ ಶುಭ ಹಾರೈಯಿಸಿದರು.

ಮೃತ್ಯುಂಜಯ ಸಿನಿಮಾ

ಸಸ್ಪೆನ್ಸ್ ಕಮ್ ಥ್ರಿಲ್ಲರ್ ಅಂಶ ಹೊಂದಿರುವ ಮೃತ್ಯುಂಜಯ ಸಿನಿಮಾ ಆತ್ಮಹತ್ಯೆ ಮಾಡಿಕೊಳ್ಳುವವರ ಕಥೆಯನ್ನ ಒಳಗೊಂಡಿದೆ. ಸುಮನ್‌ ನಗರ್​ಕರ್ ಸೈಕ್ಯಾಟ್ರಿಸ್ಟ್ ಪಾತ್ರ ಮಾಡಿದ್ದು, ಹಿತೇಶ್ ಆತ್ಮಹತ್ಯೆ ಮಾಡಿಕೊಳ್ಳುವ ಮಾನಸಿಕ ಅಸ್ವಸ್ಥನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೇಯ ಶೆಟ್ಟಿ ಸುಮನ್‌ ನಗರ್​ಕರ್ ಅಸಿಸ್ಟೆಂಟ್ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಹುಚ್ಚ ವೆಂಕಟ್ ಅವ​ರನ್ನು ಹೋಲುವ ದುರ್ಗಾ ಪ್ರಸಾದ್ ಎಂಬ ಯುವ ಕಲಾವಿದ ಹುಚ್ಚ ವೆಂಕಟ್ ಅವರಂತೆ ಅಭಿನಯಿಸಿದ್ದಾ‌ರೆ. ಇದರ ಜೊತೆಗೆ ಆಟೋ ರಾಜ, ಚೇತನ್ ದುರ್ಗಾ, ಮಜಾಭಾರತ ಶಿವು, ಚೈತ್ರಾ, ಪವಿತ್ರಾ, ಜಲಜ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ಗೋಪಾಲಸ್ವಾಮಿ ಬೆಟ್ಟದ ಕಾಡಿನಲ್ಲಿ ಚೆಕ್ ಡ್ಯಾಂ ಉದ್ಘಾಟಿಸಿದ ನಟ ದರ್ಶನ್

ಪತ್ರಕರ್ತರಾಗಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ನಿರ್ದೇಶಕ ಎಸ್.ಎಸ್ ಸಜ್ಜನ್, ಈ ಹಿಂದೆ ಮಂತ್ರಂ‌ ಎಂಬ ಸಾಮಾಜಿಕ ಕಳಕಳಿ ಚಿತ್ರವನ್ನ ಮಾಡಿದ್ದರು. ಸಜ್ಜನ್‌ ಈ ಬಾರಿ ಆತ್ಮಹತ್ಯೆಯ ಬಗ್ಗೆ ಮೃತ್ಯುಂಜಯ ಸಿನಿಮಾದಲ್ಲಿ ಹೇಳೋದಿಕ್ಕೆ ಹೊರಟ್ಟಿದ್ದಾರೆ. ಕೇವಲ ಎಂಟು ದಿನಗಳಲ್ಲಿ ಚಿತ್ರೀಕರಣವಾಗಿರುವ ಮೃತ್ಯುಂಜಯ ಸಿನಿಮಾ, ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ.

ಬೆಂಗಳೂರು, ಡಾಬಸ್​ಪೇಟೆ ಹಾಗು ಶಿವಗಂಗೆಯ ಸುಂದರ ತಾಣಗಳಲ್ಲಿ ಛಾಯಾಗ್ರಹಕ ದೇವೇಂದ್ರ ರೆಡ್ಡಿ ಚಿತ್ರೀಕರಿಸಿದ್ದು, ಆನಂದ್ ರಾಜ್ ವಿಕ್ರಂ ಸಂಗೀತ ನೀಡಿದ್ದಾರೆ.‌ ಸಸ್ಪೆನ್ಸ್ ಜೊತೆಗೆ ಸಾಮಾಜಿಕ‌‌ ಸಂದೇಶವಿರುವ ಮೃತ್ಯುಂಜಯ ಸಿನಿಮಾವನ್ನ, ಎಸ್.ಪಿ ಪಿಕ್ಚರ್ಸ್ ಅಡಿ ಶೈಲಜಾ‌ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಸದ್ಯ ಟೀಸರ್​ನಿಂದ ಗಮನ‌ ಸೆಳೆಯುತ್ತಿರೋ ಮೃತ್ಯುಂಜಯ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

Last Updated : Apr 6, 2021, 2:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.