ಜೋಧ್ಪುರ: ರಾಜಸ್ಥಾನದಲ್ಲಿ ಸಾಂಬಾರ ಬೆಳೆಗಳ ಉತ್ಪಾದನೆ ವೇಗವಾಗಿ ಹೆಚ್ಚುತ್ತಿದೆ. ವಾರ್ಷಿಕ 20 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಆದರೆ, ಸಂಬಾರ ಮಂಡಳಿ ರಾಜ್ಯಕ್ಕೆ ಇನ್ನೂ ವಿಶೇಷ ನೀತಿಯೊಂದನ್ನು ರೂಪಿಸಿಲ್ಲ. ಸ್ವಾರಸ್ಜಕರ ವಿಚಾರ ಎಂದರೆ ಮಸಾಲೆಗಳಿಗೆ ಸಂಬಂಧಿಸಿದ ನೀತಿಗಳನ್ನು ಎಲ್ಲಿ ಮಾಡಲಾಗುತ್ತದೋ, ಅಲ್ಲಿ ಮಸಾಲೆಗಳ ಒಟ್ಟು ವ್ಯವಹಾರ ಕೇವಲ ಮೂರು ಸಾವಿರ ಕೋಟಿ ರೂಪಾಯಿಗಳಷ್ಟೇ.
ರಾಜಸ್ಥಾನಕ್ಕೆ ಬೇಕಿದೆ ವಿಶೇಷ ನೀತಿ: ಈ ಬಗ್ಗೆ ಮಾತನಾಡಿರುವ ಉದ್ಯಮಿ ಬನ್ವಾರಿಲಾಲ್ ಅಗರ್ವಾಲ್ , ಈ ಹಿಂದೆ ಸಂಬಾರ ಬೆಳೆಗಳನ್ನು ಕೇರಳದಲ್ಲಿ ಹೆಚ್ಚು ಬೆಳೆಯಲಾಗುತ್ತಿತ್ತು, ಆದ್ದರಿಂದ ಕೊಚ್ಚಿಯಲ್ಲಿ ಮಸಾಲೆ ಮಂಡಳಿಯ ಕೇಂದ್ರ ಕಚೇರಿಯನ್ನು ಸ್ಥಾಪಿಸಲಾಯಿತು. ಆದರೆ, ಈಗ ರಾಜಸ್ಥಾನವು ಮಸಾಲೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ, ಆದ್ದರಿಂದ ಇಲ್ಲಿ ಮಸಾಲೆಗಳನ್ನು ಉತ್ತೇಜಿಸಲು ಮಂಡಳಿಯು ಪ್ರತ್ಯೇಕ ನೀತಿ ಮಾಡಬೇಕು. ಸ್ಥಳೀಯ ಉತ್ಪಾದನೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಳ್ಳಬಹುದಾದ ಇಂತಹ ಕಚೇರಿಯನ್ನು ರಾಜಸ್ಥಾನದಲ್ಲಿ ತೆರೆಯಬೇಕಿದೆ ಎಂದು ಒತ್ತಾಯಿಸಿದ್ದಾರೆ.
![increasing-production-of-spice-crops-in-rajasthan-but-lack-of-policy](https://etvbharatimages.akamaized.net/etvbharat/prod-images/11-02-2025/23517168_325_23517168_1739241530330.png)
ಕಸೂರಿ ಮೇಥಿ ಇನ್ನೂ ಮಸಾಲೆಗಳ ವರ್ಗದಿಂದ ಹೊರಗಿದೆ: ರಾಜಸ್ಥಾನದಲ್ಲಿ ಕಸೂರಿ ಮೇಥಿಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಆದರೆ, ಇದನ್ನು ಇನ್ನೂ ಮಸಾಲೆಗಳ ವರ್ಗಕ್ಕೆ ಸೇರಿಸಲಾಗಿಲ್ಲ. ಆದರೆ, ಒಣ ಮೆಂತ್ಯವನ್ನು ಮಸಾಲೆ ಎಂದು ಪರಿಗಣಿಸಲಾಗುತ್ತದೆ. ಮಾರುಕಟ್ಟೆಯನ್ನು ಸೃಷ್ಟಿಸುವುದು ಮತ್ತು ರಫ್ತು ಉತ್ತೇಜಿಸುವುದು ಸಾಂಬಾರ ಮಂಡಳಿಯ ಮುಖ್ಯ ಕೆಲಸವಾಗಿದೆ. ಆದರೆ, ರಾಜಸ್ಥಾನದಲ್ಲಿ ಈ ದಿಕ್ಕಿನಲ್ಲಿ ಪರಿಣಾಮಕಾರಿ ಪ್ರಯತ್ನಗಳು ಮಾತ್ರ ನಡೆಯುತ್ತಿಲ್ಲ ಎನ್ನುವುದು ವ್ಯಾಪಾರಿಗಳ ಅಳಲಾಗಿದೆ.
![increasing-production-of-spice-crops-in-rajasthan-but-lack-of-policy](https://etvbharatimages.akamaized.net/etvbharat/prod-images/11-02-2025/rjjdh04spicesproductionsincreaseinrajasthanboardtakeresponsibility7211872_10022025123039_1002f_1739170839_1010.jpg)
ಕಳೆದ 20 ವರ್ಷಗಳಲ್ಲಿ ರಾಜಸ್ಥಾನದಲ್ಲಿ ಸಾಂಬಾರ ಬೆಳೆಗಳ ಉತ್ಪಾದನೆ ವೇಗವಾಗಿ ಹೆಚ್ಚುತ್ತಾ ಸಾಗಿದೆ. ಜೀರಿಗೆ, ಇಸಾಬಗೋಲ್, ಮೆಂತ್ಯ, ಕೊತ್ತಂಬರಿ, ಕೇರಂ, ಮೆಣಸಿನಕಾಯಿ ಮತ್ತು ಫೆನ್ನೆಲ್ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ದೇಶದ ಶೇ 70 ಕ್ಕಿಂತ ಹೆಚ್ಚು ಜೀರಿಗೆ ಮತ್ತು ಶೇ 90ರಷ್ಟು ಫೆನ್ನೆಲ್ ಅನ್ನು ರಾಜಸ್ಥಾನದಲ್ಲಿ ಉತ್ಪಾದಿಸಲಾಗುತ್ತದೆ. ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರದ ಕೇಂದ್ರವಾಗಿ ರಾಜಸ್ಥಾನ ಮಾರ್ಪಟ್ಟಿದೆ.
![increasing-production-of-spice-crops-in-rajasthan-but-lack-of-policy](https://etvbharatimages.akamaized.net/etvbharat/prod-images/11-02-2025/rjjdh04spicesproductionsincreaseinrajasthanboardtakeresponsibility7211872_10022025123039_1002f_1739170839_960.jpg)
ಮನ್ನಣೆಗಾಗಿ ಕಾಯುತ್ತಿದೆ ನಗೌರಿ ಮೇಥಿ: ನಾಗೌರ್ ಜಿಲ್ಲೆಯಲ್ಲಿ ಪಾನ್ ಮೇಥಿಯನ್ನು ಹೆಚ್ಚು ಉತ್ಪಾದಿಸಲಾಗುತ್ತದೆ. ಪ್ರತಿ ವರ್ಷ 10 ರಿಂದ 12 ಲಕ್ಷ ಚೀಲ ಮೆಂತ್ಯವನ್ನು ಇಲ್ಲಿ ಉತ್ಪಾದಿಸಲಾಗುತ್ತದೆ, ಇದನ್ನು ದೇಶಾದ್ಯಂತ ಹೋಟೆಲ್ ಮತ್ತು ಮನೆಗಳಲ್ಲಿ ಬಳಸಲಾಗುತ್ತದೆ. ಇದರ ಹೊರತಾಗಿಯೂ, ನಾಗೌರಿ ಮೆಂತ್ಯ ಇನ್ನೂ ಜಿಐ ಟ್ಯಾಗ್ ಪಡೆದಿಲ್ಲ ಮತ್ತು ಮಸಾಲೆಗಳ ಮಂಡಳಿಯು ಈ ದಿಕ್ಕಿನಲ್ಲಿ ನೀತಿಯನ್ನು ಮಾಡಿದರೆ, ಈ ವಲಯವು ಹೆಚ್ಚು ವೇಗವಾಗಿ ಅಭಿವೃದ್ಧಿ ಹೊಂದುತ್ತದೆ ಎಂಬುದು ವ್ಯಾಪಾರಿಗಳ ಆಗ್ರಹವಾಗಿದೆ.
![increasing-production-of-spice-crops-in-rajasthan-but-lack-of-policy](https://etvbharatimages.akamaized.net/etvbharat/prod-images/11-02-2025/rjjdh04spicesproductionsincreaseinrajasthanboardtakeresponsibility7211872_10022025123039_1002f_1739170839_901.jpg)
ಸಾಂಬಾರ ಮಂಡಳಿಯ ಕೇಂದ್ರ ಕಚೇರಿ ಕೇರಳದ ಕೊಚ್ಚಿಯಲ್ಲಿದ್ದು, ಅಲ್ಲಿಂದಲೇ ಸಂಬಾರ ಪದಾರ್ಥಗಳ ಮಾರುಕಟ್ಟೆ ನಡೆಯುತ್ತಿದೆ. ರಾಜಸ್ಥಾನದಲ್ಲೂ ಇಂತಹ ವ್ಯವಸ್ಥೆ ಮಾಡಿದರೆ ರೈತರು, ವ್ಯಾಪಾರಿಗಳಿಗೆ ನೇರ ಲಾಭವಾಗಲಿದೆ ಎನ್ನುತ್ತಾರೆ ರಾಜಸ್ಥಾನ ಅಸೋಸಿಯೇಷನ್ ಆಫ್ ಸ್ಪೈಸಸ್ ಅಧ್ಯಕ್ಷ ಶ್ಯಾಮ್ ಜಾಜು.
![ETV BhINCREASING PRODUCTION OF SPICE CROPS IN RAJASTHAN,arat](https://etvbharatimages.akamaized.net/etvbharat/prod-images/11-02-2025/rjjdh04spicesproductionsincreaseinrajasthanboardtakeresponsibility7211872_10022025123039_1002f_1739170839_487.jpg)
![increasing-production-of-spice-crops-in-rajasthan-but-lack-of-policy](https://etvbharatimages.akamaized.net/etvbharat/prod-images/11-02-2025/rjjdh04spicesproductionsincreaseinrajasthanboardtakeresponsibility7211872_10022025123039_1002f_1739170839_1058.jpg)
ಸಾವಯವ (IPM) ಜೀರಿಗೆಯನ್ನು ರಾಜಸ್ಥಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಅದರ ಮಾರುಕಟ್ಟೆಗೆ ಗಮನ ನೀಡಿದರೆ, ರಫ್ತು ಹೆಚ್ಚಾಗಬಹುದು. ಪ್ರಸ್ತುತ ರಾಜಸ್ಥಾನದಿಂದ ಸಾಂಬಾರ ಪದಾರ್ಥಗಳ ರಫ್ತು ತುಂಬಾ ಕಡಿಮೆಯಾಗಿದೆ. ಇಲ್ಲಿರುವ ಸಾಂಬಾರ ಪದಾರ್ಥಗಳನ್ನು ಬೇರೆ ರಾಜ್ಯಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿಂದ ರಫ್ತು ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು, ಇದರಿಂದ ಸಾಂಬಾರ್ ಮಂಡಳಿಯು ರಾಜಸ್ಥಾನಕ್ಕೆ ಪ್ರತ್ಯೇಕ ನೀತಿಯನ್ನು ರೂಪಿಸಬಹುದು ಮತ್ತು ರಾಜ್ಯದ ಸಾಂಬಾರ ಉದ್ಯಮಕ್ಕೆ ಜಾಗತಿಕ ಮನ್ನಣೆ ಸಿಗುತ್ತದೆ ಅಂತಾರೆ ಅವರು.
ಇದನ್ನು ಓದಿ: ಈರುಳ್ಳಿ ಕೊಳ್ಳಿ, ಬಹುಮಾನ ಗೆಲ್ಲಿ; ಈರುಳ್ಳಿ ಮಂಡಿ ಮಾಲೀಕನ ಹೊಸ ಪ್ಲಾನ್!