ETV Bharat / sitara

ನಾನು ಅಪ್ಪು ಹುಡುಕಿಕೊಂಡು ಹೋಗುತ್ತೇನೆ, ಇಲ್ಲಿರೋದಕ್ಕೆ ಆಗಲ್ಲ ಎಂದು ಭಾವುಕರಾದ ರಾಘಣ್ಣ; ಗಳಗಳನೆ ಅತ್ತ ಶಿವಣ್ಣ

author img

By

Published : Mar 13, 2022, 10:18 PM IST

ಜೇಮ್ಸ್ ಚಿತ್ರತಂಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಿ-ರಿಲೀಸ್ ಇವೆಂಟ್ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಟ ರಾಘವೇಂದ್ರ ರಾಜ್​ಕುಮಾರ್ ಭಾವುಕರಾದರು.

Actor Raghavendra Raj Kumar was become Emotion
ಭಾವುಕರಾದ ನಟ ರಾಘವೇಂದ್ರ ರಾಜ್​ಕುಮಾರ್

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾದ ಚಿತ್ರತಂಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಿ ರಿಲೀಸ್ ಇವೆಂಟ್ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಟ ರಾಘವೇಂದ್ರ ರಾಜ್​ಕುಮಾರ್ ಭಾವುಕರಾದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಾಘವೇಂದ್ರ ರಾಜ್​ಕುಮಾರ್, ನನಗೆ ಅನ್ನಿಸಿದ್ದನ್ನ ಹೇಳುತ್ತೇನೆ. ದೇವರು ಚೆನ್ನಾಗಿ ಓಡುತ್ತಿದ್ದ ಗಾಡಿಯನ್ನು ನಿಲ್ಲಿಸಿಬಿಟ್ಟ. ಆದ್ರೆ ನಾನು ಇನ್ನೂ ಕುಂಟಿಕೊಂಡೇ ಇದ್ದೇನೆ. ನನಗೆ ಇದನ್ನೆಲ್ಲಾ ನೋಡಿಕೊಂಡು ಇರೋದಕ್ಕೆ ಆಗುತ್ತಿಲ್ಲ. ನಾನು ಹೋಗಿ ಬಿಡ್ತೇನೆ, ಇಲ್ಲಿ ಇರೋದಕ್ಕೆ ಆಗಲ್ಲ ಎಂದು ಭಾವುಕರಾದರು.

ಭಾವುಕರಾದ ನಟ ರಾಘವೇಂದ್ರ ರಾಜ್​ಕುಮಾರ್

ನಾನು ಅಪ್ಪುನನ್ನ ಹುಡುಕಿಕೊಂಡು ಹೋಗುತ್ತೇನೆ. ನನ್ನ ಕೈಲಿ ಇರೋದಕ್ಕೆ ಆಗಲ್ಲ ಎಂದು ಸ್ಟೇಜ್​ನಿಂದ ಇಳಿದು ಹೋಗಲು ರಾಘವೇಂದ್ರ ರಾಜ್​ಕುಮಾರ್ ಮುಂದಾಗುತ್ತಾರೆ. ಬಳಿಕ ಶಿವಣ್ಣ ವೇದಿಕೆ ಮೇಲೆ ಬರುತ್ತಾರೆ. ಆಗ ಇಬ್ಬರು ಒಬ್ಬರನ್ನೊಬ್ಬರು ತಬ್ಬಿಕೊಂಡು ಕಣ್ಣೀರಿಡುತ್ತಾರೆ. ಈ ದೃಷ್ಯ ಎಲ್ಲರ ಕಣ್ಣಲ್ಲೂ ಒಮ್ಮೆ ನೀರೂರಿಸಿತು.

ಇದನ್ನೂ ಓದಿ: 'ದಿ ಕಾಶ್ಮೀರ ಫೈಲ್ಸ್​​': ಮೂರು ರಾಜ್ಯಗಳಲ್ಲಿ ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ

ಈ ಇವೆಂಟ್​​​ನಲ್ಲಿ ದೊಡ್ಮನೆ ಕುಟುಂಬ ಸೇರಿದಂತೆ ವಿವಿಧ ತಾರೆಯರು ಭಾಗಿಯಾಗಿದ್ದಾರೆ. ಜೇಮ್ಸ್ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್' ಸಿನಿಮಾದ ಚಿತ್ರತಂಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಿ ರಿಲೀಸ್ ಇವೆಂಟ್ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಟ ರಾಘವೇಂದ್ರ ರಾಜ್​ಕುಮಾರ್ ಭಾವುಕರಾದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಾಘವೇಂದ್ರ ರಾಜ್​ಕುಮಾರ್, ನನಗೆ ಅನ್ನಿಸಿದ್ದನ್ನ ಹೇಳುತ್ತೇನೆ. ದೇವರು ಚೆನ್ನಾಗಿ ಓಡುತ್ತಿದ್ದ ಗಾಡಿಯನ್ನು ನಿಲ್ಲಿಸಿಬಿಟ್ಟ. ಆದ್ರೆ ನಾನು ಇನ್ನೂ ಕುಂಟಿಕೊಂಡೇ ಇದ್ದೇನೆ. ನನಗೆ ಇದನ್ನೆಲ್ಲಾ ನೋಡಿಕೊಂಡು ಇರೋದಕ್ಕೆ ಆಗುತ್ತಿಲ್ಲ. ನಾನು ಹೋಗಿ ಬಿಡ್ತೇನೆ, ಇಲ್ಲಿ ಇರೋದಕ್ಕೆ ಆಗಲ್ಲ ಎಂದು ಭಾವುಕರಾದರು.

ಭಾವುಕರಾದ ನಟ ರಾಘವೇಂದ್ರ ರಾಜ್​ಕುಮಾರ್

ನಾನು ಅಪ್ಪುನನ್ನ ಹುಡುಕಿಕೊಂಡು ಹೋಗುತ್ತೇನೆ. ನನ್ನ ಕೈಲಿ ಇರೋದಕ್ಕೆ ಆಗಲ್ಲ ಎಂದು ಸ್ಟೇಜ್​ನಿಂದ ಇಳಿದು ಹೋಗಲು ರಾಘವೇಂದ್ರ ರಾಜ್​ಕುಮಾರ್ ಮುಂದಾಗುತ್ತಾರೆ. ಬಳಿಕ ಶಿವಣ್ಣ ವೇದಿಕೆ ಮೇಲೆ ಬರುತ್ತಾರೆ. ಆಗ ಇಬ್ಬರು ಒಬ್ಬರನ್ನೊಬ್ಬರು ತಬ್ಬಿಕೊಂಡು ಕಣ್ಣೀರಿಡುತ್ತಾರೆ. ಈ ದೃಷ್ಯ ಎಲ್ಲರ ಕಣ್ಣಲ್ಲೂ ಒಮ್ಮೆ ನೀರೂರಿಸಿತು.

ಇದನ್ನೂ ಓದಿ: 'ದಿ ಕಾಶ್ಮೀರ ಫೈಲ್ಸ್​​': ಮೂರು ರಾಜ್ಯಗಳಲ್ಲಿ ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ

ಈ ಇವೆಂಟ್​​​ನಲ್ಲಿ ದೊಡ್ಮನೆ ಕುಟುಂಬ ಸೇರಿದಂತೆ ವಿವಿಧ ತಾರೆಯರು ಭಾಗಿಯಾಗಿದ್ದಾರೆ. ಜೇಮ್ಸ್ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.