ETV Bharat / sitara

ಹೊಸ ವರ್ಷಕ್ಕೆ ಹೆದರಿಸಲು ಬರ್ತಿದ್ದಾರೆ ಶಾನ್ವಿ!

ಒಂದೇ ಶೆಡ್ಯೂಲ್ಡ್​​​ನಲ್ಲಿ ಚಿತ್ರೀಕರಣವನ್ನು ಮುಗಿಸಿರುವ 'ಕಸ್ತೂರಿ ಮಹಲ್' ಚಿತ್ರತಂಡ ಹೊಸ ವರ್ಷದ ನಿಮಿತ್ತ ಜನವರಿ 1ರಂದು ಟೀಸರ್​​ ರಿಲೀಸ್​​ ಮಾಡುತ್ತಿದೆ.

author img

By

Published : Dec 16, 2020, 4:53 PM IST

kasturi mahal teaser release on new year
ಒಂಚೂರು ಗಮನಿಸಿ : ಹೊಸ ವರ್ಷಕ್ಕೆ ಹೆದರಿಸಲು ಬರ್ತಿದ್ದಾರೆ ಶಾನ್ವಿ!

ಕನ್ನಡದ ಖ್ಯಾತ ನಿರ್ದೇಶಕ ದಿನೇಶ್ ಬಾಬು ಆ್ಯಕ್ಷನ್​​ ಕಟ್​​ ಹೇಳುತ್ತಿರುವ 'ಕಸ್ತೂರಿ ಮಹಲ್' ಸಿನಿಮಾ ಶೂಟಿಂಗ್​ ಮುಗಿಸಿ ಇದೀಗ ಟೀಸರ್ ರಿಲೀಸ್​​ ಮಾಡಲು ತಯಾರಿ ನಡೆಸುತ್ತಿದೆ. ಒಂದೇ ಶೆಡ್ಯೂಲ್ಡ್​​​ನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಹೊಸ ವರ್ಷದ ನಿಮಿತ್ತ ಜನವರಿ 1ರಂದು ಟೀಸರ್​​ ರಿಲೀಸ್​​ ಮಾಡುತ್ತಿದೆ.

ಇದನ್ನೂ ಓದಿ : ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ 'ಡ್ರೀಮ್​ ಗರ್ಲ್​​' ಹಾಟ್​​​ಲುಕ್​​​

ಈ ಚಿತ್ರಕ್ಕೆ ಮೊದಲು ನಾಯಕಿಯಾಗಿ ಆಯ್ಕೆಯಾದವರು ಡಿಂಪಲ್​​ಕ್ವೀನ್​​ ರಚಿತಾ ರಾಮ್.​​ ಆದ್ರೆ ಕಾರಣಾಂತರಗಳಿಂದ ಅವರ ಹೊರ ಉಳಿದಿದ್ದು, ಡಿಂಪಲ್​​​ಕ್ವೀನ್​ಸ್ಥಾನಕ್ಕೆ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿದ್ದಾರೆ. ಚಿತ್ರವು ಹಾರರ್​ ​ -ಥ್ರಿಲ್ಲರ್​​ ಕಥಾ ಹಂದರವನ್ನು ಹೊಂದಿದ್ದು, ದಿನೇಶ್​​​ ಬಾಬು ಅವರ 50ನೇ ಸಿನಿಮಾ ಇದಾಗಿದೆ. ಹಾರರ್​​​ ಚಿತ್ರದಲ್ಲಿ ಬಣ್ಣ ಹಚ್ಚಿರುವ ಶಾನ್ವಿ ಈ ಮೂಲಕ ಎಲ್ಲರನ್ನು ಹೆದರಿಸಲು ತೆರೆ ಮೇಲೆ ಬರ್ತಿದ್ದಾರೆ.

ದಸರಾ ಹಬ್ಬದ ವೇಳೆ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಚಿಕ್ಕಮಗಳೂರಿನಲ್ಲಿ ಸಿನಿಮಾದ ಸಂಪೂರ್ಣ ಚಿತ್ರೀಕರಣ ನಡೆದಿದೆ. ಈ ಚಿತ್ರದಲ್ಲಿ ಸ್ಕಂದ ಅಶೋಕ್, ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್, ಹಾಸ್ಯ ನಟ ರಂಗಾಯಣ ರಘು ಸೇರಿದಂತೆ ಹಲವರು ಬಣ್ಣ ಹಚ್ಚುತ್ತಿದ್ದಾರೆ. ರವೀಶ್ ಆರ್‌ಸಿ, ರುಬೀನ್ ರಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಗುಮಿನೇನಿ ವಿಜಯ್ ಸಂಗೀತವಿದೆ.

ಕನ್ನಡದ ಖ್ಯಾತ ನಿರ್ದೇಶಕ ದಿನೇಶ್ ಬಾಬು ಆ್ಯಕ್ಷನ್​​ ಕಟ್​​ ಹೇಳುತ್ತಿರುವ 'ಕಸ್ತೂರಿ ಮಹಲ್' ಸಿನಿಮಾ ಶೂಟಿಂಗ್​ ಮುಗಿಸಿ ಇದೀಗ ಟೀಸರ್ ರಿಲೀಸ್​​ ಮಾಡಲು ತಯಾರಿ ನಡೆಸುತ್ತಿದೆ. ಒಂದೇ ಶೆಡ್ಯೂಲ್ಡ್​​​ನಲ್ಲಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಹೊಸ ವರ್ಷದ ನಿಮಿತ್ತ ಜನವರಿ 1ರಂದು ಟೀಸರ್​​ ರಿಲೀಸ್​​ ಮಾಡುತ್ತಿದೆ.

ಇದನ್ನೂ ಓದಿ : ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ 'ಡ್ರೀಮ್​ ಗರ್ಲ್​​' ಹಾಟ್​​​ಲುಕ್​​​

ಈ ಚಿತ್ರಕ್ಕೆ ಮೊದಲು ನಾಯಕಿಯಾಗಿ ಆಯ್ಕೆಯಾದವರು ಡಿಂಪಲ್​​ಕ್ವೀನ್​​ ರಚಿತಾ ರಾಮ್.​​ ಆದ್ರೆ ಕಾರಣಾಂತರಗಳಿಂದ ಅವರ ಹೊರ ಉಳಿದಿದ್ದು, ಡಿಂಪಲ್​​​ಕ್ವೀನ್​ಸ್ಥಾನಕ್ಕೆ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿದ್ದಾರೆ. ಚಿತ್ರವು ಹಾರರ್​ ​ -ಥ್ರಿಲ್ಲರ್​​ ಕಥಾ ಹಂದರವನ್ನು ಹೊಂದಿದ್ದು, ದಿನೇಶ್​​​ ಬಾಬು ಅವರ 50ನೇ ಸಿನಿಮಾ ಇದಾಗಿದೆ. ಹಾರರ್​​​ ಚಿತ್ರದಲ್ಲಿ ಬಣ್ಣ ಹಚ್ಚಿರುವ ಶಾನ್ವಿ ಈ ಮೂಲಕ ಎಲ್ಲರನ್ನು ಹೆದರಿಸಲು ತೆರೆ ಮೇಲೆ ಬರ್ತಿದ್ದಾರೆ.

ದಸರಾ ಹಬ್ಬದ ವೇಳೆ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಚಿಕ್ಕಮಗಳೂರಿನಲ್ಲಿ ಸಿನಿಮಾದ ಸಂಪೂರ್ಣ ಚಿತ್ರೀಕರಣ ನಡೆದಿದೆ. ಈ ಚಿತ್ರದಲ್ಲಿ ಸ್ಕಂದ ಅಶೋಕ್, ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್, ಹಾಸ್ಯ ನಟ ರಂಗಾಯಣ ರಘು ಸೇರಿದಂತೆ ಹಲವರು ಬಣ್ಣ ಹಚ್ಚುತ್ತಿದ್ದಾರೆ. ರವೀಶ್ ಆರ್‌ಸಿ, ರುಬೀನ್ ರಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಗುಮಿನೇನಿ ವಿಜಯ್ ಸಂಗೀತವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.