ETV Bharat / sitara

ಭಾರತೀಯ ಚಿತ್ರರಂಗದಲ್ಲೇ ಇದೇ ಮೊದಲು... ದೊಡ್ಡ ಸಾಹಸಕ್ಕೆ ಕೈ ಹಾಕಿದ ಕೋಟಿಗೊಬ್ಬ-3 - undefined

ಪ್ರೇಮಲೋಕದ ದೊರೆ ವಿ.ರವಿಚಂದ್ರನ್​ ಕನ್ನಡ ಚಿತ್ರರಂಗಕ್ಕೆ ಹೊಸತನ ತಂದವರು. ಯಾರೂ ಊಹಿಸದಂತಹ ಸೆಟ್​ಗಳನ್ನು ಹಾಕಿ ಇಡೀ ಚಿತ್ರರಂಗವನ್ನು ಬೆರಗುಗೊಳಿಸಿದವರು. ಅದೆಷ್ಟೇ ದುಡ್ಡು ಖರ್ಚಾದ್ರೂ ಪರವಾಗಿಲ್ಲ ರೀ ಚಿತ್ರ ಅದ್ಧೂರಿಯಾಗಿ ಬರಬೇಕು ಅಷ್ಟೇ ಅಂತಾ ಹೇಳುವ ರವಿ ಮಾಮ, ‘ಓ ನನ್ನ ನಲ್ಲೆ’ ಚಿತ್ರಕ್ಕೆ ಈಗಿನ ಮಂತ್ರಿ ಮಾಲ್ ಮಲ್ಲೇಶ್ವರ ಪಕ್ಕದಲ್ಲೇ ರೈಲ್ವೆ ನಿಲ್ದಾಣ ಸೆಟ್ ಹಾಕಿಸಿ ಚಿತ್ರೀಕರಣ ಮಾಡಿದ್ದರು.

ಸಂಗ್ರಹ ಚಿತ್ರ
author img

By

Published : Mar 16, 2019, 12:27 PM IST

ಅದೆಲ್ಲಾ ಸರಿ ಈ ರೈಲ್ವೆ ನಿಲ್ದಾಣದ ಸೆಟ್ಟು, ರವಿಚಂದ್ರನ್ ಅವರ ಕ್ರಿಯೇಟಿವಿಟಿ ಬಗ್ಗೆ ಈಗೇಕೆ ಮಾತು ಅಂತೀರಾ ? ಅದಕ್ಕೊಂದು ಕಾರಣವಿದೆ. ಇದೀಗ ಕನ್ನಡ ಚಿತ್ರವೊಂದಕ್ಕೆ ಬೃಹದಾಕಾರದ ಮೆಟ್ರೊ ಸ್ಟೇಷನ್ ಸೆಟ್ ಹಾಕಲಾಗಿದೆ.

ಹೌದು, ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಕೋಟಿಗೊಬ್ಬ 3 ಚಿತ್ರದ ಶೂಟಿಂಗ್ ರೀ-ಸ್ಟಾರ್ಟ್​ ಆಗಿದೆ. ಈ ಚಿತ್ರದ ಕ್ಲೈಮ್ಯಾಕ್ಸ್​ ಸೀನ್​​ಗಾಗಿ ಬೆಂಗಳೂರಿನ ಮಿನರ್ವ ಮಿಲ್​​ನಲ್ಲಿ ಒಂದು ಮೆಟ್ರೊ ರೈಲು ನಿಲ್ದಾಣದ ಸೆಟ್ ನಿರ್ಮಿಸಲಾಗಿದೆ. ಮೆಟ್ರೊ ರೈಲು ಸೆಟ್ ಹಾಕಿರುವುದು ಭಾರತೀಯ ಚಿತ್ರ ರಂಗದಲ್ಲಿ ಇದೇ ಮೊದಲು. ಒರಿಜಿನಲ್​ ಮೆಟ್ರೊ ರೈಲು ನಿಲ್ದಾಣದಲ್ಲಿ ಚಿತ್ರೀಕರಣಕಕ್ಕೆ ಅನುಮತಿ ಸಿಕ್ಕದಿರುವು ಚಿತ್ರತಂಡದ ಈ ಸಾಹಕ್ಕೆ ಮುಖ್ಯ ಕಾರಣ. ಇದರ ನಿರ್ಮಾಣ ರಚನಾಕಾರ ಲಾಲ್ ಗುಡಿ ಇಳಯರಾಜ. ಈ ಸೆಟ್ ನೋಡಿ ಸುದೀಪ್ ಸಹ ಬೆರಗಾಗಿದ್ದಾರಂತೆ.

ಇನ್ನು 'ಕೋಟಿಗೊಬ್ಬ 3' ನಿರ್ದೇಶಕ ತಮಿಳಿನ ಶಿವ ಕಾರ್ತಿಕ್. ಚಿತ್ರದಲ್ಲಿ ಸುದೀಪ್ ಜೊತೆ ಮಡೋನ್ನ ಸೆಬಾಸ್ಟೀನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಶನಿ, ನವಾಬ್ ಷಾ, ರವಿಶಂಕರ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ಶೇಖರ್ ಚಂದ್ರ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

ಅದೆಲ್ಲಾ ಸರಿ ಈ ರೈಲ್ವೆ ನಿಲ್ದಾಣದ ಸೆಟ್ಟು, ರವಿಚಂದ್ರನ್ ಅವರ ಕ್ರಿಯೇಟಿವಿಟಿ ಬಗ್ಗೆ ಈಗೇಕೆ ಮಾತು ಅಂತೀರಾ ? ಅದಕ್ಕೊಂದು ಕಾರಣವಿದೆ. ಇದೀಗ ಕನ್ನಡ ಚಿತ್ರವೊಂದಕ್ಕೆ ಬೃಹದಾಕಾರದ ಮೆಟ್ರೊ ಸ್ಟೇಷನ್ ಸೆಟ್ ಹಾಕಲಾಗಿದೆ.

ಹೌದು, ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಕೋಟಿಗೊಬ್ಬ 3 ಚಿತ್ರದ ಶೂಟಿಂಗ್ ರೀ-ಸ್ಟಾರ್ಟ್​ ಆಗಿದೆ. ಈ ಚಿತ್ರದ ಕ್ಲೈಮ್ಯಾಕ್ಸ್​ ಸೀನ್​​ಗಾಗಿ ಬೆಂಗಳೂರಿನ ಮಿನರ್ವ ಮಿಲ್​​ನಲ್ಲಿ ಒಂದು ಮೆಟ್ರೊ ರೈಲು ನಿಲ್ದಾಣದ ಸೆಟ್ ನಿರ್ಮಿಸಲಾಗಿದೆ. ಮೆಟ್ರೊ ರೈಲು ಸೆಟ್ ಹಾಕಿರುವುದು ಭಾರತೀಯ ಚಿತ್ರ ರಂಗದಲ್ಲಿ ಇದೇ ಮೊದಲು. ಒರಿಜಿನಲ್​ ಮೆಟ್ರೊ ರೈಲು ನಿಲ್ದಾಣದಲ್ಲಿ ಚಿತ್ರೀಕರಣಕಕ್ಕೆ ಅನುಮತಿ ಸಿಕ್ಕದಿರುವು ಚಿತ್ರತಂಡದ ಈ ಸಾಹಕ್ಕೆ ಮುಖ್ಯ ಕಾರಣ. ಇದರ ನಿರ್ಮಾಣ ರಚನಾಕಾರ ಲಾಲ್ ಗುಡಿ ಇಳಯರಾಜ. ಈ ಸೆಟ್ ನೋಡಿ ಸುದೀಪ್ ಸಹ ಬೆರಗಾಗಿದ್ದಾರಂತೆ.

ಇನ್ನು 'ಕೋಟಿಗೊಬ್ಬ 3' ನಿರ್ದೇಶಕ ತಮಿಳಿನ ಶಿವ ಕಾರ್ತಿಕ್. ಚಿತ್ರದಲ್ಲಿ ಸುದೀಪ್ ಜೊತೆ ಮಡೋನ್ನ ಸೆಬಾಸ್ಟೀನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಶನಿ, ನವಾಬ್ ಷಾ, ರವಿಶಂಕರ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ಶೇಖರ್ ಚಂದ್ರ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.


---------- Forwarded message ---------
From: pravi akki <praviakki@gmail.com>
Date: Sat, Mar 16, 2019, 11:04 AM
Subject: Fwd: metro set for kotigobba 3 of kichcha sudeep
To: <praveen.akki@etvbharat.com>



---------- Forwarded message ---------
From: Vasu K.S. Vasu <sasuvas@gmail.com>
Date: Sat, Mar 16, 2019, 8:18 AM
Subject: metro set for kotigobba 3 of kichcha sudeep
To: <praveen.akki@etvbharath.com>, pravi akki <praviakki@gmail.com>, EenaduIndia kannada <kannadadesk@gmail.com>


ಕಿಚ್ಚ ಸುದೀಪ್ ಕೋಟಿಗೊಬ್ಬ 3 ಮಿನರ್ವ ಮಿಲ್ ಮೆಟ್ರೊ ಸೆಟ್

 

ಅಲ್ಲೇ ಪಕ್ಕದಲ್ಲೇ ಮೆಟ್ರೊ ರೈಲು ಸಂಚಾರದ ಮಾರ್ಗ ಇದೆ. ಅದು ಭಾರತೀಯ ರೈಲ್ವೇ ನಿಲ್ಧಾನ ಸುರಂಗ ಮಾರ್ಗದಲ್ಲಿ ಮೆಟ್ರೊ ರೈಲು ಅಲ್ಲಿಂದಲೆ ಸಂಚಿರಿಸುವುದು. ಮೈಸೂರು ರಸ್ತೆ ಇಂದ ಹೊರಟು ಬಯಪ್ಪನ ಹಳ್ಳಿ ಕೊನೇ ನಿಲ್ಧಾನ ಸೇರಲು.

ಈಗ ಕೇಳಿ ಈ ಸಿಟಿ ರೈಲ್ವೇ ಸ್ಟೇಷನ್ ಮೆಟ್ರೊ ರೈಲು ನಿಲ್ಧಾನ ಬಳಿ ಇರುವ ಮಿನರ್ವ ಮಿಲ್ ಅಲ್ಲಿ ಒಂದು ಮೆಟ್ರೊ ರೈಲು ಮಾರ್ಗದ ಸೆಟ್ ಅನ್ನು ಕೋಟಿಗೊಬ್ಬ 3 ಕಿಚ್ಚ ಸುದೀಪ್ ಅಭಿನಯದ ಸಿನಿಮಾಕ್ಕೆ ಹಾಕಲಾಗಿದೆ. ಭಾರತೀಯ ಚಿತ್ರ ರಂಗದಲ್ಲಿ ಇದೆ ಮೊದಲು ಮೆಟ್ರೊ ರೈಲು ಸೆಟ್ ಹಾಕಲಾಗಿರುವುದು.

ಮೆಟ್ರೊ ರೈಲು ಮಾರ್ಗದಲ್ಲಿ ಅನುಮತಿ ಸಿಕ್ಕುವುದಿಲ್ಲ ಮತ್ತು ಅಲ್ಲಿ ಚಿತ್ರದ ಕ್ಲೈಮಕ್ಸ್ ಚಿಂತನೆ ಸಹ ಅಸಾಧ್ಯ. ಅದಕ್ಕಾಗೆ ನಿರ್ಮಾಪಕ ಸೂರಪ್ಪ ಬಾಬು ಅವರು ಮೆಟ್ರೊ ಸೆಟ್ ಅನ್ನೇ ನಿರ್ಮಿಸಿದ್ದಾರೆ. ಆದರೆ ಇದು ಸುರಂಗ ಮಾರ್ಗ ಅಲ್ಲ.

 

ಒಂದು ಸಿನಿಮಾ ಹಣ ತಂದುಕೊಡುವ ಖಾತ್ರಿ ಇದ್ದಾಗಲೇ ಇಂತಹ ದೊಡ್ಡ ಪ್ರಯತ್ನಗಳು ಆಗುವುದು. ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ನಿಜ ಜೀವನಕ್ಕೆ ಹತ್ತಿರವಾದ ಸೆಟ್ ರಚಿಸಿ ಚಿತ್ರೀಕರಣ ಮಾಡುವುದರಲ್ಲಿ ನಿಸ್ಸೀಮರು. ಒ ನನ್ನ ನಲ್ಲೇ ಚಿತ್ರಕ್ಕೆ ಈಗಿನ ಮಂತ್ರಿ ಮಾಲ್ ಮಲ್ಲೇಶ್ವರ ಪಕ್ಕದಲ್ಲೇ ಅವರು ರೈಲ್ವೇ ನಿಲ್ಧಾನ ಸೆಟ್ ಹಾಕಿಸಿ ಚಿತ್ರೀಕರಣ ಮಾಡಿದ್ದು ಉಂಟು.

ಈ ಮೆಟ್ರೊ ರೈಲು ಮಾರ್ಗದ ಸೆಟ್ ಅನ್ನು ರಚನೆ ಮಾಡಿರುವವರು ಲಾಲ್ ಗುಡಿ ಇಳಯರಾಜ ಅವರ ಕಲಾ ನಿರ್ದೇಶನದಲ್ಲಿ. ಈ ಸೆಟ್ ಅನ್ನು ನೋಡಿ ಸುದೀಪ್ ಸಹ ಬೆರಗಾಗಿದ್ದಾರೆ. ಸೆಟ್ ನಿರ್ಮಿಸಲು ಐರನ್ ಮೊಲ್ಡ್ ಬಳಸಲಾಗಿದೆ. ಲಕ್ಷಾಂತರ ರೂಪಾಯಿ ಇದಕ್ಕೆ ಖರ್ಚು ತಗಲಿದೆ.

 

ಕೋಟಿಗೊಬ್ಬ ಡಾ ವಿಷ್ಣು ಅಭಿನಯದ ಭಾಷಾ ಚಿತ್ರದ ರೀಮೇಕ್ ನಿರ್ದೇಶನ ನಾಗಣ್ಣ ಮಾಡಿದ್ದರು, ಕೋಟಿಗೊಬ್ಬ 2 ನಿರ್ದೇಶನ ಮಾಡಿದವರು ಕೆ ಎಸ್ ರವಿಕುಮಾರ್ ಹೆಸರಾಂತ ತಮಿಳು ನಿರ್ದೇಶಕ ಈಗ ಕೋಟಿಗೊಬ್ಬ 3 ನಿರ್ದೇಶಕ ಸಹ ತಮಿಳಿನ ಶಿವ ಕಾರ್ತಿಕ್.

ಸುದೀಪ್ ಜೊತೆ ಮಡೋನ್ನ ಸೆಬಸ್ಟೀನ್, ಶ್ರದ್ದ ದಾಸ್, ಅಫ್ತಾಬ್ ಶಿವದಾಶನಿ, ನವಾಬ್ ಷಾ, ರವಿಶಂಕರ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ. ಅರ್ಜುನ್ ಜನ್ಯ ಸಂಗೀತ ಮತ್ತು ಶೇಕರ್ ಚಂದ್ರ ಛಾಯಾಗ್ರಾಹಕ ಆಗಿ ಕೆಲಸ ಮಾಡುತ್ತಿದ್ದಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.